ಕ್ರೌರ್ಯ ತುಂಬಿದ ಜಗತ್ತಿಗೆ ಪ್ರವಾದಿಯವರ ಮಾದರಿಯಾಗಿ ಶಾಂತಿಯ ಪಾಠ ಹೇಳಿ ಕೊಡೋಣ


ಭಾರತ ಜಗ ಶ್ರೇಷ್ಠ ವಾದದ್ದು   ಆತ್ಮಜ್ಞಾನ,ನಾಗರೀಕತೆಯಿಂದ ಉಳಿದ ಮಾನವೀಯತೆಯ ಕಾರಣಕ್ಕೆ
ಭಾಷಣ 🎤ಮೌಲಾನಾ ಯು. ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು
    By: AL Ahsan

ಕುರಾನ್ ಹೇಳುತ್ತದೆ.

لَقَدْ كَانَ لَكُمْ فِي رَسُولِ اللَّهِ أُسْوَةٌ حَسَنَةٌ لِمَنْ كَانَ يَرْجُو اللَّهَ وَالْيَوْمَ الْآخِرَ وَذَكَرَ اللَّهَ كَثِيرًا

ಖಂಡಿತವಾಗಿಯೂ ನಿಮಗೆ ಅಲ್ಲಾಹುವಿನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಂದರೆ ಅಲ್ಲಾಹುವನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹುವನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ.

ಅಮೇರಿಕದಲ್ಲಿ ಒಬ್ಬ ಐವತ್ತೆಂಟು ಮಂದಿ ಅಮಾಯಕರ ಮೇಲೆ ಗುಂಡಿನ ಮಳೆಗೆರೆದು ಕೊಂದು ಹಾಕಿದ ಅವನು ಸ್ಟೀಫನ್.
ಅದು ಅಮೇರಿಕಾ ಅಂತ ಸುಮ್ಮನಿರಬಹುದೇ ?

ನಿರ್ಭಯಾ ಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕ್ರೂರವಾಗಿ ಹತ್ಯೆಮಾಡಿದಾಗ ಜನಾರೋಷ ಎದ್ದು ಪ್ರತಿಭಟನೆ ನಡೆಯಿತು!ನಂತರ ತಣ್ಣಗಾಯಿತು?ಅತ್ಯಾಚಾರ ಕೊನೆಯಾಗಲಿಲ್ಲ.!

 ಗೋ ರಕ್ಷಣೆಯ ಗುಂಪು  ಅಖ್ಲಾಕ್ ಮತ್ತು ಅನೇಕರನ್ನು ಕೊಂದಾಗಲೂ ಅಸಹಿಷ್ಞುತೆಯ ಕೂಗು ದೇಶದಾದ್ಯಂತ ಎದ್ದಿತು ಮತ್ತೆ ತಣ್ಣಗಾಯಿತು, ?

ಹದಿಹರೆಯದ ಜುನೈದನನ್ನು ರೈಲಲ್ಲಿ ಅಮಾನುಷವಾಗಿ ಕೊಂದು ಹಾಕಿದಾಗ ಜಂತರ್ ಮಂತರ್ ದೇಶವೇ ನಡುಗುವಂತೆ ಹೇಳಿತು "NOT IN MY NAME" ಆನಂತರ ಸುಮ್ಮನಾಯಿತು.

ಅಸಹಿಷ್ಣುತೆಯ ಕಾರಣ ಅನೇಕ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದಿರುಗಿಸಲಾಯಿತು.ಆದರೂ ‌ ಪತ್ರಕರ್ತೆಯ ಸವಕಲು ದೇಹ ಮನೆ ಗೇಟಲ್ಲಿ ಜನರ ಮಧ್ಯೆ ಗುಂಡಿಗೆ ಬಲಿಯಾಯಿತು. ಅಲ್ಲಿ ಯೂ ಬ್ರಹತ್ ಪ್ರತಿಭಟನೆ ನಡೆಯಿತು.ಮುಂದೇನಾಯಿತು ?
 
ಮೊನ್ನೆ ರಾಜಸ್ತಾನಲ್ಲಿ ಶ್ಲೋಕ ಹಾಡಿದ ಅಹಮದನನ್ನು ಗುಂಪು ಕೊಂದಿತು.ಆ ಕಾರಣ ಅಲ್ಲಿಂದ ಇನ್ನೂರಕ್ಕಿಂತಲೂ ಹೆಚ್ಚು ಮುಸ್ಲಿಂ ಕುಟುಂಬ ಊರು ತೊರೆದು ಹೋಗುತ್ತಿದೆ .

ಇದೂ ಅಲ್ಲದೇ ಪ್ರತೀ ಮನೆಮನೆಯಲ್ಲಿ ಹರಿತವಾದ ತಲವಾರು ಕತ್ತಿ ಇಟ್ಟು ಸಿದ್ದ ರಾಗಿ ಎಂದು ಕರೆ ನೀಡಲಾಗುತ್ತದೆ.

ಇದೀಗ ಬೇಕಿರೋದು ಹೇಳಿ,ಕೂಗಿ ಪ್ರಯೋಜನ ವಿಲ್ಲವೆಂದಾಗ ಏನು ಮಾಡಬೇಕೆನ್ನುವುದಾಗಿದೆ.


ಈ ದೇಶ ಹಿಂಸೆಯತ್ತಾ ಮುಖ ಮಾಡಿದೆಯಾ ? ಮಂದಿರ, ಮಸೀದಿ, ದ್ಯಾನ ಜಪ ತಪ ಕೇಂದ್ರಗಳು ಅರ್ಥವನ್ನು ಕಳಕೊಂಡಿದೆಯಾ  ?
ಬೋಧನೆ,ಪ್ರವಚನಗಳು,
ಧರ್ಮನೀತಿ ತತ್ವಗಳು ಅಪ್ರಸ್ತುತ ವಾಯಿತೆ ?
ಶಾಂತಿದೂತರ, ಮಾಹಾನುಭಾವರ,ಸಾತ್ವಿಕರ,
ದರ್ಶನಗಳು ಅರ್ತಹೀನವಾಯಿತೇ ?
ಅದೆಲ್ಲಾ ಬಿಟ್ಟು ಬಿಡೋಣವೆಂದರೂ
ಆಧುನಿಕ ಶಿಕ್ಷಣಗಳಿಂದಾಗುವ ಪರಿಣಾಮಗಳೇನು ?
ಶಿಕ್ಷಣಕ್ಕಾಗಿ ಇಂದು ಬದುಕಿನ ಬಹುಮುಖ್ಯ ಭಾಗವನ್ನು ವ್ಯಯಿಸಲಾಗುತ್ತಿದೆ.ಆದರೆ ಆ ಶಿಕ್ಷಣವೂ ಜನರಿಗೆ ಮಾನವೀಯತೆಯನ್ನು ಕಲಿಸುತ್ತಿದೆಯೇ ?ಶಿಕ್ಷಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡುವ ರೀತಿಯಲ್ಲಿ
ಸಿದ್ದಪಡಿಸಲಾಗುತ್ತದೆ.ಆದರೆ ನಾಳೆಯ ಭವಿಷ್ಯದಲ್ಲಿ ಭಯ ,ಆತಂಕ ಅಭದ್ರತೆ,ಅಸಹಿಷ್ನುತೆ ಇಲ್ಲದ ನಾಡಲ್ಲಿ ನಮ್ಮ ಮಕ್ಕಳು ಕೂಡಿ ಬಾಳಬಹುದೇ ?ಸ್ವಾಸ್ಥ್ಯ ಸಮಾಜದಲ್ಲಿ ನಮ್ಮ ಮುಂದಿನ ಜನ ಬಾಳಬಹುದೇ ?
ಇನ್ನು ಈ ದೇಶವನ್ನು ಜಗತ್ತಿನ ಶ್ರೇಷ್ಠ ದೇಶವಾಗಿ ಜಗತ್ತು ಪರಿಗಣಿಸಿದ್ದು ಇಲ್ಲಿಯ ಜನಸಾಮಾನ್ಯರು  ಅನುಭವಿಸುವ ಶ್ರೀಮಂತಿಕೆಯ ಕಾರಣವೇ ? ಅಲ್ಲ
ರೋಗ ರುಜಿನಗಳಿಂದ ಮುಕ್ತವಾದ ದೇಶ ಅನ್ನುವ ಉದ್ದೇಶಕ್ಕಾಗಿಯೇ ? ಇಲ್ಲವೇ ಅತ್ಯುನ್ನತ ವಾದ ಸ್ವಚ್ಚ ಪರಿಸರವೆನ್ನುವ ಹೆಗ್ಗಳಿಕೆಗಾಗಿಯೇ ?    ಎಲ್ಲಾ ಸಮಸ್ಯೆಗಳಿಂದ ಮುಕ್ತವಾದ ರಾಷ್ಟ್ರ ಎನ್ನುವುದಕ್ಕಾಗಿಯೇ ?
ಕಳ್ಳ ,ದರೋಡೆ ಕೋರ,ಅತ್ಯಾಚಾರಿ,ಕೊಲೆಗಟುಕ ದುಷ್ಟರ ಯಾವುದೇ ತಂಟೆಗಳಿಲ್ಲದ ನಾಡು ಎಂಬ ಕಾರಣಕ್ಕಾಗಿ ಯೇ ?
ಕ್ಲೇಶಗಳಿಲ್ಲದ ಸ್ವಾಸ್ಥ್ಯ ಸಮಾಜದ ಮಧ್ಯೆ ಬದುಕಬಹುದೆಂಬ ಕಾಳಜಿಗಾಗಿಯೇ ?
ಇದೆಲ್ಲವನ್ನೂ ಗುರುತಿಸಲು ಅಸಾದ್ಯವಾಗಬಹುದು. ಆದರೆ ಈ ದೇಶ ಎದ್ದು ನಿಲ್ಲುವುದು ಧಾರ್ಮಿಕತೆಯಿಂದ ಪಡೆದ ಆತ್ಮ ಜ್ಞಾನ, ಮತ್ತು ನಾಗರೀಕತೆಯಿಂದ ಉಳಿದ ಮಾನವೀಯತೆಯ ಕಾರಣಗಳಿಗಾಗಿ ಮಾತ್ರ. ಬೇರೆ ಎಲ್ಲಾ ದೇಶಗಳಿಗಿಂತ ದೊಡ್ಡದಾದ ಮನುಷ್ಯತ್ವದ ಭೂಮಿಕೆಯನ್ನು ಹಾಗೂ ಬಲಿಷ್ಟವಾದ ಸಂವಿಧಾನ ಮೂಲಕ ಪ್ರಜಾತಂತ್ರವನ್ನೂ ಜಗತ್ತಿಗೆ ಸಾರಿದ್ದು ನಮ್ಮ ದೇಶ.
ಆದರೆ ಇಂದು ಕ್ರೌರ್ಯ ಮೆರೆಯುತ್ತಿದೆ.ಅಶಾಂತಿ ಬೆಳೆಯುತ್ತಿದೆ.
ಇಂತಹಾ ಸಂದರ್ಭದಲ್ಲಿ ನಾವು ಸರ್ವಶ್ರೇಷ್ಠ ಧರ್ಮದ ಅನುಯಾಯಿಗಳಾಗಿ,ಗತಿಸಿಹೋದ ಮಹಾನ್ ಚೇತನಗಳು ಅನುಸರಿಸಿದ ಆದರ್ಶದ ಮೂಲಕ ಪ್ರವಾದಿ (ಸ) ರವರ ಶಾಂತಿಯ ರಾಯಭಾರಿಗಳಾಗಿ ಪ್ರತಿಯೊಬ್ಬ ಮಸಲ್ಮಾನ ಬದಲಾಗಬೇಕಾಗಿದೆ.ನಿಯಮ ಕಾನೂನುಗಳು, ನೀತಿ ಪಾಠಗಳು,ಕಾರಾಗ್ರಹಗಳು,ಸೋತು ನಿಂತಾಗ ಸಮಾಜಕ್ಕೆ ದೀಪಸ್ತಂಭ ವಾಗಿ ಇಸ್ಲಾಂ ಬೆಳಕು ನೀಡಬೇಕು.ಆ ಮೂಲಕ ವಿರೋಧಿಗಳಿಗೆ, ಅತಿಕ್ರಮಿಗಳಿಗೆ  ಹೊಸ ದಾರಿಯನ್ನು ತೋರಲು ಮುಸ್ಲಿಂ ಸಮುದಾಯಕ್ಕೆ ಸಾಧ್ಯವಾಗಬೇಕು.ಇಸ್ಲಾಮನ್ನು ಪರಿಚಯಿಸಲು ಇದಕ್ಕಿಂತ ದೊಡ್ಡ ಅವಕಾಶ ಬೇರೆ ಇರಲಿಕ್ಕಿಲ್ಲ.ಪ್ರವಾದಿ ಆಗಮನದ
ಏಳನೇಯ ಶತಮಾನ ಕ್ರೌರ್ಯ ಗಳಿಂದಲೇ ತುಂಬಿ ಹೋಗಿತ್ತು.
ಕುರಾನ್ ಹೇಳುತ್ತದೆ.
كُنْتُمْ خَيْرَ أُمَّةٍ أُخْرِجَتْ لِلنَّاسِ تَأْمُرُونَ بِالْمَعْرُوفِ وَتَنْهَوْنَ عَنِ الْمُنْكَرِ وَتُؤْمِنُونَ بِاللَّهِ(3-10)

ನೀವು ಮನುಕುಲಕ್ಕಾಗಿ ಹೊರತರಲಾಗಿರುವ ಉತ್ತಮ ಸಮುದಾಯವಾಗಿರುವಿರಿ. ನೀವು ಸದಾಚಾರ ವನ್ನು ಆದೇಶಿಸುತ್ತಿರುವಿರಿ, ದುರಾಚಾರವನ್ನು ವಿರೋಧಿಸು ತ್ತಿರುವಿರಿ ಮತ್ತು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವಿರಿ.(3-10)
ಸದಾಚಾರದ ಉತ್ತಮ ರಾಯಭಾರಿಯಾಗಿ ನಾವು ಕಾರ್ಯಾಚರಿಸಬೇಕಾಗಿದೆ.
ಇನ್ನು ಕೆಡುಕನ್ನು ಕೆಡುಕಿನಿಂದ ಎದುರಿಸಲಾಗದು.ಜಗತ್ತಿನಲ್ಲಿ ಅನೇಕ ಹೋರಾಟಗಳು ದಾರಿ ತಪ್ಪುವುದು ಇಂತಹಾ ಸಂದರ್ಭಗಳಲ್ಲಿ ಆಗಿರುತ್ತದೆ.ಶಕ್ತಿ ಪ್ರದರ್ಶನಕ್ಕಿಂತ ಪರಿಣಾಮಕಾರಿ ಬುದ್ಧಿವಂತಿಕೆ ತೋರುವುದಾಗಿದೆ.ಮದವೇರಿದ ಆನೆಯನ್ನು ಪಳಗಿಸುವ,ಅಶ್ವಾರೋಹಿ ಯಾಗಿ ಬಲಿಷ್ಟ ಕುದುರೆಗೆ ಕಡಿವಾಣ ಹಾಕುವ ಮನುಜ,
ನಿಖರ ಗುರಿ ಮೂಲಕ ಕ್ಷಣಮಾತ್ರದಲ್ಲಿ ಬೇಟೆಯನ್ನು ಮುಗಿಸಿ ಬಿಡುವ ಹುಲಿ,ಸಿಂಹಗಳನ್ನೂ ತನ್ನ ಚಮತ್ಕಾರದಿಂದ ವಶೀಕರಿಸುವ ಮನುಷ್ಯನಿಗೆ ಬುಧ್ದಿ,ವಿವೇಕ,ಶಿಕ್ಷಣ ವಿರುವ ಸಮಾಜ ವನ್ನು ಸಂವೇದನಾಶೀಲ ವರ್ತನೆ ಮೂಲಕ ಋಜುವಾದ ದಾರಿಯೇಡೆಗೆ  ಆಕರ್ಶಿಸಬಹುದು.ಆಮೂಲಕ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.ಕುರಾನ್ ಹೀಗೆ ಹೇಳುತ್ತದೆ.
وَلَا تَسْتَوِي الْحَسَنَةُ وَلَا السَّيِّئَةُ ۚ ادْفَعْ بِالَّتِي هِيَ أَحْسَنُ فَإِذَا الَّذِي بَيْنَكَ وَبَيْنَهُ عَدَاوَةٌ كَأَنَّهُ وَلِيٌّ حَمِيمٌ

ಒಳಿತು ಮತ್ತು ಕೆಡುಕು ಸಮಾನವಾಗಲಾರದು. ಅತ್ಯುತ್ತಮವಾದುದು ಯಾವುದೋ ಅದರ ಮೂಲಕ ತಾವು (ಕೆಡುಕನ್ನು) ತಡೆಯಿರಿ. ಆಗ ಯಾರ ಮತ್ತು ತಮ್ಮ ಮಧ್ಯೆ ಶತ್ರುತ್ವವಿದೆಯೋ ಅವನು (ತಮ್ಮ) ಆಪ್ತ ಮಿತ್ರನೋ ಎಂಬಂತೆ ಮಾರ್ಪಡುವನು.
ತಸ್ಲೀಮಳಂತ ತಲೆಹಿಡುಕ ಕೂಟಕ್ಕೆ ಮಾತ್ರ ಕುರಾನ್ ಬಗ್ಗೆ ಅಸಹಜ ಅಸಹನೆ ಮತ್ತುಅಸೂಯೆ ಇದೆ ಎಂದು ಒಪ್ಪಿಕೊಳ್ಳಲೇ ಬೇಕು.
ಆದರೆ ಇಸ್ಲಾಮಿನ ದರ್ಶನ ವನ್ನು ಸಮಾಜಕ್ಕೆ ತಲುಪಿಸಲು ನಮ್ಮಿಂದ ಆಗಬೇಕು.
ಕೇರಳದ ಉಗ್ರ ಮತಾಂಧ ದ್ವೇಷ ಭಾಷಣದ ಬೆಂಕಿ ಉಗುಳುವ  ಟೀಚರ್ ಮನೆಗೆ ಹೋಗಿ ಇಸ್ಲಾಮಿನ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಾಲಾಡಿಸಲು ಪ್ರಯತ್ನ ಪಟ್ಟ ಎಸ್ ಕೆ ಎಸ್ ಎಸ್  ಎಫ್ ನ ಮಾದರಿ ನಮಗೆ ಅನುಕರಣೀಯ.ಅಲ್ಲಿಂದ ಗೌರವದೊಂದಿಗೆ ಆತಿಥ್ಯ ಸ್ವೀಕರಿಸಿ ಉಪಹಾರ ಸ್ವೀಕರಿಸಿ ಬಂದಿದ್ದರೆ ಅದು ಸಮಸ್ತ ಪೋಷಕ ಸಂಘಟನೆಯ ಶಕ್ತಿಯಾಗಿದೆ‌. ಅದಲ್ಲದೇ ಹಿಂಸೆಗೆ ಹಿಂಸೆ ,ತಲವಾರಿಗೆ ತಲವಾರು ಪರಿಹಾರವಲ್ಲ.
 ಹಝ್ರತ್ ಉಮರ್( ರ ) ಪ್ರವಾದಿಯ ರುಂಡ ಕತ್ತರಿಸಲು ಮುಂದಾಗಿ ಬಂದಿಧ್ದರು ಎನ್ನುವುದಂತು ಸತ್ಯ ಆದರೆ ಅವರನ್ನು ತಡೆಯುವ ಯಾವುದೇ  ಶಕ್ತಿ ಸಾಮರ್ಥ್ಯ  ನಬಿಯವರಿಗೆ ಇರಲಿಲ್ಲ. ಆದರೆ ಉಮರ್( ರ )ರವರ ಬಲಿಷ್ಟ ತಾಕತ್ತು ಕುರಾನಿನ ಎರಡು ಸೂಕ್ತಗಳಲ್ಲಿ ಕರಗಿ ಹೋಯಿತು.

 طه مَا أَنْزَلْنَا عَلَيْكَ الْقُرْآنَ لِتَشْقَىٰ

ತಾವು ಕಷ್ಟಪಡಬೇಕೆಂದು ನಾವು ತಮಗೆ ಕುರ್ ಆನ್ ನನ್ನು ಅವತೀರ್ಣಗೊಳಿಸಿಲ್ಲ

 إِلَّا تَذْكِرَةً لِمَنْ يَخْشَىٰ

ಇದು ಭಯಪಡುವವರಿಗಿರುವ ಒಂದು ಉಪದೇಶ ಮಾತ್ರವಾಗಿದೆ.

تَنْزِيلًا مِمَّنْ خَلَقَ الْأَرْضَ وَالسَّمَاوَاتِ الْعُلَى

ಇದು ಭೂಮಿಯನ್ನು ಮತ್ತು ಉನ್ನತವಾದ ಆಕಾಶಗಳನ್ನು ಸೃಷ್ಟಿಸಿದವನ ಬಳಿಯಿಂದ ಅವತೀರ್ಣ ಗೊಂಡಿರುವುದಾಗಿದೆ.

[ತ್ವಾಹಾ : 1 - 4]
ಆ ಕುರಾನಿನ ಸಂದೇಶಗಳನ್ನು ಮನುಕುಲಕ್ಕೆ ತಲುಪಿಸಬೇಕಾಗಿದೆ.
ಹಾಗೇ   ಸುರಾಖಾಃ ಕುದುರೆ ಮೇಲೆ ಏರಿ ಬಂದರೂ ಕೈಗಟುಕುವ ಸನಿಹದಲ್ಲಿ ಇದ್ದರೂ ಪ್ರವಾದಿಯನ್ನು ಸ್ಪರ್ಶಿಸಲು ಸಾದ್ಯವಾಗಲಿಲ್ಲ.
ಹದಿಮೂರು ವರ್ಷಗಳ ಕಾಲ ಕ್ರೂರವಾಗಿ ಕೊಲ್ಲುವ,ಜೀವಂತ ಮನುಷ್ಯ ಮಕ್ಕಳನ್ನು ಹೂಳುವ,ಹೆಣ್ಣುಮಕ್ಕಳನ್ನು ಬೇಕೆಂದೆನಿಸಿದಾಗ ಬೋಗಿಸಲಿಕ್ಕಿರುವ ವಸ್ತುವಾಗಿ ಬಳಸಿಕೊಳ್ಳುವ ಕಾಲದಲ್ಲಿ ಪ್ರವಾದೀ (ಸ)ರವರು ಸತ್ಯ ಸಂದೇಶಗಳನ್ನು ನೀಡುತ್ತಾರೆ.
ಅಲ್ಲಾಹನ ದಾರಿಯನ್ನು ಕೊಡುತ್ತಾರೆ.ಆದರೆ ಜನರಿಂದ ಅವರಿಗೆ ಸಿಕ್ಕಿದ್ದು  ಊರಿನಿಂದಲೇ ಪಲಾಯನ ಮಾಡ ಬೇಕಾದ ಪರಿಸ್ಥಿತಿ. ಊರು ತೊರೆದು ಹೋಗುವಾಗಲೂ ಬೆಂಬಿಡದೇ ಸುರಾಖಾಃ ಹಿಂಬಾಲಿಸುತ್ತಾರೆ.ಸುರಾಖಾಃ ಕಿನಾನಃ ಗೋತ್ರದ ನಾಯಕರಾಗಿದ್ದರು. ಪ್ರವಾದೀ ಇನ್ನೇನು ಕೈಗೆ ಸಿಕ್ಕಿ ಬಿಟ್ಟರು ಎನ್ನುವಷ್ಟರಲ್ಲಿ ಅವರ ಕುದುರೆಯ ಕಾಲು ಭೂಮಿಯಲ್ಲಿ ಹೂತು ಹೋಗುತ್ತದೆ.ಕಡೆಗೆ ಯಾವುದೇ ದಾರಿ ಇಲ್ಲದೇ ರಕ್ಷಿಸಲು ಬೇಡುತ್ತಾರೆ.
ಪ್ರವಾದಿ (ಸ) ರವರ ಪ್ರಾರ್ಥನೆ ಮೂಲಕ ಸುರಾಖಾಃ ಬಚವಾಗುತ್ತಾರೆ.ಆಗ ನಬಿ ಹೇಳುತ್ತಾರೆ.

كيف بك إِذا لبست سِوَارَيْ كسرى ومِنْطَقَتَه وتاجه، فقال سراقة: كسرى بن هرمز؟ فقال رسول الله: نعم
ಸುರಾಖಾ ಕಿಸ್ರಾ ರಾಜನ ಬಳೆ,ಕಿರೀಟ,ಮತ್ತು ಸೊಂಟದ ಪಟ್ಟಿಯನ್ನು ನಿಮಗೆ ಧರಿಸಲ್ಪಟ್ಟಾಗ ಹೇಗೇ ?

ಕಿಸ್ರಾ ರಾಜನೇ ? ಸುರಾಖಾ ಪ್ರಶ್ನೆ.
ನಬಿ ಸ ಹೇಳಿದರು ಹೌದು.
(ನಂತರ ಖಲೀಫಾ ಉಮರ್ ರ ಕಾಲ ಮದಾಯಿನ್ ಕೈವಶ ವಾದಾಗ ಕಿಸ್ರಾ ರಾಜನ ಬಳೆ,ಕಿರೀಟ ವನ್ನು ಖಲೀಫಾ ರವರು ಸುರಾಖಾ (ರ) ತೊಡಿಸುತ್ತಾರೆ.)
ಹೀಗೆ ಅಲ್ಲಾಹನ ಧರ್ಮದ ಕಾರ್ಯವನ್ನು ಆತ ಸರಿಯಾಗೇ ನಿರ್ವಹಿಸಿದ್ದಾನೆ. ಅಲ್ಲಾಹನಿಗಾಗಿ  ಕರ್ಮ ಮಾಡುವವನು  ಆತನ ಧರ್ಮದ ನೆಲೆಯಲ್ಲಿ ಗಟ್ಟಿಯಾಗೀ ನಿಲ್ಲಬೇಕಾಗಿದೆ.
ಅಲ್ಲಾಹನು ಹೇಳುತ್ತಾನೆ.

يَا أَيُّهَا الَّذِينَ آمَنُوا إِنْ تَنْصُرُوا اللَّهَ يَنْصُرْكُمْ وَيُثَبِّتْ أَقْدَامَكُمْ

ಓ ಸತ್ಯವಿಶ್ವಾಸಿಗಳೇ!, ನೀವು ಅಲ್ಲಾಹುವಿಗೆ ಸಹಾಯ ಮಾಡುವುದಾದರೆ ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಅಚಲವಾಗಿ ನಿಲ್ಲಿಸುವನು.
ಅಲ್ಲಾಹನಿಗೆ ಸಹಾಯ ಮಾಡುವುದೆಂದರೆ ನಾವು ಉತ್ತಮ ಆದರ್ಶ ವ್ಯಕ್ತಿಗಳಾಗಿ ವರ್ತಿಸುವುದಾಗಿದೆ.

يَا أَيُّهَا الَّذِينَ آمَنُوا كُونُوا قَوَّامِينَ لِلَّهِ شُهَدَاءَ بِالْقِسْطِ ۖ وَلَا يَجْرِمَنَّكُمْ شَنَآنُ قَوْمٍ عَلَىٰ أَلَّا تَعْدِلُوا ۚ اعْدِلُوا هُوَ أَقْرَبُ لِلتَّقْوَىٰ ۖ وَاتَّقُوا اللَّهَ ۚ إِنَّ اللَّهَ خَبِيرٌ بِمَا تَعْمَلُونَ

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿಗೋಸ್ಕರ ನೆಲೆಗೊಳ್ಳುವವರೂ, ನ್ಯಾಯಕ್ಕೆ ಸಾಕ್ಷಿವಹಿಸುವವರೂ ಆಗಿರಿ. ಒಂದು ಜನತೆಯೊಂದಿಗಿರುವ ಕ್ರೋಧವು ನ್ಯಾಯ ಪಾಲಿಸದಿರಲು ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯ ಪಾಲಿಸಿರಿ. ಅದು ಧರ್ಮನಿಷ್ಠೆಗೆ ಅತ್ಯಂತ ನಿಕಟವಾಗಿದೆ. ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.

ಒಂದು ವೇಳೆ ನಾವೇ ಅಕ್ರಮಿಗಳು ಮತ್ತು ಅನಾಚಾರಿಗಳಾದರೆ ಜಯಿಸಲು  ಸಾದ್ಯ ವಾಗದು.
(ಅಲ್ಮಾಯಿದಾ :೮)
ವರದಿ ಅಲ್ ಅಹ್ಸನ್ ಮಾಸಿಕ

ರಕ್ತದ ಹೆಸರಲ್ಲಿ ರಾಜಕೀಯ ಮಾಡುವ ಬದಲು ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ ನಡೆಯಲಿ.



ಮನುಷ್ಯನನ್ನು ಮುಗಿಸುವ ಮಾದಕ ಮಾಫಿಯಾದ ವಿರುದ್ಧ ಯಾಕೆ ಹೋರಾಟ,ಪ್ರತಿಭಟನೆಗಳು ನಡೆಯಲ್ಲ?
ಭಾಷಣ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಜಗತ್ತಿನಲ್ಲಿ ಕೋಟ್ಯಾನು ಕೋಟಿ ಜೀವ ಸಂಕುಲವನ್ನು ಸೃಷ್ಟಿಸಿದ ಅಲ್ಲಾಹನು ಯಾವ ಜೀವಿಗೂ ಕೊಡದೇ ಮನುಷ್ಯನಿಗೆ ಮಾತ್ರ ಕೊಟ್ಟ ಅತ್ಯಮೂಲ್ಯ ವಸ್ತು ಬುದ್ಧಿ ಎನ್ನುವುದಾಗಿದೆ.ಅದನ್ನು ಕೈಯಿಂದ ಜಜ್ಜಲಾಗದು,ಕತ್ತಿಯಿಂದ ಕೊಯ್ಯಲಾಗದು ಅಂತಹಾ ಬುದ್ಧಿಯನ್ನು ಅಮಲು ಉಪಯೋಗಿಸಿ ನಾಶಮಾಡುವುದು ಮಹಾ ದರಂತವೇ ಆಗಿದೆ.

ಕುರಾನ್ ಅಮಲು ಉಪಯೋಗದ ಬಗ್ಗೆ ಹೀಗೆನ್ನುತ್ತದೆ.

إِنَّمَا يُرِيدُ الشَّيْطَانُ أَنْ يُوقِعَ بَيْنَكُمُ الْعَدَاوَةَ وَالْبَغْضَاءَ فِي الْخَمْرِ وَالْمَيْسِرِ وَيَصُدَّكُمْ عَنْ ذِكْرِ اللَّهِ وَعَنِ الصَّلَاةِ ۖ فَهَلْ أَنْتُمْ مُنْتَهُونَ

ಸೈತಾನನು ಇಚ್ಛಿಸುವುದು ಮದ್ಯ ಮತ್ತು ಜೂಜಾ ಟದ ಮೂಲಕ ನಿಮ್ಮ ಮಧ್ಯೆ ಶತ್ರುತ್ವ ಹಾಗೂ ವಿದ್ವೇಷ ವನ್ನು ಬಿತ್ತಲು ಮತ್ತು ಅಲ್ಲಾಹುವಿನ ಸ್ಮರಣೆ ಹಾಗೂ ನಮಾಝ್ ನಿಂದ ನಿಮ್ಮನ್ನು ತಡೆಯಲು ಮಾತ್ರವಾಗಿದೆ. ಆದ್ದ ರಿಂದ ನೀವು (ಅವುಗಳನ್ನು) ನಿಲ್ಲಿಸಲು ಸಿದ್ಧರಿರುವಿರಾ?

ಮದ್ಯ ಸೇವನೆಯಂತೆ ಡ್ರಗ್ಸ್ ಕೂಡಾ ಬಯಾನಕವಾಗಿದೆ.

وقال النووي في المجموع: "وأما ما يزيل العقل من غير الأشربة والأدوية، كالبنج وهذه الحشيشة المعروفة فحكمه حكم الخمر في التحريم.

ಬುದ್ದಿಯನ್ನು ನಾಶ ಮಾಡುವ  ರೀತಿಯ ಎಲ್ಲಾ ಪಾನೀಯ, ಮದ್ದು ಅಲ್ಲದ ಅಮಲು ಪದಾರ್ಥ, ಗಾಂಜಾ ಮುಂತಾದವು ಗಳ ವಿಧಿಯೂ ಮದ್ಯದಂತೆ ನಿಶಿಧ್ಧವಾಗಿದೆ. ಎಂದು ಇಮಾಂ ನವವೀ (ರ) ವಿವರಿಸುತ್ತಾರೆ.

ಹದೀಸಿನಲ್ಲಿ ಎಲ್ಲಾ ಅಮಲು ಭರಿಸುವ ವಸ್ತು ನಿಶಿಧ್ಧವೆಂದು ಹೇಳಿದೆ.
نهى رسول الله - صلى الله عليه وسلم - عن كل مسكر ومفتر
ಜಗತ್ತಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವಲೋಕಿಸಿದರೆ ಗಾಬರಿಯಾಗುತ್ತಿದೆ ಸಹಸ್ರಾರು ವರ್ಷಗಳಿಂದ ಧರ್ಮಶ್ರಧ್ದೆಯ ಮೂಲಕ ಜನ ನಾಗರಿಕತೆ ಮತ್ತು ಸಂಸ್ಕಾರ ನೆಲೆನಿಂತಿದ್ದರೆ ಇದೀಗ ಧರ್ಮ, ನೀತಿ, ರೀತಿ ರಿವಾಜು ಹಳೆಯದಾಗುತ್ತಿದೆ.ಅಧಿಕಾರಕ್ಕಾಗಿ ಧರ್ಮವನ್ನು ಎಳೆತಂದಾಗ ಧರ್ಮಕ್ಕೂ ಬೆಲೆ ಇಲ್ಲ ಮನುಷ್ಯನಿಗೂ ನೆಲೆ ಇಲ್ಲದಾಗಿದೆ.ದ್ವೇಷ ಕ್ಕಾಗಿ ಮನುಷ್ಯ ಮನಸ್ಸಿನಲ್ಲಿ ವಿಷವನ್ನು ತುಂಬಿದ ಕಾರಣ ಅಪರಾಧಗಳು ಸರ್ವೇಸಾಮಾನ್ಯ ವಾಗಿ ಬಿಟ್ಟಿದೆ.ಅದರೊಟ್ಟಿಗೆ ಮಹಾಮಾರಿ ಡ್ರಗ್ಸ್ ಮಾಫಿಯಾ ಸಮಾಜವನ್ನೇ ಆಪೋಶನ ತೆಗೆದುಕೊಳ್ಳವಂತೆ ಬ್ರಹತ್ತಾಗಿ ಜಗತ್ತಿನಾದ್ಯಂತ ಬೆಳೆಯುತ್ತಿದೆ.
ಅದರ ಮುಂದೆ ಯಾವ ನಾಗರಿಕತೆ,ಸಂಸ್ಕಾರ ಯಾವುದೂ ಉಳಿಯುವ ಬಗ್ಗೆ ಗಾಬರಿ ಇದೆ.ವಿಶೇಷವಾಗಿ ದೇಶ ಅಮಲಿಗೆ ಬಲಿಯಾಗತ್ತಿದೆ. ಅದರಲ್ಲೂ ಯುವ ಸಮೂಹ!ಅದು ನಮ್ಮ ಮನೆ ಬಾಗಿಲಿಗೇ ಬಂದು ಮುಟ್ಟಿದೆಯೆಂದು ಬಾಸವಾಗುತ್ತದೆ . ರಸ್ತೆಗಳಲ್ಲಿ ಹೆಣಗಳು ಒಂದರ ಮೇಲೊಂದಂತೆ ಬೀಳುತ್ತಿದೆ.ಹಾಲಿಗಿಂತ ಸಲೀಸಾಗಿ ಮಾದಕವಸ್ತು ಲಭ್ಯವಾಗುತ್ತಿದೆ.ಗೋವಾ,
ಆಂದ್ರಪ್ರದೇಶ,ಪಂಜಾಬ್ ಅದರ ಕೆಂದ್ರ ವಾಗಿ ಆ ಮೂಲಕ ವಾಯು ,ಜಲ ,ನೆಲ ಮಾರ್ಗ ಮೂಲಕ ಸರಬರಾಜು ನಡೆಯುತ್ತಿದೆ.
ಅಂಗಡಿ, ಗೂಡಂಗಡಿ ,ಮಾಲು ಮಾರ್ಕೇಟು,ನಗರ ಮತ್ತು ಹಳ್ಳಿಗಳಲ್ಲಿ ಎಗ್ಗಿಲ್ಲದೇ ಗಾಂಜಾ ಹಾವಳಿ ನಡೆಯುತ್ತಿದೆ.
ಶಾಲಾ ಕಾಲೇಜು ಕ್ಯಾಂಪಸುಗಳಿಗೂ ಸಪ್ಲೈಮಾಡಲಾಗುತ್ತಿದೆ.ಈ ಮಹಾ ಮಾರಿಯ ಬಗ್ಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ಮೌನವಹಿಸುವುದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಧರ್ಮದ ಹೆಸರಿನ ಕೊಲೆಗಳ ಬಗ್ಗೆ ಮಾತ್ರ ಇಲ್ಲಿ ಚರ್ಚೆಯಾಗುತ್ತದೆ.ರ‌್ಯಾಲಿಗಳು ನಡೆಯುತ್ತದೆ.ಗದ್ದಲ ಗಲಾಟೆ ಪ್ರತಿಭಟನೆ?. ಆದರೆ ಮಾದಕ ವಸ್ತುಗಳ ದಂಧೆಯ ಬಗ್ಗೆ ಗೊತ್ತಿದ್ದೂ ಅಥವಾ ರಾಜಕೀಯ ಪುಡಾರಿಗಳ ಒತ್ತಡದ ಕಾರಣವಾಗಿ ಇಲ್ಲವೇ ಸರಕಾರದ ನಿರ್ಲಕ್ಷದಿಂದಲೋ ಡ್ರಗ್ಸ್ ಮಾಫಿಯಾ ಹೆಣಗಳು ಬೀಳುತ್ತಿದ್ದರೂ ಯಾವುದೇ ಕ್ರಮಗಳನ್ನು ಸಂಬಂಧ ಪಟ್ಟವರು ಕೈಗೊಳ್ಳುತ್ತಿಲ್ಲ. ಇದರ ನೇರ ಹೊಣೆ ಸರಕಾರವೇ ಆಲ್ಲವೇ?

ಟ್ರಂಪ್ ಮತ್ತು ಕಿಮ್ ಯುದ್ಧ ದಾಹಿಗಳಾಗಿ ಎಗರಾಡುತ್ತಿದ್ದಾರೆ. ಸರ್ವನಾಶದ ಮಾತನ್ನಾಡುತ್ತಿದ್ದಾರೆ ಆದರೆ ಅದಕ್ಕಿಂತಲೂ ದೊಡ್ಡ ಅನಾಹುತ ಮಾದಕವಸ್ತು ಸಂಬಂಧಿತ ಜಾಲದ ಸವಾಲಾಗಿದೆ. ಕಾರಣ ಯುದ್ದದಲ್ಲಿ ಮನುಷ್ಯರು ಸತ್ತರೆ ಅಮಲಿನಲ್ಲಿ ಮನುಷ್ಯತ್ವ ಸಾಯುತ್ತದೆ.
ಜಗತ್ತಿನ ಎರಡು ಹುಚ್ಚರ ಆಟ ನೋಡಿದರೆ ಮೂರನೆಯ ಮಹಾ ಯುದ್ಧ ಬೇಗನೇ ಬರುತ್ತದೋ ಎಂದು ಭಯವಾಗುತ್ತದೆ.
ಒಮ್ಮೆಐನ್‍ಸ್ಟೈನ್ ನೊಂದಿಗೆ ಯಾರೋ ಕೇಳಿದರು . ಮೂರನೆಯ ಮಹಾಯುದ್ಧದ ಅಯುಧಗಳೇನು? ಆಗ ಖ್ಯಾತ ವಿಜ್ಞಾನಿ ಹೇಳಿದ ಉತ್ತರ "ಮೂರನೆಯ ಯುದ್ಧದ ಆಯುಧ ಬಗ್ಗೆ ನನಗೆ ಗೊತ್ತಿಲ್ಲ.ಆದರೆ ನಾಲ್ಕನೇಯ ಯುದ್ಧ ದ ಆಯುಧ ಕಲ್ಲು ಮತ್ತು ಮರದ ತುಂಡುಗಳು ಆಗಿರಬಹುದು" ಅದು ಹೇಗೆ  ಎಂದು ಕೇಳಿದಾಗ ಮೂರನೆಯ ಯುದ್ಧದಲ್ಲಿ ಎಲ್ಲವೂ ನಾಶವಾಗಲಿದೆ
ಎಂದಾಗಿತ್ತು ಉತ್ತರ.ಆದರೆ ಅಮಲು ಪದಾರ್ಥ ಮೂಲಕ ಮುಂದಿನ ಯುಧ್ಧಕ್ಕೆ ಏನೂ ಉಳಿಯದು ಎನ್ನುವುದಂತು ಸತ್ಯ.

ಯಾವುದಾದರೊಬ್ಬ ರಾಜಕೀಯ ನಾಯಕನ ಮೇಲೆ ಯಾವುದಾದರೊಂದು ಆರೋಪ,(ಅದು ಮೊಬೈಲ್ ವಾಚು ಆಗಬಹುದು,)ಹಾಗೇ ಯಾರಾದರೂ ಅನೈತಿಕ ಸಂಬಂಧವನ್ನೋ, ಆತ್ಮಹತ್ಯೆ ಪ್ರೇರಣೆ ಆರೋಪವನ್ನೋ ಹೊರಿಸಿದರೆ ಗಂಟೆಗಟ್ಟಲೆ ಚಿತ್ರ ವಿಚಿತ್ರ ವಾರ್ತೆಯಾಗಿ ,ಡಿಬೇಟಾಗಿ ,ಬಿತ್ತರಿಸುವ ಚಾನಲುಗಳು!.ಯಾವುದಾದರೊಂದು ಹೆಣ್ಣು ಮಗಳ ಮೇಲೆ ಕಿರುಕುಳ ಕೇಸು ಸಿಕ್ಕರೆ ಗೌಪ್ಯತೆಯನ್ನು ಗೌರವಿಸದೇ ಸಂತ್ರಸ್ತೆಯನ್ನು ಸ್ಟುಡಿಯೋದಲ್ಲಿ ಕೂರಿಸಿ ಅಥವಾ ಫೋನಾಯಿಸಿ ಇನ್ನಷ್ಟು   ಸತಾಯಿಸುವ ರೀತಿಯಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ  ಎಕ್ಸ್ಲ್ ಕ್ಯೂಸಿವ್ ವರದಿಯಾಗಿ ಬಿತ್ತರಿಸುವ ಮೀಡಿಯಾ ಗಳು ?ಇನ್ನು ಯಾವದಾದರೊಂದು ಊಹಾಪೋಹ ವರದಿಯು ಮುಸ್ಲಿಂ ಸಮುದಾಯದ ಬಗ್ಗೆ ಬಂದರೆ ಸತ್ತ ಕಾಗೆ ಬಳಿ ಅರಚುವ ಕಾಗೆಗಳಂತೆ ಅಥವಾ ಮೈಮೇಲೆ ಬಂದಂತೆ ವರ್ತಿಸುವ ಜರ್ನಲಿಸ್ಟುಗಳು,  ಯಾಕೆ ಮಾದಕ ಜಾಲದ ಹಿಂದೆ ಕಾರ್ಯಾಚರಿಸುತ್ತಿಲ್ಲ ಅದರ ಬೆನ್ನತ್ತಿ ಹೋಗುವುದಿಲ್ಲ.?

ಮಾನವೀಯತೆ ಮತ್ತು ನಾಗರಿಕತೆ ಯನ್ನು ಕಾಪಾಡಬೇಕಾದ ಧರ್ಮವೇ ಅಮಲಿಗೆ ಬಲಿಯಾಗುವುದೇ?
ಅದು ದೊಡ್ಡ ದುರಂತವಾಗಬಹುದು.ಸ್ವಾಮೀ ವಿವೇಕಾನಂದರು ಹೀಗೇ ಬರೆಯುತ್ತಾರೆ.
ಬಾರತವು ಸಾಯುವುದೇ ?ಹಾಗೇನಾದರೂ ಆದರೆ ಪ್ರಪಂಚದ ಎಲ್ಲಾ ಅಧ್ಯಾತ್ಮ ವೂ ನಿರ್ನಾಮವಾಗುವುದು.ಎಲ್ಲಾ ನೈತಿಕತೆ ನಷ್ಟವಾಗುವುದು.ಎಲ್ಲಾ ಮತಗಳ ಬಗ್ಗೆ ಮಧುರ ಅನುಕಂಪವೂ ನಾಶವಾಗುವುದು‌. ಎಲ್ಲಾ ಆದರ್ಶ ತತ್ವಗಳು ‌ನಿರ್ನಾಮವಾಗುವುದು.ಲೈಂಗಿಕ ಕಾಮ ಸುಖ ಭೋಗಗಳೇ ಗಂಡು ಹೆಣ್ಣು ದೇವತೆಗಳಾಗಿ ,ಹಣವು ಅದರ ಪೂಜಾರಿಯಾಗಿ,ಮೋಸ ಬಲತ್ಕಾರ ಮತ್ತು ಸ್ಪರ್ಧೆ ಗಳು ಪೂಜಾ ಕ್ರಮವಾಗಿ ಮಾನವ ಆತ್ಮ ಬಲಿಪಶುವಾಗುವುದು.

ಎಲ್ಲಾ ಧರ್ಮಾದವರೂ ಒಂದಾಗಿ ಹೋರಾಡಬೇಕಾದದ್ದು ಅಮಲು ಹಾವಳಿಯ ಬಗ್ಗೆ. ಅದನ್ನು ಮಾಡದಿದ್ದರೆ ಧರ್ಮ ಧರ್ಮ ಅಂತ ಹೊಡೆದಾಡಲು ಯಾರೂ ಉಳಿಯಲ್ಲ.ಅಮಲು ಮಾಫಿಯಾದಲ್ಲಿ ಮನುಷ್ಯತ್ವವೇ ನಾಶವಾಗುತ್ತಿರುವಾಗ ,ಕೆಲವರು ರಕ್ತದ ಹೆಸರಿನಲ್ಲಿ ರಾಜಕೀಯದಾಟ ನಡೆಸಿದರೆ .ಇನ್ನೊಂದು ಕಡೆ ಕೆಲವರು ಉಗ್ರ ಕ್ರಮ,ಕಟ್ಟು ನಿಟ್ಟಿನ ಕ್ರಮ,ಮುಲಾಜಿಲ್ಲದೇ ಕ್ರಮ ಅಂತ ರಾಗ ಎಳೆದು ಜನರನ್ನು ವಂಚಿಸುತ್ತಾರೆ ?.
ಕಾನೂನು ಸುವ್ಯವಸ್ಥೆ ಯನ್ನು ಕಾಪಾಡಬೇಕಾದವರು ಅಮಲು ಮಾರಟಗಾರರ ಏಜನ್ಸಿಗಳಾಗುತ್ತಾರೆಯೇ ?
.
ಇದೀಗ ಧರ್ಮದ ಹೆಸರಲ್ಲಿ ರಾಜಕೀಯ ಮಾಡದೇ ,ಜನರನ್ನು ಪರಸ್ಪರ ಒಡೆಯದೇ ಮಾದಕ ಜಾಲವನ್ನು ಭೇಧಿಸಲು ಎಲ್ಲರೂ ಒಂದಾಗಬೇಕಾಗಿದೆ.ಇಲ್ಲವಾದರೆ ಧರ್ಮವೂ ಉಳಿಯದು ಮನುಷ್ಯತ್ವವೂ ಉಳಿಯದು.
ಅಪಘಾತವಾದರೆ
ಜೀವ ಉಳಿಸಲು ಹರಸಾಹಸ ಪಡುತ್ತಾರೆ,ಜೈಲು ಸೇರಿದರೆ ಅರೋಪ ಮುಕ್ತವಾಗಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ ? ಆದರೆ ಮನಷ್ಯತ್ವವನ್ನು ಕಾಪಾಡಲು ನಾವೇನು ಮಾಡುತ್ತಿದ್ದೇವೆ?ಅದಕ್ಕಾಗಿ ಏಕೆ ಹೋರಾಡಬಾರದು.?
ಒಂದು ಪ್ರದೇಶದಲ್ಲಿ ಈ ತರದ ಅಮಲು ದಂಧೆ ನಡೆಯುತ್ತಿದ್ದರೆ  ಅದಕ್ಕೆ ನೇರ ಹೊಣೆ ಸರಕಾರ ಮತ್ತು ಪ್ರಾದೇಶಿಕ ಆಡಳಿತ ಹಾಗೂ ಕಾನೂನು ಪಾಲಕ ಕೇಂದ್ರಗಳೇ ಕಾರಣವಾಗಬೇಕಿದೆ.
ಆದರೆ ಪುಂಡ ಪಟ್ಟಿಂಗರನ್ನು ಬೆಳೆಸುವುದು ಕೆಲ ರಾಜಕಾರಣಿಗಳು ಮತ್ತು ಪೋಲಿಸ್ ಠಾಣೆಗಳು ಎಂದು ಜನ ಆಡಿಕೊಳ್ಳುತ್ತಾರೆ.
ಸಾಮಾಜಿಕ ಭದ್ರತೆ ಒದಗಿಸಬೇಕಾದ ಸರಕಾರ ಇದಕ್ಕೆ ಬಧ್ಧವಾಗಬೇಕಿದೆ.

قُلْ إِنَّمَا حَرَّمَ رَبِّيَ الْفَوَاحِشَ مَا ظَهَرَ مِنْهَا وَمَا بَطَنَ وَالْإِثْمَ وَالْبَغْيَ بِغَيْرِ الْحَقِّ

ಹೇಳಿರಿ: ‘ನನ್ನ ಪ್ರಭು ನಿಷಿದ್ಧಗೊಳಿಸಿರುವುದು ಪ್ರತ್ಯಕ್ಷವಾಗಿರುವ ಮತ್ತು ಪರೋಕ್ಷವಾಗಿರುವ ನೀಚಕೃತ್ಯ ಗಳು, ಪಾಪಕೃತ್ಯಗಳು, ಅನ್ಯಾಯವಾದ ದಬ್ಬಾಳಿಕೆಗಳು ಆಗಿವೆ.

🎆 ವರದಿ ಅಲ್ ಅಹ್ಸನ್ ಮಾಸಿಕ

ಅಪಪ್ರಚಾರಗಳಿಂದ ಇಸ್ಲಾಮನ್ನು ಕಟ್ಟಿ ಹಾಕಲಾಗದು; ಆದಿರಾ ಎತ್ತಿದ ಪ್ರಶ್ನೆಗಳಿಗೆ ಆಧಾರ ಸಹಿತ ದಿಟ್ಟ ಉತ್ತರ.

ಮೌಲಾನಾ ಯು ಕೆ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಐತಿಹಾಸಿಕ ವಿಜಯಗಳ ಚರಿತ್ರೆಯನ್ನು ಬರೆಯಲ್ಪಟ್ಟ,
ಜಗತ್ತಿನ ಅತ್ಯದ್ಭುತ ಘಟನೆಗಳಿಗೆ ಸಾಕ್ಷಿಯಾದ,
ದಮನಿತ, ಘೋಷಿತ ಅಸಹಾಯಕ ಜನ ವರ್ಗಕ್ಕೆ ಆಶಾಕಿರಣ ನೀಡುವ ತಿಂಗಳು ಪವಿತ್ರ ಮುಹರ್ರಂ.
ಜಗದೊಡೆಯನ ಅಸ್ತಿತ್ವದ ವಿರುದ್ಧ ಶಕ್ತಿ ಪ್ರದರ್ಶಿಸಿದ ಅಹಂಕಾರಿಗಳ ಸದ್ದಡಗಿದ್ದು ಇದೇ ಮುಹರ್ರಮ್ ನಲ್ಲಿ.ಅಗ್ನಿ ಪರೀಕ್ಷೆಗೆ ಬಲಿಯಾದ ಹಜ್ರತ್ ಖಲೀಲಿಲ್ಲಾಹಿ ಇಬ್ರಾಹಿಂ (ಅ ) ಏಳು ದಿವಸಗಳ ನಂತರ ಬೆಂಕಿಯ ಕೆನ್ನಾಲೆಯಿಂದ ಒಂದು ರೋಮವೂ ಸುಡದಂತೆ ಹೊರಬಂದದ್ದು ಇದೇ ಮುಹರ್ರಂ ತಿಂಗಳಿನಲ್ಲಿ.

ಸತ್ಯ ಧರ್ಮದ ಉಳಿವಿಗಾಗಿ ನಡೆದ ಅನೇಕ ರೋಮಾಂಚಕ ಘಟನೆಗಳಿಗೆ ಈ ಮಾಸ ಸಾಕ್ಷಿಯಾಗಿದೆ. ಇಸ್ಲಾಮಿನ ವಿರುದ್ಧವಾಗಿ ಯಾರು ದ್ವನಿ ಎತ್ತಿದರೂ ಅದು ಫಲ ನೀಡದು ಎನ್ನುವದು ಕಾಲ ಕಂಡ ಸತ್ಯ.

ಇತ್ತೀಚಿನ ಕೆಲ ದಿನಗಳಲ್ಲಿ ಚರ್ಚೆಗೆ ಗ್ರಾಸವಾದ ವಸ್ತು ಕಾಸರಗೋಡಿನ ಉದುಮಾ ನಿವಾಸಿ ಆದಿರಾ !

ಆದಿರಾ  ಎಂಬ ಹೆಣ್ಣು ಮಗಳು ತನ್ನ ಇಷ್ಟದಂತೆ ಇಸ್ಲಾಮಿಗೆ ಮತಾಂತರ ಗೊಂಡಿದ್ದಳು. ನಂತರ ಮನೆ ಬಿಟ್ಟ ಆದಿರಾ ಆಯಿಷಾ ಆಗಿ ಕೋರ್ಟಿಗೆ ಹಾಜರಾಗುತ್ತಾಳೆ.ನನ್ನ ಸ್ವ ಇಚ್ಚೆಯಿಂದಲೇ ಮತಾಂತರಗೊಂಡಿದ್ದೇನೆ ಎಂದು ಹೇಳಿಕೆ ಕೊಡುತ್ತಾಳೆ.ನನ್ನ ಮುಂದಿನ ಅದ್ಯಯನ ಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರ್ಟಿನೊಂದಿಗೆ ವಿನಂತಿ ಮಾಡುತ್ತಾಳೆ. ನಂತರ ಹೆತ್ತವರ ಸುಪರ್ದಿಗೆ ಕೊಡಲಾಗುತ್ತದೆ.ಅಲ್ಲಿಂದ ಒಂದು ಆಶ್ರಮದಲ್ಲಿ ಕೆಲಕಾಲ ಹೆಚ್ಚಿನ ಅದ್ಯಯನ ಕ್ಕಾಗಿ ಸೇರಿಕೊಳ್ಳುತ್ತಾಳೆ. ನಂತರ ಪುನಃ ಆದಿರಳಾಗಿ ಚಾನಲ್ ಮುಂದೆ ಪ್ರತ್ಯಕ್ಷಳಾಗುತ್ತಾಳೆ.ಹಾಗೇ ತನ್ನ ಸಂದರ್ಶನವನ್ನು ನೀಡುತ್ತಾಳೆ.
ಈ ಮಧ್ಯೆ ಆದಿರಾ ವಿಷಯದಲ್ಲಿ ಉಗ್ರ,ಜಿಹಾದ್,ಬಲಾತ್ಕಾರ ಐಸಿಸ್ ಎಂಬಿತ್ಯಾದಿ ಚರ್ಚೆಗಳು ಧಾರಾಳವಾಗಿ ನಡೆದಿತ್ತು..ಅದೆಲ್ಲವೂ ಅಪ್ರಸ್ತುತ ಎಂದು ಆದಿರಳ ಮಾತಿನಿಂದ ಬಯಲಾಯಿತು.ಮತ್ತೆ ತನ್ನ ಸಹಾಯಕ್ಕೆ ಬಂದವರು ಸಹಪಾಟಿಗಳಿರಬಹುದು,ಪರಿಚಯದವರೂ ಇರಬಹುದು.ಅದೆಲ್ಲಾ ಸಹಜವಾದ ಸಂಗತಿಗಳು. ಇದ್ಯಾವುದು ನಮ್ಮ ಚರ್ಚೆಯ ವಿಷಯವಲ್ಲ.
ಆದಿರ ಆಯಿಷಾ ಆದರೂ ಆಯಿಷಾ ಆದಿರಾ ಆದರೂ ನಮಗೇನು ?
ಅಂತಹಾ ಸಂಗತಿಗಳು ನಡೆಯುತ್ತಲೇ ಇದೆ.ಅದು ಅವರವರ ವ್ಯಕ್ತಿ ಸ್ವಾತಂತ್ರ್ಯ. ಯಾರೂ ಪ್ರಶ್ನಿಸುವಂತಿಲ್ಲ.
ಆದರೆ ಆದಿರ ಕೊಟ್ಟ ಹೇಳಿಕೆಗಳು ಅವಳ ಮಾತ್ರ ಅಭಿಪ್ರಾಯವಾಗಿದ್ದರೂ ,ಬೇರೆಯವರು ಆ ರೀತಿ ಸಿದ್ದಪಡಿಸಿದ್ದೇ ಆಗಿದ್ದರೂ ಅದು   ಖಂಡನೀಯ.
ಕಾರಣ ಆದಿರಾ ಯಾವ ಧರ್ಮವನ್ನು ಬೇಕಾದರೂ ಅಪ್ಪಿಕೊಳ್ಳಬಹುದು. ಆದರೆ ಯಾವುದೇ ಧರ್ಮದ ಬಗ್ಗೆ ಅಪಕ್ವವಾದ ಆರೋಪಗಳನ್ನು ಮಾಡಬಾರದೆಂಬ ಕಾರ್ಯವನ್ನು ನಾವು ಎತ್ತಿಹಿಡಿಯುತ್ತೇವೆ.
ಮತ್ತು ಆರೋಪಗಳಿಗೆ ಉತ್ತರವನ್ನು  ಕೊಡಬೇಕಾದುದು ನಮ್ಮ ಕರ್ತವ್ಯವಾಗಿರುತ್ತದೆ.
ಇಸ್ಲಾಮಿನಲ್ಲಿ ಸ್ತ್ರೀಯರಿಗೆ ಸಮಾನತೆ ಸ್ವಾತಂತ್ರ್ಯ ಇಲ್ಲ ಎನ್ನುವುದು  ಆದಿರಾಳ ಮೊದಲ ಆರೋಪ.
ಇದರ ನಿಜಾಂಶವೇನೆಂದು ತಿಳಿಯೋಣ.
ಮನುಷ್ಯ ಸೃಷ್ಟಿ ಯ ಬಗ್ಗೆ ಕುರಾನ್ ಹೀಗೆನ್ನುತ್ತದೆ.

لَقَدْ خَلَقْنَا الْإِنْسَانَ فِي أَحْسَنِ تَقْوِيمٍ

ಖಂಡಿತವಾಗಿಯೂ ನಾವು ಮನುಷ್ಯನನ್ನು ಅತ್ಯುತ್ತಮ ರಚನೆಯೊಂದಿಗೆ ಸೃಷ್ಟಿಸಿರುವೆವು.

وَلَقَدْ كَرَّمْنَا بَنِي آدَمَ وَحَمَلْنَاهُمْ فِي الْبَرِّ وَالْبَحْرِ وَرَزَقْنَاهُمْ مِنَ الطَّيِّبَاتِ وَفَضَّلْنَاهُمْ عَلَىٰ كَثِيرٍ مِمَّنْ خَلَقْنَا تَفْضِيلًا

ಖಂಡಿತವಾಗಿಯೂ ನಾವು ಆದಮ್ ಸಂತತಿಗಳನ್ನು ಗೌರವಿಸಿರುವೆವು. ಅವರನ್ನು ನಾವು ಸಮುದ್ರದಲ್ಲೂ, ನೆಲದಲ್ಲೂ ವಾಹನದಲ್ಲಿ ವಹಿಸಿರುವೆವು. ವಿಶಿಷ್ಠ ವಸ್ತು ಗಳಿಂದ ಅವರಿಗೆ ನಾವು ಅನ್ನಾಧಾರವನ್ನು ಒದಗಿಸಿರುವೆವು. ನಾವು ಸೃಷ್ಟಿಸಿದವುಗಳ ಪೈಕಿ ಹೆಚ್ಚಿನವರಿಗಿಂತಲೂ ಅವರಿಗೆ ನಾವು ವಿಶೇಷ ಶ್ರೇಷ್ಠತೆಯನ್ನು ದಯಪಾಲಿಸಿರುವೆವು.
ಇಲ್ಲಿ ಕುರಾನ್ ಯಾವುದೇ ರೀತಿಯ ಭೇದ ತೋರುವುದಿಲ್ಲ.ಮನುಷ್ಯನ ಸೃಷ್ಟಿ ಮತ್ತು ಅನುಗ್ರಹ ಎಲ್ಲವೂ  ಗಂಡು ಹೆಣ್ಣಿಗೆ ಸಮಾನವಾಗಿದೆ.
ಇನ್ನು ಪ್ರತಿಫಲದ ಬಗ್ಗೆ ಯೂ ಕುರಾನ್ ಸಮಾನವಾಗಿ ಕಾಣುತ್ತದೆ.
مَنْ عَمِلَ صَالِحًا مِنْ ذَكَرٍ أَوْ أُنْثَىٰ وَهُوَ مُؤْمِنٌ فَلَنُحْيِيَنَّهُ حَيَاةً طَيِّبَةً ۖ وَلَنَجْزِيَنَّهُمْ أَجْرَهُمْ بِأَحْسَنِ مَا كَانُوا يَعْمَلُونَ
(ಅನ್ನಹ್ಲ್ :೯೭)

ಗಂಡಾಗಲಿ, ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿರುತ್ತಾ ಯಾರು ಸತ್ಕರ್ಮಗಳನ್ನು ಮಾಡುವರೋ ಖಂಡಿತವಾಗಿಯೂ ನಾವು ಆ ವ್ಯಕ್ತಿಗೆ ಉತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು.ಪ್ರತಿಯೋರ್ವರ ಜವಾಬ್ದಾರಿ ಯೂ ಸಮಾನವೆಂಬುದು ಕುರಾನ್ ಉಲ್ಲೇಖಿಸುತ್ತದೆ.

 وَلَهُنَّ مِثْلُ الَّذِي عَلَيْهِنَّ بِالْمَعْرُوفِ ۚ وَلِلرِّجَالِ عَلَيْهِنَّ دَرَجَةٌ ۗ ﻭﺍﻟﻠﻪعزيز ﺣﻜﻴﻢ.

ಸ್ತ್ರೀಯರಿಗೆ ಪತಿಯಂದಿರೊಂದಿಗೆ) ಬಾಧ್ಯತೆಗಳಿರುವಂತೆ ಅವರಿಗೆ ಸಿಗಬೇಕಾದ ನ್ಯಾಯಬದ್ಧ ಹಕ್ಕುಗಳೂ ಇವೆ. ಆದರೆ ಪುರುಷರಿಗೆ ಅವರಿಗಿಂತ ಹೆಚ್ಚಿನ ಒಂದು ಪದವಿಯಿದೆ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

ಹೆಣ್ಣು ಮಕ್ಕಳನ್ನು ಸಾಕಿದರೆ ಅಂತ್ಯ ದಿನದಲ್ಲಿ ಪ್ರವಾದಿ ಜೊತೆ ಸೇರಬಹುದು.
ಮಡದಿಯ ಬಾಯಲ್ಲಿ ಇಡುವ ಪ್ರತೀ ತುತ್ತಿಗೆ ಪುಣ್ಯವಿದೆ.
ಇದು ಪುಣ್ಯ ಪ್ರವಾದಿಯ ಶ್ರೇಷ್ಠ ವಚನಗಳು.
ವೈವಾಹಿಕ ಬದುಕಿನಲ್ಲಿ ಗಂಡ ಹೆಂಡತಿ ಸಮಾನರು.ಕುರಾನ್ ಹೇಳುತ್ತದೆ.
هُنَّ لِبَاسٌ لَكُمْ وَأَنْتُمْ لِبَاسٌ لَهُنَّ ۗ

ಅವರು ನಿಮಗೊಂದು ಉಡುಪಾಗಿ ರುವರು. ಮತ್ತು ನೀವು ಅವರಿಗೊಂದು ಉಡುಪಾಗಿರುವಿರಿ.
ಇನ್ನು ಜವಾಬ್ದಾರಿ ವಿಚಾರದಲ್ಲಿ ನೋಡಿದರೆ
ಹೆಂಡತಿಯ ಸಂಪಾದನೆ ಅವಳಿಗೆ ಮಾತ್ರವಾಗಿರುತ್ತದೆ.
ಗಂಡನಾದವನು ಸಂಪೂರ್ಣ ಖರ್ಚು ವೆಚ್ಚವನ್ನು ನಿಭಾಯಿಸುವುದರೊಂದಿಗೆ ತಂದೆಯ ಸೊತ್ತಿನಲ್ಲಿ ಹೆಣ್ಣು ಪಾಲು ಪಡಯುತ್ತಾಳೆ.
ಗಂಡಾದವನು ಹೆಣ್ಣಿನ ಒಂದಂಶ ಜಾಸ್ತಿ ಪಡೆದರೂ ಖರ್ಚನ್ನು ಭರಿಸುವ ಜವಾಬ್ದಾರಿ ಹೊಂದಿರುತ್ತಾನೆ.
ಕುರಾನ್ ಹೇಳುತ್ತದೆ.
الرِّجَالُ قَوَّامُونَ عَلَى النِّسَاءِ بِمَا فَضَّلَ اللَّهُ بَعْضَهُمْ عَلَىٰ بَعْضٍ وَبِمَا أَنْفَقُوا مِنْ أَمْوَالِهِمْ ۚ

ಅಲ್ಲಾಹು ಮನುಷ್ಯರ ಪೈಕಿ ಒಂದು ವರ್ಗವನ್ನು ಇನ್ನೊಂದು ವರ್ಗದವರಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ವರನ್ನಾಗಿ ಮಾಡಿರುವುದರಿಂದ ಮತ್ತು (ಪುರುಷರು) ತಮ್ಮ ಧನವನ್ನು ವ್ಯಯಿಸುವುದರಿಂದ ಪುರುಷರು ಸ್ತ್ರೀಯರ ಮೇ
ಲೆ ನಿಯಂತ್ರಣಾಧಿಕಾರ ಹೊಂದಿದವರಾಗಿರುತ್ತಾರೆ.

ಇನ್ನು ಸ್ರೀಯ ಬಗ್ಗೆ ಶ್ಲೋಕ ಏನನ್ನುತ್ತದೆ.?

ತಥಾ ಚ ಶ್ರುತಯೋ ಬಹ್ವೋ ನಗೀತಾ ನಿಗಮೇಷ್ವಪಿ/-(9-19)
ಸ್ತ್ರೀಯರು ಹೀಗೆಂದು ವೇದಗಳಲ್ಲಿಯೇ ಪ್ರಮಾಣಗಳಿವೆ.
ಸ್ವಭಾವ ಏಷ ನಾರಿಣಾಂ ನರಾಣಾಮಿಹ ದೂಷಣಂ/-(2-213)
ಪುರುಷರ ಮನಸ್ಸು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ.
ಅವಿದ್ವಾಂಸಮಲ ಲೋಕೇ ವಿದ್ವಾಂಸಮಪಿ ವಾ ಪುನಃ/
ಪ್ರಮದಾ ಹ್ಯುತ್ಪಥಂ ನೇತುಂ ಕಾಮಕ್ರೋಧವಶಾನುಗಂ-(2-214)
ಅವನು ಪಂಡಿತನೇ ಇರಲಿ, ಪಾಮರನೇ ಆಗಿರಲಿ ಕಾಮ ಕ್ರೋಧ ವಶನಾದ ಮನುಷ್ಯನನ್ನು ಮಾರ್ಗ ಭ್ರಷ್ಟನನ್ನಾಗಿ ಮಾಡಲು ಸ್ತ್ರೀ ಸಮರ್ಥಳು.

ಪಿತ್ರಾ ಭತರ್ಾ ಸುತೈವರ್ಾಪಿ ನೇಚ್ಛೇದ್ವಿರಹಮಾತ್ಮನಂ/
ಏಷಾಂ ಹಿ ವಿರಹೇಣ ಸ್ತ್ರೀ ಗಹ್ಯರ್ೇ ಕುಯರ್ಾಭೇ ಕುಲೇ//-(5-149)
ಸ್ತ್ರೀಯರು ತಂದೆ, ಗಂಡ, ಮಕ್ಕಳನ್ನು ಬಿಟ್ಟು ಒಬ್ಬಳೇ ಇರಬಾರದು. ಹಾಗೆ ಒಬ್ಬಳೇ ಇದ್ದರೆ ಉಭಯ ಕುಲಗಳಿಗೂ ಕೆಟ್ಟ ಹೆಸರು ತರುತ್ತಾಳೆ.

ಬಾಲ್ಯೇ ಪಿತುರ್ವಶೇ ತಿಷ್ಠೇತ್ಪಾಣಿಗ್ರಾಹಸ್ಯ ಯೌವನೇ/
ಪುತ್ರಾಣಾಂ ಭರ್ತರಿ ಪ್ರೇತೇ ಭಜೇತ್ ಸ್ತ್ರೀ ಸ್ವತಂತ್ರತಾಂ//-(5-148)
ಬಾಲ್ಯದಲ್ಲಿ ತಂದೆಯ ವಶದಲ್ಲಿ ಯೌವ್ವನದಲ್ಲಿ ಗಂಡನ ವಶದಲ್ಲಿ ಗಂಡ ಸತ್ತ ನಂತರ ಪುತ್ರರ ಅಧೀನದಲ್ಲಿ ಬಾಳಬೇಕಲ್ಲದೇ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು.

ಮನುಸ್ಮೃತಿಯ ಬಹಳ ಪ್ರಸಿದ್ಧವಾದ ಶ್ಲೋಕ-

ಪಿತಾ ರಕ್ಷತಿ ಕೌಮಾರೇ ಭತರ್ಾ ರಕ್ಷತಿ ಯೌವನೇ/
ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ//-(9-3)


ನಾಸ್ತಿ ಸ್ತ್ರೀಣಾಂ ಪೃಥಗ್ಯಜ್ಞೋ ನವ್ರತಂ ನಾಪ್ಯು ಪೋಷಿತಂ/
ಪತಿಂ ಶುಶ್ರೂಷತೇ ಯೇನ ತೇನ ಸ್ವಗರ್ೇ ಮಹಿಯತೇ// (5-155)
ಪತಿಯನ್ನು ಬಿಟ್ಟು ಸ್ತ್ರೀಗೆ ಬೇರೇ ಯಜ್ಞವೇ ಇಲ್ಲ. ವ್ರತವೂ ಇಲ್ಲ. ಉಪವಾಸವೂ ಇಲ್ಲ. ಪತಿ ಸೇವೆ ಮಾಡುವುದರಿಂದಲೇ ಸ್ತ್ರೀಯು ಸ್ವರ್ಗದಲ್ಲಿ ಗೌರವ ಪಡೆಯುತ್ತಾಳೆ.

ವಿಶೀಲಂ ಕಾಮವೃತ್ತೋ ವಾಗುಣೈವರ್ಾ ಪರವರ್ಜತಃ/
ಉಪಚರ್ಯಃ ಸ್ತ್ರೀಯಾ ಸಾಧ್ವಾ ಸತತಂ ದೇವತ್ಪತಿಃ//-(95-154)
ಪತಿಯ ನಡತೆಯು ಚೆನ್ನಾಗಿರದಿದ್ದರೂ, ಕಾಮಾತುರನಾಗಿ ಅವನು ಬೇರೆ ಹೆಣ್ಣಿನ್ನು ಮೋಹಿಸಿದರೂ, ದುರ್ಗುಣಿಯಾಗಿದ್ದರೂ ಸಹ ಸಾಧ್ವಿಯಾದ ಹೆಂಡತಿಯು ತನ್ನ ಪತಿಯನ್ನು ದೇವರೆಂದೇ ಭಾವಿಸಿ ಸೇವೆ ಮಾಡಬೇಕು.

ಶಯ್ಯಾಸನಮಲಂಕಾರಂ ಕಾಮಂ ಕ್ರೋಧಂ ಅನಾರ್ಜವಂ/
ದ್ರೋಹ ಭಾವಂ ಕುಚಯರ್ಾಂ ಚ ಸ್ತ್ರೀಭ್ಯೋ ಮನುರಕಲ್ಪಯತ್ ? (9-17)
ಮಲಗುವುದು, ಕುಳಿತುಕೊಂಡಿರುವುದು, ಅಲಂಕಾರ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿ ದ್ರೋಹ ಮತ್ತು ದುರ್ನಡತೆ ಇವು ಸ್ತ್ರೀಯರಿಗೆ ಸ್ವಾಭಾವಿಕ ಗುಣಗಳೆಂದು ಮನು ಹೇಳುತ್ತಾನೆ.
ಮಡದಿಯರು ಗಂಡಸರ ಕೃಷಿ ಭೂಮಿ ಎಂದು ಹೇಳಿದೆ ಎನ್ನುದು ಇನ್ನೊಂದು ಆರೋಪ.
نِسَاؤُكُمْ حَرْثٌ لَكُمْ .
ನಿಮ್ಮ ಪತ್ನಿಯರು ನಿಮ್ಮ ಹೊಲವಾಗಿರುವರು.

ನಿಜ ಹೇಳಬೇಕಾದರೆ ಇದು ಅಲಂಕಾರಿಕ ಪದ ಪ್ರಯೋಗ.
ಸಂತಾನವನ್ನು ಕೊಡಲು ಅವಳಿಗೆ ಮಾತ್ರ ಸಾಧ್ಯ.ಅದೂ ಅಲ್ಲದೇ ಆ ಸಂತಾನ ಅವಳ ಪಾಲು ಆಗಿರುತ್ತದೆ.ತಾಯಿಯೊಂದಿಗಿನ ಭಾದ್ಯತೆ ಬಗ್ಗೆ ಕೇಳಿದಾಗ ಮೂರು ಸಲವೂ ತಾಯಿ ಪರ ಹೇಳಿದ ಪ್ರವಾದಿ ಸ ನಾಲ್ಕನೆಯ ಸಲ ತಂದೆಗೆ ಎಂದು ತಂದೆಯ ಪರ ಹೇಳುತ್ತಾರೆ.ಅದೂ ಅಲ್ಲದೇ ಕೃಷಿಕನಿಗೆ ತನ್ನ ಕೃಷಿ ಭೂಮಿಗಿಂತ ಮೇಲು ಯಾವುದೂ ಇಲ್ಲ.
ಇಸ್ಲಾಮನ್ನು ಸ್ವೀಕರಿಸಿದವರ ಮೇಲೆ ಹೋರಾಡಬೇಕೆನ್ನುವುದನ್ನು ಕುರಾನ್ ಹೇಳಿದೆ ಎನ್ನುವುದು ಇನ್ನೊಂದು ಆರೋಪ.
ಹದಿಮೂರು ವರ್ಷಗಳ ಕಾಲ ಇನ್ನಿಲ್ಲದ ದೌರ್ಜನ್ಯ ದಬ್ಬಾಳಿಕೆಯನ್ನು ಪ್ರವಾದಿ ಮತ್ತು ಅನುಚರ ಮೇಲೆ  ನಡೆಸಿದ ಮಕ್ಕಾ ದ ಜನತೆ ಆದರೂ ಪ್ರತಿರೋಧ ತೋರದೇ ಕಡೆಗೆ ಜನ್ಮಭೂಮಿ ತೊರೆದು ಹೊರಡುತ್ತಾರೆ.ಆಗಲೂ ತಡೆಯೊಡ್ಡಿದರು.ನಂತರ  ಮದೀನಕ್ಕೂ ಅಪಾಯ ತಂದೊಡ್ಡುವ ಘಟ್ಟದಲ್ಲಿ ಕುರಾನ್ ಯುದ್ಧ ಕ್ಕೆ ಅನಮತಿ ನೀಡುತ್ತದೆ.
أُذِنَ لِلَّذِينَ يُقَاتَلُونَ بِأَنَّهُمْ ظُلِمُوا ۚ وَإِنَّ اللَّهَ عَلَىٰ نَصْرِهِمْ لَقَدِيرٌ
(ಅಲ್ ಹಜ್ಜ್ :೩೯)
ಯುದ್ಧಕ್ಕೆ ಬಲಿಯಾಗುವವರಿಗೆ, ಅವರು ಮರ್ದಿತರಾಗಿರುವುದರಿಂದ (ತಿರುಗೇಟು ನೀಡಲು) ಅನುಮತಿ ನೀಡಲಾಗಿದೆ. ಖಂಡಿತವಾಗಿಯೂ ಅವರಿಗೆ ನೆರವು ನೀಡಲು ಅಲ್ಲಾಹು ಸಮರ್ಥನಾಗಿರುವನು.

الَّذِينَ أُخْرِجُوا مِنْ دِيَارِهِمْ بِغَيْرِ حَقٍّ إِلَّا أَنْ يَقُولُوا رَبُّنَا اللَّهُ
ನಮ್ಮ ಪ್ರಭು ಅಲ್ಲಾಹುವಾಗಿರುವನು’ ಎಂದು ಹೇಳಿರುವ ಕಾರಣಕ್ಕಾಗಿ ಮಾತ್ರ ಅವರನ್ನು ಅನ್ಯಾಯವಾಗಿ ಅವರ ಮನೆಗಳಿಂದ ಹೊರಗಟ್ಟಲಾಗಿದೆ. ತಮ್ಮ ಮೇಲೆ ಯುದ್ಧ ಮಾಡುವವರೊಂದಿಗೆ ಮಾತ್ರ ಯುದ್ಧಾನುಮತಿ ನೀಡುತ್ತದೆ ಕುರಾನ್.
وَقَاتِلُوا فِي سَبِيلِ اللَّهِ الَّذِينَ يُقَاتِلُونَكُمْ وَلَا تَعْتَدُوا ۚ إِنَّ اللَّهَ لَا يُحِبُّ الْمُعْتَدِينَ

ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ಅಲ್ಲಾಹುವಿನ ಮಾರ್ಗದಲ್ಲಿ ನೀವೂ ಯುದ್ಧ ಮಾಡಿರಿ. ಆದರೆ ಹದ್ದು ಮೀರದಿರಿ. ಖಂಡಿತವಾಗಿಯೂ ಹದ್ದು ಮೀರುವವರನ್ನು ಅಲ್ಲಾಹು ಮೆಚ್ಚಲಾರನು.(2/190)

ಯಾರ ಮೇಲೂ ಬಲಾತ್ಕಾರ ಬಯಸುವುದಿಲ್ಲ.
لَا إِكْرَاهَ فِي الدِّينِ ۖ قَدْ تَبَيَّنَ الرُّشْدُ مِنَ الْغَيِّ(2/256)

ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರ ವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಸ್ಪಷ್ಟವಾಗಿ ಬೇರ್ಪಟ್ಟು ನಿಂತಿದೆ.

ವಿರೋಧಿಸದ ,ಅಕ್ರಮಿಸದ ಎಲ್ಲರೊಂದಿಗೂ ಉತ್ತಮವಾಗಿ ವರ್ತಿಸಲು ಕುರಾನ್ ಆಜ್ಞಾಪಿಸುತ್ತದೆ.
 لَا يَنْهَاكُمُ اللَّهُ عَنِ الَّذِينَ لَمْ يُقَاتِلُوكُمْ فِي الدِّينِ وَلَمْ يُخْرِجُوكُمْ مِنْ دِيَارِكُمْ أَنْ تَبَرُّوهُمْ وَتُقْسِطُوا إِلَيْهِمْ ۚ إِنَّ اللَّهَ يُحِبُّ الْمُقْسِطِينَ

ಧರ್ಮದ ವಿಷಯದಲ್ಲಿ ನಿಮ್ಮೊಂದಿಗೆ ಯುದ್ಧ ಮಾಡದವರು ಮತ್ತು ನಿಮ್ಮ ಮನೆಗಳಿಂದ ನಿಮ್ಮನ್ನು ಹೊರಗಟ್ಟದವರು ಯಾರೋ ಅವರಿಗೆ ನೀವು ಒಳಿತು ಮಾಡುವುದನ್ನು ಮತ್ತು ಅವರೊಂದಿಗೆ ನ್ಯಾಯಪಾಲಿಸು ವುದನ್ನು ಅಲ್ಲಾಹು ನಿಮಗೆ ವಿರೋಧಿಸುವುದಿಲ್ಲ. ಖಂಡಿತವಾಗಿಯೂ ಅಲ್ಲಾಹು ನ್ಯಾಯ ಪಾಲಿಸುವವರನ್ನು ಇಷ್ಟಪಡುವನು.(60:08)

ಧರ್ಮದ ಕಾರಣದಿಂದ ಹೆತ್ತವರನ್ನು ಕಡೆಗಣಿಸಬಾರದೆಂದು ಹೇಳುವುದರೊಂದಿಗೆ ಅವರೊಂದಿಗೆ ಅತ್ತ್ಯುತ್ತಮ ವಾಗಿ ವರ್ತಿಸಲು ಕುರಾನ್ ಕರೆ ನೀಡುತ್ತದೆ.

وَإِنْ جَاهَدَاكَ عَلَىٰ أَنْ تُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۖ وَصَاحِبْهُمَا فِي الدُّنْيَا مَعْرُوفًا

ನಿನಗೆ ಯಾವುದೇ ಜ್ಞಾನವಿಲ್ಲದ ಏನನ್ನಾದರೂ ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡುವಂತೆ ಅವರಿ ಬ್ಬರೂ ನಿನ್ನನ್ನು ಬಲವಂತಪಡಿಸಿದರೆ, ಆಗ ಅವರನ್ನು ಅನುಸರಿಸಬಾರದು. ಐಹಿಕ ಜೀವನದಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸು. 31:15 ಲುಕ್ಮಾನ್

ಶತ್ರುಗಳ ಹೃದಯದ ಲ್ಲಿ ಸ್ನೇಹವನ್ನು ಅಲ್ಲಾಹನು ಏಕೆ ಹಾಕಲಿಲ್ಲ ಅವರ  ಹೃದಯದ ಲ್ಲಿ ಭಯವನ್ನೇ ಏಕೆ ಹಾಕಿದ ? ಇದೂ ಆದಿರಳ ಪ್ರಶ್ನೆಗಳಲ್ಲಿ ಒಂದಾಗಿತ್ತು.
ಸುದೀರ್ಘ ಸಮಯ ಕಾದ ಬಳಿಕ ಸದುಪದೇಶವನ್ನೂ ನೀಡಿ ನಂತರವೂ ದ್ವೇಷದಿಂದ  ಸತ್ಯ ,ಅಹಿಂಸೆ,ಮಾನವೀಯತೆ ಎಲ್ಲವನ್ನೂ ಕಡೆಗಣಿಸಿ ನಿರಾಯುಧ  ,ಬಲಹೀನ, ಮತ್ತು
ಅಲ್ಪಸಂಖ್ಯಾತ ದುರ್ಬಲ ರನ್ನು ಸದೆ ಬಡಿಯಲು ಬಂದ ಜನರ ಹೃದಯಕ್ಕೆ ಸ್ನೇಹ ವನ್ನು ತುಂಬಬೇಕಿತ್ತಂತೆ !.
 ಎಲ್ಲವೂ ಅಲ್ಲಾಹನದೇ.ಅವನು ಬಯಸಿದ್ದೇ ನಡೆಯುವುದು.ಆದರೆ ಸರಿ ತಪ್ಪು ,ಪಾಪ ಪುಣ್ಯ ಲೆಕ್ಕಾಚಾರ ಬರೋದು ಮನುಷ್ಯನಿಕೆ ಅದನ್ನು ಆಯ್ಕೆ ಮಾಡುವ ಬುದ್ಧಿಯನ್ನು ಅಲ್ಲಾಹನು ಜನರಿಗೆ ಕೊಟ್ಟಿದ್ದಾನೆ.ಆ ಕಾರಣದಿಂದ ಕೆಡುಕು ಒಳಿತು ಸ್ವರ್ಗ,ನರಕ ಎನ್ನುವುದಕ್ಕೆ ಅರ್ಥ ಬರುತ್ತದೆ.ಎಲ್ಲಾ ವ್ಯವಸ್ಥೆ ಮಾಡಿದವನೆಂಬ ಕಾರಣಕ್ಕೆ ಒಬ್ಬನನ್ನು ಅರೋಪಿಸಲಾಗದು .ಉದಾ ಒಬ್ಬ ಎರಡು ಬಾಟಲಿ ಕೊಟ್ಟು,ಒಂದರಲ್ಲಿ ಹಾಲಿದೆ ,ಇನ್ಮೊಂದರಲ್ಲಿ ಮದ್ಯವಿದೆ.ಹಾಲನ್ನು ಕುಡಿ ಅದು ಒಳ್ಳೆಯದು ‌ಮದ್ಯ ಕುಡಿಯಬೇಡಾ ಅದು ಹಾಳು.ನಂತರ ಹಾಲು ಕುಡಿದರೆ ,ಆತ ಹಾಲು ಕುಡಿಸಿದ ಎನ್ನಬಹುದು.ಆದರೆ ಮದ್ಯ ಕುಡಿದರೆ ಅವನು ಕುಡಿಸಿದ ಎಂದು ಹೇಳಲಾಗದು .ಕಾರಣ ಆತ ಕುಡಿಯಲು ಹೇಳಿಲ್ಲ ತಾನೇ  ?
ಕುರಾನ್ ಹೇಳುತ್ತದೆ.

مَنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَنْ ضَلَّ فَإِنَّمَا يَضِلُّ عَلَيْهَا ۚ وَلَا تَزِرُ وَازِرَةٌ وِزْرَ أُخْرَىٰ ۗ وَمَا كُنَّا مُعَذِّبِينَ حَتَّىٰ نَبْعَثَ رَسُولًا

ಯಾರಾದರೂ ಸನ್ಮಾರ್ಗವನ್ನು ಪಡೆಯುವುದಾದರೆ ಅವನದನ್ನು ಪಡೆಯುವುದು ಅವನದೇ ಒಳಿತಿಗಾಗಿದೆ. ಯಾರಾದರೂ ಪಥಭ್ರಷ್ಟನಾಗುವುದಾದರೆ ಅವನ ಕೆಡುಕಿಗಾಗಿಯೇ ಅವನು ಪಥಭ್ರಷ್ಟನಾಗುತ್ತಾನೆ. ಪಾಪಭಾರವನ್ನು ಹೊರುವ ಯಾರೂ ಬೇರೊಬ್ಬನ ಪಾಪಭಾರವನ್ನು ಹೊರಲಾರನು. ಒಬ್ಬ ಸಂದೇಶವಾಹಕ ರನ್ನು ಕಳುಹಿಸುವ ತನಕ ನಾವು (ಯಾರನ್ನೂ) ಶಿಕ್ಷಿಸಲಾರೆವು. (17:15)

ಇನ್ನು ಯುದ್ಧ ಬಗ್ಗೆ ಗೀತೆ ಏನನ್ನುತ್ತದೆ? ನೋಡೋಣ.


ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್ ಅರ್ಹಸಿ

ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ  ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ --
ನಿನ್ನ ಧರ್ಮವನ್ನು ಕಂಡಾದರೂ ನೀನು ಎದೆಗೆಡಬಾರದು  ಕ್ಷತ್ರಿಯನಾದವನಿಗೆ ನ್ಯಾಯದಿಂದ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.


ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಹಾಗು ಸ್ವಧರ್ಮ ಯಾವುದು? ಸನಾತನ ಧರ್ಮ ಹೇಳುತ್ತದೆ: ‘ಅನ್ಯಾಯದ ವಿರುದ್ಧ ಹೋರಡಲೇ ಬೇಕು’ ಎಂದು; ಸಮಾಜ ಧರ್ಮ ಹೇಳುತ್ತದೆ: ಕ್ಷತ್ರಿಯನಾದವನು ಅಧರ್ಮದ ವಿರುದ್ಧ ಹೋರಾಡಬೇಕು, ಸಮಾಜದ ರಕ್ಷಣೆ ಮಾಡಬೇಕು ಹಾಗು ಈ ಪುಣ್ಯ ಕಾರ್ಯದಲ್ಲಿ 'ತನ್ನವರು' ಎಂದು ನೋಡಬಾರದು ಎಂದು.ಇನ್ನು ಅರ್ಜುನ ಮೂಲತಃ ಕ್ಷತ್ರಿಯನಾದ್ದರಿಂದ ಆತನ ಸ್ವಧರ್ಮ ‘ಅನ್ಯಾಯದ ವಿರುದ್ಧ ಹೋರಾಟ’. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ ಹಾಗು ಸನಾತನಧರ್ಮ ಏಕವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧ ಹೋರಾಡುವುದು ಮಹಾ ಪುಣ್ಯದ ಕೆಲಸ. ಸಮಾಜ ಸುರಕ್ಷತೆಗಾಗಿ ಹೋರಾಡುವುದು ಕ್ಷತ್ರಿಯನ ಮಹಾ ತಪಸ್ಸು. ಇದಕ್ಕಿಂತ ಪುಣ್ಯಕಾರ್ಯ ಇನ್ನೊಂದಿಲ್ಲ.


ಯದೃಚ್ಛಯಾ ಚ ಉಪಪನ್ನಮ್  ಸ್ವರ್ಗ ದ್ವಾರಮ್ ಅಪಾವೃತಮ್

ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮ್ ಈದೃಶಮ್--ಇಂಥ ಕಾಳಗವೆಂದರೆ ದೈವೇಚ್ಛೆಯಿಂದ ಕೂಡಿಬಂದ, ತೆರೆದಿಟ್ಟ ಸ್ವರ್ಗದ ಬಾಗಿಲು. ಪಾರ್ಥ,ಭಾಗ್ಯವಂತರಾದ ಕ್ಷತ್ರಿಯರು ಮಾತ್ರವೇ ಇಂಥ ಅವಕಾಶ ಪಡೆಯುತ್ತಾರೆ.



ಇಲ್ಲಿ ನಮಗೆ ಕೃಷ್ಣ ಅರ್ಜುನನಲ್ಲಿ ಯುದ್ಧಮಾಡು ಎಂದು ಏಕೆ ಹೇಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರತಿಯೊಬ್ಬ ಮಾನವನೂ  ಸನಾತನಧರ್ಮ,ಅದಕ್ಕನುಗುಣವಾಗಿ ಸಮಾಜಧರ್ಮ ಹಾಗು ಸಮಾಜ ಮತ್ತು ಸನಾತನ ಧರ್ಮಕ್ಕನುಗುಣವಾಗಿ ಸ್ವಧರ್ಮ-ಈ ನೆಲೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕು
ಇದು ಭಗವದ್ಗೀತೆಯ ಸಾರಾಂಶ.

ಚಾಣಕ್ಯ ನೀತಿ ಹೀಗೆ ವಿವರಿಸುತ್ತದೆ.
ದಾಕ್ಷಿಣ್ಯ೦ ಸ್ವಜನೇ ದಯಾ ಪರಜನೇ ಶಾಠ್ಯ೦ ಸದಾ ದುರ್ಜನೇ
ಪ್ರೀತಿಃ    ಸಾಧುಜನೇ ಸ್ಮ್ಯಯಃ ಖಲಜನೇ ವಿದ್ವಜ್ಜನೇ ಚಾರ್ಜನ೦
ಶೌರ್ಯ೦ ಶತ್ರುಜನೇಕ್ಷಮಾ ಗುರುಜನೇ ನಾರೀಜನೇ ಧೃಷ್ಟತಾ
ಇತ್ಥ೦ ಯೇ ಪುರುಷಾ೦ ಕಲಾಸು ಕುಶ್ಲಾಸ್ತೇಷ್ವೇವ ಲೋಕಸ್ಥಿತಿಃ||೩||

ಸ್ವಜನರಲ್ಲಿ ಸಜ್ಜನತೆ, ಪರರಲ್ಲಿ ದಯೆ ದುಷ್ಟರಲ್ಲಿ  ದುಷ್ಟತನ,  ಸಜ್ಜನರಲ್ಲಿ ಪ್ರೇಮ. ಪ೦ಡಿತರಲ್ಲಿ ಸರಳತೆ, ಶತ್ರುಗಳ ಪ್ರತಿ ಶೂರತ್ವ, ಗುರುಹಿರಿಯರಲ್ಲಿ ಸಹನಶೀಲತೆ, ಸ್ತ್ರೀಯರಲ್ಲಿ ವಿಶ್ವಾಸ - ಹೀಗೆ ಯಾರು ಈ ಕಲೆಗಳಲ್ಲಿ ಕುಶಲರಿರುತ್ತಾರೋ ಜನ ಅಂಥವರಿಂದಲೇ ಲೋಕವ್ಯವಹಾರವು ಸಾಗುತ್ತಿದೆ.

ಅಲ್ಲಾಹನು ಯಾಕೆ  ಹುಳು ಮಾನವನನ್ನು ಪಂಥಾಹ್ವಾನಕ್ಕೆ ಕರೆದ? ಎನ್ನುವದೂ ಒಂದು ಪ್ರಶ್ನೆ.
ಪ್ರವಾದಿಯನ್ನು ಸುಳ್ಳಾಗಿಸಿದ, ಮತ್ತು ಕುರಾನನ್ನು ನಂಬದ, ಹಾಗೇಅಲ್ಲಾಹನ ಸ್ಥಾನದಲ್ಲಿ ಬೇರೆ ಆರಾಧ್ಯರನ್ನು ಪ್ರತಿಷ್ಟಾಪಸಿದ ಜನರೊಂದಿಗೆ ಸಾಧ್ಯವಾದರೆ ಇದರ ಬದಲು ತನ್ನಿ ಬೇಕಾದರೆ ಆರಾಧ್ಯ ರನ್ನು ಸೇರಿಸಿಕೊಳ್ಳಿ ಎಂದರೆ ಹೇಗೆ ತಪ್ಪಾಗುತ್ತದೆ.?.
ಇತರ ಆರಾಧ್ಯದೈವ ವನ್ನು ಹೀಯಾಲಿಸಲಾಗುತ್ತದೆ.ಎನ್ನುವ ಆರೋಪ ಬಾಲಿಶವಾದುದು.ಕಾರಣ ಸ್ಪಷ್ಟವಾಗಿ ಅದನ್ನು ಕುರಾನ್ ವಿರೋಧಿಸಿದೆ.

وَلَا تَسُبُّوا الَّذِينَ يَدْعُونَ مِنْ دُونِ اللَّهِ فَيَسُبُّوا اللَّهَ عَدْوًا بِغَيْرِ عِلْم
(06/108)
ಅಲ್ಲಾಹುವಿನ ಹೊರತು ಅವರು ಕರೆದು ಪ್ರಾರ್ಥಿಸುತ್ತಿರುವವರನ್ನು ನೀವು ದೂಷಿಸದಿರಿ. ಅವರು  ಅರಿವಿಲ್ಲದೆ ಅತಿಕ್ರಮವಾಗಿ ಅಲ್ಲಾಹುವನ್ನು ದೂಷಿಸಲು ಅದು ಕಾರಣವಾಗಬಹುದು.
ಬಲವಂತದ ಮತಾಂತರ ಇಸ್ಲಾಮಿನಲ್ಲಿ ಅಸಾಧ್ಯ. ಅದರ ಆವಶ್ಯಕತೆ ಯೂ ಇಲ್ಲ.
ಇಂತಹಾ ಆರೋಪಗಳು ನಮಗೆ ಸಮಸ್ಯಯೇ ಅಲ್ಲ.
🌅. ವರದಿ ಅಲ್ ಅಹ್ಸನ್ ಮಾಸಿಕ