ಜಗತ್ತಿನಲ್ಲಿ ಒಳಿತು ಪ್ರಚಾರ ಪಡೆಯದೇ ಕೆಡುಕು ಮತ್ತು ಸುಳ್ಳು ವ್ಯಾಪಕ ಪ್ರಾಚಾರ ಪಡೆಯತ್ತಿರುವುದು ಮಹಾ ದುರಂತ

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಪ್ರತಿಮ ಸಾಧನೆ ಅನುಕರಣೀಯ.
ಭಾಷಣ: ಮೌಲಾನಾ  ಅಝೀಝ್  ದಾರಿಮಿ ಚೊಕ್ಕಬೆಟ್ಟು

ನಮ್ಮ ಸುತ್ತಾ ನೂರಾರು ಜನಪರ ಸೇವಾ ಕಾರ್ಯಗಳು ನಡೆಯತ್ತಾ ಇದೆ. ಸಂಘ ಸಂಸ್ಥೆಗಳು ಬೇರೆಬೇರೆ ಯಾಗಿ ದಿನನಿತ್ಯ ಹತ್ತಾರು ಜನ ಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತವೆ.ಅಷ್ಟಕ್ಕೂ ಈ ಜಗತ್ತಿನಲ್ಲಿ  ಸುಮಾರು ಆರುನೂರ ಐವತ್ತು ಕೋಟಿ ಜನ ದಿನನಿತ್ಯ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುತ್ತಾರೆ. ಅದುವೇ ಒಂದು ಅದ್ಬುತ ಕಾರ್ಯ. ನಮ್ಮ ಸುತ್ತಲೂ ನೋಡಿದರೆ
ಹಲವು ಸಂಘ ಸಂಸ್ಥೆಗಳು ಅಹರ್ನಿಶಿ ದುಡಿಯುತ್ತಲಿದೆ.ಬೇರೆಬೇರೆ ಗುರಿಯನ್ನು ಮುಂದಿಟ್ಟು
ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್,
ಅಲ್ ಹಿದಾಯ ,ಬ್ಯಾರಿ ಫೌಂಡೇಶನ್. ಬ್ಲಡ್ ಹೆಲ್ಫ ಲೈನ್, ನೂರಾರು ಸೋಷಿಯಲ್ ಮೀಡಿಯಾ ಗ್ರೂಪ್ ಗಳ ಅಸಂಖ್ಯಾತ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲಿದೆ. ಅವುಗಳು ಫಲ ಬಯಸದೇ ಕಾರ್ಯಾಚರಿಸುತ್ತಿದೆ.ಬಡ ಹೆಣ್ಮಕ್ಕಳ ಮದುವೆ,ಶಿಕ್ಷಣ ಮೆಡಿಕಲ್ ಹೆಲ್ಪ್ ಮುಂತಾದವು.ಆದರೆ ಅದ್ಯಾವುದೂ ಸಮಾಜದ ಮುಂದೆ ಹೆಚ್ಚು ಪ್ರಚಾರಪಡೆಯುತ್ತಿರುವಂತೆ ಕಾಣಸಿಗುವುದಿಲ್ಲ.ಇದರ ಕಾರಣ ಸಮಾಜದಲ್ಲಿ ಅನಿಷ್ಟ,ಮತ್ತು ಸುಳ್ಳುಗಳನ್ನು ಹೆಚ್ಚಾಗಿ ಪ್ರಚಾರ ಮಾಡಲು ಜನರು ಹೆಚ್ಚು ಉತ್ಸಾಹ ತೋರುವಂತಿದೆ.  ಇದು ಉತ್ತಮ ಬೆಳವಣಿಗೆ ಅಲ್ಲವೇ ಅಲ್ಲ.

ಮುಸ್ಲಿಂ ಸಮಾಜದಲ್ಲಿ ಅತ್ಯದ್ಭುತ ವೂ ವಿಸ್ಮಯವೂ ಆದ ಸೇವೆಯ ಮಾರ್ಗವನ್ನು ತರೆದಿಟ್ಟ ಒಂದು ಸಂಸ್ಥೆ ಸಮಸ್ತ ಎಂಬ ವಿದ್ವಾಂಸ ಸಭೆ.ಇಸ್ಲಾಮಿಕ್ ವಿದ್ಯಾಭ್ಯಾಸ ಶಿಕ್ಷಣವನ್ನು ಅದು ವ್ಯವಸ್ಥೆ ಗೊಳಿಸಿದು ಒಂದು ಪವಾಡವೇ ಆಗಿದೆ.ಶಾಲೆಗಳಿಂದ ಧರ್ಮದ ಶಿಕ್ಷಣವನ್ನು ತಡೆಯಲ್ಪಟ್ಟಾಗ ಅದು ಕಂಡುಕೊಂಡ ಮಾರ್ಗ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಗಿದೆ. ಅದರ ಸಮಯ ಬೆಳಗ್ಗೆ ಮತ್ತು ಸಂಜೆಯ ಸಮಯ.ಇನ್ನೂರ ಮುವತ್ತು ದಿನಗಳಲ್ಲಿ ಆರುನೂರ ತೊಂಬತ್ತು ಕ್ಲಾಸುಗಳಲ್ಲಿ(ಒಂದು ಕ್ಲಾಸು ನಲವತ್ತೈದು ನಿಮಿಷ) ಪ್ರೀ ಪ್ರೈಮರಿ ಯಿಂದ ಪ್ಲಸ್ ಟು ತನಕದ ದಾರ್ಮಿಕ ಶಿಕ್ಷಣ ಸಿಲಬಸ್ ಸಿದ್ದಪಡಿಸಿ ಇದು ಕಾರ್ಯಾಚರಿಸುತ್ತದೆ.1952ರಲ್ಲಿ ಇದರ ಅಂಗೀಕಾರ ಪಡೆದ ಕೇವಲ ಹತ್ತು ಮದರಸವಿದ್ದರೆ ಇದೀಗ (2017 ಜೂನ್ ತನಕ) 9709 ಮದರಸವನ್ನು ಅದು ಹೊಂದಿದೆ.ಹನ್ನೆರಡು ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣದ ದಾರಿಯನ್ನು ಅದು ಪ್ರಸ್ತುತ ಪಡಿಸಿದೆ.ಪ್ರತಿ ಮದ್ರಸಕ್ಕೂ ಪ್ರತಿ ವರ್ಷ ಮದ್ರಸಕ್ಕೆ ಬೇಕಾದ ಎಲ್ಲಾ ರೆಕಾರ್ಡ್ ಪುಸ್ತಕಗಳನ್ನು ಅದು ಉಚಿತವಾಗಿ ನೀಡುತ್ತದೆ.ಹೀಗೆ ಹತ್ತು ಸಾವಿರ ಮದ್ರಸಗಳಿಗೆ ಕೊಡುವಾಗ ಎಷ್ಟು ಖರ್ಚು ಬರಬಹುದೆಂದು ನೀವೇ ಊಹಿಸಿ. ವರ್ಷಕ್ಕೆ ಎರಡು ಸಲ ಶೋಧಕ ರನ್ನು ಕಳುಹಿಸುತ್ತದೆ.ಒಂದು ಲಕ್ಷದಷ್ಟು ಮುಅಲ್ಲಿಮರು ಸರ್ವೀಸ್ ರಿಜಿಸ್ಟರ್ (ಎಮ್ ಎಸ್ ಆರ್) ಪಡೆದವರಿದ್ದಾರೆ.ನೂರ ಐದು ಶೋಧಕರು (ಮುಫತ್ತಿಸ್).ಐದು ಖಾರಿವುಗಳು,ನಾಲ್ಕು,(ಟ್ರೈನರುಗಳು)ಐವತ್ತರಷ್ಟು ಮುದರ್ರಿಬುಗಳು ಸೇವಾ ನಿರತರಾಗಿದ್ದಾರೆ.  ಅದೂ ಅಲ್ಲದೇ ಹತ್ತು ಸಾವಿರ ಮದ್ರಸಗಳ ಪರೀಕ್ಷೆಗಳನ್ನು ಬೋರ್ಡ್ ಕ್ರಮಬದ್ಧವಾಗಿ ಕಂಪ್ಯೂಟರೀಕೃತ ವ್ವವಸ್ಥೆಯೊಂದಿಗೆ ಕಾರ್ಯ  ನಿರ್ವಹಿಸುತ್ತದೆ. ಸುಮಾರು ಇನ್ನೂರಕ್ಕಿಂತಲೂ ಅಧಿಕ ನೌಕರರು ಅಲ್ಲಿ ದುಡಿಯುತ್ತಾರೆ .ಅವರೆಲ್ಲರೂ ಉತ್ತಮ ಸಂಬಳವನ್ನೂ ಪಡೆಯುತ್ತಾರೆ.ಇದೂ ಅಲ್ಲದೇ ಪ್ರತಿಯೊಂದು ಜಿಲ್ಲೆಯ ಒಬ್ಬ ಬಡ ಮುಅಲ್ಲಿಮರಿಗೆ ಐದು ಲಕ್ಷ   ರುಪಾಯಿ ಮೌಲ್ಯದ ಮನೆಯನ್ನು ಕಟ್ಟಿ ಕೊಡುತ್ತಿದೆ.ಮದುವೆಗೆ ಸಹಾಯ,ಅಪಘಾತ,ಮರಣ ಮುಂತಾದ ಸಮಯದಲ್ಲಿ ಸಹಾಯ, ಮನೆ ಸಹಾಯ,ನೀಡುತ್ತಲಿದೆ. ಮುಅಲ್ಲಿಂ ಗಳಗೆ ಉತ್ತೇಜನ ನೀಡುವ ಸಲುವಾಗಿ ಮುಅಲ್ಲಿಂ ಅವಾರ್ಡ್ ಸುವರ್ಣ ಅವಾರ್ಡ್ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ.  ಹೀಗೆ ನೂರಾರು ಕಾರ್ಯಗಳನ್ಮುಅದು ನಿರ್ವಹಿಸುತ್ತದೆ. ಮದರಸ ಎಂಬ ವ್ಯವಸ್ಥೆಯು ಯಾವುದೇ ವಂತಿಗೆ ಇಲ್ಲದೇ ನಡೆಸುತ್ತಿದ್ದರೆ ಅದು ಒಂದು ಅದ್ಭುತ ವಲ್ಲವೇ ?ಅದಕ್ಕೆ ಏನಾದರೂ ವರಮಾನ ವಿದ್ದರೆ ಅದು ಮಕ್ಕಳ ಪಠ್ಯಪುಸ್ತಕ ದಿಂದ ಸಿಗುವ ಒಂದೆರಡು ರುಪಾಯಿ ಗಳು ಮಾತ್ರ. ಇನ್ನು ಮುಅಲ್ಲಿಮರ ಸಂಬಳ ಕೊಡಿತ್ತಿಲ್ಲವಲ್ಲ ಎನ್ನುವುದಾದರೆ ಇಂತಹಾ  ಬ್ರಹತ್ ವ್ಯವಸ್ಥೆ ಗೆ ಅದು ಅಪವಾದವಲ್ಲ. ಯಾವ ಕಲೆಕ್ಷನ್ ಕೂಡಾ ಅದು ಮಾಡುತ್ತಿಲ್ಲ.

ಇದೀಗ ಮುಅಲ್ಲಿಮರ ಕ್ಷೇಮ ಮತ್ತು ದಅವಾ ಕಾರ್ಯ ಉದ್ದೇಶಕ್ಕಾಗಿ ನೂರು ರುಪಾಯಿ ಸಂಭಾವನೆ ಯನ್ನು "ಒರು ಕೈ ತಾಂಙ್" (ಒಂದು ಅಭಯಹಸ್ತ)ಎಂಬ ಯೋಜನೆ ನಡೆಸಲು ಮುಂದಾಗಿದ್ದರೆ, ಉಮ್ಮತ್ತಿನ ಬಡ ನಿರ್ಗತಿಕರಿಗೆ ಹಾಗೂ ಧಾರ್ಮಿಕವಾಗ ತೀರ ಹಿಂದುಳಿದಿರುವ ಪ್ರದೇಶಗಳಲ್ಲಿ ದ ಅವಾ ಕಾರ್ಯ ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ಮಾಣ ಕ್ಕೂ ಬಳಕೆಯಾಗುತ್ತದೆ.ಇಂತಹಾ ಅಭೂತ ಪೂರ್ವ ಕಾರ್ಯ ಹೆಚ್ಚಿನವರಿಗೆ ತಿಳಿದಿರುವುದಿಲ್ಲ.ಸುಮ್ಮನೇ ನಾಲ್ಕು ಮನೆಗೆ ಹೋಗಿ ಬಾ ಎಂದರೆ ಹಿಂಜರಿಯುವ ಕಾಲ! ಹತ್ತು ಸಾವಿರ ಮದ್ರಸಗಳನ್ನು ಸುವ್ಯವಸ್ಥೆ ಯಲ್ಲಿ ಮುನ್ನಡೆಸುವುದು ಸಾಮಾನ್ಯ ವಿಷಯವಲ್ಲ.
ಈ ರೀತಿಯ ಪ್ರಾಮಾಣಿಕ ಶೈಕ್ಷಣಿಕ,ಸಾಮುದಾಯಿಕಕ್ರಾಂತಿಯು ನಮಗೂ ಮಾದರಿಯಾಗಬೇಕಿದೆ.

ಆದರೆ ಅಮಾನವೀಯತೆ,ವಂಚನೆ ಅನಾಚಾರಗಳು,  ದೌರ್ಜನ್ಯ ದಬ್ಬಾಳಿಕೆಗಳು ಮಾತ್ರವೇ ಹೆಚ್ಚು ಪ್ರಾಚಾರ ಪಡೆಯುತ್ತಿರುದು ಆಶ್ಚರ್ಯ. ಅದರ ಕಾರಣ ಇಂದು ಜನರು ಎರಡು ಕಾರ್ಯಗಳಿಗೆ ಹೆಚ್ಚು ಪ್ರಾಚಾರ ಕೊಡುತ್ತಾರೆ ಎನ್ನುವುದಾಗಿದೆ.ಒಂದು ಕೆಟ್ಟ ವಾರ್ತೆ ಗಳಿಗೆ ಮಾನ್ಯತೆ ಕೊಡುವುದು ಮತ್ತು ಸುಳ್ಳನ್ನು ಒಪ್ಪಿಕೊಳ್ಳುವುದು.ಇಂದು ಸುಳ್ಳು ಹೇಳದೇ ಬದುಕಲಾಗದು ಎಂಬಲ್ಲಿಗೆ ಬಂದು ನಿಂತಿದೆ ಪರಿಸ್ಥಿತಿ!
ಧರ್ಮ ನಂಬಿಕೆ,ಆದ್ಯಾತ್ಮ ,ರಾಜಕೀಯ,ಉದ್ಯಮ ವ್ಯಾಪಾರ ವ್ಯವಹಾರ ಎಲ್ಲವೂ ಸುಳ್ಳಿನ ಮೇಲೆಯೇ ಕಟ್ಟಲು ಶ್ರಮಿಸುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿದೆ.ಕೈಯಲ್ಲಿರುವ ಮೊಬೈಲ್ ನಲ್ಲಿ ಸುಳ್ಳನ್ನು ಹೇಳದೇ ಯಾರಿಗೂ ಬಚಾವುಇಲ್ಲ.ರಂಗುರಂಗಿನ ವಾರ್ತೆಗಳು ಬಿತ್ತರಿಸಲು ಮಾದ್ಯಮ ಗಳು ತೀವ್ರ ಪೈಪೋಟಿ ನಡೆಸುತ್ತದೆ.
ಒಟ್ಟಿನಲ್ಲಿ ಒಂದು ಕಥೆ ನೆನಪಾಗುತ್ತದೆ. ಸುಳ್ಳು ಮತ್ಯು ಸತ್ಯ ಸರೋವರದಲ್ಲಿ ಬಟ್ಟೆಗಳನ್ನು ಕಳಚಿ ಮೈಮರೆತು ಈಜುತ್ತಿದ್ದವಂತೆ.ಅಲ್ಲಿಂದ ಬೇಗ ಎದ್ದು ಬಂದ ಸುಳ್ಳು ಸತ್ಯದ ಬಟ್ಟೆಯನ್ನು ಧರಿಸಿ ಹೊರಟಿತು.ಸತ್ಯ ಸ್ನಾನ ಮುಗಿಸಿ ಬಂದು ನೋಡಿದರೆ ತನ್ನ ಬಟ್ಟೆ ಕಾಣಲಿಲ್ಲ ಅಲ್ಲೆ ಇದ್ದ ಸುಳ್ಳಿನ ಬಟ್ಟೆ ಧರಿಸಿ ಕೊಳ್ಳಲು ಸತ್ಯಕ್ಕೆ ಮುಜುಗರವಾಯಿತು.ಈ ಕಾರಣಗಳಿಂದ ಸುಳ್ಳು ಜನ ಮುಂದೆ ಸತ್ಯದ ವೇಷ ಹಾಕಿ ಕುಣಿಯುತ್ತಿದೆಯಂತೆ.ಸತ್ಯ ಮಾನ ಮುಚ್ಚಲು ಕದ್ದು ಮುಚ್ಚಿ ಬದುಕುತ್ತಿದೆಯಂತೆ.ಇದು ಕತೆಯಾದರೂ ನಿಜ ಅದರಲ್ಲಿದೆ.

ಆಧುನಿಕತೆಯಲ್ಲಿ ಎಷ್ಟು ಅಸಹಜವಾದ ಘಟನೆಗಳಿಗೆ ಸಮಾಜ ಸಾಕ್ಷಿಯಾಗುತ್ತದೋ ಅದಕ್ಕಿಂತ ಹೆಚ್ಚಾಗಿ ಉತ್ತಮ ಕಾರ್ಯಗಳಿಗೂ ಈ ಸಮಾಜ ವೇದಿಕೆಯಾಗುತ್ತದೆ.
ಅದರೆ ಅದು ಪ್ರಚಾರ ಪಡೆಯುವುದು ಕಮ್ಮಿ. ಕಾರಣ ಸಮಾಜದ ಹೆಚ್ಚಿನ ಮಂದಿ ಅನಿಷ್ಟ ವಾರ್ತೆಗಳಿಗೆ ಇನ್ನಷ್ಟು ಒಗ್ಗರಣೆ ಸೇರಿಸಿ ಸ್ವಯಂ ಪ್ರೇರಿತ ರಾಗಿ ಪ್ರ‌ಚಾರಕ ರಾಗಿದ್ದಾರೆ ಎನ್ನುವುದಾಗಿದೆ.
ಅದೇ ರೀತಿಯ ಪ್ರಚಾರ ಒಳಿತಿಗೆ ಸಿಗದೇ ಹೋಗುವದು ದುರಾದೃಷ್ಟವಾಗಿದೆ.
ಒಂದು ಉದಾಹರಣೆ
ಒಂದು ಊರಿನಲ್ಲಿ ಪ್ರಾಮಾಣಿಕ ವ್ಯಕ್ತಿ ಬಗ್ಗೆ ಒಂದು ಸುಳ್ಳಾರೋಪ ಹರಡಿದಾಗ ಊರಿನ ಕಟ್ಟ ಕಡೆಯ ಯಾವತ್ತೂ ಮಾತಿಗೆ ಸಿಗದ ವ್ಯಕ್ತಿ ಫೋನ್‌ ಮೂಲಕ ಕರೆ ಮಾಡಿ ಪರಮ ಹಿತೈಶಿಯಂತೆ ಮಾತಾಡಿಸುತ್ತಾನೆ.ಆತನ ಉದ್ದೇಶ ಸುಖ ದುಃಖ ವಿಚಾರಣೆಯಲ್ಲ ಬದಲಿಗೆ ಆರೋಪವನ್ನು ವ್ಯಕ್ತಿಯಿಂದಲೇ ಹೇಳಿಸಿ ನೋಯಿಸಿ ಆನಂದ ಪಡುವುದಾಗಿದೆ. ಒಂದು ವೇಳೆ ಅದೇ ವ್ಯಕ್ತಿಗೆ ಅತ್ಯುನ್ನತ ಸ್ಥಾನ ಸಿಕ್ಕಾರೆ ಅದು ಯಾರಿಗೂ ತಿಳಿದಿರುವುದಿಲ್ಲ ಬದಲಿಗೆ ಅಪ್ಪಿತಪ್ಪಿ ಮಾತಾಡಲು ಸಿಕ್ಕಾಗ ಈ ವಿಚಾರ ಎತ್ತಿದರೆ ಹೌದಾ ನನಗೆ ಗೊತ್ತೇ ಇಲ್ಲ ಅಂತ ಎದುರುಸಿರು ಬಿಡುತ್ತಾನೆ.ಇದು ಒಳಿತಿಗೂ ಕೆಡುಕಿಗೂ ಇರುವ ವ್ಯತ್ಯಾಸ.
قال تعالى: ﴿ إِنَّ اللَّهَ لَا يَهْدِي مَنْ هُوَ مُسْرِفٌ كَذَّابٌ ﴾ [غافر: 28].

ಅತಿಕ್ರಮಿ ಮತ್ತು ಸುಳ್ಳನಿಗೆ ಅಲ್ಲಾಹನು ಸನ್ಮಾರ್ಗ ನೀಡಲಾರ ಎಂದು ಅಲ್ಲಾಹನು ಹೇಳುತ್ತಾನೆ.
ಪ್ರವಾದಿ ಹೇಳುತ್ತಾರೆ,
برُّ الوالدين يزيد في العمر، والكذب ينقص الرزق، والدعاء يرد القضاء)).
ಮಾತಾಪಿತರ ಸೇವೆ ಆಯುಷ್ಯವನ್ನು ಹೆಚ್ಚಾಗಿಸುತ್ತದೆ.ಸುಳ್ಳು ಆಹಾರ ವನ್ನು ಕುಂಟಿತಗೊಳಿಸುತ್ತದೆ.ಪ್ರಾರ್ಥನೆ ವಿಧಿಯನ್ನು ತೆರಯುತ್ತದೆ

قيل في منثور الحكم: الكذب لص لأن اللص يسرق مالك والكذب يسرق عقلك
ಸುಳ್ಳು ಕಳ್ಳನಾಗಿರುತ್ತಾನೆ.ಕಳ್ಳನು ಸೊತ್ತನ್ನು ಕದ್ದರೆ ಸುಳ್ಳು ಬುದ್ದಿಯನ್ನು ಕದಿಯುತ್ತದೆ.ಎಂದು ಮಂಸೂರುಲ್ ಹಿಕಮಿನಲ್ಲಿ ಉಲ್ಲೇಖಿಸಲಾಗಿದೆ.

ವರದಿ ಅಲ್ ಅಹ್ಸನ್ ಮಾಸಿಕ

ಕಣ್ಣೀರಲ್ಲಿ ಕರಗಿದ ಕಲ್ಲಗುಡ್ಡೆಗೆ ಹೆಜ್ಜೆ ಇಟ್ಟಾಗ ಕಂಗಳು ತುಂಬಿಕೊಂಡವು...


ಮಕ್ಕಳನ್ನು ಕಳಕೊಂಡ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ "ಸಮಸ್ತ"
ಎಳೆಯದರಲ್ಲಿ ಅಗಲಿದ ಮಕ್ಕಳು ಹೆತ್ತವರ ಸ್ವರ್ಗ ಪ್ರವೇಶಕ್ಕೆ ದಾರಿ ಸುಗಮಗೋಳಿಸುವರೆಂಬ ಪ್ರವಾದಿ ವಚನ ಗಮನಾರ್ಹ
ಭಾಷಣ: ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

 ಮೂಲರ ಪಟ್ನ ದ ಹತ್ತಿರದ ಊರು ಕಲ್ಲುಗುಡ್ಡೆ.ತೀರಾ ಬಡ ಕುಟುಂಬಗಳು ಚಿಕ್ಕ ಚಿಕ್ಕದಾದ ಮನೆಕಟ್ಟಿಕೊಂಡು ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಆ ಊರಿನ ಜನರಲ್ಲಿ ಕಡು ಬಡವರೇ ಜಾಸ್ತಿ.
ಆದರೆ ಹೃದಯ ಶ್ರೀಮಂತಿಕೆಯ ಲ್ಲಿ ಅವರನ್ನು ಮೀರಲು ಸಾಧ್ಯವಾಗದು.ಧಾರ್ಮಿಕ ಅರಿವು ಮತ್ತು ಉಲಮಾರೊಂದಿಗೆ ಅವರಿಗಿರುವ ಗೌರವ ವರ್ಣಿಸುವುದು ಕಷ್ಟ.ಆ ಕಾರಣದಿಂದಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಧಾರ್ಮಿಕ ವಿದ್ಯಾರ್ಜನೆಗೆ ಕಳುಹಿಸಿದ ಹೆಮ್ಮೆ ಆ ಊರಿಗಿದೆ.ಇಷ್ಟೆಲ್ಲಾ ಹೇಳಲು ಕಾರಣ ಮೊನ್ನೆ ಸೋಮವಾರ ಸಂಜೆಯಾಗುತ್ತಲೇ ಕಲ್ಲುಗುಡ್ಡೆ ಕರಗಲಾರಂಬಿಸಿತು.ಕಣ್ಣೀರ ಕೋಡಿ ಹರಿಯಲಾರಂಭಿಸಿತು.ನಿರಸ ಮೌನ ಆ ಊರನ್ನೇ ಆವರಿಸಿತ್ತು.ಮಸೀದಿಯ ಪಕ್ಕದಲ್ಲಿ ಲವಲವಿಕೆಯಿಂದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಭವಿಷ್ಯದಲ್ಲಿ  ಉನ್ನತ ವಿದ್ವಾಂಸರಾಗಿ ಬೆಳಗಬೇಕಾಗಿದ್ದ ಹದಿಹರೆಯದ
SKSSF ತ್ವಲಬಾವಿಂಗ್ ಸದಸ್ಯರು, ಶಂಶುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತ್ವೈಬಾ ಕಿನ್ಯ ಇದರ ವಿದ್ಯಾರ್ಥಿ  ಮುಬಶ್ಶಿರ್ ಕಲ್ಲಗುಡ್ಡೆ ಹಾಗೂ SKSSF ಕ್ಶಾಂಪಸ್ ವಿಂಗ್ ಇದರ ಸದಸ್ಯರಾದ ಅಸ್ಲಾಮ್,ರಮೀಝ್,ಅಝ್ಮಲ್, ಸವಾದ್ ಐದು ಮಂದಿ ತರುಣರು
ಪಕ್ಕದ ಪಲ್ಗುಣಿ ನದಿಯಲ್ಲಿ ಬದುಕಿನ ಯಾತ್ರೆ ಮುಗಿಸಿ ಜೊತೆಯಾಗಿ ಮರಣವನ್ನು ಅಪ್ಪಿಕೊಂಡು ಬಿಟ್ಟಿದ್ದರು.
ಸಂಜೆಯಾಗುತ್ತಲೇ ಊರಿಗೆ ಊರೇ ಬೆಚ್ಚಿಬಿದ್ದಿತು.ಎಲ್ಲರೂ ದುಃಖ ತಾಳಲಾರದೇ ಕಣ್ಣೀರಿಡುತ್ತಿದ್ದರು.ಒಂದರ ಮೇಲೆ ಒಂದರಂತೆ ಐದು ಮಕ್ಕಳ ಮೃತ ದೇಹಗಳನ್ನು ಹೋರ ತೆಗೆಯುವಾಗ ಹೃದಯವೇ ಒಡೆದು ಹೋಗುವಂತಿತ್ತು.ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ನಂತರ ಬಂಟ್ವಾಳದಲ್ಲಿ ಮರಣೋತ್ತರ ಪರೀಕ್ಷೆ ಯ ಬಳಿಕ ಪಾರ್ಥಿವ ಶರೀರವನ್ನು ಹೊತ್ತ ವಾಹನ ಊರಿಗೆ ಬರುತ್ತಿದ್ದಂತೆ ಊರಿಗೆ ಊರೇ ದುಃಖ ಸಾಗರದಲ್ಲಿ ಮುಳುಗಿತ್ತು.ಇನ್ನೂ ಆ ಶೋಕ ಆರಿದಂತಿಲ್ಲ ಅದಕ್ಕೆ ಇನ್ನೆಷ್ಟೋ ಸಮಯ ಬೇಕಾದಿತು.ಶುಂಟಿ ಹಿತ್ತಲಿನ ಮಸೀದಿಯ ಮಾರ್ಗದ ಬದಿಯಲ್ಲಿರು ಕಬರಸ್ತಾನದ ಎತ್ತರದ ಹಾದಿ ಏರುತ್ತಾ ಹೋದರೆ ಅಲ್ಲಿ ಒಂದೇ ಜಾಗದಲ್ಲಿ ಅಕ್ಕ ಪಕ್ಕಗಳಲ್ಲಿ ಜೋತೆಯಾಗಿ ಮಲಗಿರುವ ಮಕ್ಕಳ ಕಬರುಗಳು ಉತ್ತರ ಸಿಗದೇ  ಮೌನವಾಗಿದೆ ಎಂದು ಭಾವಿಸುವಂತಿತ್ತು.
ಗುರುವಾರ ಬೆಳಗಾಗುತ್ತಲೇ ಸಮಸ್ತದ ಆದೇಶ ಪ್ರಕಾರ ಶೈಖುನಾ ಎಂ ಟಿ ಉಸ್ತಾದರು ದುರಂತ ಸ್ಥಳಕ್ಕೆ ಬೇಟಿ ನೀಡಿ ಮರಣಹೊಂದಿದ ಮಕ್ಕಳ ಮನೆಗಳಿಗೆ ಭೇಟಿ ನೀಡುತ್ತಾರೆ ಎಂದು ತಿಳಿದೊಡನೇ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕಲ್ಲುಗುಡ್ಡೆ ಗೆ ಧಾವಿಸಿದೆವು.ಸಮಸ್ತ ನೇತಾರರೆಲ್ಲರೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಪ್ರಥಮವಾಗಿ ಕಬರ್ ಝಿಯಾರತ್ತು ನಡೆಸಿ ದುಅಃ ನಿರ್ವಹಿಸಲು ಶೈಖುನಾ ಮುಂದಾದಾಗ ಐದು ಮಕ್ಕಳ ತಂದೆಯರನ್ನು ಹತ್ತಿರ ಕರೆದು ನೀವು ಯಾರು ಮಕ್ಕಳನ್ನು ಕಳಕೊಂಡಿಲ್ಲ !ಅವರ್ಯಾರೂ ಮರಣಿಸಿಲ್ಲ!ಸಹನೆ ವಹಿಸಿ ನಮ್ಮನ್ನು ಮತ್ತು ನಿಮ್ಮನ್ನು ಸ್ವರ್ಗಕ್ಕೇ ಸೇರಿಸುವ ಮಕ್ಕಳು ಅವರು ಎಂದು ದುಖಃ ತಾಳಲಾರದೇ ಗದ್ಗದಿತರಾಗಿ ಹೇಳಿದಾಗ ಅಲ್ಲಿದ್ದ ಎಲ್ಲರ ಕೆನ್ನೆಯಲ್ಲಿ ಕಣ್ಣೀರು ಹರಿದಾಡುತ್ತಿತ್ತು.
ಚಿಕ್ಕ ಪ್ರಾಯದಲ್ಲೇ ಮರಣಹೊಂದಿದ ಪ್ರವಾದಿ (ಸ) ರ ಮಗನಾದ ಇಬ್ರಾಹಿಂ ಎಂಬ ಒಂದುವರೆ ವರ್ಷ ಪ್ರಾಯದ ಮಗುವಿನ ಬಗ್ಗೆ ಪ್ರವಾದಿಯರು ಅನುಭವಿಸಿದ ನೋವಿನ ಬಗ್ಗೆ ವಿವರಿಸಿ ಸಾಂತ್ವನ ಹೇಳಿದಾಗ ಮಕ್ಕಳನ್ನು ಕಳಕೊಂಡ ತಂದೆಯರ ಮುಖದಲ್ಲಿ ಸಮಾಧಾನದ ಭಾವ ಕಾಣುತ್ತಿತ್ತು.
ನಂತರ ಐದು ಮನೆಗಳಿಗೂ ಬೇಟಿ ನೀಡಿ ಪ್ರಾರ್ಥಿಸಿ ಕುಟುಂಬದವರಿಗೂ ಸಾಂತ್ವನ ಹೇಳಿದರು.ಜೊತೆಗೆ ಸಮಸ್ತದ ಎಲ್ಲಾ ಕಾರ್ಯಕರ್ತರೂ ಸಾಥ್ ನೀಡಿದ್ದರು.

ಮರಣವು ಕೂಡಾ ಒಂದು ಪರೀಕ್ಷೆ ಎಂದು ಕುರಾನ್ ಹೇಳುತ್ತದೆ.

وَلَنَبْلُوَنَّكُمْ بِشَيْءٍ مِنَ الْخَوْفِ وَالْجُوعِ وَنَقْصٍ مِنَ الْأَمْوَالِ وَالْأَنْفُسِ وَالثَّمَرَاتِ ۗ وَبَشِّرِ الصَّابِرِينَ

ಕೆಲವೊಂದು ಭಯ, ಹಸಿವು, ಸೊತ್ತುನಾಶ, ಪ್ರಾಣಹಾನಿ, ಫಲಗಳ ನಾಶ ಇತ್ಯಾದಿಗಳ ಮೂಲಕ ನಾವು ನಿಮ್ಮನ್ನು ಖಂಡಿತವಾಗಿಯೂ ಪರೀಕ್ಷಿಸುವೆವು. (ಇಂತಹ ಸಂದರ್ಭಗಳಲ್ಲಿ) ತಾಳ್ಮೆ ವಹಿಸುವವರಿಗೆ ಶುಭವಾರ್ತೆ ಯನ್ನು ತಿಳಿಸಿರಿ.

ಪ್ರವಾದಿ ಸ ರವರ ಸನ್ನಿಧಿಯಲ್ಲಿ ಹಾಜರಿರುತ್ತಿದ್ದ ಸ್ಹಹಾಬಿಯೋರ್ವರನ್ನು ಕಾಣದಾದಾಗ  ನಬಿಯವರು ಅವರ ಬಗ್ಗೆ ವಿವರ ಕೇಳುತ್ತಾರೆ.ಅವರು ತನ್ನ ಸಣ್ಣ ಮಗನ ಮರಣ ಕಾರಣ ಬರುತ್ತಿಲ್ಲ ಎಂದು ಸ್ವಹಾಬಿಗಳು ಉತ್ತರಿಸುತ್ತಾರೆ.ಪ್ರವಾದಿ ಸ ರವರು ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು ನಂತರ.

ثم قال: يا فلان أيما كان أحب إليك أن تمتع به عمرك أو لا تأتي غدا إلى باب من أبواب الجنة إلا وجدته قد سبقك إليه يفتحه لك. قال: يا نبي الله بل يسبقني إلى باب الجنة فيفتحها لي لهو أحب إلي. قال: فذاك لك. رواه النسائي وصححه ابن حبان والحاكم وابن ﺣﺠﺮ (ر)

ನಂತರ ಮಗುವಿನ ತಂದೆಯನ್ನು ಕರೆದು ನಿಮಗೆ ನಿಮ್ಮಮಗುವಿನ ಜೊತೆ ಸುಖವಾಗಿ ಬಾಳುವುದನ್ನು ಇಷ್ಟ ಪಡುವಿರೋ ಅಥವಾ ಆಗು ಸ್ವರ್ಗದ ಬಾಗಿಲ ಬಳಿ ತೆರಳಿ ನಿಮಗಾಗಿ ಸ್ವರ್ಗದ ಬಾಗಿಲನ್ನು ತೆರೆಯುವುದಾದರೆ ನಿಮಗೆ ಯಾವುದು ಇಷ್ಟ  ?ಅಂತ ಕೇಳುತ್ತಾರೆ.ಆಗ ಆ ಸ್ವಹಾಬಿ ಹೇಳುತ್ತಾರೆ ನಬಿಯವರೇ ಆ ನನ್ನ ಮಗು ಸ್ವರ್ಗದ ಬಾಗಿಲನ್ನು ತೆರೆಯುವ ಮಗುವಾಗುವುದನ್ನು ನಾನು ಬಯಸುವೆ.
وعن أبي موسى الأشعري أن رسول الله صلى الله عليه وسلم قال: إذا مات ولد العبد قال الله لملائكته: قبضتم ولد عبدي؟ فيقولون: نعم. فيقول: قبضتم ثمرة فؤاده. فيقولون: نعم. فيقول: ماذا قال عبدي؟ فيقولون: حمدك واسترجع. فيقول الله: ابنوا لعبدي بيتا في الجنة وسموه بيت الحمد. رواه الترمذي وحسنه، وأحمد،
ಓರ್ವ ವ್ಯಕ್ತಿಯ ಮಗು ಮರಣ ಹೊಂದಿದರೆ ಅಲ್ಲಾಹನು ತನ್ನ ಮಲಕ್ಕುಗಳಿಗೆ ಕೇಳುತ್ತಾನೆ, ನನ್ನ ದಾಸನ ಮಗನನ್ನು ಮರಣಿಸಿದಿರೋ ? ಹೌದು ಎಂದು ಮಲಕ್ಕುಗಳು ಉತ್ತರಿಸುತ್ತಾರೆ.ಆತನ ಹೃದಯ ದ ಹೂವನ್ನು ಮರಣಿಸಿದಿರೋ?
ಹೌದೆಂದು ದೇವದೂತರು ಹೇಳುತ್ತಾರೆ. ಆಗ ಅಲ್ಲಾಹನು ಪ್ರಶ್ನಿಸುತ್ತಾನೆ,ಆಗ ಆತ ಏನು ಹೇಳಿದ ?ಆತ ಸ್ತುತಿಸಿದ ಮತ್ತು "ಇನ್ಮಾಲಿಲ್ಲಾ"ಆಪತ್ತಿನ ವಾಕ್ಯ ಉಚ್ಚರಿಸಿದ.ಎಂದು ಮಲಕ್ಕುಗಳು ಉತ್ತರಿಸುತ್ತಾರೆ.
ಹಾಗಾದರೆ ನೀವು ಆತನಿಗೆ ಸ್ವರ್ಗದಲ್ಲಿ ಮನೆಯೊಂದನ್ನು ಸಿದ್ದಪಡಿಸಿ ಅದಕ್ಕೆ ಬೈತುಲ್ ಹಂದು"ಸ್ತುತಿಯ ಮನೆ"ಎಂದು ಹೆಸರಿಡಿ,

أنه رأى صحابياً يبكي على فرطاً له فقال له رسول الله صلى الله عليه وسلم أو مايسرك أنه الآن يلاعب أبني إبراهيم تحت ضل العرش قال بلي
ಪ್ರವಾದಿ (ಸ) ರವರು ಒಮ್ಮೆ ತನ್ನ ಸ್ವಹಾಬಿಗಳಲ್ಲಿ ಓರ್ವರು ಮಗನ ಮರಣ ನಿಮಿತ್ತ  ಅಳುತ್ತಿರುವುದನ್ನು ಕಂಡು ಪ್ರಶ್ನಿಸುರಾಗಿದ್ದರು.ನಿಮ್ಮ ಮಗ ಈಗ ನನ್ನ ಮಗನಾದ ಇಬ್ರಾಹಿಮ್ ನೊಂದಿಗೆ ಅರ್ಶಿನ ನೆರಳಿನಲ್ಲಿ ಆಟ ಆಡುತ್ತಿರುವುದನ್ನು ಇಷ್ಟಪಡುವುದಿಲ್ಲವೇ ?ಆಗ ಆ ದುಃಖಿತ ಸ್ವಹಾಬಿ ಹೇಳುತ್ತಾರೆ ನಾನು ಸಂತುಷ್ಟನಾಗಿದ್ದೇನೆ.

ನಬಿಯವರು ತಮ್ಮ ಮಗನ ಅಗಲಿಕೆಯ ಬಗ್ಗೆ ತುಂಬಾ ದುಃಖಿತ ರಾಗಿದ್ದರು.
ಕಣ್ಣೀರ ಸುರಿಸುತ್ತಾ ಹೀಗೆ ಹೇಳಿದ್ದರು.
إن العين تدمع، والقلب يحزن، ولا نقول إلا ما يرضي ربنا، وإنا بفراقك يا إبراهيم لمحزونون))

ಕಣ್ಣು ಕಣ್ಣೀರ ಸುರಿಸುತ್ತದೆ, ಹೃದಯ ದುಃಖಿಸುತ್ತದೆ.ಅಲ್ಲಾಹನು ತೃಪ್ತಿಪಡುವ ಕಾರ್ಯವನ್ನಲ್ಲದೇ ಬೇರೆ ಏನನ್ನೂ ನಾವು ಹೇಳಲಾರೆವು.ಓ ಇಬ್ರಾಹೀಮ್ ನಿಮ್ಮನ್ನು ಕಳಕೊಂಡು ನಾವು ದುಃಖಿತ ರಾಗಿದ್ದೇವೆ.
ಇಬ್ರಾಹೀಮ್ ಎಂಬ ಪುತ್ರನ ಬಗ್ಗೆ ಅಪಾರ ಮಹಾತ್ಮೆ ಯನ್ನೂ ಹೇಳಲಾಗಿದೆ.
أخرج البخاري في صحيحه من طريق إسماعيل بن أبي خالد قال: "قلت لابن أبي أوفى: رأيتَ إبراهيمَ ابنَ النبي؟ قال: مات صغيرًا، ولو قُضِيَ أن يكون بعد محمد صلى الله عليه وسلم نبيٌّ، عاش ابنه؛ ولكن لا نبي بعده
ಬುಖಾರಿ ರ ವರದಿ ಮಾಡಿದ ಹದೀಸಿನಲ್ಲಿ ಇಬ್ನು ಅಬೀ ಅವ್ ಪಾ (ರ) ಹೇಳುತ್ತಾರೆ,ಮುಹಮ್ಮದ್ ನಬಿ (ಸ) ನಂತರ ಪ್ರವಾದಿ ಬರುವ ವಿಧಿ ಇದ್ದಿದ್ದರೆ ನಬಿಯವರ  ಮಗ ಇಬ್ರಾಹೀಂ ಬದುಕುತ್ತಿದ್ದರು.ಆದರೆ ಅವರ ನಂತರ ಪ್ರವಾದಿಯೇ ಇಲ್ಲ.
ನಬಿಯವರ ನೋವನ್ನು ಬೇರೆ ಬೇರೆ ರೀತಿಯಲ್ಲಿ ಯೂ ಹೇಳಿಕೊಂಡಿದ್ದಾರೆ.
 وعن ابن عباس قال : قال رسول الله صلى الله عليه وسلم : " من كان له فرطان من أمتي أدخله الله بهما الجنة ، فقالت عائشة : فمن كان له فرط من أمتك ؟ قال : ومن كان له فرط يا
موفقة ، فقالت : فمن لم يكن له فرط من أمتك ؟ قال فأنا فرط أمتي ، لن يصابوا بمثلي . رواه الترمذي وقال : هذا حديث غريب .
ನಬಿಯವರು ಹೇಳುತ್ತಾರೆ
ಎರಡು ಮಕ್ಕಳು ಮರಣಿಸಿದ್ದರೆ ಅವರ ಕಾರಣ ಆತನನ್ನು ಅಲ್ಲಾಹನು ಸ್ವರ್ಗಕ್ಕೆ ಕಳುಹಿಸುತ್ತಾನೆ.ಆಗ ಆಯಿಷಾ ರ ರವರು ಹೇಳುತ್ತಾರೆ.ಒಂದು ಮಗು ಮರಣಿಸಿದ್ದರೆ ?ಅಗಲೂ ಸ್ವರ್ಗವಿದೆ ಎಂದು ಪ್ರವಾದಿ ಉತ್ತರಿಸುತ್ತಾರೆ.ಆಗ ಆಯಿಷಾ ರ ಕೇಳುತ್ತಾರೆ, ತಮ್ಮ ಉಮ್ಮತ್ತ್ ನಲ್ಲಿ ಒಬ್ಬರಿಗೆ ಯಾರೂ ಮರಣ ಹೊಂದದೇ ಇದ್ದರೆ ? ನಬಿ ಸ ಉತ್ತರಿಸುತ್ತಾರೆ,ನಾನು ನನ್ನ ಉಮ್ಮತ್ತಿಗಾಗಿ ಮುಂದಾಗಿ ಹೋಗಿ ಸಿದ್ದ ಪಡಿಸುವ  ವ್ಯಕ್ತಿ ಆಗಿರುತ್ತೇನೆ. ನನ್ನಂತೆ ಆಪತ್ತು ಯಾರಿಗೂ ಸಂಭವಿಸಿಲ್ಲ.
ಮಗನನ್ನು ಕಳಕೊಂಡ ಉಮ್ಮು ಸುಲೈಮ್ (ರ) ತನ್ನ ಪತಿ ಅಬೂ ತಲ್ಹಾ (ರ )ರ ಗಮನಕ್ಕೆ ಕೊಡದೇ ರಾತ್ರಿ ವೇಳೆ ಪತಿಯ ಜೊತೆ ಮಲಗಿ   ಬಳಿಕ ಬುದ್ದಿವಂತಿಕೆಯಿಂದ ಮಗನ ಮರಣದ ವಿಷಯವನ್ನು ಗಮನಕ್ಕೆ ತರುತ್ತಾರೆ.ಅಗ ಕೋಪಗೊಂಡ ಅಬೂ ತಲ್ಹಃ ರ ನೇರವಾಗಿ ನಬಿ (ಸ) ರ ಬಳಿ ತೆರಳುತ್ತಾರೆ.ವಿಷಯ ತಿಳಿಸಿದಾಗ ರಸೂಲರು ದುಅಃ ಮಾಡುತ್ತಾರೆ.

 بارك الله لكما في غابر ليلتكما.
ನಿಮಗಿಬ್ಬರಿಗೂ ಕಳೆದ ರಾತ್ರಿಯಲ್ಲಿ ಅಲ್ಲಾಹನು ಅನುಗ್ರಹಿಸಲಿ.
ಅದೇ ರಾತ್ರಿ ಗರ್ಭ ಧರಿಸಿದ  ಉಮ್ಮು ಸುಲೈಮ್ ಗಂಡು ಮಗುವಿಗ ಜನ್ಮ ಕೊಡುತ್ತಾರೆ.
ಈ ಎಲ್ಲಾ ಹದೀಸುಗಳ ಸಂದೇಶಗಳು ಆತಂಕ,ದುಃಖ ,ನೋವಿನಿಂದ ಕಂಗಾಲಾದ ಆ ಐದು ಮಕ್ಕಳ ಮನೆ ಮಂದಿಗೆ  ಸಮಾಧಾನ, ಸಹನೆಯ ಸುಗಮಗೊಳಿಸುತ್ತದೆ.ಆ ದೌತ್ಯವನ್ನು ನಿರ್ವಹಿಸಿದ ಸಮಸ್ತ ಮುಶಾವರ ಪ್ರತಿನಿಧಿ ಶೈಖುನಾ ಎಂ ಟಿ ಉಸ್ತಾದರಿಗೆ ಮತ್ತು ಸಮಸ್ತ ಉಲಮಾ ಸಭೆಗೆ  ಜಿಲ್ಲೆಯ  ಎಲ್ಲಾ ಸಮಸ್ತ ಅಭಿಮಾನಿಗಳ ಹೃದಯ  ಮಿಡಿಯುತ್ತಿತ್ತು.ನೋವಿನ ಒಂದಿಷ್ಟು  ಭಾರವನ್ನು ಸಾಂತ್ವನ ಮೂಲಕ ಕಡಿಮೆಗೊಳಿಸಿದ ಸಂತೃಪ್ತಿ ಅಲ್ಲಿ ನೆರೆದ ಎಲ್ಲರ ಮನದಲ್ಲಿತ್ತು.ಅಲ್ಲಾಹನು ಅವರಿಗೆ ವಿಜಯವನ್ನು ಕರುಣಿಸಲಿ ಆಮೀನ್.

☪ ವರದಿ ಅಲ್ ಅಹ್ಸನ್ ಮಾಸಿಕ☪

ಪ್ರವಾದಿ( ಸ) ಗುಣಗಾನವನ್ನು ನಮ್ಮ ಬದುಕಿನ ಭಾಗವಾಗಿಸಿದ ಮಂಖೂಸ್ ಮೌಲಿದ್.

ಜಗಬೆಳಗಿಸಿದ ನಾಯಕರ ಸ್ಮರಣೆ ಅನಿವಾರ್ಯ
ಮೌಲಾನಾ ಯುಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು"

ವಸಂತ ಕಾಲ ಆಗಮಿಸುತ್ತಿದೆ. ಪುಣ್ಯ ಪ್ರವಾದಿ  (ಸ)ಜನ್ಮದಿನ ಹತ್ತಿರವಾಗುತ್ತಿದೆ.ಸತ್ಯವಿಶ್ವಾಸಿಯ ಹೃದಯ ಆ ಪ್ರವಾದಿ ಜನ್ಮ ದಿನಕ್ಕಾಗಿ ಕಾಯುತ್ತಲಿದೆ.ಪ್ರವಾದಿ (ಸ) ರ ಗುಣಗಾನ ,ಮೌಲಿದ್ ಸ್ವಲಾತಿನಿಂದ ಜಗತ್ತಿನಾದ್ಯಂತ ಶೋಭೆ ಹರಡಲಿದೆ.
ನಮ್ಮೆಡೆಯಲ್ಲಿ ಹೆಚ್ಚು ಮನೆಮಾತಾಗಿರುವ ಮಂಕೂಸ್ ಮೌಲಿದ್ ಮೂಲಕ ಮನೆ ಮನೆಗಳಲ್ಲಿ ಸಂಭ್ರಮ ತುಂಬಲಿದೆ.
ಇಸ್ಲಾಂ ಪ್ರವಾದಿ ಮುಹಮ್ಮದ್ (ಸ)ರ ಕಾಲದಲ್ಲೇ ಭಾರತದಲ್ಲಿ  ಪ್ರವೇಶ ಪಡೆದಿರುವುದು ಐತಿಹಾಸಿಕ ಹಿನ್ನೆಲೆ ಯಾಗಿರುತ್ತದೆ.ಆರಂಭದಲ್ಲಿ ಮಸೀದಿಗಳ ನಿರ್ಮಾಣ ಮೂಲಕ ಧರ್ಮದ ಪ್ರಚಾರಕ್ಕೆ ಅವಕಾಶಗಳು ಸಿಕ್ಕವು.ಹೀಗೆ ಮುಂದುವರಿದು ಹಿಜರಿ ಒಂಬತ್ತನೇ ಶತಮಾನ ವಾಗುವ ಷ್ಟ ರಲ್ಲಿ ಈಜಿಪ್ಟ್ ,ತುರ್ಕಿ, ಸೌದಿ,ಸಿರಿಯಾ ಮುಂತಾದ ಕಡೆಗಳಿಂದ ವಿದ್ವಾಂಸರು ಭಾರತದ ಕೇರಳದತ್ತ ಧಾರ್ಮಿಕ ಅರಿವನ್ನರಸಿ ಬರುವಂತಹಾ ಸನ್ನಿವೇಶ ಸೃಷ್ಟಿಯಾಯಿತು. ಅದು ಕೂಡಾ ಅದ್ಭುತ ಮತ್ತು ಅಷ್ಟೇ ವಿಸ್ಮಯ.ಈ ಸಂಭ್ರಮ ಕ್ಕೆ ವೇದಿಕೆ ಒದಗಿಸಿದವರು ಒಂಬತ್ತನೇಯ ಶತಮಾನ ಕಂಡ ಅಪ್ರತಿಮ ವಿದ್ವತ್ ಪ್ರತಿಭೆ  ಹಝ್ರತ್ ಅಸ್ಸಯ್ಯದ್ ಝೈನುದ್ದೀನ್ ಮಖ್ದೂಮ್ ಅಲ್ ಕಬೀರ್ (ರ) ಆಗಿದ್ದರು.(1467.ಹಿಜರಿ -873-928)
ಯಮನ್ ದೇಶದಿಂದ ತಮಿಳುನಾಡಿನ ಕೀಲಕ್ಕರೆ,ಕಾಯಲ್ಪಟ್ಟಣಂ,ಮೂಲಕ ಕೊಚ್ಚಿ ತಲುಪಿದ ಮಖ್ದೂಂ ಕುಟುಂಬದ ಪಿತಾಮಹಾ ಅಸ್ಸಯ್ಯದ್ ಮಖ್ದೂಂ ಅಸ್ಸೈಖ್
ಝೈನುದ್ದೀನ್ ಇಬ್ರಾಹೀಮ್ ಬಿನ್ ಅಹ್ಮದ್ (ರ).ಅವರು  ಝೈನದ್ದೀನ್ ಮಖ್ದೂಮರ  ಚಿಕ್ಕಪ್ಪರಾಗಿರುತ್ತಾರೆ.ಝೈನದ್ದೀನ್ ಮಖ್ದೂಮ್ ಒಂದನೆಯವರು
ಹಿಜರಿ 873 ರಲ್ಲಿ ಕೊಚ್ಚಿಯಲ್ಲಿ ಜನ್ಮ ತಾಳಿದರು. ನಂತರ ಪಿತೃ ವಿಯೋಗ ನಿಮಿತ್ತ ಮಹಾನುಭಾವರು ತನ್ನ ಚಿಕ್ಕಪ್ಪರ ಜೊತೆ ಕೊಚ್ಚಿಯಿಂದ  ಪೊನ್ನಾನಿ ಗೆ ವಾಸ ಬದಲಿಸಿತ್ತಾರೆ.ಅಲ್ಲೇ ಧಾರ್ಮಿಕ ಅರಿವನ್ನು ಪಡೆದು ನಂತರ ಮಕ್ಕಾ ಶರೀಪಿಗೆ ತೆರಳಿ ಉನ್ನತ ವಿದ್ವಾಂಸರಿಂದ ಅರಿವನ್ನು ಪಡೆದುಕೊಳ್ಳುತ್ತಾರೆ.ಆಮೇಲೆ ಈಜಿಪ್ಟಿಗೆ ಹೋಗಿ ಅಲ್ ಅಝಹರ್ ವಿದ್ಯಾಲಯ ದಲ್ಲಿ ಜಗತ್ತು ಕಂಡ ಮಹಾ ವಿದ್ವಾಂಸರಾದ ಅಸ್ಸೈಖ್ ಝಕರಿಯ್ಯ ಲ್ ಅನ್ಸಾರಿ (ರ )ರ ಬಳಿ ಸೇರಿ ಕೊಳ್ಳುತ್ತಾರೆ.
ಅಸ್ಸೈಖ್ ಝಕರಿಯ್ಯ ಲ್ ಅನ್ಸಾರಿ (ರ )ಒಂಬತ್ತನೇ ಶತಮಾನದ ಮುಜದ್ದಿದ್ (ಯುಗ ಪರಿವರ್ತಕ)ಆಗಿದ್ದರು.ಖಾತಿಮತುಲ್ ಮುಹಖ್ಖಿಖ್ ಇಬ್ನು ಹಜರ್ (ರ)ಕೂಡಾ ಅವರ ಶಿಷ್ಯರು.ನನ್ನ ಕಣ್ಣು ಕಂಡ ಮಹಾನುಭಾವ ರಲ್ಲಿ ಸರ್ವಶ್ರೇಷ್ಠ ರು ನನ್ನ ಗುರುಗಳೆಂದು
ಇಬ್ನು ಹಜರ್ (ರ)ಹೇಳಿರುತ್ತಾರೆ.ಇಮಾಂ ಜಲಾಲುದ್ದೀನ್ ಮಹಲ್ಲಿ ,ಇಮಾಂ ಹಜರುಲ್ ಅಸ್ಕಲಾನಿ,ಇಮಾಂ ಇಝ್ಝುದ್ದೀನ್ ಅಬ್ದುಸ್ಸಲಾಂ,ಇಮಾಂ ಸಿರಾಜುದ್ದೀನ್ ಬುಲ್ಕೈನಿ ಮುಂತಾದ ವಿದ್ವಾಂಸರು ಅಸ್ಸೈಖ್ ಝಕರಿಯ್ಯ ಲ್ ಅನ್ಸಾರಿ (ರ)ಗುರುಗಳಾಗಿರುತ್ತಾರೆ.
ಇಮಾಂ ಶಾಫಿಈ(ರ)ರ ಬಳಿಯೇ ಅವರು ಅಂತ್ಯವಿಶ್ರಮ ಪಡೆದಿರುತ್ತಾರೆ.
ಅಸ್ಸೈಖ್ ಝಕರಿಯ್ಯಲ್ ಅನ್ಸಾರಿ ಮತ್ತು ಇಮಾಂ ಶಾಫಿ ರ ಮಧ್ಯೆ ಹದಿನೇಳು ಗುರುವರ್ಯರನ್ನು ಕಾಣಬಹುದಾಗಿದೆ.
ಅಶ್ಸೈಖ್ ಮಖ್ದೂಂ (ರ)ಈಜಿಫ್ಟಿನಿಂದ ಪೊನ್ನಾನಿಗೆ ಮರಳಿ ಬಂದ  ನಂತರ ಕಟ್ಟಿದ ಮಸೀದಿ ಖ್ಯಾತ ಇಸ್ಲಾಮಿಕ್ ಸಂಸ್ಕೃತಿಯ ಕೇಂದ್ರ ವಾಗಿ ಬೆಳಗಿದೆ.ಅಶ್ಸೈಖ್ ಮಖ್ದೂಂ (ರ)ರವರ ದಾರಿಯಲ್ಲೇ ಸಾಗಿದ ಮೊಮ್ಮಗ ಅಸ್ಸಯ್ಯದ್ ಅಹ್ಮದ್ ಝೈನುದ್ದೀನ್ ಎರಡನೆಯವರು  ಅಗಾಧವಾದ ಧಾರ್ಮಿಕ ಜ್ಞಾನವನ್ನು ಪಡೆಯುತ್ತಾರೆ.ಹರಂ ಶರೀಫಿನಲ್ಲಿ ಹತ್ತು ವರ್ಷಗಳ ಕಾಲ ಮಕ್ಕಾ ಹರಂ ಶರೀಫಿನಲ್ಲಿ ಜ್ಞಾನವನ್ನು ಪಡೆಯುತ್ತಾ
ಖಾತಿಮತುಲ್ ಮುಹಖ್ಖಿಖೀನ್ ಇಬ್ನು ಹಜರ್(ಹಿಜರಿ  .909-973)(ರ) ರ ಶಿಷ್ಯತ್ವವನ್ನು ಪಡೆಯುತ್ತಾರೆ.
ಆನಂತರ ಪೊನ್ನಾನಿಗೆ ಮರಳಿ ಪ್ರಸಿದ್ದ ಮಸೀದಿ ಕೇಂದ್ರವಾಗಿ ದರ್ಸ್ ನ್ನು ಮುನ್ನಡೆಸುತ್ತಾರೆ.ಆ ಸಂದರ್ಭದಲ್ಲಿ ಇಬ್ನು ಹಜರ್ (ರ) ಪೊನ್ನಾನಿ ದರ್ಸಿಗೆ ಬೇಟಿ ನೀಡಿ ಕೆಲಕಾಲ ತಂಗಿದ್ದು ಉಲ್ಲೇಖವಿದೆ. ಅಂದು ಪೊನ್ನಾನಿ ಯಲ್ಲಿ ತಂಗಿದ ಕಾಲ ತನ್ನ ಕೈಯಿಂದ ಬರೆದ ಕೆಲವು ಬರಹಗಳು ದಾರುಲ್ ಇಫ್ತಾತಾಹ್  ಅಝ್ಹರಿಯಾ ಅಹ್ಮದ್ ಕೋಯ ಸ್ಸಾಲಿಯಾತಿ ಲೈಬ್ರರಿಯಲ್ಲಿ ಲಭ್ಯವಿದೆ. ಅಲ್ ಜಾಮಿಯಲ್ ಅಝ್ಹರ್,ಕೈರೋ
ಅಲ್ ಜಾಮಿಯಲ್ ಅಮವೀ ಡಮಸ್ಕಸ್,ಅಲ್ ಜಾಮಿಯಲ್ ಫಾತಿಹ್ ಇಸ್ತಾಂಬುಲ್, ಅಲ್ ಹರಮೈನಿ ಶ್ಶರೀಪೈನಿ ವಿಶ್ವವಿದ್ಯಾಲಯ ಗಳಿಂದ ಜ್ಞಾನ ದಾಹಿಗಳು ಪೊನ್ನಾನಿ ಸಂದರ್ಶಿಸುತ್ತಿದ್ದುದು ಪೊನ್ನಾನಿ ವಿಶ್ವೋತ್ತರವಾಗಿ ಬೆಳೆದ ಉದಾಹರಣೆ ಯಾಗಿದೆ.ಇಷ್ಟೆಲ್ಲಾ ವಿವರಿಸಲು ಕಾರಣ ಸುಮಾರು ಐನೂರು ವರ್ಷಗಳಷ್ಟು ಹಿಂದೆ ಅರಬ್ ಜಗತ್ತನ್ನು ಕೇರಳದ ಕಡೆ ಆಕರ್ಶಿಸಿಸುವಂತೆ ಮಾಡಿದ ಮಹಾನುಭಾವ ರು ಸಾಮಾನ್ಯರಲ್ಲ.
ಮಖ್ದೂಂ ಒಂದನೆಯವರು ಬರೆದ ಮಂಖೂಸ್ ಮೌಲಿದ್ ಪ್ರವಾದಿ (ಸ) ರವರ ಸ್ತುತಿ ಕೀರ್ತನೆಗಳನ್ನು ಜೀವಂತವಾಗಿಸಿದೆ.ಅದು ಒಬ್ಬ ಮುಸ್ಲಿಮನ ಜನನ ಮರಣ,ಬಾಳು ಬದುಕಿನಲ್ಲಿ ಹಾಸುಹೊಕ್ಕಾಗಿ ರುವುದು ಮತ್ತು ಉಳಿದಿರುವುದು ಸಚ್ಚಾರಿತ್ಯವಿರುವ ಇಮಾಮರ ಪ್ರಜ್ಞಾವಂತಿಕೆಯಿಂದಲೇ ಆಗಿದೆ.
ಸಕಾಲದಲ್ಲಿ  ಸಮಸ್ತ ಉಲಮಾ ಸಭೆಯು ಕಾರ್ಯ ಪ್ರವೃತರಾಗಿರುವ ಕಾರಣ ಇಸ್ಲಾಮಿಕ್ ಸಾಹಿತ್ಯ ಕ್ಷೇತ್ರದಲ್ಲಿ ಬಲು ದೊಡ್ಡ ಸವಾಲನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದೆ.
ಮೌಲಿದ್ ಬಗ್ಗೆ ವಿರೋಧಿಗಳು ಎತ್ತುವ ಆರೋಪಗಳಲ್ಲಿ ಪ್ರಮುಖವಾದವುಗಳನ್ನು ಹೀಗೆ ಕಾಣಬಹುದು.

ಮೌಲಿದ್ ಪಾರಾಯಣ ನಬಿ ಕಾಲದಲ್ಲಿ ಇರಲಿಲ್ಲ.

ಕುರಾನ್ ಮತ್ತು ಮೌಲಿದಿನಲ್ಲಿ ವೈರುಧ್ಯಗಳಿವೆ.

ನಬಿಯನ್ನು ಕರೆದು ಅಪೇಕ್ಷಿಸುತ್ತಾರೆ.

ನೆಬಿ ಸ ರ ಕಾಲದಲ್ಲಿ ಮೌಲಿದ್ ಇರಲಿಲ್ಲ ಎನ್ನುವುದು ಹಸಿ ಸುಳ್ಳು. ಮೌಲಿದ್ ಎಂದರೆ ನಬಿ ಕೀರ್ತನೆ, ಗುಣಗಾನ ಮಾಡುವುದಾಗಿದೆ.
ಅದು ಕುರಾನ್ ಹದೀಸುಗಳಲ್ಲಿ ದಾರಾಳವಿದೆ.
 قُلْ بِفَضْلِ اللَّهِ وَبِرَحْمَتِهِ فَبِذَٰلِكَ فَلْيَفْرَحُوا هُوَ خَيْرٌ مِمَّا يَجْمَعُونَ

ಹೇಳಿರಿ: ‘ಇದು ಅಲ್ಲಾಹುವಿನ ಅನುಗ್ರಹ ಮತ್ತು ಕಾರುಣ್ಯದಿಂದಾಗಿದೆ. ಅದರಿಂದಾಗಿ ಅವರು ಸಂಭ್ರಮಪಡಲಿ. ಅವರು ಒಟ್ಟುಗೂಡಿಸಿಡುವುದಕ್ಕಿಂತಲೂ ಇದು ಅತ್ಯುತ್ತಮವಾದುದಾಗಿದೆ’.
ಯೂನುಸ್ ಸೂರ 58 ರ ತಫ್ಸೀರಿನಲ್ಲ فضل ಎಂಬುದು ಅರಿವು   رحمۃ ಎಂದರೆ ಪ್ರವಾದಿಯವರೆಂದು ಇಬ್ನ ಅಬ್ಬಾಸ್ (ರ)ವ್ಯಾಖ್ಯಾನಿಸಿರುವುದನ್ನು ತಫ್ಸೀರ್ ಬಹ್ರುಲ್ ಮುಹೀತಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರವಾದಿ (ಸ) ರ ಗುಣ ಗಾನ ಜಗತ್ತಿನಲ್ಲಿ ಸಂಪಾದಿಸುವ ಸರ್ವಕ್ಕಿಂತಲೂ ಉತ್ತಮವೆಂದು   ತಿಳಿಯಬಹುದು.ಗದ್ಯ
ಪದ್ಯಗಳಲ್ಲಿ ಪ್ರವಾದಿಗಳ ಮಹಾತ್ಮೆ ಯನ್ನು ಕೊಂಡಾಡಲಾಗುತ್ತಿದೆ.ಇಮಾಂ ಬುಖಾರಿ (ರ) ವರದಿ ಮಾಡಿದ ಹದೀಸು ಹೀಗಿದೆ ಆಯಿಷಾ ರ ಹೇಳುತ್ತಾರೆ. ಮದೀನ ಮಸೀದಿಯಲ್ಲಿ ಹಸ್ಸಾನ್ (ರ) ರವರಿಗೆ ಮಿಂಬರನ್ನು ಇಡಲು ಆಜ್ಞಾಪಿಸುತ್ತಿದ್ದರು.ಹಸ್ಸಾನ್ ರ  ಅದರ ಮೇಲೆ ನಿಂತು ನಬಿ ಬಗ್ಗೆ ಮಹತ್ವವನ್ನು ಹೇಳುತ್ತಿದ್ದರು ಮತ್ತು ವಿರೋಧಿಗಳ ಟೀಕೆ ಟಿಪ್ಪಣಿ ಗಳನ್ನು ಪ್ರತಿರೋಧಿಸುತ್ತಿದ್ದರು. ಪ್ರವಾದಿ (ಸ) ರವರು ಪವಿತ್ರ ಆತ್ಮ ಮೂಲಕ ಹಸ್ಸಾನನ್ನು ಬಲಪಡಿಸು ಎಂದು ಪ್ರಾರ್ಥಿಸುತ್ತಿದ್ದರು.
ಈ ಹದೀಸು ಮೂಲಕ ಇಮಾಮ್ ನವವೀ (ರ) ರವರು  ಮಸೀದಿಯಲ್ಲಿ ಪ್ರವಾದಿ ಗುಣಗಾನ ಸುನ್ನತ್ತ್ ಎಂದು ವಿವರಿಸಿದ್ದಾರೆ. (ಶರಹು ಮುಸ್ಲಿಂ.)
ಅಬ್ದುಲ್ಲಾಹಿಬ್ನು ರವಾಹಃ ಪದ್ಯ ಪ್ರವಾದಿ ಕೀರ್ತನೆಯಲ್ಲಿ ಪ್ರಮುಖವಾಗಿದೆ.
أَخْبَرَنَا يُونُسُ ، عَنِالزُّهْرِيِّ ، عَنِ الْهَيْثَمِ بْنِ أَبِي سِنَانٍ ، قَالَ : رَأَيْتُ أَبَا هُرَيْرَةَيَوْمَ جُمُعَةٍ يَقُصُّ قَائِمًا ، فَقَالَ فِي قَصَصِهِ : " إِنَّ أَخًا لَكُمْ كَانَ لَا يَقُولُ الرَّفَثَ يَعْنِي عَبْدُ اللَّهِ بْنُ رَوَاحَةَ ، فَقَالَ :
وَفِينَا رَسُولُ اللَّهِ يَتْلُو كِتَابَه
ُ إِذَا انْشَقَّ مَعْرُوفٌ مِنَ الْفَجْرِ سَاطِع
ُ أَرَانَا الْهُدَى بَعْدَ الْعَمَى فَقُلُوبُنَا
بِهِ مُوقِنَاتٌ أَنَّ مَا قَالَ وَاقِعُ
 يَبِيتُ يُجَافِي جَنْبَهُ عَنْ فِرَاشِه إِذَا اسْتَثْقَلَتْ بِالْكَافِرِينَ الْمَضَاجِعُ " . صَحِيحٌ رَوَاهُ الْبُخَارِيُّ .

ಅಬ್ದುಲ್ಲಾಹಿಬ್ನು ರವಾಹಃ ಬಗ್ಗೆ ನಬಿಯವರು ಹೇಳಿದ್ದನ್ನು ಅಬೂ ಹುರೈರ  ರ ಜ್ಞಾಪಿಸುತ್ತಾರೆ.
ನಿಮ್ಮ ಸಹೋದರ ಸುಳ್ಳು ಹೇಳುವ ವ್ಯಕ್ತಿಯಲ್ಲ.
ನಂತರ ಅವರು ಹೇಳಿದ ಪದ್ಯವನ್ನು ಹೇಳುತ್ತಾರೆ.

ಪ್ರಭಾತ ಸಮಯ ನಬಿಯವರು ಕುರಾನ್ ಪಠಿಸುತ್ತಾರೆ.ಕತ್ತಲೆಯ ನಂತರ ನಾವು ಬೆಳಕನ್ನು ಕಂಡೆವು.ಅವರು ಹೇಳಿದ್ದೇಲ್ಲವೂ ಘಟಿಸುತ್ತದೆ.ಜನ ಗಾಢವಾದ ನಿದ್ರೆಯಲ್ಲಿ ರುವಾಗ ನಬಿಯವರು ಹಾಸಿಗೆಯಿಂದ ಎದ್ದು ನಮಾಜಿನಲ್ಲಿ ಮಗ್ನರಾಗುತ್ತಾರೆ.

(ಪದ್ಯದ ಭಾವಾನುವಾದ)

ಉಂರತುಲ್ ಖಳಾ ಸಮಯ ನಬಿ ಬಳಿ ಅಬ್ದುಲ್ಲಾಹಿಬ್ನು ರವಾಹಃ ಪದ್ಯ ಹೇಳುತ್ತಾರೆ.

خَلُّوا بَنِي الْكُفَّارِ عَنْ سَبِيلِه
ِ الْيَوْمَ نَضْرِبْكُمْ عَلَى تَنْزِيلِهِ
 ضَرْبًا يُزِيلُ الْهَامَ عَنْ مَقِيلِهِ وَيُذْهِلُ الْخَلِيلَ عَنْ خَلِيلِهِ
فَقَالَ لَهُ عُمَرُ : يَابْنَ رَوَاحَةَ , بَيْنَ يَدَيْ رَسُولِ اللَّهِ , صَلَّى اللَّهُ تَعَالَى عَلَيْهِ وَسَلَّمَ ، وَفِي حَرَمِ اللَّهِ تَقُولُ شِعْرًا ؟ فَقَالَ النَّبِيُّ , صَلَّى اللَّهُ تَعَالَى عَلَيْهِ وَسَلَّمَ : خَلِّ عَنْهُ يَا عُمَرُ ، فَلَهِيَ أَسْرَعُ فِيهِمْ مِنْ نَضْحِ النَّبْلِ . .
ಪ್ರವಾದಿ ಒಂಟೆಯ ಲಗಾಮು ಹಿಡಿದು ಈ ಹಾಡನ್ನು ಹೇಳಿದಾಗ ಉಮರ್ (ರ) ಪ್ರಶ್ನಿಸುತ್ತಾರೆ ನಬಿಯವರ ಬಳಿ ಮತ್ತು ಹರಮಿನಲ್ಲಿ ನೀವು ಹಾಡುವುದೇ ?ಆಗ. ನಬಿಯವರು ಅವರನ್ನು ಬಿಡಿ‌ ಅವರ ಹಾಡು ಬಾಣಕ್ಕಿಂತ ಶಕ್ತಿಶಾಲಿ ಯಾಗಿದೆ.( ತಿರುಮುದಿ 2847)
ಕ‌ಅಬ್ ಇಬ್ನು ಝುಹೈರ್ ನಬಿಯ ಪರಮ ವೈರಿಯಾಗಿದ್ದರು.ಅವರ ಪದ್ಯವು ತೀರ ಅಸಹ್ಯವಾಗಿ ಕಂಡಾಗ ಅವರನ್ನು ವಧಿಸಲು ನಬಿಯವರು ಆಜ್ಞಾಪಿಸುತ್ತಾರೆ.
ಇದನ್ನರಿತ ಕ‌ಅಬ್  ವೇಷ ಬದಲಿಸಿ ನಬಿಯವರ ಬಳಿ ಬಂದು ಹಾಡುತ್ತಾರೆ.
إنّ الرسول لنور يستضاء به...مهند من سيوف الله مسلول
ಈ ಜಾಗ ತಲುಪಿದಾಗ ನಬಿಯವರು ತನ್ನ ಶಾಲನ್ನು ಹೊದಿಸುತ್ತಾರೆ.
ಆ ಶಾಲನ್ನು ಮುಆವಿಯಾ (ರ) ಕ‌ಅಬ್ (ರ) ಮಕ್ಕಳಿಂದ ಖರೀದಿಸುತ್ತಾರೆ.ನಂತರ ಅದನ್ನು ಅಬ್ಬಾಸಿಯಾ ಆಡಳಿತಾಧಿಕಾರಿಗಳು ಹಬ್ಬದ ದಿನಗಳಲ್ಲಿ ಧರಿಸುತ್ತಿದ್ದರು.ಬಗ್ದಾದ್ ನಗರವನ್ನು ಮುಘಲ್
ಅಕ್ರಮಿಸಿದಾಗ ಅಬ್ಬಾಸೀ ಆಡಳಿತ ಕೊನೆಗೊಂಡಿತು.ಆಗ ಅಬ್ಬಾಸಿಗಳಿಂದ  ಮುಘಲರು ಆ ಶಾಲನ್ನು ವಶಪಡಿಸಿಕೊಳ್ಳುತ್ತಾರೆ. ಅದನ್ನು ಬೆಂಕಿಗೆ ಹಾಕಿದಾಗ ಅದು ಸುಡಲಿಲ್ಲ.ಇದೀಗ ಅದು ಇಸ್ತಾಂಬುಲಿನಲ್ಲಿ  ಸಂರಕ್ಷಿಸಲಾಗುತ್ತಿದೆ. ಇಮಾಮ್ ಬೂಸ್ವೀರಿ (ರ) ರವರು ವಾತ ರೋಗದಿಂದ ಬಳಲುತ್ತಿದ್ದಾಗ ಪ್ರವಾದಿ ಸ್ನೇಹದ ಬಗ್ಗೆ ಅತ್ಯುನ್ನತ ಪದ್ಯ ರಚನೆ ಮಾಡಿದ ನಿಮಿತ್ತವಾಗಿ ಪ್ರವಾದಿಯು ಕನಸಿನಲ್ಲಿ ಶಾಲನ್ನು ಹೊದಿಸಿದ ಮತ್ತು ಆ ಮೂಲಕ ಸಂಪೂರ್ಣ ಗುಣಮುಖರಾದ ಘಟನೆ ಇಲ್ಲಿ ಗಮನಿಸಬಹುದು.
ಉಳಿದ ಭಾಗ ಮುಂದಿನ ವಾರದಲ್ಲಿ ನಿರೀಕ್ಷಿಸೋಣ.ಇನ್ಷಾ ಅಲ್ಲಾಃ.
ವರದಿ ಅಲ್ ಅಹ್ಸನ್ ಮಾಸಿಕ

ಕ್ರೌರ್ಯ ತುಂಬಿದ ಜಗತ್ತಿಗೆ ಪ್ರವಾದಿಯವರ ಮಾದರಿಯಾಗಿ ಶಾಂತಿಯ ಪಾಠ ಹೇಳಿ ಕೊಡೋಣ


ಭಾರತ ಜಗ ಶ್ರೇಷ್ಠ ವಾದದ್ದು   ಆತ್ಮಜ್ಞಾನ,ನಾಗರೀಕತೆಯಿಂದ ಉಳಿದ ಮಾನವೀಯತೆಯ ಕಾರಣಕ್ಕೆ
ಭಾಷಣ 🎤ಮೌಲಾನಾ ಯು. ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು
    By: AL Ahsan

ಕುರಾನ್ ಹೇಳುತ್ತದೆ.

لَقَدْ كَانَ لَكُمْ فِي رَسُولِ اللَّهِ أُسْوَةٌ حَسَنَةٌ لِمَنْ كَانَ يَرْجُو اللَّهَ وَالْيَوْمَ الْآخِرَ وَذَكَرَ اللَّهَ كَثِيرًا

ಖಂಡಿತವಾಗಿಯೂ ನಿಮಗೆ ಅಲ್ಲಾಹುವಿನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಂದರೆ ಅಲ್ಲಾಹುವನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹುವನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ.

ಅಮೇರಿಕದಲ್ಲಿ ಒಬ್ಬ ಐವತ್ತೆಂಟು ಮಂದಿ ಅಮಾಯಕರ ಮೇಲೆ ಗುಂಡಿನ ಮಳೆಗೆರೆದು ಕೊಂದು ಹಾಕಿದ ಅವನು ಸ್ಟೀಫನ್.
ಅದು ಅಮೇರಿಕಾ ಅಂತ ಸುಮ್ಮನಿರಬಹುದೇ ?

ನಿರ್ಭಯಾ ಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕ್ರೂರವಾಗಿ ಹತ್ಯೆಮಾಡಿದಾಗ ಜನಾರೋಷ ಎದ್ದು ಪ್ರತಿಭಟನೆ ನಡೆಯಿತು!ನಂತರ ತಣ್ಣಗಾಯಿತು?ಅತ್ಯಾಚಾರ ಕೊನೆಯಾಗಲಿಲ್ಲ.!

 ಗೋ ರಕ್ಷಣೆಯ ಗುಂಪು  ಅಖ್ಲಾಕ್ ಮತ್ತು ಅನೇಕರನ್ನು ಕೊಂದಾಗಲೂ ಅಸಹಿಷ್ಞುತೆಯ ಕೂಗು ದೇಶದಾದ್ಯಂತ ಎದ್ದಿತು ಮತ್ತೆ ತಣ್ಣಗಾಯಿತು, ?

ಹದಿಹರೆಯದ ಜುನೈದನನ್ನು ರೈಲಲ್ಲಿ ಅಮಾನುಷವಾಗಿ ಕೊಂದು ಹಾಕಿದಾಗ ಜಂತರ್ ಮಂತರ್ ದೇಶವೇ ನಡುಗುವಂತೆ ಹೇಳಿತು "NOT IN MY NAME" ಆನಂತರ ಸುಮ್ಮನಾಯಿತು.

ಅಸಹಿಷ್ಣುತೆಯ ಕಾರಣ ಅನೇಕ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದಿರುಗಿಸಲಾಯಿತು.ಆದರೂ ‌ ಪತ್ರಕರ್ತೆಯ ಸವಕಲು ದೇಹ ಮನೆ ಗೇಟಲ್ಲಿ ಜನರ ಮಧ್ಯೆ ಗುಂಡಿಗೆ ಬಲಿಯಾಯಿತು. ಅಲ್ಲಿ ಯೂ ಬ್ರಹತ್ ಪ್ರತಿಭಟನೆ ನಡೆಯಿತು.ಮುಂದೇನಾಯಿತು ?
 
ಮೊನ್ನೆ ರಾಜಸ್ತಾನಲ್ಲಿ ಶ್ಲೋಕ ಹಾಡಿದ ಅಹಮದನನ್ನು ಗುಂಪು ಕೊಂದಿತು.ಆ ಕಾರಣ ಅಲ್ಲಿಂದ ಇನ್ನೂರಕ್ಕಿಂತಲೂ ಹೆಚ್ಚು ಮುಸ್ಲಿಂ ಕುಟುಂಬ ಊರು ತೊರೆದು ಹೋಗುತ್ತಿದೆ .

ಇದೂ ಅಲ್ಲದೇ ಪ್ರತೀ ಮನೆಮನೆಯಲ್ಲಿ ಹರಿತವಾದ ತಲವಾರು ಕತ್ತಿ ಇಟ್ಟು ಸಿದ್ದ ರಾಗಿ ಎಂದು ಕರೆ ನೀಡಲಾಗುತ್ತದೆ.

ಇದೀಗ ಬೇಕಿರೋದು ಹೇಳಿ,ಕೂಗಿ ಪ್ರಯೋಜನ ವಿಲ್ಲವೆಂದಾಗ ಏನು ಮಾಡಬೇಕೆನ್ನುವುದಾಗಿದೆ.


ಈ ದೇಶ ಹಿಂಸೆಯತ್ತಾ ಮುಖ ಮಾಡಿದೆಯಾ ? ಮಂದಿರ, ಮಸೀದಿ, ದ್ಯಾನ ಜಪ ತಪ ಕೇಂದ್ರಗಳು ಅರ್ಥವನ್ನು ಕಳಕೊಂಡಿದೆಯಾ  ?
ಬೋಧನೆ,ಪ್ರವಚನಗಳು,
ಧರ್ಮನೀತಿ ತತ್ವಗಳು ಅಪ್ರಸ್ತುತ ವಾಯಿತೆ ?
ಶಾಂತಿದೂತರ, ಮಾಹಾನುಭಾವರ,ಸಾತ್ವಿಕರ,
ದರ್ಶನಗಳು ಅರ್ತಹೀನವಾಯಿತೇ ?
ಅದೆಲ್ಲಾ ಬಿಟ್ಟು ಬಿಡೋಣವೆಂದರೂ
ಆಧುನಿಕ ಶಿಕ್ಷಣಗಳಿಂದಾಗುವ ಪರಿಣಾಮಗಳೇನು ?
ಶಿಕ್ಷಣಕ್ಕಾಗಿ ಇಂದು ಬದುಕಿನ ಬಹುಮುಖ್ಯ ಭಾಗವನ್ನು ವ್ಯಯಿಸಲಾಗುತ್ತಿದೆ.ಆದರೆ ಆ ಶಿಕ್ಷಣವೂ ಜನರಿಗೆ ಮಾನವೀಯತೆಯನ್ನು ಕಲಿಸುತ್ತಿದೆಯೇ ?ಶಿಕ್ಷಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡುವ ರೀತಿಯಲ್ಲಿ
ಸಿದ್ದಪಡಿಸಲಾಗುತ್ತದೆ.ಆದರೆ ನಾಳೆಯ ಭವಿಷ್ಯದಲ್ಲಿ ಭಯ ,ಆತಂಕ ಅಭದ್ರತೆ,ಅಸಹಿಷ್ನುತೆ ಇಲ್ಲದ ನಾಡಲ್ಲಿ ನಮ್ಮ ಮಕ್ಕಳು ಕೂಡಿ ಬಾಳಬಹುದೇ ?ಸ್ವಾಸ್ಥ್ಯ ಸಮಾಜದಲ್ಲಿ ನಮ್ಮ ಮುಂದಿನ ಜನ ಬಾಳಬಹುದೇ ?
ಇನ್ನು ಈ ದೇಶವನ್ನು ಜಗತ್ತಿನ ಶ್ರೇಷ್ಠ ದೇಶವಾಗಿ ಜಗತ್ತು ಪರಿಗಣಿಸಿದ್ದು ಇಲ್ಲಿಯ ಜನಸಾಮಾನ್ಯರು  ಅನುಭವಿಸುವ ಶ್ರೀಮಂತಿಕೆಯ ಕಾರಣವೇ ? ಅಲ್ಲ
ರೋಗ ರುಜಿನಗಳಿಂದ ಮುಕ್ತವಾದ ದೇಶ ಅನ್ನುವ ಉದ್ದೇಶಕ್ಕಾಗಿಯೇ ? ಇಲ್ಲವೇ ಅತ್ಯುನ್ನತ ವಾದ ಸ್ವಚ್ಚ ಪರಿಸರವೆನ್ನುವ ಹೆಗ್ಗಳಿಕೆಗಾಗಿಯೇ ?    ಎಲ್ಲಾ ಸಮಸ್ಯೆಗಳಿಂದ ಮುಕ್ತವಾದ ರಾಷ್ಟ್ರ ಎನ್ನುವುದಕ್ಕಾಗಿಯೇ ?
ಕಳ್ಳ ,ದರೋಡೆ ಕೋರ,ಅತ್ಯಾಚಾರಿ,ಕೊಲೆಗಟುಕ ದುಷ್ಟರ ಯಾವುದೇ ತಂಟೆಗಳಿಲ್ಲದ ನಾಡು ಎಂಬ ಕಾರಣಕ್ಕಾಗಿ ಯೇ ?
ಕ್ಲೇಶಗಳಿಲ್ಲದ ಸ್ವಾಸ್ಥ್ಯ ಸಮಾಜದ ಮಧ್ಯೆ ಬದುಕಬಹುದೆಂಬ ಕಾಳಜಿಗಾಗಿಯೇ ?
ಇದೆಲ್ಲವನ್ನೂ ಗುರುತಿಸಲು ಅಸಾದ್ಯವಾಗಬಹುದು. ಆದರೆ ಈ ದೇಶ ಎದ್ದು ನಿಲ್ಲುವುದು ಧಾರ್ಮಿಕತೆಯಿಂದ ಪಡೆದ ಆತ್ಮ ಜ್ಞಾನ, ಮತ್ತು ನಾಗರೀಕತೆಯಿಂದ ಉಳಿದ ಮಾನವೀಯತೆಯ ಕಾರಣಗಳಿಗಾಗಿ ಮಾತ್ರ. ಬೇರೆ ಎಲ್ಲಾ ದೇಶಗಳಿಗಿಂತ ದೊಡ್ಡದಾದ ಮನುಷ್ಯತ್ವದ ಭೂಮಿಕೆಯನ್ನು ಹಾಗೂ ಬಲಿಷ್ಟವಾದ ಸಂವಿಧಾನ ಮೂಲಕ ಪ್ರಜಾತಂತ್ರವನ್ನೂ ಜಗತ್ತಿಗೆ ಸಾರಿದ್ದು ನಮ್ಮ ದೇಶ.
ಆದರೆ ಇಂದು ಕ್ರೌರ್ಯ ಮೆರೆಯುತ್ತಿದೆ.ಅಶಾಂತಿ ಬೆಳೆಯುತ್ತಿದೆ.
ಇಂತಹಾ ಸಂದರ್ಭದಲ್ಲಿ ನಾವು ಸರ್ವಶ್ರೇಷ್ಠ ಧರ್ಮದ ಅನುಯಾಯಿಗಳಾಗಿ,ಗತಿಸಿಹೋದ ಮಹಾನ್ ಚೇತನಗಳು ಅನುಸರಿಸಿದ ಆದರ್ಶದ ಮೂಲಕ ಪ್ರವಾದಿ (ಸ) ರವರ ಶಾಂತಿಯ ರಾಯಭಾರಿಗಳಾಗಿ ಪ್ರತಿಯೊಬ್ಬ ಮಸಲ್ಮಾನ ಬದಲಾಗಬೇಕಾಗಿದೆ.ನಿಯಮ ಕಾನೂನುಗಳು, ನೀತಿ ಪಾಠಗಳು,ಕಾರಾಗ್ರಹಗಳು,ಸೋತು ನಿಂತಾಗ ಸಮಾಜಕ್ಕೆ ದೀಪಸ್ತಂಭ ವಾಗಿ ಇಸ್ಲಾಂ ಬೆಳಕು ನೀಡಬೇಕು.ಆ ಮೂಲಕ ವಿರೋಧಿಗಳಿಗೆ, ಅತಿಕ್ರಮಿಗಳಿಗೆ  ಹೊಸ ದಾರಿಯನ್ನು ತೋರಲು ಮುಸ್ಲಿಂ ಸಮುದಾಯಕ್ಕೆ ಸಾಧ್ಯವಾಗಬೇಕು.ಇಸ್ಲಾಮನ್ನು ಪರಿಚಯಿಸಲು ಇದಕ್ಕಿಂತ ದೊಡ್ಡ ಅವಕಾಶ ಬೇರೆ ಇರಲಿಕ್ಕಿಲ್ಲ.ಪ್ರವಾದಿ ಆಗಮನದ
ಏಳನೇಯ ಶತಮಾನ ಕ್ರೌರ್ಯ ಗಳಿಂದಲೇ ತುಂಬಿ ಹೋಗಿತ್ತು.
ಕುರಾನ್ ಹೇಳುತ್ತದೆ.
كُنْتُمْ خَيْرَ أُمَّةٍ أُخْرِجَتْ لِلنَّاسِ تَأْمُرُونَ بِالْمَعْرُوفِ وَتَنْهَوْنَ عَنِ الْمُنْكَرِ وَتُؤْمِنُونَ بِاللَّهِ(3-10)

ನೀವು ಮನುಕುಲಕ್ಕಾಗಿ ಹೊರತರಲಾಗಿರುವ ಉತ್ತಮ ಸಮುದಾಯವಾಗಿರುವಿರಿ. ನೀವು ಸದಾಚಾರ ವನ್ನು ಆದೇಶಿಸುತ್ತಿರುವಿರಿ, ದುರಾಚಾರವನ್ನು ವಿರೋಧಿಸು ತ್ತಿರುವಿರಿ ಮತ್ತು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವಿರಿ.(3-10)
ಸದಾಚಾರದ ಉತ್ತಮ ರಾಯಭಾರಿಯಾಗಿ ನಾವು ಕಾರ್ಯಾಚರಿಸಬೇಕಾಗಿದೆ.
ಇನ್ನು ಕೆಡುಕನ್ನು ಕೆಡುಕಿನಿಂದ ಎದುರಿಸಲಾಗದು.ಜಗತ್ತಿನಲ್ಲಿ ಅನೇಕ ಹೋರಾಟಗಳು ದಾರಿ ತಪ್ಪುವುದು ಇಂತಹಾ ಸಂದರ್ಭಗಳಲ್ಲಿ ಆಗಿರುತ್ತದೆ.ಶಕ್ತಿ ಪ್ರದರ್ಶನಕ್ಕಿಂತ ಪರಿಣಾಮಕಾರಿ ಬುದ್ಧಿವಂತಿಕೆ ತೋರುವುದಾಗಿದೆ.ಮದವೇರಿದ ಆನೆಯನ್ನು ಪಳಗಿಸುವ,ಅಶ್ವಾರೋಹಿ ಯಾಗಿ ಬಲಿಷ್ಟ ಕುದುರೆಗೆ ಕಡಿವಾಣ ಹಾಕುವ ಮನುಜ,
ನಿಖರ ಗುರಿ ಮೂಲಕ ಕ್ಷಣಮಾತ್ರದಲ್ಲಿ ಬೇಟೆಯನ್ನು ಮುಗಿಸಿ ಬಿಡುವ ಹುಲಿ,ಸಿಂಹಗಳನ್ನೂ ತನ್ನ ಚಮತ್ಕಾರದಿಂದ ವಶೀಕರಿಸುವ ಮನುಷ್ಯನಿಗೆ ಬುಧ್ದಿ,ವಿವೇಕ,ಶಿಕ್ಷಣ ವಿರುವ ಸಮಾಜ ವನ್ನು ಸಂವೇದನಾಶೀಲ ವರ್ತನೆ ಮೂಲಕ ಋಜುವಾದ ದಾರಿಯೇಡೆಗೆ  ಆಕರ್ಶಿಸಬಹುದು.ಆಮೂಲಕ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.ಕುರಾನ್ ಹೀಗೆ ಹೇಳುತ್ತದೆ.
وَلَا تَسْتَوِي الْحَسَنَةُ وَلَا السَّيِّئَةُ ۚ ادْفَعْ بِالَّتِي هِيَ أَحْسَنُ فَإِذَا الَّذِي بَيْنَكَ وَبَيْنَهُ عَدَاوَةٌ كَأَنَّهُ وَلِيٌّ حَمِيمٌ

ಒಳಿತು ಮತ್ತು ಕೆಡುಕು ಸಮಾನವಾಗಲಾರದು. ಅತ್ಯುತ್ತಮವಾದುದು ಯಾವುದೋ ಅದರ ಮೂಲಕ ತಾವು (ಕೆಡುಕನ್ನು) ತಡೆಯಿರಿ. ಆಗ ಯಾರ ಮತ್ತು ತಮ್ಮ ಮಧ್ಯೆ ಶತ್ರುತ್ವವಿದೆಯೋ ಅವನು (ತಮ್ಮ) ಆಪ್ತ ಮಿತ್ರನೋ ಎಂಬಂತೆ ಮಾರ್ಪಡುವನು.
ತಸ್ಲೀಮಳಂತ ತಲೆಹಿಡುಕ ಕೂಟಕ್ಕೆ ಮಾತ್ರ ಕುರಾನ್ ಬಗ್ಗೆ ಅಸಹಜ ಅಸಹನೆ ಮತ್ತುಅಸೂಯೆ ಇದೆ ಎಂದು ಒಪ್ಪಿಕೊಳ್ಳಲೇ ಬೇಕು.
ಆದರೆ ಇಸ್ಲಾಮಿನ ದರ್ಶನ ವನ್ನು ಸಮಾಜಕ್ಕೆ ತಲುಪಿಸಲು ನಮ್ಮಿಂದ ಆಗಬೇಕು.
ಕೇರಳದ ಉಗ್ರ ಮತಾಂಧ ದ್ವೇಷ ಭಾಷಣದ ಬೆಂಕಿ ಉಗುಳುವ  ಟೀಚರ್ ಮನೆಗೆ ಹೋಗಿ ಇಸ್ಲಾಮಿನ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಾಲಾಡಿಸಲು ಪ್ರಯತ್ನ ಪಟ್ಟ ಎಸ್ ಕೆ ಎಸ್ ಎಸ್  ಎಫ್ ನ ಮಾದರಿ ನಮಗೆ ಅನುಕರಣೀಯ.ಅಲ್ಲಿಂದ ಗೌರವದೊಂದಿಗೆ ಆತಿಥ್ಯ ಸ್ವೀಕರಿಸಿ ಉಪಹಾರ ಸ್ವೀಕರಿಸಿ ಬಂದಿದ್ದರೆ ಅದು ಸಮಸ್ತ ಪೋಷಕ ಸಂಘಟನೆಯ ಶಕ್ತಿಯಾಗಿದೆ‌. ಅದಲ್ಲದೇ ಹಿಂಸೆಗೆ ಹಿಂಸೆ ,ತಲವಾರಿಗೆ ತಲವಾರು ಪರಿಹಾರವಲ್ಲ.
 ಹಝ್ರತ್ ಉಮರ್( ರ ) ಪ್ರವಾದಿಯ ರುಂಡ ಕತ್ತರಿಸಲು ಮುಂದಾಗಿ ಬಂದಿಧ್ದರು ಎನ್ನುವುದಂತು ಸತ್ಯ ಆದರೆ ಅವರನ್ನು ತಡೆಯುವ ಯಾವುದೇ  ಶಕ್ತಿ ಸಾಮರ್ಥ್ಯ  ನಬಿಯವರಿಗೆ ಇರಲಿಲ್ಲ. ಆದರೆ ಉಮರ್( ರ )ರವರ ಬಲಿಷ್ಟ ತಾಕತ್ತು ಕುರಾನಿನ ಎರಡು ಸೂಕ್ತಗಳಲ್ಲಿ ಕರಗಿ ಹೋಯಿತು.

 طه مَا أَنْزَلْنَا عَلَيْكَ الْقُرْآنَ لِتَشْقَىٰ

ತಾವು ಕಷ್ಟಪಡಬೇಕೆಂದು ನಾವು ತಮಗೆ ಕುರ್ ಆನ್ ನನ್ನು ಅವತೀರ್ಣಗೊಳಿಸಿಲ್ಲ

 إِلَّا تَذْكِرَةً لِمَنْ يَخْشَىٰ

ಇದು ಭಯಪಡುವವರಿಗಿರುವ ಒಂದು ಉಪದೇಶ ಮಾತ್ರವಾಗಿದೆ.

تَنْزِيلًا مِمَّنْ خَلَقَ الْأَرْضَ وَالسَّمَاوَاتِ الْعُلَى

ಇದು ಭೂಮಿಯನ್ನು ಮತ್ತು ಉನ್ನತವಾದ ಆಕಾಶಗಳನ್ನು ಸೃಷ್ಟಿಸಿದವನ ಬಳಿಯಿಂದ ಅವತೀರ್ಣ ಗೊಂಡಿರುವುದಾಗಿದೆ.

[ತ್ವಾಹಾ : 1 - 4]
ಆ ಕುರಾನಿನ ಸಂದೇಶಗಳನ್ನು ಮನುಕುಲಕ್ಕೆ ತಲುಪಿಸಬೇಕಾಗಿದೆ.
ಹಾಗೇ   ಸುರಾಖಾಃ ಕುದುರೆ ಮೇಲೆ ಏರಿ ಬಂದರೂ ಕೈಗಟುಕುವ ಸನಿಹದಲ್ಲಿ ಇದ್ದರೂ ಪ್ರವಾದಿಯನ್ನು ಸ್ಪರ್ಶಿಸಲು ಸಾದ್ಯವಾಗಲಿಲ್ಲ.
ಹದಿಮೂರು ವರ್ಷಗಳ ಕಾಲ ಕ್ರೂರವಾಗಿ ಕೊಲ್ಲುವ,ಜೀವಂತ ಮನುಷ್ಯ ಮಕ್ಕಳನ್ನು ಹೂಳುವ,ಹೆಣ್ಣುಮಕ್ಕಳನ್ನು ಬೇಕೆಂದೆನಿಸಿದಾಗ ಬೋಗಿಸಲಿಕ್ಕಿರುವ ವಸ್ತುವಾಗಿ ಬಳಸಿಕೊಳ್ಳುವ ಕಾಲದಲ್ಲಿ ಪ್ರವಾದೀ (ಸ)ರವರು ಸತ್ಯ ಸಂದೇಶಗಳನ್ನು ನೀಡುತ್ತಾರೆ.
ಅಲ್ಲಾಹನ ದಾರಿಯನ್ನು ಕೊಡುತ್ತಾರೆ.ಆದರೆ ಜನರಿಂದ ಅವರಿಗೆ ಸಿಕ್ಕಿದ್ದು  ಊರಿನಿಂದಲೇ ಪಲಾಯನ ಮಾಡ ಬೇಕಾದ ಪರಿಸ್ಥಿತಿ. ಊರು ತೊರೆದು ಹೋಗುವಾಗಲೂ ಬೆಂಬಿಡದೇ ಸುರಾಖಾಃ ಹಿಂಬಾಲಿಸುತ್ತಾರೆ.ಸುರಾಖಾಃ ಕಿನಾನಃ ಗೋತ್ರದ ನಾಯಕರಾಗಿದ್ದರು. ಪ್ರವಾದೀ ಇನ್ನೇನು ಕೈಗೆ ಸಿಕ್ಕಿ ಬಿಟ್ಟರು ಎನ್ನುವಷ್ಟರಲ್ಲಿ ಅವರ ಕುದುರೆಯ ಕಾಲು ಭೂಮಿಯಲ್ಲಿ ಹೂತು ಹೋಗುತ್ತದೆ.ಕಡೆಗೆ ಯಾವುದೇ ದಾರಿ ಇಲ್ಲದೇ ರಕ್ಷಿಸಲು ಬೇಡುತ್ತಾರೆ.
ಪ್ರವಾದಿ (ಸ) ರವರ ಪ್ರಾರ್ಥನೆ ಮೂಲಕ ಸುರಾಖಾಃ ಬಚವಾಗುತ್ತಾರೆ.ಆಗ ನಬಿ ಹೇಳುತ್ತಾರೆ.

كيف بك إِذا لبست سِوَارَيْ كسرى ومِنْطَقَتَه وتاجه، فقال سراقة: كسرى بن هرمز؟ فقال رسول الله: نعم
ಸುರಾಖಾ ಕಿಸ್ರಾ ರಾಜನ ಬಳೆ,ಕಿರೀಟ,ಮತ್ತು ಸೊಂಟದ ಪಟ್ಟಿಯನ್ನು ನಿಮಗೆ ಧರಿಸಲ್ಪಟ್ಟಾಗ ಹೇಗೇ ?

ಕಿಸ್ರಾ ರಾಜನೇ ? ಸುರಾಖಾ ಪ್ರಶ್ನೆ.
ನಬಿ ಸ ಹೇಳಿದರು ಹೌದು.
(ನಂತರ ಖಲೀಫಾ ಉಮರ್ ರ ಕಾಲ ಮದಾಯಿನ್ ಕೈವಶ ವಾದಾಗ ಕಿಸ್ರಾ ರಾಜನ ಬಳೆ,ಕಿರೀಟ ವನ್ನು ಖಲೀಫಾ ರವರು ಸುರಾಖಾ (ರ) ತೊಡಿಸುತ್ತಾರೆ.)
ಹೀಗೆ ಅಲ್ಲಾಹನ ಧರ್ಮದ ಕಾರ್ಯವನ್ನು ಆತ ಸರಿಯಾಗೇ ನಿರ್ವಹಿಸಿದ್ದಾನೆ. ಅಲ್ಲಾಹನಿಗಾಗಿ  ಕರ್ಮ ಮಾಡುವವನು  ಆತನ ಧರ್ಮದ ನೆಲೆಯಲ್ಲಿ ಗಟ್ಟಿಯಾಗೀ ನಿಲ್ಲಬೇಕಾಗಿದೆ.
ಅಲ್ಲಾಹನು ಹೇಳುತ್ತಾನೆ.

يَا أَيُّهَا الَّذِينَ آمَنُوا إِنْ تَنْصُرُوا اللَّهَ يَنْصُرْكُمْ وَيُثَبِّتْ أَقْدَامَكُمْ

ಓ ಸತ್ಯವಿಶ್ವಾಸಿಗಳೇ!, ನೀವು ಅಲ್ಲಾಹುವಿಗೆ ಸಹಾಯ ಮಾಡುವುದಾದರೆ ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಅಚಲವಾಗಿ ನಿಲ್ಲಿಸುವನು.
ಅಲ್ಲಾಹನಿಗೆ ಸಹಾಯ ಮಾಡುವುದೆಂದರೆ ನಾವು ಉತ್ತಮ ಆದರ್ಶ ವ್ಯಕ್ತಿಗಳಾಗಿ ವರ್ತಿಸುವುದಾಗಿದೆ.

يَا أَيُّهَا الَّذِينَ آمَنُوا كُونُوا قَوَّامِينَ لِلَّهِ شُهَدَاءَ بِالْقِسْطِ ۖ وَلَا يَجْرِمَنَّكُمْ شَنَآنُ قَوْمٍ عَلَىٰ أَلَّا تَعْدِلُوا ۚ اعْدِلُوا هُوَ أَقْرَبُ لِلتَّقْوَىٰ ۖ وَاتَّقُوا اللَّهَ ۚ إِنَّ اللَّهَ خَبِيرٌ بِمَا تَعْمَلُونَ

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿಗೋಸ್ಕರ ನೆಲೆಗೊಳ್ಳುವವರೂ, ನ್ಯಾಯಕ್ಕೆ ಸಾಕ್ಷಿವಹಿಸುವವರೂ ಆಗಿರಿ. ಒಂದು ಜನತೆಯೊಂದಿಗಿರುವ ಕ್ರೋಧವು ನ್ಯಾಯ ಪಾಲಿಸದಿರಲು ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯ ಪಾಲಿಸಿರಿ. ಅದು ಧರ್ಮನಿಷ್ಠೆಗೆ ಅತ್ಯಂತ ನಿಕಟವಾಗಿದೆ. ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.

ಒಂದು ವೇಳೆ ನಾವೇ ಅಕ್ರಮಿಗಳು ಮತ್ತು ಅನಾಚಾರಿಗಳಾದರೆ ಜಯಿಸಲು  ಸಾದ್ಯ ವಾಗದು.
(ಅಲ್ಮಾಯಿದಾ :೮)
ವರದಿ ಅಲ್ ಅಹ್ಸನ್ ಮಾಸಿಕ

ರಕ್ತದ ಹೆಸರಲ್ಲಿ ರಾಜಕೀಯ ಮಾಡುವ ಬದಲು ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ ನಡೆಯಲಿ.



ಮನುಷ್ಯನನ್ನು ಮುಗಿಸುವ ಮಾದಕ ಮಾಫಿಯಾದ ವಿರುದ್ಧ ಯಾಕೆ ಹೋರಾಟ,ಪ್ರತಿಭಟನೆಗಳು ನಡೆಯಲ್ಲ?
ಭಾಷಣ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಜಗತ್ತಿನಲ್ಲಿ ಕೋಟ್ಯಾನು ಕೋಟಿ ಜೀವ ಸಂಕುಲವನ್ನು ಸೃಷ್ಟಿಸಿದ ಅಲ್ಲಾಹನು ಯಾವ ಜೀವಿಗೂ ಕೊಡದೇ ಮನುಷ್ಯನಿಗೆ ಮಾತ್ರ ಕೊಟ್ಟ ಅತ್ಯಮೂಲ್ಯ ವಸ್ತು ಬುದ್ಧಿ ಎನ್ನುವುದಾಗಿದೆ.ಅದನ್ನು ಕೈಯಿಂದ ಜಜ್ಜಲಾಗದು,ಕತ್ತಿಯಿಂದ ಕೊಯ್ಯಲಾಗದು ಅಂತಹಾ ಬುದ್ಧಿಯನ್ನು ಅಮಲು ಉಪಯೋಗಿಸಿ ನಾಶಮಾಡುವುದು ಮಹಾ ದರಂತವೇ ಆಗಿದೆ.

ಕುರಾನ್ ಅಮಲು ಉಪಯೋಗದ ಬಗ್ಗೆ ಹೀಗೆನ್ನುತ್ತದೆ.

إِنَّمَا يُرِيدُ الشَّيْطَانُ أَنْ يُوقِعَ بَيْنَكُمُ الْعَدَاوَةَ وَالْبَغْضَاءَ فِي الْخَمْرِ وَالْمَيْسِرِ وَيَصُدَّكُمْ عَنْ ذِكْرِ اللَّهِ وَعَنِ الصَّلَاةِ ۖ فَهَلْ أَنْتُمْ مُنْتَهُونَ

ಸೈತಾನನು ಇಚ್ಛಿಸುವುದು ಮದ್ಯ ಮತ್ತು ಜೂಜಾ ಟದ ಮೂಲಕ ನಿಮ್ಮ ಮಧ್ಯೆ ಶತ್ರುತ್ವ ಹಾಗೂ ವಿದ್ವೇಷ ವನ್ನು ಬಿತ್ತಲು ಮತ್ತು ಅಲ್ಲಾಹುವಿನ ಸ್ಮರಣೆ ಹಾಗೂ ನಮಾಝ್ ನಿಂದ ನಿಮ್ಮನ್ನು ತಡೆಯಲು ಮಾತ್ರವಾಗಿದೆ. ಆದ್ದ ರಿಂದ ನೀವು (ಅವುಗಳನ್ನು) ನಿಲ್ಲಿಸಲು ಸಿದ್ಧರಿರುವಿರಾ?

ಮದ್ಯ ಸೇವನೆಯಂತೆ ಡ್ರಗ್ಸ್ ಕೂಡಾ ಬಯಾನಕವಾಗಿದೆ.

وقال النووي في المجموع: "وأما ما يزيل العقل من غير الأشربة والأدوية، كالبنج وهذه الحشيشة المعروفة فحكمه حكم الخمر في التحريم.

ಬುದ್ದಿಯನ್ನು ನಾಶ ಮಾಡುವ  ರೀತಿಯ ಎಲ್ಲಾ ಪಾನೀಯ, ಮದ್ದು ಅಲ್ಲದ ಅಮಲು ಪದಾರ್ಥ, ಗಾಂಜಾ ಮುಂತಾದವು ಗಳ ವಿಧಿಯೂ ಮದ್ಯದಂತೆ ನಿಶಿಧ್ಧವಾಗಿದೆ. ಎಂದು ಇಮಾಂ ನವವೀ (ರ) ವಿವರಿಸುತ್ತಾರೆ.

ಹದೀಸಿನಲ್ಲಿ ಎಲ್ಲಾ ಅಮಲು ಭರಿಸುವ ವಸ್ತು ನಿಶಿಧ್ಧವೆಂದು ಹೇಳಿದೆ.
نهى رسول الله - صلى الله عليه وسلم - عن كل مسكر ومفتر
ಜಗತ್ತಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವಲೋಕಿಸಿದರೆ ಗಾಬರಿಯಾಗುತ್ತಿದೆ ಸಹಸ್ರಾರು ವರ್ಷಗಳಿಂದ ಧರ್ಮಶ್ರಧ್ದೆಯ ಮೂಲಕ ಜನ ನಾಗರಿಕತೆ ಮತ್ತು ಸಂಸ್ಕಾರ ನೆಲೆನಿಂತಿದ್ದರೆ ಇದೀಗ ಧರ್ಮ, ನೀತಿ, ರೀತಿ ರಿವಾಜು ಹಳೆಯದಾಗುತ್ತಿದೆ.ಅಧಿಕಾರಕ್ಕಾಗಿ ಧರ್ಮವನ್ನು ಎಳೆತಂದಾಗ ಧರ್ಮಕ್ಕೂ ಬೆಲೆ ಇಲ್ಲ ಮನುಷ್ಯನಿಗೂ ನೆಲೆ ಇಲ್ಲದಾಗಿದೆ.ದ್ವೇಷ ಕ್ಕಾಗಿ ಮನುಷ್ಯ ಮನಸ್ಸಿನಲ್ಲಿ ವಿಷವನ್ನು ತುಂಬಿದ ಕಾರಣ ಅಪರಾಧಗಳು ಸರ್ವೇಸಾಮಾನ್ಯ ವಾಗಿ ಬಿಟ್ಟಿದೆ.ಅದರೊಟ್ಟಿಗೆ ಮಹಾಮಾರಿ ಡ್ರಗ್ಸ್ ಮಾಫಿಯಾ ಸಮಾಜವನ್ನೇ ಆಪೋಶನ ತೆಗೆದುಕೊಳ್ಳವಂತೆ ಬ್ರಹತ್ತಾಗಿ ಜಗತ್ತಿನಾದ್ಯಂತ ಬೆಳೆಯುತ್ತಿದೆ.
ಅದರ ಮುಂದೆ ಯಾವ ನಾಗರಿಕತೆ,ಸಂಸ್ಕಾರ ಯಾವುದೂ ಉಳಿಯುವ ಬಗ್ಗೆ ಗಾಬರಿ ಇದೆ.ವಿಶೇಷವಾಗಿ ದೇಶ ಅಮಲಿಗೆ ಬಲಿಯಾಗತ್ತಿದೆ. ಅದರಲ್ಲೂ ಯುವ ಸಮೂಹ!ಅದು ನಮ್ಮ ಮನೆ ಬಾಗಿಲಿಗೇ ಬಂದು ಮುಟ್ಟಿದೆಯೆಂದು ಬಾಸವಾಗುತ್ತದೆ . ರಸ್ತೆಗಳಲ್ಲಿ ಹೆಣಗಳು ಒಂದರ ಮೇಲೊಂದಂತೆ ಬೀಳುತ್ತಿದೆ.ಹಾಲಿಗಿಂತ ಸಲೀಸಾಗಿ ಮಾದಕವಸ್ತು ಲಭ್ಯವಾಗುತ್ತಿದೆ.ಗೋವಾ,
ಆಂದ್ರಪ್ರದೇಶ,ಪಂಜಾಬ್ ಅದರ ಕೆಂದ್ರ ವಾಗಿ ಆ ಮೂಲಕ ವಾಯು ,ಜಲ ,ನೆಲ ಮಾರ್ಗ ಮೂಲಕ ಸರಬರಾಜು ನಡೆಯುತ್ತಿದೆ.
ಅಂಗಡಿ, ಗೂಡಂಗಡಿ ,ಮಾಲು ಮಾರ್ಕೇಟು,ನಗರ ಮತ್ತು ಹಳ್ಳಿಗಳಲ್ಲಿ ಎಗ್ಗಿಲ್ಲದೇ ಗಾಂಜಾ ಹಾವಳಿ ನಡೆಯುತ್ತಿದೆ.
ಶಾಲಾ ಕಾಲೇಜು ಕ್ಯಾಂಪಸುಗಳಿಗೂ ಸಪ್ಲೈಮಾಡಲಾಗುತ್ತಿದೆ.ಈ ಮಹಾ ಮಾರಿಯ ಬಗ್ಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ಮೌನವಹಿಸುವುದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಧರ್ಮದ ಹೆಸರಿನ ಕೊಲೆಗಳ ಬಗ್ಗೆ ಮಾತ್ರ ಇಲ್ಲಿ ಚರ್ಚೆಯಾಗುತ್ತದೆ.ರ‌್ಯಾಲಿಗಳು ನಡೆಯುತ್ತದೆ.ಗದ್ದಲ ಗಲಾಟೆ ಪ್ರತಿಭಟನೆ?. ಆದರೆ ಮಾದಕ ವಸ್ತುಗಳ ದಂಧೆಯ ಬಗ್ಗೆ ಗೊತ್ತಿದ್ದೂ ಅಥವಾ ರಾಜಕೀಯ ಪುಡಾರಿಗಳ ಒತ್ತಡದ ಕಾರಣವಾಗಿ ಇಲ್ಲವೇ ಸರಕಾರದ ನಿರ್ಲಕ್ಷದಿಂದಲೋ ಡ್ರಗ್ಸ್ ಮಾಫಿಯಾ ಹೆಣಗಳು ಬೀಳುತ್ತಿದ್ದರೂ ಯಾವುದೇ ಕ್ರಮಗಳನ್ನು ಸಂಬಂಧ ಪಟ್ಟವರು ಕೈಗೊಳ್ಳುತ್ತಿಲ್ಲ. ಇದರ ನೇರ ಹೊಣೆ ಸರಕಾರವೇ ಆಲ್ಲವೇ?

ಟ್ರಂಪ್ ಮತ್ತು ಕಿಮ್ ಯುದ್ಧ ದಾಹಿಗಳಾಗಿ ಎಗರಾಡುತ್ತಿದ್ದಾರೆ. ಸರ್ವನಾಶದ ಮಾತನ್ನಾಡುತ್ತಿದ್ದಾರೆ ಆದರೆ ಅದಕ್ಕಿಂತಲೂ ದೊಡ್ಡ ಅನಾಹುತ ಮಾದಕವಸ್ತು ಸಂಬಂಧಿತ ಜಾಲದ ಸವಾಲಾಗಿದೆ. ಕಾರಣ ಯುದ್ದದಲ್ಲಿ ಮನುಷ್ಯರು ಸತ್ತರೆ ಅಮಲಿನಲ್ಲಿ ಮನುಷ್ಯತ್ವ ಸಾಯುತ್ತದೆ.
ಜಗತ್ತಿನ ಎರಡು ಹುಚ್ಚರ ಆಟ ನೋಡಿದರೆ ಮೂರನೆಯ ಮಹಾ ಯುದ್ಧ ಬೇಗನೇ ಬರುತ್ತದೋ ಎಂದು ಭಯವಾಗುತ್ತದೆ.
ಒಮ್ಮೆಐನ್‍ಸ್ಟೈನ್ ನೊಂದಿಗೆ ಯಾರೋ ಕೇಳಿದರು . ಮೂರನೆಯ ಮಹಾಯುದ್ಧದ ಅಯುಧಗಳೇನು? ಆಗ ಖ್ಯಾತ ವಿಜ್ಞಾನಿ ಹೇಳಿದ ಉತ್ತರ "ಮೂರನೆಯ ಯುದ್ಧದ ಆಯುಧ ಬಗ್ಗೆ ನನಗೆ ಗೊತ್ತಿಲ್ಲ.ಆದರೆ ನಾಲ್ಕನೇಯ ಯುದ್ಧ ದ ಆಯುಧ ಕಲ್ಲು ಮತ್ತು ಮರದ ತುಂಡುಗಳು ಆಗಿರಬಹುದು" ಅದು ಹೇಗೆ  ಎಂದು ಕೇಳಿದಾಗ ಮೂರನೆಯ ಯುದ್ಧದಲ್ಲಿ ಎಲ್ಲವೂ ನಾಶವಾಗಲಿದೆ
ಎಂದಾಗಿತ್ತು ಉತ್ತರ.ಆದರೆ ಅಮಲು ಪದಾರ್ಥ ಮೂಲಕ ಮುಂದಿನ ಯುಧ್ಧಕ್ಕೆ ಏನೂ ಉಳಿಯದು ಎನ್ನುವುದಂತು ಸತ್ಯ.

ಯಾವುದಾದರೊಬ್ಬ ರಾಜಕೀಯ ನಾಯಕನ ಮೇಲೆ ಯಾವುದಾದರೊಂದು ಆರೋಪ,(ಅದು ಮೊಬೈಲ್ ವಾಚು ಆಗಬಹುದು,)ಹಾಗೇ ಯಾರಾದರೂ ಅನೈತಿಕ ಸಂಬಂಧವನ್ನೋ, ಆತ್ಮಹತ್ಯೆ ಪ್ರೇರಣೆ ಆರೋಪವನ್ನೋ ಹೊರಿಸಿದರೆ ಗಂಟೆಗಟ್ಟಲೆ ಚಿತ್ರ ವಿಚಿತ್ರ ವಾರ್ತೆಯಾಗಿ ,ಡಿಬೇಟಾಗಿ ,ಬಿತ್ತರಿಸುವ ಚಾನಲುಗಳು!.ಯಾವುದಾದರೊಂದು ಹೆಣ್ಣು ಮಗಳ ಮೇಲೆ ಕಿರುಕುಳ ಕೇಸು ಸಿಕ್ಕರೆ ಗೌಪ್ಯತೆಯನ್ನು ಗೌರವಿಸದೇ ಸಂತ್ರಸ್ತೆಯನ್ನು ಸ್ಟುಡಿಯೋದಲ್ಲಿ ಕೂರಿಸಿ ಅಥವಾ ಫೋನಾಯಿಸಿ ಇನ್ನಷ್ಟು   ಸತಾಯಿಸುವ ರೀತಿಯಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ  ಎಕ್ಸ್ಲ್ ಕ್ಯೂಸಿವ್ ವರದಿಯಾಗಿ ಬಿತ್ತರಿಸುವ ಮೀಡಿಯಾ ಗಳು ?ಇನ್ನು ಯಾವದಾದರೊಂದು ಊಹಾಪೋಹ ವರದಿಯು ಮುಸ್ಲಿಂ ಸಮುದಾಯದ ಬಗ್ಗೆ ಬಂದರೆ ಸತ್ತ ಕಾಗೆ ಬಳಿ ಅರಚುವ ಕಾಗೆಗಳಂತೆ ಅಥವಾ ಮೈಮೇಲೆ ಬಂದಂತೆ ವರ್ತಿಸುವ ಜರ್ನಲಿಸ್ಟುಗಳು,  ಯಾಕೆ ಮಾದಕ ಜಾಲದ ಹಿಂದೆ ಕಾರ್ಯಾಚರಿಸುತ್ತಿಲ್ಲ ಅದರ ಬೆನ್ನತ್ತಿ ಹೋಗುವುದಿಲ್ಲ.?

ಮಾನವೀಯತೆ ಮತ್ತು ನಾಗರಿಕತೆ ಯನ್ನು ಕಾಪಾಡಬೇಕಾದ ಧರ್ಮವೇ ಅಮಲಿಗೆ ಬಲಿಯಾಗುವುದೇ?
ಅದು ದೊಡ್ಡ ದುರಂತವಾಗಬಹುದು.ಸ್ವಾಮೀ ವಿವೇಕಾನಂದರು ಹೀಗೇ ಬರೆಯುತ್ತಾರೆ.
ಬಾರತವು ಸಾಯುವುದೇ ?ಹಾಗೇನಾದರೂ ಆದರೆ ಪ್ರಪಂಚದ ಎಲ್ಲಾ ಅಧ್ಯಾತ್ಮ ವೂ ನಿರ್ನಾಮವಾಗುವುದು.ಎಲ್ಲಾ ನೈತಿಕತೆ ನಷ್ಟವಾಗುವುದು.ಎಲ್ಲಾ ಮತಗಳ ಬಗ್ಗೆ ಮಧುರ ಅನುಕಂಪವೂ ನಾಶವಾಗುವುದು‌. ಎಲ್ಲಾ ಆದರ್ಶ ತತ್ವಗಳು ‌ನಿರ್ನಾಮವಾಗುವುದು.ಲೈಂಗಿಕ ಕಾಮ ಸುಖ ಭೋಗಗಳೇ ಗಂಡು ಹೆಣ್ಣು ದೇವತೆಗಳಾಗಿ ,ಹಣವು ಅದರ ಪೂಜಾರಿಯಾಗಿ,ಮೋಸ ಬಲತ್ಕಾರ ಮತ್ತು ಸ್ಪರ್ಧೆ ಗಳು ಪೂಜಾ ಕ್ರಮವಾಗಿ ಮಾನವ ಆತ್ಮ ಬಲಿಪಶುವಾಗುವುದು.

ಎಲ್ಲಾ ಧರ್ಮಾದವರೂ ಒಂದಾಗಿ ಹೋರಾಡಬೇಕಾದದ್ದು ಅಮಲು ಹಾವಳಿಯ ಬಗ್ಗೆ. ಅದನ್ನು ಮಾಡದಿದ್ದರೆ ಧರ್ಮ ಧರ್ಮ ಅಂತ ಹೊಡೆದಾಡಲು ಯಾರೂ ಉಳಿಯಲ್ಲ.ಅಮಲು ಮಾಫಿಯಾದಲ್ಲಿ ಮನುಷ್ಯತ್ವವೇ ನಾಶವಾಗುತ್ತಿರುವಾಗ ,ಕೆಲವರು ರಕ್ತದ ಹೆಸರಿನಲ್ಲಿ ರಾಜಕೀಯದಾಟ ನಡೆಸಿದರೆ .ಇನ್ನೊಂದು ಕಡೆ ಕೆಲವರು ಉಗ್ರ ಕ್ರಮ,ಕಟ್ಟು ನಿಟ್ಟಿನ ಕ್ರಮ,ಮುಲಾಜಿಲ್ಲದೇ ಕ್ರಮ ಅಂತ ರಾಗ ಎಳೆದು ಜನರನ್ನು ವಂಚಿಸುತ್ತಾರೆ ?.
ಕಾನೂನು ಸುವ್ಯವಸ್ಥೆ ಯನ್ನು ಕಾಪಾಡಬೇಕಾದವರು ಅಮಲು ಮಾರಟಗಾರರ ಏಜನ್ಸಿಗಳಾಗುತ್ತಾರೆಯೇ ?
.
ಇದೀಗ ಧರ್ಮದ ಹೆಸರಲ್ಲಿ ರಾಜಕೀಯ ಮಾಡದೇ ,ಜನರನ್ನು ಪರಸ್ಪರ ಒಡೆಯದೇ ಮಾದಕ ಜಾಲವನ್ನು ಭೇಧಿಸಲು ಎಲ್ಲರೂ ಒಂದಾಗಬೇಕಾಗಿದೆ.ಇಲ್ಲವಾದರೆ ಧರ್ಮವೂ ಉಳಿಯದು ಮನುಷ್ಯತ್ವವೂ ಉಳಿಯದು.
ಅಪಘಾತವಾದರೆ
ಜೀವ ಉಳಿಸಲು ಹರಸಾಹಸ ಪಡುತ್ತಾರೆ,ಜೈಲು ಸೇರಿದರೆ ಅರೋಪ ಮುಕ್ತವಾಗಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ ? ಆದರೆ ಮನಷ್ಯತ್ವವನ್ನು ಕಾಪಾಡಲು ನಾವೇನು ಮಾಡುತ್ತಿದ್ದೇವೆ?ಅದಕ್ಕಾಗಿ ಏಕೆ ಹೋರಾಡಬಾರದು.?
ಒಂದು ಪ್ರದೇಶದಲ್ಲಿ ಈ ತರದ ಅಮಲು ದಂಧೆ ನಡೆಯುತ್ತಿದ್ದರೆ  ಅದಕ್ಕೆ ನೇರ ಹೊಣೆ ಸರಕಾರ ಮತ್ತು ಪ್ರಾದೇಶಿಕ ಆಡಳಿತ ಹಾಗೂ ಕಾನೂನು ಪಾಲಕ ಕೇಂದ್ರಗಳೇ ಕಾರಣವಾಗಬೇಕಿದೆ.
ಆದರೆ ಪುಂಡ ಪಟ್ಟಿಂಗರನ್ನು ಬೆಳೆಸುವುದು ಕೆಲ ರಾಜಕಾರಣಿಗಳು ಮತ್ತು ಪೋಲಿಸ್ ಠಾಣೆಗಳು ಎಂದು ಜನ ಆಡಿಕೊಳ್ಳುತ್ತಾರೆ.
ಸಾಮಾಜಿಕ ಭದ್ರತೆ ಒದಗಿಸಬೇಕಾದ ಸರಕಾರ ಇದಕ್ಕೆ ಬಧ್ಧವಾಗಬೇಕಿದೆ.

قُلْ إِنَّمَا حَرَّمَ رَبِّيَ الْفَوَاحِشَ مَا ظَهَرَ مِنْهَا وَمَا بَطَنَ وَالْإِثْمَ وَالْبَغْيَ بِغَيْرِ الْحَقِّ

ಹೇಳಿರಿ: ‘ನನ್ನ ಪ್ರಭು ನಿಷಿದ್ಧಗೊಳಿಸಿರುವುದು ಪ್ರತ್ಯಕ್ಷವಾಗಿರುವ ಮತ್ತು ಪರೋಕ್ಷವಾಗಿರುವ ನೀಚಕೃತ್ಯ ಗಳು, ಪಾಪಕೃತ್ಯಗಳು, ಅನ್ಯಾಯವಾದ ದಬ್ಬಾಳಿಕೆಗಳು ಆಗಿವೆ.

🎆 ವರದಿ ಅಲ್ ಅಹ್ಸನ್ ಮಾಸಿಕ

ಅಪಪ್ರಚಾರಗಳಿಂದ ಇಸ್ಲಾಮನ್ನು ಕಟ್ಟಿ ಹಾಕಲಾಗದು; ಆದಿರಾ ಎತ್ತಿದ ಪ್ರಶ್ನೆಗಳಿಗೆ ಆಧಾರ ಸಹಿತ ದಿಟ್ಟ ಉತ್ತರ.

ಮೌಲಾನಾ ಯು ಕೆ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಐತಿಹಾಸಿಕ ವಿಜಯಗಳ ಚರಿತ್ರೆಯನ್ನು ಬರೆಯಲ್ಪಟ್ಟ,
ಜಗತ್ತಿನ ಅತ್ಯದ್ಭುತ ಘಟನೆಗಳಿಗೆ ಸಾಕ್ಷಿಯಾದ,
ದಮನಿತ, ಘೋಷಿತ ಅಸಹಾಯಕ ಜನ ವರ್ಗಕ್ಕೆ ಆಶಾಕಿರಣ ನೀಡುವ ತಿಂಗಳು ಪವಿತ್ರ ಮುಹರ್ರಂ.
ಜಗದೊಡೆಯನ ಅಸ್ತಿತ್ವದ ವಿರುದ್ಧ ಶಕ್ತಿ ಪ್ರದರ್ಶಿಸಿದ ಅಹಂಕಾರಿಗಳ ಸದ್ದಡಗಿದ್ದು ಇದೇ ಮುಹರ್ರಮ್ ನಲ್ಲಿ.ಅಗ್ನಿ ಪರೀಕ್ಷೆಗೆ ಬಲಿಯಾದ ಹಜ್ರತ್ ಖಲೀಲಿಲ್ಲಾಹಿ ಇಬ್ರಾಹಿಂ (ಅ ) ಏಳು ದಿವಸಗಳ ನಂತರ ಬೆಂಕಿಯ ಕೆನ್ನಾಲೆಯಿಂದ ಒಂದು ರೋಮವೂ ಸುಡದಂತೆ ಹೊರಬಂದದ್ದು ಇದೇ ಮುಹರ್ರಂ ತಿಂಗಳಿನಲ್ಲಿ.

ಸತ್ಯ ಧರ್ಮದ ಉಳಿವಿಗಾಗಿ ನಡೆದ ಅನೇಕ ರೋಮಾಂಚಕ ಘಟನೆಗಳಿಗೆ ಈ ಮಾಸ ಸಾಕ್ಷಿಯಾಗಿದೆ. ಇಸ್ಲಾಮಿನ ವಿರುದ್ಧವಾಗಿ ಯಾರು ದ್ವನಿ ಎತ್ತಿದರೂ ಅದು ಫಲ ನೀಡದು ಎನ್ನುವದು ಕಾಲ ಕಂಡ ಸತ್ಯ.

ಇತ್ತೀಚಿನ ಕೆಲ ದಿನಗಳಲ್ಲಿ ಚರ್ಚೆಗೆ ಗ್ರಾಸವಾದ ವಸ್ತು ಕಾಸರಗೋಡಿನ ಉದುಮಾ ನಿವಾಸಿ ಆದಿರಾ !

ಆದಿರಾ  ಎಂಬ ಹೆಣ್ಣು ಮಗಳು ತನ್ನ ಇಷ್ಟದಂತೆ ಇಸ್ಲಾಮಿಗೆ ಮತಾಂತರ ಗೊಂಡಿದ್ದಳು. ನಂತರ ಮನೆ ಬಿಟ್ಟ ಆದಿರಾ ಆಯಿಷಾ ಆಗಿ ಕೋರ್ಟಿಗೆ ಹಾಜರಾಗುತ್ತಾಳೆ.ನನ್ನ ಸ್ವ ಇಚ್ಚೆಯಿಂದಲೇ ಮತಾಂತರಗೊಂಡಿದ್ದೇನೆ ಎಂದು ಹೇಳಿಕೆ ಕೊಡುತ್ತಾಳೆ.ನನ್ನ ಮುಂದಿನ ಅದ್ಯಯನ ಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರ್ಟಿನೊಂದಿಗೆ ವಿನಂತಿ ಮಾಡುತ್ತಾಳೆ. ನಂತರ ಹೆತ್ತವರ ಸುಪರ್ದಿಗೆ ಕೊಡಲಾಗುತ್ತದೆ.ಅಲ್ಲಿಂದ ಒಂದು ಆಶ್ರಮದಲ್ಲಿ ಕೆಲಕಾಲ ಹೆಚ್ಚಿನ ಅದ್ಯಯನ ಕ್ಕಾಗಿ ಸೇರಿಕೊಳ್ಳುತ್ತಾಳೆ. ನಂತರ ಪುನಃ ಆದಿರಳಾಗಿ ಚಾನಲ್ ಮುಂದೆ ಪ್ರತ್ಯಕ್ಷಳಾಗುತ್ತಾಳೆ.ಹಾಗೇ ತನ್ನ ಸಂದರ್ಶನವನ್ನು ನೀಡುತ್ತಾಳೆ.
ಈ ಮಧ್ಯೆ ಆದಿರಾ ವಿಷಯದಲ್ಲಿ ಉಗ್ರ,ಜಿಹಾದ್,ಬಲಾತ್ಕಾರ ಐಸಿಸ್ ಎಂಬಿತ್ಯಾದಿ ಚರ್ಚೆಗಳು ಧಾರಾಳವಾಗಿ ನಡೆದಿತ್ತು..ಅದೆಲ್ಲವೂ ಅಪ್ರಸ್ತುತ ಎಂದು ಆದಿರಳ ಮಾತಿನಿಂದ ಬಯಲಾಯಿತು.ಮತ್ತೆ ತನ್ನ ಸಹಾಯಕ್ಕೆ ಬಂದವರು ಸಹಪಾಟಿಗಳಿರಬಹುದು,ಪರಿಚಯದವರೂ ಇರಬಹುದು.ಅದೆಲ್ಲಾ ಸಹಜವಾದ ಸಂಗತಿಗಳು. ಇದ್ಯಾವುದು ನಮ್ಮ ಚರ್ಚೆಯ ವಿಷಯವಲ್ಲ.
ಆದಿರ ಆಯಿಷಾ ಆದರೂ ಆಯಿಷಾ ಆದಿರಾ ಆದರೂ ನಮಗೇನು ?
ಅಂತಹಾ ಸಂಗತಿಗಳು ನಡೆಯುತ್ತಲೇ ಇದೆ.ಅದು ಅವರವರ ವ್ಯಕ್ತಿ ಸ್ವಾತಂತ್ರ್ಯ. ಯಾರೂ ಪ್ರಶ್ನಿಸುವಂತಿಲ್ಲ.
ಆದರೆ ಆದಿರ ಕೊಟ್ಟ ಹೇಳಿಕೆಗಳು ಅವಳ ಮಾತ್ರ ಅಭಿಪ್ರಾಯವಾಗಿದ್ದರೂ ,ಬೇರೆಯವರು ಆ ರೀತಿ ಸಿದ್ದಪಡಿಸಿದ್ದೇ ಆಗಿದ್ದರೂ ಅದು   ಖಂಡನೀಯ.
ಕಾರಣ ಆದಿರಾ ಯಾವ ಧರ್ಮವನ್ನು ಬೇಕಾದರೂ ಅಪ್ಪಿಕೊಳ್ಳಬಹುದು. ಆದರೆ ಯಾವುದೇ ಧರ್ಮದ ಬಗ್ಗೆ ಅಪಕ್ವವಾದ ಆರೋಪಗಳನ್ನು ಮಾಡಬಾರದೆಂಬ ಕಾರ್ಯವನ್ನು ನಾವು ಎತ್ತಿಹಿಡಿಯುತ್ತೇವೆ.
ಮತ್ತು ಆರೋಪಗಳಿಗೆ ಉತ್ತರವನ್ನು  ಕೊಡಬೇಕಾದುದು ನಮ್ಮ ಕರ್ತವ್ಯವಾಗಿರುತ್ತದೆ.
ಇಸ್ಲಾಮಿನಲ್ಲಿ ಸ್ತ್ರೀಯರಿಗೆ ಸಮಾನತೆ ಸ್ವಾತಂತ್ರ್ಯ ಇಲ್ಲ ಎನ್ನುವುದು  ಆದಿರಾಳ ಮೊದಲ ಆರೋಪ.
ಇದರ ನಿಜಾಂಶವೇನೆಂದು ತಿಳಿಯೋಣ.
ಮನುಷ್ಯ ಸೃಷ್ಟಿ ಯ ಬಗ್ಗೆ ಕುರಾನ್ ಹೀಗೆನ್ನುತ್ತದೆ.

لَقَدْ خَلَقْنَا الْإِنْسَانَ فِي أَحْسَنِ تَقْوِيمٍ

ಖಂಡಿತವಾಗಿಯೂ ನಾವು ಮನುಷ್ಯನನ್ನು ಅತ್ಯುತ್ತಮ ರಚನೆಯೊಂದಿಗೆ ಸೃಷ್ಟಿಸಿರುವೆವು.

وَلَقَدْ كَرَّمْنَا بَنِي آدَمَ وَحَمَلْنَاهُمْ فِي الْبَرِّ وَالْبَحْرِ وَرَزَقْنَاهُمْ مِنَ الطَّيِّبَاتِ وَفَضَّلْنَاهُمْ عَلَىٰ كَثِيرٍ مِمَّنْ خَلَقْنَا تَفْضِيلًا

ಖಂಡಿತವಾಗಿಯೂ ನಾವು ಆದಮ್ ಸಂತತಿಗಳನ್ನು ಗೌರವಿಸಿರುವೆವು. ಅವರನ್ನು ನಾವು ಸಮುದ್ರದಲ್ಲೂ, ನೆಲದಲ್ಲೂ ವಾಹನದಲ್ಲಿ ವಹಿಸಿರುವೆವು. ವಿಶಿಷ್ಠ ವಸ್ತು ಗಳಿಂದ ಅವರಿಗೆ ನಾವು ಅನ್ನಾಧಾರವನ್ನು ಒದಗಿಸಿರುವೆವು. ನಾವು ಸೃಷ್ಟಿಸಿದವುಗಳ ಪೈಕಿ ಹೆಚ್ಚಿನವರಿಗಿಂತಲೂ ಅವರಿಗೆ ನಾವು ವಿಶೇಷ ಶ್ರೇಷ್ಠತೆಯನ್ನು ದಯಪಾಲಿಸಿರುವೆವು.
ಇಲ್ಲಿ ಕುರಾನ್ ಯಾವುದೇ ರೀತಿಯ ಭೇದ ತೋರುವುದಿಲ್ಲ.ಮನುಷ್ಯನ ಸೃಷ್ಟಿ ಮತ್ತು ಅನುಗ್ರಹ ಎಲ್ಲವೂ  ಗಂಡು ಹೆಣ್ಣಿಗೆ ಸಮಾನವಾಗಿದೆ.
ಇನ್ನು ಪ್ರತಿಫಲದ ಬಗ್ಗೆ ಯೂ ಕುರಾನ್ ಸಮಾನವಾಗಿ ಕಾಣುತ್ತದೆ.
مَنْ عَمِلَ صَالِحًا مِنْ ذَكَرٍ أَوْ أُنْثَىٰ وَهُوَ مُؤْمِنٌ فَلَنُحْيِيَنَّهُ حَيَاةً طَيِّبَةً ۖ وَلَنَجْزِيَنَّهُمْ أَجْرَهُمْ بِأَحْسَنِ مَا كَانُوا يَعْمَلُونَ
(ಅನ್ನಹ್ಲ್ :೯೭)

ಗಂಡಾಗಲಿ, ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿರುತ್ತಾ ಯಾರು ಸತ್ಕರ್ಮಗಳನ್ನು ಮಾಡುವರೋ ಖಂಡಿತವಾಗಿಯೂ ನಾವು ಆ ವ್ಯಕ್ತಿಗೆ ಉತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು.ಪ್ರತಿಯೋರ್ವರ ಜವಾಬ್ದಾರಿ ಯೂ ಸಮಾನವೆಂಬುದು ಕುರಾನ್ ಉಲ್ಲೇಖಿಸುತ್ತದೆ.

 وَلَهُنَّ مِثْلُ الَّذِي عَلَيْهِنَّ بِالْمَعْرُوفِ ۚ وَلِلرِّجَالِ عَلَيْهِنَّ دَرَجَةٌ ۗ ﻭﺍﻟﻠﻪعزيز ﺣﻜﻴﻢ.

ಸ್ತ್ರೀಯರಿಗೆ ಪತಿಯಂದಿರೊಂದಿಗೆ) ಬಾಧ್ಯತೆಗಳಿರುವಂತೆ ಅವರಿಗೆ ಸಿಗಬೇಕಾದ ನ್ಯಾಯಬದ್ಧ ಹಕ್ಕುಗಳೂ ಇವೆ. ಆದರೆ ಪುರುಷರಿಗೆ ಅವರಿಗಿಂತ ಹೆಚ್ಚಿನ ಒಂದು ಪದವಿಯಿದೆ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

ಹೆಣ್ಣು ಮಕ್ಕಳನ್ನು ಸಾಕಿದರೆ ಅಂತ್ಯ ದಿನದಲ್ಲಿ ಪ್ರವಾದಿ ಜೊತೆ ಸೇರಬಹುದು.
ಮಡದಿಯ ಬಾಯಲ್ಲಿ ಇಡುವ ಪ್ರತೀ ತುತ್ತಿಗೆ ಪುಣ್ಯವಿದೆ.
ಇದು ಪುಣ್ಯ ಪ್ರವಾದಿಯ ಶ್ರೇಷ್ಠ ವಚನಗಳು.
ವೈವಾಹಿಕ ಬದುಕಿನಲ್ಲಿ ಗಂಡ ಹೆಂಡತಿ ಸಮಾನರು.ಕುರಾನ್ ಹೇಳುತ್ತದೆ.
هُنَّ لِبَاسٌ لَكُمْ وَأَنْتُمْ لِبَاسٌ لَهُنَّ ۗ

ಅವರು ನಿಮಗೊಂದು ಉಡುಪಾಗಿ ರುವರು. ಮತ್ತು ನೀವು ಅವರಿಗೊಂದು ಉಡುಪಾಗಿರುವಿರಿ.
ಇನ್ನು ಜವಾಬ್ದಾರಿ ವಿಚಾರದಲ್ಲಿ ನೋಡಿದರೆ
ಹೆಂಡತಿಯ ಸಂಪಾದನೆ ಅವಳಿಗೆ ಮಾತ್ರವಾಗಿರುತ್ತದೆ.
ಗಂಡನಾದವನು ಸಂಪೂರ್ಣ ಖರ್ಚು ವೆಚ್ಚವನ್ನು ನಿಭಾಯಿಸುವುದರೊಂದಿಗೆ ತಂದೆಯ ಸೊತ್ತಿನಲ್ಲಿ ಹೆಣ್ಣು ಪಾಲು ಪಡಯುತ್ತಾಳೆ.
ಗಂಡಾದವನು ಹೆಣ್ಣಿನ ಒಂದಂಶ ಜಾಸ್ತಿ ಪಡೆದರೂ ಖರ್ಚನ್ನು ಭರಿಸುವ ಜವಾಬ್ದಾರಿ ಹೊಂದಿರುತ್ತಾನೆ.
ಕುರಾನ್ ಹೇಳುತ್ತದೆ.
الرِّجَالُ قَوَّامُونَ عَلَى النِّسَاءِ بِمَا فَضَّلَ اللَّهُ بَعْضَهُمْ عَلَىٰ بَعْضٍ وَبِمَا أَنْفَقُوا مِنْ أَمْوَالِهِمْ ۚ

ಅಲ್ಲಾಹು ಮನುಷ್ಯರ ಪೈಕಿ ಒಂದು ವರ್ಗವನ್ನು ಇನ್ನೊಂದು ವರ್ಗದವರಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ವರನ್ನಾಗಿ ಮಾಡಿರುವುದರಿಂದ ಮತ್ತು (ಪುರುಷರು) ತಮ್ಮ ಧನವನ್ನು ವ್ಯಯಿಸುವುದರಿಂದ ಪುರುಷರು ಸ್ತ್ರೀಯರ ಮೇ
ಲೆ ನಿಯಂತ್ರಣಾಧಿಕಾರ ಹೊಂದಿದವರಾಗಿರುತ್ತಾರೆ.

ಇನ್ನು ಸ್ರೀಯ ಬಗ್ಗೆ ಶ್ಲೋಕ ಏನನ್ನುತ್ತದೆ.?

ತಥಾ ಚ ಶ್ರುತಯೋ ಬಹ್ವೋ ನಗೀತಾ ನಿಗಮೇಷ್ವಪಿ/-(9-19)
ಸ್ತ್ರೀಯರು ಹೀಗೆಂದು ವೇದಗಳಲ್ಲಿಯೇ ಪ್ರಮಾಣಗಳಿವೆ.
ಸ್ವಭಾವ ಏಷ ನಾರಿಣಾಂ ನರಾಣಾಮಿಹ ದೂಷಣಂ/-(2-213)
ಪುರುಷರ ಮನಸ್ಸು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ.
ಅವಿದ್ವಾಂಸಮಲ ಲೋಕೇ ವಿದ್ವಾಂಸಮಪಿ ವಾ ಪುನಃ/
ಪ್ರಮದಾ ಹ್ಯುತ್ಪಥಂ ನೇತುಂ ಕಾಮಕ್ರೋಧವಶಾನುಗಂ-(2-214)
ಅವನು ಪಂಡಿತನೇ ಇರಲಿ, ಪಾಮರನೇ ಆಗಿರಲಿ ಕಾಮ ಕ್ರೋಧ ವಶನಾದ ಮನುಷ್ಯನನ್ನು ಮಾರ್ಗ ಭ್ರಷ್ಟನನ್ನಾಗಿ ಮಾಡಲು ಸ್ತ್ರೀ ಸಮರ್ಥಳು.

ಪಿತ್ರಾ ಭತರ್ಾ ಸುತೈವರ್ಾಪಿ ನೇಚ್ಛೇದ್ವಿರಹಮಾತ್ಮನಂ/
ಏಷಾಂ ಹಿ ವಿರಹೇಣ ಸ್ತ್ರೀ ಗಹ್ಯರ್ೇ ಕುಯರ್ಾಭೇ ಕುಲೇ//-(5-149)
ಸ್ತ್ರೀಯರು ತಂದೆ, ಗಂಡ, ಮಕ್ಕಳನ್ನು ಬಿಟ್ಟು ಒಬ್ಬಳೇ ಇರಬಾರದು. ಹಾಗೆ ಒಬ್ಬಳೇ ಇದ್ದರೆ ಉಭಯ ಕುಲಗಳಿಗೂ ಕೆಟ್ಟ ಹೆಸರು ತರುತ್ತಾಳೆ.

ಬಾಲ್ಯೇ ಪಿತುರ್ವಶೇ ತಿಷ್ಠೇತ್ಪಾಣಿಗ್ರಾಹಸ್ಯ ಯೌವನೇ/
ಪುತ್ರಾಣಾಂ ಭರ್ತರಿ ಪ್ರೇತೇ ಭಜೇತ್ ಸ್ತ್ರೀ ಸ್ವತಂತ್ರತಾಂ//-(5-148)
ಬಾಲ್ಯದಲ್ಲಿ ತಂದೆಯ ವಶದಲ್ಲಿ ಯೌವ್ವನದಲ್ಲಿ ಗಂಡನ ವಶದಲ್ಲಿ ಗಂಡ ಸತ್ತ ನಂತರ ಪುತ್ರರ ಅಧೀನದಲ್ಲಿ ಬಾಳಬೇಕಲ್ಲದೇ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು.

ಮನುಸ್ಮೃತಿಯ ಬಹಳ ಪ್ರಸಿದ್ಧವಾದ ಶ್ಲೋಕ-

ಪಿತಾ ರಕ್ಷತಿ ಕೌಮಾರೇ ಭತರ್ಾ ರಕ್ಷತಿ ಯೌವನೇ/
ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ//-(9-3)


ನಾಸ್ತಿ ಸ್ತ್ರೀಣಾಂ ಪೃಥಗ್ಯಜ್ಞೋ ನವ್ರತಂ ನಾಪ್ಯು ಪೋಷಿತಂ/
ಪತಿಂ ಶುಶ್ರೂಷತೇ ಯೇನ ತೇನ ಸ್ವಗರ್ೇ ಮಹಿಯತೇ// (5-155)
ಪತಿಯನ್ನು ಬಿಟ್ಟು ಸ್ತ್ರೀಗೆ ಬೇರೇ ಯಜ್ಞವೇ ಇಲ್ಲ. ವ್ರತವೂ ಇಲ್ಲ. ಉಪವಾಸವೂ ಇಲ್ಲ. ಪತಿ ಸೇವೆ ಮಾಡುವುದರಿಂದಲೇ ಸ್ತ್ರೀಯು ಸ್ವರ್ಗದಲ್ಲಿ ಗೌರವ ಪಡೆಯುತ್ತಾಳೆ.

ವಿಶೀಲಂ ಕಾಮವೃತ್ತೋ ವಾಗುಣೈವರ್ಾ ಪರವರ್ಜತಃ/
ಉಪಚರ್ಯಃ ಸ್ತ್ರೀಯಾ ಸಾಧ್ವಾ ಸತತಂ ದೇವತ್ಪತಿಃ//-(95-154)
ಪತಿಯ ನಡತೆಯು ಚೆನ್ನಾಗಿರದಿದ್ದರೂ, ಕಾಮಾತುರನಾಗಿ ಅವನು ಬೇರೆ ಹೆಣ್ಣಿನ್ನು ಮೋಹಿಸಿದರೂ, ದುರ್ಗುಣಿಯಾಗಿದ್ದರೂ ಸಹ ಸಾಧ್ವಿಯಾದ ಹೆಂಡತಿಯು ತನ್ನ ಪತಿಯನ್ನು ದೇವರೆಂದೇ ಭಾವಿಸಿ ಸೇವೆ ಮಾಡಬೇಕು.

ಶಯ್ಯಾಸನಮಲಂಕಾರಂ ಕಾಮಂ ಕ್ರೋಧಂ ಅನಾರ್ಜವಂ/
ದ್ರೋಹ ಭಾವಂ ಕುಚಯರ್ಾಂ ಚ ಸ್ತ್ರೀಭ್ಯೋ ಮನುರಕಲ್ಪಯತ್ ? (9-17)
ಮಲಗುವುದು, ಕುಳಿತುಕೊಂಡಿರುವುದು, ಅಲಂಕಾರ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿ ದ್ರೋಹ ಮತ್ತು ದುರ್ನಡತೆ ಇವು ಸ್ತ್ರೀಯರಿಗೆ ಸ್ವಾಭಾವಿಕ ಗುಣಗಳೆಂದು ಮನು ಹೇಳುತ್ತಾನೆ.
ಮಡದಿಯರು ಗಂಡಸರ ಕೃಷಿ ಭೂಮಿ ಎಂದು ಹೇಳಿದೆ ಎನ್ನುದು ಇನ್ನೊಂದು ಆರೋಪ.
نِسَاؤُكُمْ حَرْثٌ لَكُمْ .
ನಿಮ್ಮ ಪತ್ನಿಯರು ನಿಮ್ಮ ಹೊಲವಾಗಿರುವರು.

ನಿಜ ಹೇಳಬೇಕಾದರೆ ಇದು ಅಲಂಕಾರಿಕ ಪದ ಪ್ರಯೋಗ.
ಸಂತಾನವನ್ನು ಕೊಡಲು ಅವಳಿಗೆ ಮಾತ್ರ ಸಾಧ್ಯ.ಅದೂ ಅಲ್ಲದೇ ಆ ಸಂತಾನ ಅವಳ ಪಾಲು ಆಗಿರುತ್ತದೆ.ತಾಯಿಯೊಂದಿಗಿನ ಭಾದ್ಯತೆ ಬಗ್ಗೆ ಕೇಳಿದಾಗ ಮೂರು ಸಲವೂ ತಾಯಿ ಪರ ಹೇಳಿದ ಪ್ರವಾದಿ ಸ ನಾಲ್ಕನೆಯ ಸಲ ತಂದೆಗೆ ಎಂದು ತಂದೆಯ ಪರ ಹೇಳುತ್ತಾರೆ.ಅದೂ ಅಲ್ಲದೇ ಕೃಷಿಕನಿಗೆ ತನ್ನ ಕೃಷಿ ಭೂಮಿಗಿಂತ ಮೇಲು ಯಾವುದೂ ಇಲ್ಲ.
ಇಸ್ಲಾಮನ್ನು ಸ್ವೀಕರಿಸಿದವರ ಮೇಲೆ ಹೋರಾಡಬೇಕೆನ್ನುವುದನ್ನು ಕುರಾನ್ ಹೇಳಿದೆ ಎನ್ನುವುದು ಇನ್ನೊಂದು ಆರೋಪ.
ಹದಿಮೂರು ವರ್ಷಗಳ ಕಾಲ ಇನ್ನಿಲ್ಲದ ದೌರ್ಜನ್ಯ ದಬ್ಬಾಳಿಕೆಯನ್ನು ಪ್ರವಾದಿ ಮತ್ತು ಅನುಚರ ಮೇಲೆ  ನಡೆಸಿದ ಮಕ್ಕಾ ದ ಜನತೆ ಆದರೂ ಪ್ರತಿರೋಧ ತೋರದೇ ಕಡೆಗೆ ಜನ್ಮಭೂಮಿ ತೊರೆದು ಹೊರಡುತ್ತಾರೆ.ಆಗಲೂ ತಡೆಯೊಡ್ಡಿದರು.ನಂತರ  ಮದೀನಕ್ಕೂ ಅಪಾಯ ತಂದೊಡ್ಡುವ ಘಟ್ಟದಲ್ಲಿ ಕುರಾನ್ ಯುದ್ಧ ಕ್ಕೆ ಅನಮತಿ ನೀಡುತ್ತದೆ.
أُذِنَ لِلَّذِينَ يُقَاتَلُونَ بِأَنَّهُمْ ظُلِمُوا ۚ وَإِنَّ اللَّهَ عَلَىٰ نَصْرِهِمْ لَقَدِيرٌ
(ಅಲ್ ಹಜ್ಜ್ :೩೯)
ಯುದ್ಧಕ್ಕೆ ಬಲಿಯಾಗುವವರಿಗೆ, ಅವರು ಮರ್ದಿತರಾಗಿರುವುದರಿಂದ (ತಿರುಗೇಟು ನೀಡಲು) ಅನುಮತಿ ನೀಡಲಾಗಿದೆ. ಖಂಡಿತವಾಗಿಯೂ ಅವರಿಗೆ ನೆರವು ನೀಡಲು ಅಲ್ಲಾಹು ಸಮರ್ಥನಾಗಿರುವನು.

الَّذِينَ أُخْرِجُوا مِنْ دِيَارِهِمْ بِغَيْرِ حَقٍّ إِلَّا أَنْ يَقُولُوا رَبُّنَا اللَّهُ
ನಮ್ಮ ಪ್ರಭು ಅಲ್ಲಾಹುವಾಗಿರುವನು’ ಎಂದು ಹೇಳಿರುವ ಕಾರಣಕ್ಕಾಗಿ ಮಾತ್ರ ಅವರನ್ನು ಅನ್ಯಾಯವಾಗಿ ಅವರ ಮನೆಗಳಿಂದ ಹೊರಗಟ್ಟಲಾಗಿದೆ. ತಮ್ಮ ಮೇಲೆ ಯುದ್ಧ ಮಾಡುವವರೊಂದಿಗೆ ಮಾತ್ರ ಯುದ್ಧಾನುಮತಿ ನೀಡುತ್ತದೆ ಕುರಾನ್.
وَقَاتِلُوا فِي سَبِيلِ اللَّهِ الَّذِينَ يُقَاتِلُونَكُمْ وَلَا تَعْتَدُوا ۚ إِنَّ اللَّهَ لَا يُحِبُّ الْمُعْتَدِينَ

ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ಅಲ್ಲಾಹುವಿನ ಮಾರ್ಗದಲ್ಲಿ ನೀವೂ ಯುದ್ಧ ಮಾಡಿರಿ. ಆದರೆ ಹದ್ದು ಮೀರದಿರಿ. ಖಂಡಿತವಾಗಿಯೂ ಹದ್ದು ಮೀರುವವರನ್ನು ಅಲ್ಲಾಹು ಮೆಚ್ಚಲಾರನು.(2/190)

ಯಾರ ಮೇಲೂ ಬಲಾತ್ಕಾರ ಬಯಸುವುದಿಲ್ಲ.
لَا إِكْرَاهَ فِي الدِّينِ ۖ قَدْ تَبَيَّنَ الرُّشْدُ مِنَ الْغَيِّ(2/256)

ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರ ವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಸ್ಪಷ್ಟವಾಗಿ ಬೇರ್ಪಟ್ಟು ನಿಂತಿದೆ.

ವಿರೋಧಿಸದ ,ಅಕ್ರಮಿಸದ ಎಲ್ಲರೊಂದಿಗೂ ಉತ್ತಮವಾಗಿ ವರ್ತಿಸಲು ಕುರಾನ್ ಆಜ್ಞಾಪಿಸುತ್ತದೆ.
 لَا يَنْهَاكُمُ اللَّهُ عَنِ الَّذِينَ لَمْ يُقَاتِلُوكُمْ فِي الدِّينِ وَلَمْ يُخْرِجُوكُمْ مِنْ دِيَارِكُمْ أَنْ تَبَرُّوهُمْ وَتُقْسِطُوا إِلَيْهِمْ ۚ إِنَّ اللَّهَ يُحِبُّ الْمُقْسِطِينَ

ಧರ್ಮದ ವಿಷಯದಲ್ಲಿ ನಿಮ್ಮೊಂದಿಗೆ ಯುದ್ಧ ಮಾಡದವರು ಮತ್ತು ನಿಮ್ಮ ಮನೆಗಳಿಂದ ನಿಮ್ಮನ್ನು ಹೊರಗಟ್ಟದವರು ಯಾರೋ ಅವರಿಗೆ ನೀವು ಒಳಿತು ಮಾಡುವುದನ್ನು ಮತ್ತು ಅವರೊಂದಿಗೆ ನ್ಯಾಯಪಾಲಿಸು ವುದನ್ನು ಅಲ್ಲಾಹು ನಿಮಗೆ ವಿರೋಧಿಸುವುದಿಲ್ಲ. ಖಂಡಿತವಾಗಿಯೂ ಅಲ್ಲಾಹು ನ್ಯಾಯ ಪಾಲಿಸುವವರನ್ನು ಇಷ್ಟಪಡುವನು.(60:08)

ಧರ್ಮದ ಕಾರಣದಿಂದ ಹೆತ್ತವರನ್ನು ಕಡೆಗಣಿಸಬಾರದೆಂದು ಹೇಳುವುದರೊಂದಿಗೆ ಅವರೊಂದಿಗೆ ಅತ್ತ್ಯುತ್ತಮ ವಾಗಿ ವರ್ತಿಸಲು ಕುರಾನ್ ಕರೆ ನೀಡುತ್ತದೆ.

وَإِنْ جَاهَدَاكَ عَلَىٰ أَنْ تُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۖ وَصَاحِبْهُمَا فِي الدُّنْيَا مَعْرُوفًا

ನಿನಗೆ ಯಾವುದೇ ಜ್ಞಾನವಿಲ್ಲದ ಏನನ್ನಾದರೂ ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡುವಂತೆ ಅವರಿ ಬ್ಬರೂ ನಿನ್ನನ್ನು ಬಲವಂತಪಡಿಸಿದರೆ, ಆಗ ಅವರನ್ನು ಅನುಸರಿಸಬಾರದು. ಐಹಿಕ ಜೀವನದಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸು. 31:15 ಲುಕ್ಮಾನ್

ಶತ್ರುಗಳ ಹೃದಯದ ಲ್ಲಿ ಸ್ನೇಹವನ್ನು ಅಲ್ಲಾಹನು ಏಕೆ ಹಾಕಲಿಲ್ಲ ಅವರ  ಹೃದಯದ ಲ್ಲಿ ಭಯವನ್ನೇ ಏಕೆ ಹಾಕಿದ ? ಇದೂ ಆದಿರಳ ಪ್ರಶ್ನೆಗಳಲ್ಲಿ ಒಂದಾಗಿತ್ತು.
ಸುದೀರ್ಘ ಸಮಯ ಕಾದ ಬಳಿಕ ಸದುಪದೇಶವನ್ನೂ ನೀಡಿ ನಂತರವೂ ದ್ವೇಷದಿಂದ  ಸತ್ಯ ,ಅಹಿಂಸೆ,ಮಾನವೀಯತೆ ಎಲ್ಲವನ್ನೂ ಕಡೆಗಣಿಸಿ ನಿರಾಯುಧ  ,ಬಲಹೀನ, ಮತ್ತು
ಅಲ್ಪಸಂಖ್ಯಾತ ದುರ್ಬಲ ರನ್ನು ಸದೆ ಬಡಿಯಲು ಬಂದ ಜನರ ಹೃದಯಕ್ಕೆ ಸ್ನೇಹ ವನ್ನು ತುಂಬಬೇಕಿತ್ತಂತೆ !.
 ಎಲ್ಲವೂ ಅಲ್ಲಾಹನದೇ.ಅವನು ಬಯಸಿದ್ದೇ ನಡೆಯುವುದು.ಆದರೆ ಸರಿ ತಪ್ಪು ,ಪಾಪ ಪುಣ್ಯ ಲೆಕ್ಕಾಚಾರ ಬರೋದು ಮನುಷ್ಯನಿಕೆ ಅದನ್ನು ಆಯ್ಕೆ ಮಾಡುವ ಬುದ್ಧಿಯನ್ನು ಅಲ್ಲಾಹನು ಜನರಿಗೆ ಕೊಟ್ಟಿದ್ದಾನೆ.ಆ ಕಾರಣದಿಂದ ಕೆಡುಕು ಒಳಿತು ಸ್ವರ್ಗ,ನರಕ ಎನ್ನುವುದಕ್ಕೆ ಅರ್ಥ ಬರುತ್ತದೆ.ಎಲ್ಲಾ ವ್ಯವಸ್ಥೆ ಮಾಡಿದವನೆಂಬ ಕಾರಣಕ್ಕೆ ಒಬ್ಬನನ್ನು ಅರೋಪಿಸಲಾಗದು .ಉದಾ ಒಬ್ಬ ಎರಡು ಬಾಟಲಿ ಕೊಟ್ಟು,ಒಂದರಲ್ಲಿ ಹಾಲಿದೆ ,ಇನ್ಮೊಂದರಲ್ಲಿ ಮದ್ಯವಿದೆ.ಹಾಲನ್ನು ಕುಡಿ ಅದು ಒಳ್ಳೆಯದು ‌ಮದ್ಯ ಕುಡಿಯಬೇಡಾ ಅದು ಹಾಳು.ನಂತರ ಹಾಲು ಕುಡಿದರೆ ,ಆತ ಹಾಲು ಕುಡಿಸಿದ ಎನ್ನಬಹುದು.ಆದರೆ ಮದ್ಯ ಕುಡಿದರೆ ಅವನು ಕುಡಿಸಿದ ಎಂದು ಹೇಳಲಾಗದು .ಕಾರಣ ಆತ ಕುಡಿಯಲು ಹೇಳಿಲ್ಲ ತಾನೇ  ?
ಕುರಾನ್ ಹೇಳುತ್ತದೆ.

مَنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَنْ ضَلَّ فَإِنَّمَا يَضِلُّ عَلَيْهَا ۚ وَلَا تَزِرُ وَازِرَةٌ وِزْرَ أُخْرَىٰ ۗ وَمَا كُنَّا مُعَذِّبِينَ حَتَّىٰ نَبْعَثَ رَسُولًا

ಯಾರಾದರೂ ಸನ್ಮಾರ್ಗವನ್ನು ಪಡೆಯುವುದಾದರೆ ಅವನದನ್ನು ಪಡೆಯುವುದು ಅವನದೇ ಒಳಿತಿಗಾಗಿದೆ. ಯಾರಾದರೂ ಪಥಭ್ರಷ್ಟನಾಗುವುದಾದರೆ ಅವನ ಕೆಡುಕಿಗಾಗಿಯೇ ಅವನು ಪಥಭ್ರಷ್ಟನಾಗುತ್ತಾನೆ. ಪಾಪಭಾರವನ್ನು ಹೊರುವ ಯಾರೂ ಬೇರೊಬ್ಬನ ಪಾಪಭಾರವನ್ನು ಹೊರಲಾರನು. ಒಬ್ಬ ಸಂದೇಶವಾಹಕ ರನ್ನು ಕಳುಹಿಸುವ ತನಕ ನಾವು (ಯಾರನ್ನೂ) ಶಿಕ್ಷಿಸಲಾರೆವು. (17:15)

ಇನ್ನು ಯುದ್ಧ ಬಗ್ಗೆ ಗೀತೆ ಏನನ್ನುತ್ತದೆ? ನೋಡೋಣ.


ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್ ಅರ್ಹಸಿ

ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ  ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ --
ನಿನ್ನ ಧರ್ಮವನ್ನು ಕಂಡಾದರೂ ನೀನು ಎದೆಗೆಡಬಾರದು  ಕ್ಷತ್ರಿಯನಾದವನಿಗೆ ನ್ಯಾಯದಿಂದ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.


ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಹಾಗು ಸ್ವಧರ್ಮ ಯಾವುದು? ಸನಾತನ ಧರ್ಮ ಹೇಳುತ್ತದೆ: ‘ಅನ್ಯಾಯದ ವಿರುದ್ಧ ಹೋರಡಲೇ ಬೇಕು’ ಎಂದು; ಸಮಾಜ ಧರ್ಮ ಹೇಳುತ್ತದೆ: ಕ್ಷತ್ರಿಯನಾದವನು ಅಧರ್ಮದ ವಿರುದ್ಧ ಹೋರಾಡಬೇಕು, ಸಮಾಜದ ರಕ್ಷಣೆ ಮಾಡಬೇಕು ಹಾಗು ಈ ಪುಣ್ಯ ಕಾರ್ಯದಲ್ಲಿ 'ತನ್ನವರು' ಎಂದು ನೋಡಬಾರದು ಎಂದು.ಇನ್ನು ಅರ್ಜುನ ಮೂಲತಃ ಕ್ಷತ್ರಿಯನಾದ್ದರಿಂದ ಆತನ ಸ್ವಧರ್ಮ ‘ಅನ್ಯಾಯದ ವಿರುದ್ಧ ಹೋರಾಟ’. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ ಹಾಗು ಸನಾತನಧರ್ಮ ಏಕವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧ ಹೋರಾಡುವುದು ಮಹಾ ಪುಣ್ಯದ ಕೆಲಸ. ಸಮಾಜ ಸುರಕ್ಷತೆಗಾಗಿ ಹೋರಾಡುವುದು ಕ್ಷತ್ರಿಯನ ಮಹಾ ತಪಸ್ಸು. ಇದಕ್ಕಿಂತ ಪುಣ್ಯಕಾರ್ಯ ಇನ್ನೊಂದಿಲ್ಲ.


ಯದೃಚ್ಛಯಾ ಚ ಉಪಪನ್ನಮ್  ಸ್ವರ್ಗ ದ್ವಾರಮ್ ಅಪಾವೃತಮ್

ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮ್ ಈದೃಶಮ್--ಇಂಥ ಕಾಳಗವೆಂದರೆ ದೈವೇಚ್ಛೆಯಿಂದ ಕೂಡಿಬಂದ, ತೆರೆದಿಟ್ಟ ಸ್ವರ್ಗದ ಬಾಗಿಲು. ಪಾರ್ಥ,ಭಾಗ್ಯವಂತರಾದ ಕ್ಷತ್ರಿಯರು ಮಾತ್ರವೇ ಇಂಥ ಅವಕಾಶ ಪಡೆಯುತ್ತಾರೆ.



ಇಲ್ಲಿ ನಮಗೆ ಕೃಷ್ಣ ಅರ್ಜುನನಲ್ಲಿ ಯುದ್ಧಮಾಡು ಎಂದು ಏಕೆ ಹೇಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರತಿಯೊಬ್ಬ ಮಾನವನೂ  ಸನಾತನಧರ್ಮ,ಅದಕ್ಕನುಗುಣವಾಗಿ ಸಮಾಜಧರ್ಮ ಹಾಗು ಸಮಾಜ ಮತ್ತು ಸನಾತನ ಧರ್ಮಕ್ಕನುಗುಣವಾಗಿ ಸ್ವಧರ್ಮ-ಈ ನೆಲೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕು
ಇದು ಭಗವದ್ಗೀತೆಯ ಸಾರಾಂಶ.

ಚಾಣಕ್ಯ ನೀತಿ ಹೀಗೆ ವಿವರಿಸುತ್ತದೆ.
ದಾಕ್ಷಿಣ್ಯ೦ ಸ್ವಜನೇ ದಯಾ ಪರಜನೇ ಶಾಠ್ಯ೦ ಸದಾ ದುರ್ಜನೇ
ಪ್ರೀತಿಃ    ಸಾಧುಜನೇ ಸ್ಮ್ಯಯಃ ಖಲಜನೇ ವಿದ್ವಜ್ಜನೇ ಚಾರ್ಜನ೦
ಶೌರ್ಯ೦ ಶತ್ರುಜನೇಕ್ಷಮಾ ಗುರುಜನೇ ನಾರೀಜನೇ ಧೃಷ್ಟತಾ
ಇತ್ಥ೦ ಯೇ ಪುರುಷಾ೦ ಕಲಾಸು ಕುಶ್ಲಾಸ್ತೇಷ್ವೇವ ಲೋಕಸ್ಥಿತಿಃ||೩||

ಸ್ವಜನರಲ್ಲಿ ಸಜ್ಜನತೆ, ಪರರಲ್ಲಿ ದಯೆ ದುಷ್ಟರಲ್ಲಿ  ದುಷ್ಟತನ,  ಸಜ್ಜನರಲ್ಲಿ ಪ್ರೇಮ. ಪ೦ಡಿತರಲ್ಲಿ ಸರಳತೆ, ಶತ್ರುಗಳ ಪ್ರತಿ ಶೂರತ್ವ, ಗುರುಹಿರಿಯರಲ್ಲಿ ಸಹನಶೀಲತೆ, ಸ್ತ್ರೀಯರಲ್ಲಿ ವಿಶ್ವಾಸ - ಹೀಗೆ ಯಾರು ಈ ಕಲೆಗಳಲ್ಲಿ ಕುಶಲರಿರುತ್ತಾರೋ ಜನ ಅಂಥವರಿಂದಲೇ ಲೋಕವ್ಯವಹಾರವು ಸಾಗುತ್ತಿದೆ.

ಅಲ್ಲಾಹನು ಯಾಕೆ  ಹುಳು ಮಾನವನನ್ನು ಪಂಥಾಹ್ವಾನಕ್ಕೆ ಕರೆದ? ಎನ್ನುವದೂ ಒಂದು ಪ್ರಶ್ನೆ.
ಪ್ರವಾದಿಯನ್ನು ಸುಳ್ಳಾಗಿಸಿದ, ಮತ್ತು ಕುರಾನನ್ನು ನಂಬದ, ಹಾಗೇಅಲ್ಲಾಹನ ಸ್ಥಾನದಲ್ಲಿ ಬೇರೆ ಆರಾಧ್ಯರನ್ನು ಪ್ರತಿಷ್ಟಾಪಸಿದ ಜನರೊಂದಿಗೆ ಸಾಧ್ಯವಾದರೆ ಇದರ ಬದಲು ತನ್ನಿ ಬೇಕಾದರೆ ಆರಾಧ್ಯ ರನ್ನು ಸೇರಿಸಿಕೊಳ್ಳಿ ಎಂದರೆ ಹೇಗೆ ತಪ್ಪಾಗುತ್ತದೆ.?.
ಇತರ ಆರಾಧ್ಯದೈವ ವನ್ನು ಹೀಯಾಲಿಸಲಾಗುತ್ತದೆ.ಎನ್ನುವ ಆರೋಪ ಬಾಲಿಶವಾದುದು.ಕಾರಣ ಸ್ಪಷ್ಟವಾಗಿ ಅದನ್ನು ಕುರಾನ್ ವಿರೋಧಿಸಿದೆ.

وَلَا تَسُبُّوا الَّذِينَ يَدْعُونَ مِنْ دُونِ اللَّهِ فَيَسُبُّوا اللَّهَ عَدْوًا بِغَيْرِ عِلْم
(06/108)
ಅಲ್ಲಾಹುವಿನ ಹೊರತು ಅವರು ಕರೆದು ಪ್ರಾರ್ಥಿಸುತ್ತಿರುವವರನ್ನು ನೀವು ದೂಷಿಸದಿರಿ. ಅವರು  ಅರಿವಿಲ್ಲದೆ ಅತಿಕ್ರಮವಾಗಿ ಅಲ್ಲಾಹುವನ್ನು ದೂಷಿಸಲು ಅದು ಕಾರಣವಾಗಬಹುದು.
ಬಲವಂತದ ಮತಾಂತರ ಇಸ್ಲಾಮಿನಲ್ಲಿ ಅಸಾಧ್ಯ. ಅದರ ಆವಶ್ಯಕತೆ ಯೂ ಇಲ್ಲ.
ಇಂತಹಾ ಆರೋಪಗಳು ನಮಗೆ ಸಮಸ್ಯಯೇ ಅಲ್ಲ.
🌅. ವರದಿ ಅಲ್ ಅಹ್ಸನ್ ಮಾಸಿಕ

ಸಯ್ಯಿದ್ ಮದನಿ ಸೋಶಿಯಲ್ ಫ್ರಂಟ್ ಸಭೆಯಲ್ಲಿ ಮೊಳಗಿದ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು ಇವರ ಪ್ರಬುದ್ಧ ಮಾತುಗಳಲ್ಲಿ ಕೇಳಿ ಬಂದ ಮುತ್ತ ರತ್ನಗಳ ಸಂಗ್ರಹ

 
ವರದಿ "ಅಲ್ ಅಹ್ಸನ್" ಮಾಸಿಕ

  • ಧರ್ಮ ಕೇಂದ್ರಗಳು, ಕ್ಷೇತ್ರ ಮಠಗಳು ಮಾನವೀಯತೆಗಾಗಿ ಧ್ವನಿ ಎತ್ತಬೇಕಾಗಿದೆ.ಆ ಕಾರ್ಯ ವನ್ನು ಸಯ್ಯಿದ್ ಮದನಿ ತಂಙಲ್ ರವರ ಹೆಸರಲ್ಲಿ ಆರಂಭವಾಗಿರುವುದು ಶ್ಲಾಘನೀಯ
  • ಜಗತ್ತು ದೇವಾಲಯ,ಸರ್ವರಿಗೂ ಮಂಗಳವೆಂಬ ಶ್ಲೋಕ ದ ದ್ವನಿಯಂತೆ,ಜಗತ್ತಿನ ಒಬ್ಬ ವ್ಯಕ್ತಿಗೆ ನೀಡುವ ಬದುಕು ಇಡೀ ಜಗತ್ತಿಗೆ ನೀಡುವ ಬದುಕು ಎಂಬ ಕುರಾನಿನ ಸಂದೇಶದಂತೆ ಜಾತಿ ಬೇಧ  ಮೀರಿ ಈ ದ್ನನಿ ಮ್ಯಾನ್ಮಾರ್ ಗಾಗಿ ಮೊಳಗಿದೆ.
  • ಮೇಧಾವಿ ಅರವಿಂದರ ,ಮಹಾತ್ಮ ಗಾಂಧಿ ಯ ,ಸ್ವಾಮೀ ವಿವೇಕಾನಂದರ ಭಾರತದ ಧ್ವನಿ ನಮ್ಮ ಪ್ರಧಾನಿ ಮೂಲಕ ಮ್ಯಾನ್ಮಾರ್ ತಲುಪಲಿ ಆ ಮೂಲಕ ದೇಶದ ಘನತೆ ಎತ್ತಿ ಹಿಡಿಯಲಿ.
  •  "ನನ್ನ ಮ್ಯಾನ್ಮಾರಿನ ಆತ್ಮಸಾಕ್ಷಿಯ ನೋವು ಬವಣೆ ಮರೆಯಬೇಡಿ" ಎಂದು ಜೈಲಲ್ಲಿರುವಾಗ ಜಗತ್ತಿಗೆ ಕರೆ ನಿಡಿದ ಸೂಕಿ ಯಾಕೀಗ ಮೂಕಿ?
  • ೧೯೯೧ ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಕೊಟ್ಟಾಗ ನೋಬೆಲ್ ಅದಿಕಾರಿಗಳು ಹೇಳಿದ ಮಾತು ಜಗತ್ತಿನ ಸಂಬಂಧ ಕಡಿದುಕೊಂಡವರಿಗಾಗಿ ಮತ್ತು ಮಾನವೀಯತೆ ಗಾಗಿ ಕೊಡಲಾಗಿದೆ ಎಂದು ಆದರೆ ಅದು ಸೂಕಿಗೆ ಇಲ್ಲವಾಯಿತೆ?.
  •  ಜಗತ್ತಿನ ಕಟ್ಟ ಕಡೆಯ ಕಂಬನಿ ಒರೆಸಲು ಮತ್ತೆ ಮತ್ತೆ ಹುಟ್ಟಿ ಬರುವೆನೆಂಬ ಬುದ್ದ ನ ಹುಟ್ಟು ನರಭಕ್ಷಕ ರಾದ ಬುದ್ದ ಸನ್ಯಾಸಿಗಳಲ್ಲಿ ಅಲ್ಲ.ಅವನು ಇಂತಹಾ ಮಾನವೀಯತೆಗಾಗಿನ ಹೋರಾಟದಲ್ಲಿ ಮಾತ್ರ ಹುಟ್ಟುತ್ತಾನೆ.
  •  ಶಾಂತಿ ಯ ನೋಬೆಲ್ ಪ್ರಶಸ್ತಿ ಮ್ಯಾನ್ಮಾರಿನ ಮಕ್ಕಳ ರಕ್ತದಲ್ಲಿ ಮುಳುಗಿ ಕೆಂಪಾಗಿದೆ.
  • ಮ್ಯಾನ್ಮಾರಿನ ಬಾವಿ ನೀರಿನಲ್ಲಿ ,ಕಡಲಿನ ಮೀನಿನ ಮತ್ತು ಕಾಡಿನ ವನ್ಯ ಜೀವಿಗಳ ಹೊಟ್ಟೆಯಲ್ಲಿ ಹತ್ಯಾಕಾಂಡ ಕ್ಕೆ ಸಿಲುಕಿದ ಮಕ್ಕಳ ರಕ್ತ ಮತ್ತು ಮಾಂಸ ಮಾತ್ರವಿದೆ. ಅದರೂ ಪ್ರಾಣವನ್ನು ಉಳಿಸಿಕೊಂಡು ಬಂದ ನಿರಾಶ್ರಿತರಿಗೆ ಆಶ್ರಯ ಕೊಡಬಾರದೇಕೆ?
  •  ಬರ್ಮಾದ ಎರಡು ಕೋಟಿ ‌ವಲಸಿಗರು ಈ ದೇಶದಲ್ಲಿರುವಾಗ,ಮಾಜಿ ರಾಷ್ಟಪತಿ ಕೆ ಆರ್ ನಾರಾಯಣನ್ ಪತ್ನಿ ಬರ್ಮಾದ ವಲಸಿಗರಲ್ಲಿ ಸೇರಿ ಭಾರತದ ಎರಡನೇಯ ಪ್ರಜೆ ಆಗಬಹುದಾದರೆ ಯಾಕಿಲ್ಲಾ ಮ್ಯಾನ್ಮಾರಿನ ಮಕ್ಕಳಿಗೆ ರಕ್ಷಣೆ ,?
  •  ಭಯೋತ್ಪಾದನೆ ಹುಟ್ಟುವ ಮೊದಲೇ ಅಲ್ಲಿ ನರಹತ್ಯೆ ನಡೆದಾಗ ವಲಸೆ ಹೋಗುತ್ತಿದ್ದರು. ೧೯೪೩ ಮತ್ತು ೧೯೭೮ ಲಕ್ಷ ಲಕ್ಷ ಜನರನ್ನು ಮ್ಯಾನ್ಮಾರಿನ ಸರಕಾರ ಕೊಂದಿದೆ .೧೯೮೪ ರಲ್ಲಿ ಅವರ ಪೌರತ್ವ ರದ್ದುಗೊಳಿಸಿದೆ.ಅದರ ವಿರುದ್ಧ ಹೋರಾಡೋದು ಭಯೋತ್ಪಾದನೆಯೇ?
  • ಚೀನಾ ವಿರುದ್ಧ ಟಿಬೇಟ್, ಅಮೇರಿಕ ವಿರುದ್ಧ ವಿಯೆಟ್ನಾಂ, ಶ್ರೀಲಂಕಾ ವಿರುದ್ಧ ತಮಿಲರು ಹೋರಾಡಿದರೆ ಸ್ವ ರಕ್ಷಣೆಯ ಹೋರಾಟ! ಇಸ್ರೇಲ್ ವಿರುದ್ಧ ಜನ್ಮಭೂಮಿ ಗಾಗಿ ಪ್ಯಾಲಸ್ತೀನ್,ರಷ್ಯಾ ವಿರುದ್ದ ಚೆಚಿನ್ಯಾ,ಅಮೇರಿಕಾ ವಿರುದ್ಧ ಇರಾಕ್, ಮ್ಯಾನ್ಮಾರ್ ಸರಕಾರದ ವಿರುಧ್ಧ ಅರಕಾನರು ಪ್ರತಿರೋಧ ತೋರಿದರೆ ಭಯೋತ್ಪಾದನೆ ಆಗೋದು ಕಾಲದ ವ್ಯಂಗ್ಯ ಅಲ್ಲವೇ?
  • ಇದು ಮುಸಲ್ಮಾನರ ಮಾತ್ರ ಸಮಸ್ಯೆಯಲ್ಲ.ಮೋದಿಯವರೇ ನಮ್ಮ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮ್,ಇರಾನಿ,ಸುಷ್ಮಾ ರನ್ನು ಬಾಂಗ್ಲಾ ದ ಕುಟುಪಲಾಂಗ್ ‌ನಿರಾಶ್ರಿತ ಶಿಬಿರಕ್ಕೆ ಕಳುಹಿಸಿ ಅಲ್ಲಿ ಗಂಡನನ್ನು ಮತ್ತು ಸಂಬಂಧಿಕರನ್ನು ಕಳಕೊಂಡ ಅಕೀರಾ ದರ್ ಎಂಬ ಹಿಂದು ಹೆಣ್ಣುಮಗಳಿದ್ದಾಳೆ .ಅವರು ನಾಲ್ಕು ತಿಂಗಳ ಗರ್ಭಿಣಿ ಹೇಗೆ ಬುಧ್ಧ ಸನ್ಯಾಸಿಗಳಿಂದ ಬಚಬಾಗಿದ್ದು ಎಂದು ಹೇಳಬಹುದು.
  • ನಿರಾಶ್ರಿತ ರ ಜೀವಂತ ಸಾಕ್ಷಿ ದಲೈಲಾಮ ಹೇಳುತ್ತಾರೆ. ಬುದ್ದ ಬಂದರೆ ಮ್ಯಾನ್ಮಾರಿನ ಮಸ್ಲಿಮರ ಸಹಾಯಕ್ಕೆ ನಿಲ್ಲುತ್ತಿದ್ದ.ಹಾಗಾದರೆ ಮೋದೀಜಿ ಆ ಕೆಲಸ ನಿಮಗೆ ಮಾಡಬಹುದಲ್ವಾ?
  • ನೂರ ಇಪ್ಪತೈದು ಜನಕೋಟಿಯ,ಜಗತ್ತಿನ ಬಲಿಷ್ಟ ಡೆಮಾಕ್ರಸಿ ದೇಶದ, ಅತ್ಮಜ್ಞಾನ ವಿರುವ ಭಾರತದ ಪ್ರಾಧಾನಿ ನಿರಾಶ್ರಿತರಿಗಾಗಿ ರಾಜತಾಂತ್ರಿಕ ಸಂಧಾನ ಮಾಡಿದರೆ ಮಾತ್ರ ಶೋಭೆ ತರುವುದು.
  • ಯಾರೂ ಏನನ್ನೂ ಮಾಡದಿದ್ದರೆ ಮುಂದೆ ಪ್ರಕೃತಿ ವಿಕೋಪ ಮೇಲೆದ್ದು ಪ್ರಕೃತಿಯೇ ತ್ಸುನಾಮಿಯಾಗಿ ಸರ್ವ ನಾಶಮಾಡಿ ಪರಿಹಾರ ಮಾಡಬಹುದು, ಕುರಾನ್ ಎಚ್ಚರಿಸುತ್ತದೆ

ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳು ಲೂಟಿಯ ಅಡ್ಡೆಗಳಾಗುತ್ತಿರುವುದು ಜಗತ್ತಿನ ದುರಂತ.


ಮಿತಿಮೀರಿದ ಅನ್ಯಾಯ ಪ್ರಕೃತಿಯ ಮಹಾ ವಿಕೋಪಕ್ಕೆ ಕಾರಣವಾಗಬಹುದು 

ಭಾಷಣ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು.

   ವರದಿ "ಅಲ್ ಅಹ್ಸನ್" ಮಾಸಿಕ

     ಹಿಜರಿ ಹೊಸ ವರ್ಷ ಇಂದಿನಿಂದ ಆರಂಭವಾಗಿದೆ.ಮುಹರ್ರಮ್ ಹಿಜರಿಯ ಆರಂಭ ತಿಂಗಳು. ಈ ತಿಂಗಳ ವಿಶೇಷತೆಯನ್ನು ಕುರಾನ್ ಮತ್ತು ಹದೀಸು ಗಳಲ್ಲಿ ಧಾರಾಳವಾಗಿ ಕಾಣಬಹುದು.ಪ್ರವಾದಿ (ಸ) ರವರು ಈ ‌ಮಾಸ ಅಲ್ಲಾಹನ ಮಾಸವಾಗಿರುತ್ತದೆ.ರಂಝಾನ್ ನಂತರ ಉಪವಸಕ್ಕೆ ಯೋಗ್ಯವಾದ ಶ್ರೇಷ್ಠ ಮಾಸ.ಇಮಾಮ್ ಬುಖಾರಿ ರ  ವರದಿ ಮಾಡಿದ (೨೯೫೮) ಹದೀಸು ಹೀಗಿದೆ.ಅಬೂ ಬಕರತ್ ಹೇಳುತ್ತಾರೆ. ಒಂದು ವರ್ಷ ಹನ್ನೆರಡು ತಿಂಗಳಾಗಿರುತ್ತದೆ.ಅದರಲ್ಲಿ ನಾಲ್ಕು ನಿಷಿದ್ಧ ತಿಂಗಳುಗಳಿವೆ.ಮೂರು ಕ್ರಮವಾಗಿ  ದುಲ್ ಖಅದ್ ದುಲ್ ಹಜ್ಜ್ , ಮುಹರ್ರಂ, ಜುಮಾದ ಮತ್ತು  ಶಾಬಾನ್ ಮಧ್ಯವಿರುವ ಮುಳರ್ ರ ರಜಬ್.
ನಿಮ್ಮ ಶರೀರಗಳನ್ನು ಆ ತಿಂಗಳುಗಳಲ್ಲಿ ಅಕ್ರಮಿಸಬೇಡಿ
ಈ ಆಯತ್ತಿನ ವ್ಯಾಖ್ಯಾನದಲ್ಲಿ ಇಬ್ನು ಅಬ್ಬಾಸ್ (ರ) ಹೇಳುತ್ತಾರೆ ಎಲ್ಲಾ ತಿಂಗಳುಗಳಲ್ಲಿಯೂ ಅಕ್ರಮಿಸಬೇಡಿ.ಪ್ರತ್ಯೇಕವಾಗಿ ಈ ನಾಲ್ಕು ತಿಂಗಳಲ್ಲಿ ಅಕ್ರಮವೆಸಗಬೇಡಿ ಕಾರಣ ಪುಣ್ಯಗಳಿಗೆ ಪ್ರತಿಫಲವೂ ಹೆಚ್ಚು ಹಾಗೇ ಪಾಪಗಳಿಗೆ ಶಿಕ್ಷೆಯೂ ಅಧಿಕವಾಗಿರುತ್ತದೆ.ಇದೇ ಅಭಿಪ್ರಾಯವನ್ನು ಇಮಾಮ್ ಖತಾದಃ (ರ) ಹೇಳುತ್ತಾರೆ ನಂತರ ಮುಂದುವರೆಸಿ,ಅಲ್ಲಾಹನು ತನ್ನ ಸೃಷ್ಟಿಯಲ್ಲಿ ಪ್ರತ್ಯೇಕವಾಗಿ ಕೆಲವನ್ನು ಆಯ್ಕೆಮಾಡಿದ್ದಾನೆ.
ಮಲಕ್ಕುಗಳಲ್ಲಿ ಮತ್ತು ಜನರಲ್ಲಿ ಪ್ರವಾದಿಗಳನ್ನು,ಮಾತುಗಳಲ್ಲಿ ಆತನ ಸ್ಮರಣೆ ಯನ್ನು, ಭೂಮಿಯಲ್ಲಿ ಮಸೀದಿಗಳನ್ನು,ಮಾಸಗಳಲ್ಲಿ ರಮ್ಝಾನ್ ಮತ್ತು ಯುದ್ಧ ನಿಶಿಧ್ದವಾದ ತಿಂಗಳನ್ನು,ದಿವಸಗಳಲ್ಲಿ ಜುಮಾ ದಿನವನ್ನು, ರಾತ್ರಿಗಳಲ್ಲಿ ಲೈಲತುಲ್ ಖದರ್ ರಾತ್ರಿಯನ್ನು ಗೌರವಿಸಿದ್ದಾನೆ.ಆದ್ದರಿಂದ ಅಲ್ಲಾಹನು ಗೌರವಿಸಿದ್ದನ್ನು ಗೌರವಿಸಿ.ಬುದ್ದಿ ಮತ್ತು ವಿವೇಕ ಇರುವವರು ಆತನು ಗೌರವಿಸಿದ್ದನ್ನು ಗೌರವಿಸುತ್ತಾರೆ.
ಕುರಾನ್ ಹೀಗೆನ್ನುತ್ತದೆ.
ಅಲ್ಲಾಹನ ಧರ್ಮ ಚಿನ್ಹೆ ಗಳನ್ನು ಗೌರವಿಸಿ ಅದು ಹೃದಯದ ‌ಭಯಭಕ್ತಿಯಾಗಿದೆ.
ಮುಹರ್ರಂ ತ್ಯಾಗ ಮತ್ತು ವಿಜಯದ ದೃಢತೆಯನ್ನು ನಮಗೆ ನೀಡುತ್ತದೆ.
 ನೀವು ಅಕ್ರಮ ಎಸಗಬೇಡಿ ಎನ್ನುವುದು ಈ ತಿಂಗಳ ಪ್ರತ್ಯೇಕವಾದ ಆಹ್ವಾನವಾಗಿದೆ.

ಕಾಲ ಎಷ್ಡು ಕೆಟ್ಟಿದೆ ಎಂದರೆ ಸ್ವಂತ ತಾಯಿ ತನ್ನ ವ್ಯಸನಿ ಮಗನ ಲೈಂಗಿಗ ಕಿರುಕುಳ ತಾಳಲಾಗದೇ ಐವತ್ತು ಸಾವಿರ ಸುಪಾರಿ ಕೊಟ್ಟು  ಮಗನನ್ನು ಸಾಯಿಸುತ್ತಾಳೆ.
ಸಚ್ಚಾ ದೇರಾ ಸಮುಚ್ಚಯದಲ್ಲಿ ಸಿಕ್ಕಿದ್ದು ಬರೋಬ್ಬರಿ ಆರುನೂರು ಮಾನವ ಅಸ್ತಿಪಂಚರಗಳು ?ಅದೂ ದೇವರ ಹೆಸರಿನಲ್ಲಿ?
ಇನ್ನು ಮ್ಯಾನ್ಮಾರ್ ಹೆಸರು ಕೇಳುವಾಗ ಎದೆ ನಡುಗುತ್ತದೆ.ಅಲ್ಲಿಯ ಅಲ್ಪಸಂಖ್ಯಾತ ಜನ ತಮ್ಮ ಜೀವವನ್ನು ರಕ್ಷಿಸಲಾಗದೇ ಏನು ಮಾಡಬೇಕೆಂದೂ ತಿಳಿಯದೇ ಅಲೆದಾಡುವ ಅವಸ್ಥೆಯಲ್ಲಿದ್ದಾರೆ.ಬುದ್ದ ಸನ್ಯಾಸಿಗಳ ಅಥವಾ ಸೇನೆಯ ಕೈಗೆ ಸಿಕ್ಕರೆ ಜೀವಂತ ಸುಡುತ್ತಾರೆ.ದೇಹವನ್ನೇ ಛಿದ್ರ ಛಿದ್ರಗೋಳಿಸುತ್ತಾರೆ.ಮಣ್ಣಿನಲ್ಲಿ ಜೀವಂತ ಹೂಳುತ್ತಾರೆ. ರಕ್ಷಣಾತ್ಮಕವಾಗಿ ಓಡುತ್ತಾ ಜನರಿಂದ ತಪ್ಪಿಸಿಕೊಂಡರೆ ಒಂದೋ ನಫಿ ನದಿಗೆ ಬಿದ್ದು ಸಾಯಬೇಕು! ಅಥವ ಕಡಲಿಗೆ ಬೀಳಬೇಕು, ಕಡಲಿಗೆ ಬಿದ್ದರೆ ಒಂದೋ ಕಡಲುಗಳ್ಳರ ಸೆರೆ! ಇಲ್ಲವೇ ದೈತ್ಯ ಮೀನುಗಳಿಗೆ ಆಹಾರ! ಇವೆಲ್ಲವನ್ನೂ ಮೀರಿ ದಾಟಿ ಕಾಡು ಹತ್ತಿದರೆ ವನ್ಯ ಮೃಗಕ್ಕೆ ಬಲಿಯಾಗಬೇಕು! ಎಲ್ಲಾ ಮುಗಿದು ಹತ್ತಿರದ ದೇಶದ ತೀರ ತಲುಪಿದರೆ  ಅಲ್ಲಿಯ ಸೇನೆಯು  ಗನ್ನು ಹಿಡಿದು ಗುರಿಯಿಟ್ಟು ಕಾಯತ್ತಿರುತ್ತದೆ! ಇವರನ್ನು ಜನ ಕರೆಯೋದು ಭಯೋತ್ಪಾದಕರು!

ಹೀಗೇ ಅನ್ಯಾಯ ಮುಂದುವರಿದರೆ ಗಂಡಾಂತರ ತಪ್ಪಿದ್ದಲ್ಲ.ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮಹಾ ದುರಂತಕ್ಕೆ ಜನ ತುತ್ತಾಗಬಹುದು.
ಕುರಾನ್ ಎಚ್ಚರಿಸಿತ್ತದೆ.
ಅಕ್ರಮಿಗಳಲ್ಲಿ ಕೆಲವರನ್ನು ಮತ್ತೆ ಕೆಲವರ ಮೇಲೆ ಅಧಿಕಾರ ಚಲಾಯಿಸುವಂತೆ ಮಾಡುವೆವು,ಆ ಮೂಲಕ ಅವರಿಂದಲೇ ಅತಿಕ್ರಮಿಗಳನ್ನು ನಾಶ ಮಾಡುವೆವು.(ತಪ್ಸೀರು ಇಬ್ನು ಕಸೀರ್ (೩/೯೨)ಇದೇ ಆಯತ್ತಿನ ವ್ಯಾಖ್ಯಾನ ತಫ್ಸೀರ್ ರಾಝಿ ಯಲ್ಲಿ  ಹೀಗೇ ನೋಡಬಹುದು.
ಆಡಳಿತ ಅಧಿಕಾರಿಗಳು ಅಕ್ರಮಿಗಳಾದರೆ ಅವರ ಮೇಲೆ ಅಂತಹಾ ಅಕ್ರಮಿಗಳನ್ನೇ ಅಧಿಕಾರಿಗಳನ್ನಾಗಿ ಅಲ್ಲಾಹನು ಮಾಡುತ್ತಾನೆ (ತಫ್ಸೀರು ರ್ರಾಝಿ ೧೩/೨೯೪)

ಇಮಾಂ ಶಾಫಿ (ರ) ಕವಿತೆಯ ಸಾಲು ಜಗತ್ಪ್ರಸಿದ್ಧ ವಾಗಿದೆ.
"ನೀನು ಬಲಿಷ್ಟನಾಗಿದ್ದರೆ  ಯಾರಿಗೂ ಅನ್ಯಾಯ ಮಾಡಬೇಡ" "ಅನ್ಯಾಯ ಅದರ ಅಂತಿಮ ಫಲ ದುಖಃದೆಡೆಗೆ ಮರಳುತ್ತದೆ.'

ಅನ್ಯಾಯ ಕೊನೆಯಾಗಬೇಕೆನ್ನುದು ಆಯತ್ತಿನ ಸಂದೇಶ. ಸದಾ ಕಾಲದಲ್ಲಿಯೂ ನ್ಯಾಯ ,ಶಾಂತಿ ನೆಲೆಯಾಗಬೇಕಾಗಿದೆ.
ಕೌತುಕವೇ‌ನೆಂದರೆ ನಮ್ಮ ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳೇ ಲೂಟಿಯ ಅಡ್ಡೆಯಾಗಿದೆ.
ನಾನು ಖ್ಯಾತ ಡಾಕ್ಟರರೊಬ್ಬರ ಅದ್ಭುತ ಭಾಷಣ ಕೇಳಿದೆ.ಅವರ ಮಾತು ಕೇಳಿ ನನಗೆ ಅಚ್ವರಿ ಮತ್ತು ಗಾಬರಿ! ಡಾಕ್ಟರುಗಳು ಯಮನ ತಮ್ಮಂದಿರಂತೆ! ಯಮ ಜೀವ ಮಾತ್ರ ತಕೊಂಡು ಹೋಗ್ತಾನೆ.ಆದರೆ ವೈದ್ಯ ಹಣವನ್ನೂ ಒಯ್ತಾನಂತೆ
ಡಾಕ್ಟರುಗಳು ನಿಮ್ಮನ್ನು ಮಂಗ ಮಾಡ್ತಾರೆ?
(ನನಗಿದು ಸರಿ ಎಣಿಸಿತು ಒಂದು ನಾರ್ಮಲ್ ಹೆರಿಗೆ ಬಿಲ್ ೭೫,೦೦೦/-?ಒಂದು ದಿನದ ಮಗುವಿನ ಮದ್ದಿನ ಮಾತ್ರ ಚಾರ್ಜು ೧೨೦೦೦/-)
 ಟೆಸ್ಟು ಮೇಲೆ ಟೆಸ್ಟು ಚಕ್ಕಪ್ಪ್ ಮೇಲೆ ಚಕ್ಕಪ್ಪು  ಯಾಕೆ ?ಹಸಿದಾಗ ತಿನ್ನು, ಬಾಯಾರಿದಾಗ  ಕುಡಿ, ತಲೆ ಮೇಲೆ ಆಕಾಶ ಬೀಳದಿದ್ದರೆ ಸಾಯೋ ತನಕ ಬದುಕುತ್ತಿ?"
(i eat when i am hungry, i drink when i feel thirsty, if heaven does'nt fell down i will live till i die)
ದೇಹದ ಕ್ರಿಮಿ ಕೀಟಗಳನ್ನು ಕೊಲ್ಲಬಾರದು. ಈ ಮದ್ದಿನಿಂದ ಅದು ಸತ್ತು ಹೋಗಿದೆ.ಹಿಂದೆ ನಾವು ಉದ್ದುದ್ದ ಹುಳ ನೋಡುತ್ತಿದ್ದೆವು.
ಈಗ ಕ್ರಿಮಿ ಮಾಡಲು ಮದ್ದು ತಯಾರಾಗಿದೆ. ಅದು ಹೊಸ ಕಂಡು ಹಿಡಿತ . ಬೇರೆಯೊಬ್ಬನ ಮಲ! ಅದರ ಹಳದಿ ತೆಗೆದು ಅಮೇರಿಕದಲ್ಲಿ ಐದು ಡಾಲರಿಗೆ ಕ್ಯಾಪ್ಸೂಲ್ ಮಾಡಿ ಮಾರಲಾಗುತ್ತದೆ.ನಾಯಿ ಹೋಟ್ಟೆ ನೋವಾದರೆ ಹುಲ್ಲು ತಿನ್ನುತ್ತದೆ.ಆ ಅರಿವು ನಾಯಿಗಿದೆ . ಕೊಬ್ಬರಿ ಎಣ್ಣೆ ಮೇಲೆ  ಕೂತರೆ ನೊಣದ ಕಾಲಲ್ಲಿರೋ ಕ್ರಿಮಿ ಸಾಯ್ತಿತ್ತು.ಈ ಅರಿವು ನಮಗೂ ನಮ್ಮ ತಾತಂದಿರಿಗೂ ಇತ್ತು .ಯಾವತ್ತು ನಾವು ಡಿಗ್ರಿ ಕೋರ್ಸು ಮಾಡಿದೆವೋ ಆಗ ಅದೆಲ್ಲಾ ಹೊರಟು ಹೋಯ್ತು!. ಕೊನೆಗೆ ಆ ಡಾಕ್ಟರು ಹೇಳಿದ್ದು ಆರೋಗ್ಯಕ್ಕೆ ಇರೋ ಏಕ ಮಾರ್ಗ ಯಾರನ್ನೂ ದ್ವೇಷಿಸಬೇಡ.ಎಲ್ಲರನ್ನೂ ಪ್ರೀತಿಸು. ನೀನು ಸುಖವಾಗಿರಲು ವರ್ಷದಲ್ಲಿ ಎರಡು ದಿನವನ್ನು ಮರೆಯಬೇಕು. ಒಂದು ನಿನ್ನೆ.ಮತ್ತು ನಾಳೆ. ನಿನ್ನೆಗೆ ಕೊರಗಬೇಡ. ನಾಳೆಗೆ ಸಾಯಬೇಡ.ಏನೂ ಆಗಲ್ಲ ಅಗೋದು ಆಗಿಯೇ ಬಿಡುತ್ತದೆ.
ಆ ಡಾಕ್ಟರ್ ಯಾರು ಗೊತ್ತಾ. ಮಂಗಳೂರಿನ ಖ್ಯಾತ ವೈದ್ಯ ಬಿ ಎಂ ಹೆಗ್ಡೆ.
ಕುರಾನ್ ಎಚ್ಚರಿಸುತ್ತದೆ.
"ಅಲ್ಲಾಹನ ಭಯಾನಕ ಶಿಕ್ಷೆ ಎರಗುವ ಮೊದಲು ಅಲ್ಲಾಹನ ಕಡೆ  ಮರಳಿ"
(ಅಝ್ಝುಮರ್ : ೫೪)

SKSSFನ ಯಶಸ್ವಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿರವರ ಭಾಷಣದ ಮುಮುಖ್ಯಾಂಶಗಳು



  • ಎಸ್ ಕೆ ಎಸ್ ಎಸ್ ಎಫ್ ಗೆ ಸಮಸ್ತ ಉಲಮಾ ವಿದ್ವಾಂಸರ ಆಶೀರ್ವಾದ ಇರೋದ್ರಿಂದ ಧಾರ್ಮಿಕ ಸ್ವಾತಂತ್ರ್ಯ ಹೋರಾಡದಲ್ಲಿ ಸಫಲರಾಗುತ್ತೇವೆ
  • ಬ್ರಿಟೀಷರು ಭಾರತ ಬಿಡುವಾಗ ಐವತ್ತು ಗ್ರಾಮಗಳಿಗೆ ಕರೆಂಟ್ ಸವಲತ್ತು ಇರದಿದ್ದರೂ ದೇಶ ಚಂದ್ರ ಮಂಗಳದತ್ತ ದೃಷ್ಟಿ ಮಾಡಿದ್ದರೆ ಅದು ಮೂರು ವರ್ಷಗಳ ಸಾಧನೆ ಯಲ್ಲ
  • ಮೋದೀಜಿ ತಾವು ಬುಲೆಟ್ ರೈಲ್ ಬಿಡಿ, ರಾಕೆಟ್ ಹಾರಿಸಿ ಆದರೆ ಧಾರ್ಮಿಕ ಸ್ವಾತಂತ್ರ್ಯ ದ ಹಕ್ಕಿನ ಮೇಲೆ ಬುಲೆಟ್ ಬೇಡ.
  • ದೇಶದಲ್ಲಿ NOT IN MY NAME ಹೆಸರಲ್ಲಿ ಹೋರಾಟ ನಡೆಯಿತು. I AM GOURY ಹೆಸರಲ್ಲಿ ಪ್ರತಿಭಟನೆ ಆಯಿತು. ಆದರೆ ಧಾರ್ಮಿಕ  ಸ್ವಾತಂತ್ರ್ಯ ಕ್ಕೆ ದಕ್ಕೆಯಾದರೆ   WE ARE INDIAN ಘೋಷಣೆ ಯೊಂದಿಗೆ ಬ್ರಹತ್ ಹೋರಾಟ ಮಾಡುವೆವು.
  • 1947ರಲ್ಲಿ ಪ್ಯಾಲಸ್ತೀನ್  ಹೊತ್ತಿ ಉರಿದಾಗ ಜನ್ಮ ಭೂಮಿ ಕಳಕೊಂಡ ಪ್ಯಾಲಸ್ತೀನ್ ರ  ಪರ ದ್ವನಿ ಎತ್ತಿದ ಭಾರತದ ಆತ್ಮ ಮಹಾತ್ಮಾ ಗಾಂಧಿ!.
  • 1959 ರಲ್ಲಿ ಟಿಬೇಟ್ ಮೇಲೆ ಚೀನಾ ಯುದ್ದ ಸಾರಿದಾಗ ಧರ್ಮ ಗುರು ದಲೈ ಲಾಮ ಗೆ ಆಶ್ರಯ ಕೊಟ್ಟ ಭಾರತ ಪ್ರಧಾನಿ ನೆಹರು,!
  • 1972 ಬಾಂಗ್ಲಾ ವಿಮೋಚನೆ ಮಾಡಿದ ಭಾರತ ಪ್ರಧಾನಿ ಇಂದಿರಾ!,
  • 1982 ರಲ್ಲಿ ಶಾಂತಿ ಸೇನೆಯನ್ನು ಶ್ರೀಲಂಕಾ ಗೆ ಕಳುಹಿಸಿದ ಭಾರತದ ಪ್ರಧಾನಿ ರಾಜೀವ್ ಗಾಂಧಿ!,
  • ಚಕ್ಮಾ ,ಹಜೋಂಗಾ ಬುದ್ದ ,ಹಿಂದು ನಿರಾಶ್ರಿತರಿಗೆ ಪೌರತ್ವ ಕೊಟ್ಟ ಭಾರತದ ಫ್ರಧಾನಿ ಮೋದಿ!,ಆದರೆ ಮ್ಯಾನ್ಮಾರ್ ಮುಸ್ಲಿಂ ನಿರಾಶ್ರಿತರನ್ನು ಹೋರಹಾಕುತ್ತಿರುವ ಕೇಂದ್ರ ಸರಕಾರ!
  • ಶಾಂತಿಯ ನೋಬೆಲ್ ಪ್ರಶಸ್ತಿಯನ್ನು ಮ್ಯಾನ್ಮಾರ್ ರಿನಲ್ಲಿ ಹರಿಯುತ್ತಿರುವ ರಕ್ತ ದಲ್ಲಿ ಧಫನ್ ಮಾಡಿದ ಆಂಗ್ ಸೂಕಿ?
  • ಸ್ವಾಮಿ ವಿವೇಕಾನಂದ ರ ಚಿಕಾಗೊ ಭಾಷಣದಲ್ಲಿ ಮ್ಯಾನ್ಮಾರ್ ರಿನ ಹತ್ಯಾಕಾಂಡ ಮತ್ತು ಗುಂಪು ಹತ್ಯೆಯ ಅಸಹಿಷ್ನತೆಯನ್ನು  ಖಂಡಿಸಿದ್ದರೆ ಜಗ ಮಾನ್ಯತೆ ಬರುತ್ತಿತ್ತು
  • ಜಗತ್ತು ದೇವಾಲಯವೆಂದ ದೇಶ ಭಾರತ.ಆದರೆ ಯಾಕೆ ಮ್ಯಾನ್ಮಾರ್ ಗೆ ದಯೆಯ ಬಾಗಿಲು ತೆರೆಯುತ್ತಿಲ್ಲ?
  • ತ್ರಿವಳಿ ಯನ್ನು ಪಾರ್ಲಿಮೆಂಟಿನ ನಲ್ಲಿ ರದ್ದು ಮಾಡಿದರೆ ಅದು ನೋಟು ರದ್ದತಿ ಯಂತೆ ಕಳಪೆ ಕಾರ್ಯ ಮಾತ್ರವಾಗುವುದು
  • ಕಪ್ಪು ಹಣ ಬರಲಿಲ್ಲ ಪಿಂಕ್  ನೋಟು ಬಂತು,ಹಸಿರು ನೋಟು ಬಂತು,ಗ್ರೀನ್ ಬಂತು,ಮುಂದೆ ಬ್ಲಾಕ್ ಎಂಡ್ ವೈಟ್ ಬರಬಹುದು
  • ಭಾಷಣ ವಿರೋಧಾಭಾಸ ದೇವಾಲಯ ದ ಹೆಸರಲ್ಲಿ  ಅಧಿಕಾರ ಪಡೆದವರು ಆದರೆ ದೇವಾಲಯಕ್ಕಿಂತ ಶೌಚಾಲಯ ಮುಖ್ಯ ವಂತೆ.
  • ಗುಂಪು ಹತ್ಯೆ ನಡೆಯುತ್ತಿದ್ದರೂ ತಿನ್ನುವುದು ಮುಖ್ಯವಲ್ಲ ವಂತೆ
  • ಮಹಿಳೆಯರ ಬಗ್ಹೆ ಕಾಳಜಿ ತಂಬಾ ಅಂತೆ  ಆದರೆ ಗೌರಿ ಮನೆ ಬಾಗಿಲಲ್ಲಿ ಹೆಣವಾಗ್ತಾರೆ
  • ಸೆಕ್ಯೂಲರ್ ದೇಶದಲ್ಲಿ ಸಾಂವಿಧಾನಿಕವಾಗಿ ಧರ್ಮ,ಅಭಿವ್ಯಕ್ತಿ ಗೆ ಸ್ವಾತಂತ್ರ್ಯ ವಿರುವಾಗ ತ್ರಿವಳಿ ಹೇಗೆ ಅಪ್ರಸ್ತುತ?
  • ತ್ರಿವಳಿ ಪರಸ್ಪರ ಒಪ್ಪಕೊಂಡವರಿಗೆ ಮಾತ್ರ ಅಲ್ಲದವರು ಸಿವಿಲ್ ಕಾನೂನಿನ ಮೊರೆ ಹೋಗುವಾಗ ಬಹು ಕೋಟಿ ಮುಸ್ಲಿಮರ ಹಕ್ಕನ್ನು ಯಾಕೆ ಕಸಿಯಬೇಕು?
  • ಎರಡು ಕಡೆ ಒಪ್ಪಿಕೊಂಡಾಗ, ಹಾಗೇ ಅನೈತಿಕ ಸಂಬಂಧ  ಸಾಬಿತಾದ ಮೇಲೆ ಇಲ್ಲವೇ ಪತ್ನಿ ಪತಿಯನ್ನು ಮುಗಿಸಲು ಮುಂದಾದಾಗ ಯಾಕೆ ಕಾಯಬೇಕು?
  • ನಕಲಿ ಎನ್ ಕೌಂಟರ್ ನಡೆದಾಗ ಯಾರೂ ಪೋಲೀಸರ ಬಂದೂಕನ್ನು ನಿಶೇಧಿಸಲಿಲ್ಲ!
  • ಅಂಗರಕ್ಷಕ ರೇ ಪ್ರಧಾನಿಯನ್ನು ಕೊಂದಾಗ ಅಂಗರಕ್ಷರನ್ನು ಬೇಡವೆನ್ನಲಿಲ್ಲ!
  • ತುರ್ತು ನಿರ್ಗಮನ ಬಾಗಿಲನ್ನು ಯಾರೂ ಬೇಡ ವೆನ್ನಲಿಲ್ಲ ಹಾಗೇ ತ್ರಿವಳಿ
  • ಸಂತರು, ಮಹರ್ಷಿಗಳು, ಔಲಿಯಾಗಳು ಬೆಳೆಸಿದ ಪರ ಮತ ಸಹಿಷ್ಣುತೆ ಕಾಪಾಡೋಣ ನಾವೆಲ್ಲರೂ ಸಂವಿಧಾನ ವನ್ನು ಕಾಪಾಡೋಣ ಗಟ್ಟಿಯಾಗಿ ಹೇಳೋಣ "WE ARE INDIYAN"


REPORT AL AHSAN MONTHLY

ಜೀವ ರಕ್ಷಣಾ ಸೇವಾಕಾರ್ಯಗಳು ಗಡಿ ದಾಟಿ ಮ್ಯಾನ್ಮಾರಿನ ಸಂತ್ರಸ್ತರಿಗೆ ತಲುಪಲಿ

ಮರಣ ಮತ್ತು ರೋಗ ವನ್ನು ಬರೀ ಮದ್ದಿನಿಂದ ದೂರಮಾಡಲಾಗದು

ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಬಾಲಕ ಇಮ್ರಾಝಿನ ಮರಣವು ದಿಗ್ಭ್ರಮೆಯನ್ನುಂಟುಮಾಡಿದೆ. ಕದಿಕೆಯ ಮರಿಯಂ ಸಾಹಿರಾ ಒಂಬತ್ತು ವರ್ಷ ಪ್ರಾಯದ ಮಗುವಿನ ಆರೋಗ್ಯಕ್ಕಾಗಿ ವರ್ಷ ಪೂರ್ತಿ ಹೆಚ್ಚುಕಡಿಮೆ ಇಪ್ಪತ್ತೈದು ಲಕ್ಷ ಕ್ಕಿಂತಲೂ ಹೆಚ್ಚು ಖರ್ಚು ಮಾಡಿದರೂ ಮುದ್ದು ಮಗಳನ್ನು ಉಳಿಸಲಾಗಲಿಲ್ಲ.
ಬೋಳಾರದ ಹೆಣ್ಣು ಮಗಳು   ನಿಸ್ಮಿತ  ಮಗುವನ್ನು ಹೆತ್ತು ನಾಲ್ಕೈದು ದಿನಗಳಲ್ಲಿ ನಿಮೋನಿಯಕ್ಕೆ ತುತ್ತಾಗಿ ತೀರಿಕೊಳ್ಳುತ್ತಾಳೆ.
ಕೆಲವು ಮರಣಗಳು ನಮ್ಮನ್ನು ಇನ್ನಿಲ್ಲದಂತೆ ಘಾಸಿ ಗೊಳಿಸಿದರೆ ಮತ್ತೆ ಕೆಲವು ಮರಣಗಳು ಗಮನಕ್ಕೆ ಬಾರದೇ ನಡೆದು ಹೋಗುತ್ತದೆ.
ಇದಕ್ಕಿಂತಲೂ ದಯನೀಯ ಸ್ಥಿತಿ ಮಾರಕ ರೋಗಕ್ಕೆ ತುತ್ತಾಗಿ ಅಥವಾ ಅಪಘಾತಗಳಲ್ಲಿ ತೀವ್ರ  ಗಾಯಗೊಂಡು ಚಿಕಿತ್ಸೆಗಾಗಿ ಪರದಾಡುವವರದ್ದು.
ಇಂತಹಾ ಪರಿಸ್ತಿತಿ ಯಾರಿಗೂ ಬೇಡ ಎಂದು ಕೆಲವೊಮ್ಮೆ ಅಂದು ಕೊಂಡರೂ ಏನನ್ನೂ ಮಾಡಲಾಗದ ಸ್ಥಿತಿ?
ಇಲ್ಲಿ ನಮಗೆ ಕೆಲವೊಂದು ಕಾರ್ಯಗಳನ್ನು ಮಾಡಿ ರೋಗ ಮತ್ತು ಮರಣವನ್ನು ದೂರಮಾಡಬಹುದು ಎನ್ನುವುದು ಸಾತ್ವಿಕ ವಿಚಾರ.
ಪ್ರವಾದಿಗಳು ಹೇಳುತ್ತಾರೆ.
ವಿಧಿಯನ್ನು ಪ್ರಾರ್ಥನೆಯು ತಡೆಗಟ್ಟುತ್ತದೆ. ಸತ್ಕರ್ಮವು ಆಯುಷ್ಯವನ್ನು ವೃದ್ಧಿಸುವಂತೆ ಮಾಡುತ್ತದೆ.ಪಾಪಗಳಿಂದ ಅನ್ನಕ್ಕೆ ಕುತ್ತು ಬರುತ್ತದೆ.
ನಮ್ಮಲ್ಲಿರುವ ಕೊರತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದಿಲ್ಲ ಎನ್ನುವುದಾಗಿದೆ.
ರೋಗ ಬಂದ ಮೇಲೆ ಲಕ್ಷ ಖರ್ಚು ಮಾಡಲು ಮುಂದಾಗುತ್ತೇವೆ.ಮರಣ ಬಳಿಕ ದಾನ ಧರ್ಮ ಮಾಡುತ್ತೇವೆ.
ಮರಣ ಹೊಂದಿದವರ ಹೆಸರಲ್ಲಿ ಮಸೀದಿಯನ್ನೇ ಕಟ್ಟುವೆವು.
ಆದರೆ ಜೀವಿತಾವಧಿಯಲ್ಲಿ ಹಸಿದವನಿಗೆ ಅನ್ನ ಕೊಡುವ ಮನಸ್ಸಿಲ್ಲ.ಬದುಕಿರುವಾಗ ತಿರುಗಿ ನೋಡದವ ಮರಣದ ಸಮಯದಲ್ಲಿ ಕಣ್ಣೀರು ಹಾಕಿ ಏನು ಲಾಭ?
ನಮ್ಮ ಮುಂದೆ ನಿತ್ಯದ ಜೀವನಕ್ಕೆ ಪರದಾಡುವ ಮಂದಿ ಅನೇಕ ಇದ್ದಾರೆ.
ಮನೆ ಬೀಳುವ ಸ್ಥಿತಿ ಯಲ್ಲಿ!
ಸೋರುವ ಮಾಡು! ಹಾಳಾಗಿ ಹೋಗುವ ವಸ್ತುಗಳು,ಬೆಂಬಿಡದ ರೋಗಗಳು! ದಾರಿಯೇ ಕಾಣದ ರೀತಿಯಲ್ಲಿ ಬದುಕುವ ಮಂದಿ.
ನಾವೆಷ್ಟೇ ಶಕ್ತರೆಂದು ಎನಿಸಿದರೂ ಒಂದು ರೋಗ ನಮ್ಮನ್ನು ಅಲುಗಾಡಿಸಿ ಬಿಡುತ್ತದೆ.ಮತ್ತೆ ನಮಗೆ ಯಾರೊಂದಿಗೂ ಹಗೆತನ ಇರೋದಿಲ್ಲ.ಪೈಪೋಟಿ ಗೆ ಬೀಳೋದಿಲ್ಲ.
ನನಗೊಂದು ಕಥೆ ನೆನಪಾಗುತ್ತದೆ.ಒಂದೂರಲ್ಲಿ ರಾಜ ಆಡಳಿತ ವಿತ್ತು.ಆದರೆ ಅಲ್ಲಿ ಅಧಿಕಾರ ಅವಧಿ ಒಂದು ವರ್ಷ ಮಾತ್ರವಾಗಿತ್ತು. ಒಂದು ವರ್ಷದ ಮಟ್ಟಿಗೆ ಒಬ್ಬನನ್ನು ರಾಜನನ್ನಾಗಿ ಮಾಡಿ ನಂತರ ದೂರದ ದ್ವೀಪಿಗೆ ಬಿಟ್ಟು ಬರುವ ಸಂಪ್ರದಾಯ. ಅಲ್ಲಿ ಜನವಾಸವಿರಲಿಲ್ಲ. ಅಲ್ಲಿರುವ ಕ್ರೂರ ಪ್ರಾಣಿಗಳಿಗೆ ಆತ ಬಲಿಯಾಗುವುದು ಸಾಮಾನ್ಯ.  ಈ ಕಾರಣದಿಂದ ರಾಜನಾಗಿ ಆರಿಸಲ್ಪಟ್ಟವನು ತನ್ನ ಅಧಿಕಾರದ ಕೊನೆಯಲ್ಲಿ ಸಂಕಷ್ಟ ಎದುರಿಸುತ್ತಿದ್ದ ಒಮ್ಮೆ ಹಾಗೇ ರಾಜನಾದ ಒಬ್ಬ ಮೊದಲ ತಿಂಗಳಲ್ಲೇ ಆ ದ್ವೀಪಿಗೆ ಸೇನೆಯ ನ್ನು ಕಳಿಸಿ ಮೃಗಗಳನ್ನ
ಸಂಹರಿಸುತ್ತಾನೆ.ನಂತರ ಅಲ್ಲಿ ಬೇಕಾದ ಎಲ್ಲಾ ವ್ಯವಸ್ತೆಯ ನ್ನು ಮಾಡಿಕೊಳ್ಳುತ್ತಾನೆ.ವರ್ಷ ಮುಗಿಯುತ್ತಾ ಬಂದಾಗ ಯಾವ ಚಿಂತೆ ಇಲ್ಲದೇ ಆ ದ್ವೀಪಿಗೆ ಹೊರಡುತ್ತಾನೆ.
ಇದು ಕಥೆಯಾದರೂ  ವ್ಯಥೆ ಪಡದಿರಲು  ಪೂರ್ವ ತಯಾರಿಯಾಗಿ ಏನಾದರೂ ಮಾಡಬೇಕೆಂದನ್ನು ಇದು ಹೇಳಿಕೊಡುತ್ತದೆ.
ರೋಗ ,ಮರಣ ಬರುವ ಮೊದಲು ಪುಣ್ಯ ಮಾಡುವುದೂ ಆರೋಗ್ಯ ಕಾಪಾಡುವ ಭಾಗವಾಗಿ ಪ್ರವಾದಿಯವರು (ಸ) ವಿವರಿಸುತ್ತಾರೆ.
ಉತ್ತಮ ಕಾರ್ಯ ಪರರ ಸೇವೆ ಮುಂತಾದವುಗಳಿಂದ ನಮ್ಮ ಆರೋಗ್ಯ ವನ್ನು ಆಯುಷ್ಯವನ್ನೂ ಕಾಪಾಡಬಹುದು ಎನ್ನುವುದು ಪ್ರವಾದಿ ಮಾತು.
ದಾನವು ಅಲ್ಲಾಹನ ಕೋಪವನ್ನುತಣಿಸುತ್ತದೆ. ಕೆಟ್ಟ ಮರಣ ದಿಂದ ಕಾಪಾಡುತ್ತದೆ.
ದಾನದ ಮೂಲಕ ನಿಮ್ಮ ರೋಗಗಳಿಗೆ ಚಿಕಿತ್ಸೆ ಮಾಡಿ ಹದೀಸು
ನಮ್ಮ ಸುತ್ತಲೂ ಇರುವ ಅಸಹಾಯಕರಿಗೆ ,ರೋಗಗ್ರಸ್ತ ಜನರಿಗೆ ನಮ್ಮಿಂದ ಸಾಧ್ಯವಾದ ಸಹಕಾರ ತಲುಪಬೇಕಾಗಿದೆ.ಅದು ವರ್ಗ. ಪಂಗಡ, ಜಾತಿ, ಧರ್ಮ ,ಊರು ಕೇರಿ, ದೇಶ ದಾಟಿ ಮ್ಯಾನ್ಮಾರಿನ ನಿರಾಶ್ರಿತ ಜನರಿಗೂ ಮುಟ್ಟಬೇಕು.ಆ ಮೂಲಕ
ರೋಗ ,ಸಾವು ನೋವನ್ನು ಇನ್ನಷ್ಟು ದೂರ ಮಾಡೋಣ.

ವರದಿ ಅಲ್ ಅಹ್ಸನ್ ಮಾಸಿಕ

ಅಭಿವ್ಯಕ್ತಿಯನ್ನು ಗುಂಡಿನ ಮೂಲಕ ಹತ್ತಿಕ್ಕಲಾಗದು.ಯಾಕೆಂದರೆ ರಕ್ತ ಅಧ್ಯಾಯವನ್ನು ವಿಚಾರಕ್ರಾಂತಿಯು ಎಲ್ಲಾ ಕಾಲದಲ್ಲಿ ಸೋಲಿಸಿದ್ದೇ ಇತಿಹಾಸ.

ಬಲವಂತವಾಗಿ ಹೇರಿದ್ದು ಹೆಚ್ಚು ಕಾಲ ಬಾಳದು

ಭಾಷಣ :ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಅಭಿವ್ಯಕ್ತಿ ಯ ಬಗ್ಗೆ ಹೆಚ್ಚು ಗೌರವ ಕೊಡುವ ಧರ್ಮ ವಾಗಿದೆ ಇಸ್ಲಾಂ.
"ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ"(2:256) ಎಂದು ಕುರಾನ್ ಹೇಳುತ್ತದೆ.
ಸ್ವ ಇಚ್ಚೆಯಿಂದ ಅಲ್ಲದೇ ಯಾವನೇ ಒಬ್ಬನ ಇಸ್ಲಾಂ ಧರ್ಮ ಸ್ವೀಕಾರವನ್ನು ಪುರಸ್ಕರಿಸಲಾಗುವುದಿಲ್ಲ.ಇದು ಸಂಪೂರ್ಣ ಅಭಿವ್ಯಕ್ತಿ ಗೆ ಇಸ್ಲಾಂ ಕೊಟ್ಟ ಅಂಗೀಕಾರ ವಾಗಿದೆ.
ಪ್ರವಾದಿ( ಸ ) ರವರು ತನ್ನ ಚಿಕ್ಕಪ್ಪರಿಗೆ  ಅವರ ಕೊನೆಯ ಉಸಿರಿನ ತನಕ ಉಪದೇಶವನ್ನೇ ನೀಡಿದರು.ಹುದೈಬಿಯಾ ಸಂಧಾನ ಸಮಯ ವಿರೋಧಿ ಬಣದ ನಾಯಕ ಸುಹೈಲ್ ರವರು ಕಾರಾರು ಒಪ್ಪಂದ ಪತ್ರದಲ್ಲಿ *ಬಿಸ್ಮಿಲ್ಲಾಹಿ ಮತ್ತು ರಸೂಲುಲ್ಲಾ "ಎಂಬ ಎರಡು ಪದಗಳನ್ನು ತೆಗೆದು ಹಾಕಲು  ಹೇಳುತ್ತಾರೆ ಬದಲಿಗೆ ಬಿಸ್ಮಿಕಲ್ಲಾಹುಮ್ಮ ಎಂದೂ ಮುಹಮ್ಮದ್ ಬಿನ್ ಅಬ್ದುಲ್ಲಾಹಿ ಎಂದು  ಬರೆಯಲು ಅಪೇಕ್ಷಿಸುತ್ತಾರೆ.ಕಾರಣ ಇಷ್ಟೆ ನಿಮ್ಮನ್ನು ಅಲ್ಲಾಹನ ಪ್ರವಾದಿ ಎಂದು ನಾವು ಒಪ್ಪಿಕೊಂಡರೆ ನಮಗೂ ನಿಮಗೂ ಇರುವ ವ್ಯತ್ಯಾಸ ವೇನು? ಈ ಅಭಿಪ್ರಾಯವನ್ನು ರಸೂಲರು ಸಮ್ಮತಿಸುತ್ತಾರೆ. ಹಿಜರಿ ಆರನೆಯ ವರ್ಷ.ಅಹ್ಝಾಬ್ ಯುದ್ಧ ಬಳಿಕ ನಜಿದಿನ ಭಾಗಕ್ಕೆ ರಸೂಲರು ಸೈನ್ಯವನ್ನು ಕಳುಹಿಸುತ್ತಾರೆ.ಸೇನೆಯು ಮರಳಿ ಬರುವಾಗ ಬನೂ ಹನೀಫ್ ಗೋತ್ರ ನಾಯಕನನ್ನು ಸೆರೆ ಹಿಡಿದು ತರುತ್ತಾರೆ .ಪ್ರವಾದಿ ಕೆಳುತ್ತಾರೆ ಇದು ಯಾರೆಂದು ಗೊತ್ತಾ ?ಇದುವೇ ಸುಮಾಮತ್ ಇಬ್ನು ಉಸಾಲ್ !ಇವರನ್ನು ಚೆನ್ನಾಗಿ ಉತ್ತಮ ಸೆರೆಯಾಳಾಗಿ ನೋಡಿಕೊಳ್ಳಿ.ನಂತರ ತನ್ನ ಒಂಟೆಯ ಹಾಲನ್ನು ಕುಡಿಯಲು ನೆಬಿಯವರು ವ್ಯವಸ್ಥೆ ಗೊಳಿಸಿದ್ದರು.ಕೆಲ ದಿನಗಳ ಕಾಲ ಪ್ರವಾದಿಯವರು ಅವರಿಗೆ ಧರ್ಮದ ಬಗ್ಗೆ ಬೋಧನೆ ನೀಡುತ್ತಾರೆ.ಯಾವುದಕ್ಕೂ ಕಿವಿಗೊಡದ ಸುಮಾಮರನ್ನು ನೆಬಿಯವರು ಬಂಧನದಿಂದ ಮುಕ್ತಗೊಳಿಸುತ್ತಾರೆ.ಸೆರೆಯಿಂದ ಮುಕ್ತವಾದ ಸುಮಾಮ ಮಸೀದಿ ಬಳಿ ಇರುವ ಖರ್ಜೂರ ಮರ ಬಳಿ ಹೋಗಿ ಅಲ್ಲೆ ಇರುವ ನೀರಿನಲ್ಲ ಸ್ನಾನ ಮಾಡಿ ಸ್ವ ಇಚ್ಚೆಯಿಂದ ಮರಳಿ ಬಂದು ನಬಿ ಸಮ್ಮುಖದಲ್ಲಿ ಇಸ್ಲಾಮನ್ನು ಸ್ವೀಕರಿಸುತ್ತಾರೆ.

ಅನ್ಯವನ ಮೇಲೆ ಒತ್ತಡ ಹೇರದಂತೆ ಪ್ರತಿಯೊಬ್ಬರಿಗೂ ಅವರವರ ಅಭಿಮತವನ್ನು ಪ್ರಕಟಿಸುವ ಅವಕಾಶವಿದೆ.
ಅಂತಹಾ ಸ್ವಾತಂತ್ರ್ಯ ವನ್ನು ಪ್ರಬಲವಾಗಿ ಪ್ರತಿಪಾದಿಸಿದ ದೇಶ ನಮ್ಮದು.ಅದು ಸರ್ವರಿಗೂ ಸ್ವತಂತ್ರವಾಗಿ ಚಿಂತಿಸಲು ಮತ್ತು ಅದನ್ನು ಆಚರಿಸಲು ಅನುವು ಮಾಡಿ ಕೊಡುತ್ತದೆ. ದೇಶದ ಸಾಂವಿಧಾನಿಕ ಅಡಿಪಾಯವೂ ಅದಾಗಿದೆ.ಈ ಮಹತ್ವದ ಹಕ್ಕನ್ನು ಕಸಿದುಕೊಂಡು ಅಘೋಷಿತ ಸಿದ್ದಾಂತ ಗಳನ್ನು ಒಪ್ಪಿಕೊಂಡು ಸುಮ್ಮನಿರಬೇಕೆಂಬ ಸಂದೇಶಗಳನ್ನು ಕೆಲವು ಹಿತಾಸಕ್ತಿಗಳು ಬರ್ಬರತೆ ಯ ನೆರಳಲ್ಲಿ ಸಾರುತ್ತಿರುವುದನ್ನು ನಾವು ನೋಡುತ್ತಿದ್ದೇವೆ.ನಾರಿಯರಿಗೆ ವಿಶೇಷವಾದ ಸ್ಥಾನ ?ಪ್ರಾಣಿಗಳಿಗೆ ಪರಮವಾದ ಮಾನ ? ಅಭಿವ್ಯಕ್ತಿ ಗೆ ಕಾನೂನಿನ ರಕ್ಷೆ ?ಹೀಗಿದ್ದೂ ಪ್ರಾಣ ರಕ್ಷಾಣಾರ್ಥವಾಗಿ ಯಾವುದನ್ನು ಒಲ್ಲದ ಸವಕಲು ಜೀವವನ್ನು ನಿರ್ಭಯವಾಗಿ ಮನೆ ಬಾಗಿಲಲ್ಲೇ ಕೊಂದು ಹಾಕಲ್ಪಡುವಾಗ ನಷ್ಟವಾಗಿದ್ದು ಒಂದು ಜೀವ ಮಾತ್ರವಲ್ಲ. ಬದಲಾಗಿ ಈ ದೇಶದ ಜೀವಾಳವಾಗಿರು ಪ್ರಾಣವಾಯು ಅಭಿವ್ಯಕ್ತಿ ಯಾಗಿದೆ.ಈ ಗಾಯವು ಅಮೇರಿಕ,ಲಂಡನ್ ನಲ್ಲೂ ಚಲನವನ್ನುಂಟು ಮಾಡಿದೆ.ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ.ಅನ್ಯಾಯ ಅಕ್ರಮವನ್ಮು ಎದುರಿಸುವ ಮನೋ ಧೈರ್ಯ ಬಲವಾಗುತ್ತಿದೆ.ಅದು ಸಾವಿರಾರು ಹೋರಾಟಗಾರರನ್ನು ಸೃಜಿಸಲಿದೆ.
ಜಗತ್ತಿನಲ್ಲಿ ನಡೆದ ಮಾನವ ಹತ್ಯಾಕಾಂಡದ ಅಧ್ಯಾಯಗಳು ಒಂದಲ್ಲ ಎರಡಲ್ಲ.ಸಾವಿರಾರು !ಅದರೆ ಎಲ್ಲಾ ದೌರ್ಜನ್ಯ ದಬ್ಬಾಳಿಕೆಯನ್ನು ಸಹಿಸಿ ಎದ್ದು ನಿಲ್ಲಲು ಮಾನವ ಸಮಾಜಕ್ಕೆ ಸಾಧ್ಯವಾಗಿದ್ದು ಸಮಾಜದೊಳಗೆ ಜಾಗ್ರತವಾಗುವ ವೈಚಾರಿಕತೆಯ ಫಲವಾಗಿದೆ.ಅದಿಲ್ಲದೇ ಹೋಗಿದ್ದರೆ ಜಗತ್ತಿನಲ್ಲಿ ದುಷ್ಟರೇ ತುಂಬಿಕೊಳ್ಳುತ್ತಿದ್ದರು.ಜಗತ್ತಿನಲ್ಲಿ ಇರುವ ಎಲ್ಲಾ ಅತ್ಯಾಧುನಿಕ ಆಯುಧಗಳನ್ನು ಸೋಲಿಸುವ ಪರಿಣಾಮಕಾರಿ ಆಯುಧ ವಿಚಾರ ಕ್ರಾಂತಿ.ಅದು ದುರುಳ ದುಷ್ಟರನ್ನು ಮಣ್ಣು ಮುಕ್ಕಿಸಿದೆ.ಬಲವಂತವಾಗಿ ಹೇರಲ್ಪಡುವ ಯಾವುದೇ ನಂಬಿಕೆ, ವಿಶ್ವಾಸಗಳು ಬಹುಕಾಲ ಉಳಿಯದು.ಖ್ಯಾತ ಚಿಂತಕರೋರ್ವರ ಮಾತು ಅಕ್ಷರಶಃ ಸತ್ಯ.
"ನಾನು ಬದುಕಿರೋ ತನಕ ನಿನ್ನ ಅಭಿಪ್ರಾಯವನ್ನು ಒಪ್ಪಲಾರೆ . ಆದರೆ ಅದನ್ನು ಪ್ರಕಟಗೊಳಿಸಲು ನಿನಗಿರುವ ಹಕ್ಕಿನ ರಕ್ಷಣೆಗೆ ದೇಹದ ಹನಿ ರಕ್ತ ಇರೋ ತನಕ ಹೋರಾಡುವೆ.
ಬಹು ರೀತಿಯ ಸಂಸ್ಕೃತಿಯೇ ಧರ್ಮ ವೆನ್ನುವವರು ಸಾಮಾನ್ಯ ಜನರ ಅಭಿವ್ಯಕ್ತಿಯನ್ನೇ ಕಸಿಯಲು ತಂತ್ರ ರೂಪಿಸುವುದು ಎಷ್ಡು ಸರಿ.?ಇಸ್ಲಾಮಿನ ತತ್ವ ಪ್ರಕಾರ ಬಲವಂತವಾಗಿ ಯಾರನ್ನೂ ಮುಸ್ಲಿಂ ಆಗಿ ಮಾಡಲಾಗದು ಕಾರಣ ಯಾವನೇ ಒಬ್ಬನನ್ನು ಮುಸಲ್ಮಾನ ಎಂದು ಪರಿಗಣಿಸಬೇಕಾದರೆ ಆತ ಸ್ವಯಂ ಪ್ರೇರಿತನಾಗಿ ನಂಬಿ,ವಿಶ್ವಾಸವಿರಿಸಿ ನಾಲಗೆಯ ಮೂಲಕ ಹೇಳಲೇ ಬೇಕಾಗುತ್ತದೆ.
ಹೀಗೆ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸಿದ ಧರ್ಮವಾಗಿದೆ ಇಸ್ಲಾಂ.
ಆಕಾರಣಗಳಿಂದಲೇ ಅರಬ್ ದೇಶಗಳಲ್ಲಿ ಇಂದಿಗೂ ನಲುವತ್ತು ಲಕ್ಷ ಕ್ಕಿಂತಲೂ ಅಧಿಕ ಮುಸ್ಲಿಮೇತರರು ಜೀವನ ಸಾಗಿಸುತ್ತಿದ್ದಾರೆ.
ಅದೇ ರೀತಿ ಮುಸಲ್ಮಾನರು ಆಡಳಿತ ನಡೆಸಿದ ಪ್ರದೇಶಗಳಲ್ಲಿ ಶತಶತಮಾನಗಳಲ್ಲಿ ಪರಮತ ಸಹಿಷ್ಣುತೆಯ ಉದಾತ್ತ ಮಾದರಿ ಉಳಿದಿದೆ.ಅದೇ ಕಾರಣಕ್ಕಾಗಿ ಭಾರತವೆಂಬ ಬ್ರಹತ್ತಾದ ಸಮಗ್ರವಾಗ ಧರ್ಮ ನಿರಪೇಕ್ಷ ಸಂವಿಧಾನವನ್ನು ಮುಸಲ್ಮಾನರು ಎದೆಗಪ್ಪಿಕೊಂಡು ಗೌರವಿಸುತ್ತಾರೆ.ಎಲ್ಲಿ ಯಾರು ಪರರ ಅಭಿವ್ಯಕ್ತಿ ಯನ್ನು ಗೌರವಿಸುವುದಿಲ್ಲವೋ ಅಲ್ಲಿ ಗುಲಾಮತನದ ಮತ್ತು ಜಾತಿ ಬೇಧ ದ ಸಂಹಾರ ನಡೆಯುತ್ತದೆ.ಮ್ಯಾನ್ಮಾರ್ ನಲ್ಲಿ ನಡೆವ ಹತ್ಯಾಕಾಂಡ ಮತ್ತು ನಮ್ಮ ದೇಶದಲ್ಲಿ ನಡೆಯುವ ಅಸಹಿಷ್ಣುತೆಯ ಹತ್ಯೆಗಳು ಇದರ ಪರಿಣಾಮವಾಗಿದೆ.ದಲಿತ,ಅಲ್ಪಸಂಖ್ಯಾತ, ಮತ್ತು ವಿಚಾರವಾದಿಗಳ ಕೊಲೆಗಳು ಇದನ್ನು ಸಾಬೀತು ಪ‌ಡಿಸುತ್ತದೆ.

🌅 ವರದಿ ಅಲ್ ಅಹ್ಸನ್ ಮಾಸಿಕ

ನಕಲಿ ದೇವ ಮಾನವರ ವಂಚನೆಯನ್ನು ಬುಡ ಸಮೇತ ಕಿತ್ತೆಸೆದ ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಂ

ಇಪ್ಪತ್ತನಾಲ್ಕರ ಹೆಣ್ಣು ಮಗಳು ಕಿಟಕಿಯ ಮೂಲಕ ನನ್ನನ್ನು ರಕ್ಷಿಸಿ ಎಂದು ಸ್ವಂತ ಮನೆಯಿಂದ ಕೂಗಿ ಹೇಳುವ ಸ್ಥಿತಿಯಲ್ಲಿ ‌.....?

ಭಾಷಣ ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ 

ಬಕ್ರೀದ್ ಸಂದೇಶ


ಹಝ್ರತ್ ಇಬ್ರಾಹಿಂ(ಅ)ಮತ್ತು ಕುಟುಂಬದ ತ್ಯಾಗ, ಬಲಿದಾನಗಳ ಮಹೋನ್ನತ ಅಧ್ಯಾಯದ ಸ್ಮರಣೆ ಯಾಗಿದೆ ಈದುಲ್ ಅಝ್ಹಾ.
ಅಸ್ತಮಿಸುವ ನಕ್ಷತ್ರ, ಚಂದ್ರ,ಸೂರ್ಯ ಹಾಗೇ ಮಾನವ ನಿರ್ಮಿತ ರೂಪಗಳು ಹೆಚ್ಚೇಕೆ ಮಾನವನೇ ದೇವನಾಗಲಾರನೆಂಬ ಸತ್ಯವನ್ನು ಆಧಾರ ಸಮೇತ ಜಗತ್ತಿಗೆ ಸಾರಿದ ಏಕ ವ್ಯಕ್ತಿ ಸೇನೆಯ ಸಾಮ್ರಾಟ್ ಹಝ್ರತ್ ಇಬ್ರಾಹಿಂ (ಅ).
ದೇವದೂತರೆಲ್ಲರೂ ಹೇಳಿದ್ದು ನಾವು ಅಲ್ಲಾಹನ ದಾಸರು.ಯಾರೂ ದೇವನೆಂದೋ ದೇವ ಮಾನವನೆಂದೋ ವಾದಿಸಲಿಲ್ಲ.
ಎಲ್ಲಾ ಪ್ರವಾದಿಗಳು ಪ್ರತಿಪಾದಿಸಿದ ಕಾರ್ಯ ಏಕ ದೇವ ಸಿದ್ದಾಂತ ವಾಗಿತ್ತು.
ಅತ್ಯಾಧುನಿಕತೆಯ ಈ ಕಾಲದಲ್ಲೂ ಚೋಟಾ ಮನುಷ್ಯ ದೇವ ಮಾನವನೆಂದು ಪ್ರತಿ ಬಿಂಬಿಸೋದು ಅಸಹ್ಯವಾಗಿ ಕಾಣುತ್ತದೆ.ದಿನಕ್ಕೆ ಹದಿನೇಳು ಲಕ್ಷದಷ್ಟು ಸಂಪಾದನೆ ,ಐದು ಲಕ್ಷದಷ್ಟು ಅನುಯಾಯಿಗಳು ರಾಜಕೀಯದ ಬಿಗ್ ಡೀಲುಗಳು ?ನಡೆಸುವ ಗುರ್ಮಿತ್ ಬಾಬ ಕಡೆಗೂ ಜೈಲು ಪಾಲಾಗಿದ್ದು ಐತಿಹಾಸಿಕ ಸತ್ಯ.ಆ ಮೂಲಕ ಕೆಲವರ
ಅರಮನೆಯಗಳು ದೇವ ಆಸ್ಥಾನ ಆಗಿರದೇ ಅದು ಬರೀ ಮಾಂಸ ಉಪಚಾರದ ಕೋಣೆಗಳು ಮಾತ್ರವಾಗಿತ್ತೆಂದು ಬೆಳಕಿಗೆ ಬಂತು.ಹಾಗೇ ದೇವ ಮಾನವ ಮಾನ ಕಳೆದು ಮಾನವ ನ್ಯಾಯಾಲಯದಲ್ಲಿ ಅತ್ತು ಕುಸಿದು ಬಿದ್ದ.
ಎಲ್ಲಾ ರೀತಿಯ ಸಂಕಷ್ಟಗಳನ್ನು ಎದುರಿಸಿ ಇಬ್ರಾಹೀಂ (ಅ) ಜಯಶ್ರೀ ಯಾದರು.ಸಮಾಜ ಮತ್ತು ಸಾಮ್ರೂಜ್ಯ ಎದುರಾದರೂ  ಎದೆಗುಂದ‌‌‌‌‌‌‌‌‌‌‌‌‌‌‌ದೆ ಎದುರಿಸಿದರು.ಊರನ್ನು ಬಿಟ್ಟು ಮಡದಿ ಮಕ್ಕಳನ್ನು ತ್ಯಜಿಸಿ ಅಗ್ನಿಕುಂಡಗಳನ್ನೇ ಗೆದ್ದು ಪುತ್ರ ಕುತ್ತಿಗೆಗೆ ಖಡ್ಗವನ್ನಿಡಲು ಮುಂದಾದರು.ಇದು ಅಗ್ನಿ ಪರೀಕ್ಷೆ ಎಂದು ಕುರಾನ್ ಹೇಳಿತು.ಎಲ್ಲಾ ಪರೀಕ್ಷೆಗಳನ್ನು ಜಯಿಸದಾಗ ಜಗತ್ತಿಗೆ ಇಬ್ರಾಹೀಮರನ್ನು ಅಲ್ಲಾಹನು  ನಾಯಕನನ್ನಾಗಿಸಿದ.
ಇಬ್ರಾಹಿಮ್  (ಅ) ರನ್ನು ಅನುಸರಿಸಿದವರಿಗಿಂತ ಉತ್ತಮ ಧರ್ಮನಿಷ್ಟೆ  ಇರುವವ ಯಾರು ಎಂದು ಪ್ರಶ್ನಿಸಿದ.
ಒಮ್ಮೆ ಇಬ್ರಾಹೀಂ (ಅ)ಹೇಳುತ್ತಾರೆ ನಾನು ಅಗ್ನಿ ಕುಂಡ ದಲ್ಲಿದ್ದ ಏಳು ದಿನಗಳು ನನ್ನ ಜೀವನದ ಅತ್ಯಂತ ಶ್ರೇಷ್ಠವಾದ ಕಾಲವಾಗಿತ್ತು.ಹಾಗಾದರೆ ಅಧರ್ಮದ ವಿರುದ್ಧ ಹೋರಾಡುವ ಬದುಕು ಮಹೋನ್ನತ ವಾದುದು ಎಂದಾಗಿದೆ.
ಇದು ಇಂದಿಗೂ ಪ್ರಸ್ತುತ ವಾಗುತ್ತಲಿದೆ.ಜನರನ್ನು ಬೀದಿಗಳಲ್ಲಿ ಹೊಡೆದು ಕೊಲ್ಲುವುದು,ಆಸ್ಪತ್ರೆಯಲ್ಲಿ ನೂರಾರು ಮಕ್ಕಳು ಪ್ರಾಣ ಬಿಡೋದು ಚರ್ಚೆಯಾಗದೇ ತ್ರಿವಳಿ ತಲಾಕ್ ದೊಡ್ಡ ಸುದ್ದಿಯಾಗುತ್ತದೆ.ಕ್ರಿಕೆಟಿಗನೊಬ್ಬಕ್ರಿಕೇಟ್ ಅಂಗಳದಲ್ಲಿ ಮಕಾಡೆ ಮಲಗಿದ ಸುದ್ದಿ ಬಿತ್ತರವಾಗುವಾಗ ಬಾಂಗ್ಲಾ ಗಡಿಯಲ್ಲಿ ಮ್ಯಾನ್ಮಾರ್ ಮಣ್ಣಿನಲ್ಲಿ  ನೋಬೆಲ್ ಸೂಕಿಯ ದೇಶದಲ್ಲಿ, ಶಾಂತಿ ದೂತ ಬುದ್ಧನ ಅನುಯಾಯಿಗಳು ಜನರನ್ನು ಜೀವಂತ ಹೂಳುತ್ತಾರೆ,ಸುಡುತ್ತಾರೆ,ಕೈಕಾಲುಗಳನ್ನು ನಿರ್ಧಯವಾಗಿ ಕತ್ತರಿಸುತ್ತಾರೆ.ನಗ್ನವಾಗಿ ಮರಗಳಿಗೆ ಆಣಿ ಹೊಡೆದು ನೇತು ಹಾಕುತ್ತಾರೆ.ಅಸಂಖ್ಯಾತ ಜೀವಗಳು ಗದ್ದೆ ಪೊದೆಗಳಲ್ಲಿ ಪ್ರಾಣ ಬಿಟ್ಟರೆ.ಮತ್ತೆ ಅನೇಕ ಶವಗಳು ಬರ್ಮಾ ತೀರದಲ್ಲಿ ರಾಶಿ ಬೀಳುತ್ತದೆ.ಉಳಿದವರು ಇರೋ ಪ್ರಾಣ ಕೈಯಲ್ಲಿ ಹಿಡಿದು ಪಲಾಯನ ಮಾಡುತ್ತಿದ್ದರೆ ಎಲ್ಲಿಗೆ ಯಾಕೆ ?ಎಂದು ಗೊತ್ತುಗುರಿ ಇಲ್ಲ.ಕಡಲು ಸೇರಿದ ಅನೇಕರು ಮೀನಿಗೆ ಆಹಾರವಾಗಿಯೂ ಬಲಿಯಾಗುತ್ತಿದ್ದಾರೆ.ಕತ್ತರಿಸಲ್ಪಟ್ಟ ರುಂಡವನ್ನು ಕೆಲವರು ಹಿಡಿದು ಅಳುತ್ತಿದ್ದರೆ ಮತ್ತೆ ಕೆಲವರು ಛಿದ್ರ ಛಿದ್ರವಾದ ದೇಹದ ಮುಂದೆ ಅಸಹಾಯಕತೆ ಯ ಕಣ್ಣೀರನ್ನು ಸುರಿಸುತ್ತಿದ್ದಾರೆ
ಆದರೆ ಇದ್ಯಾವುದನ್ನು ಆಲಿಸಲು ಜಗತ್ತಿಗೆ ಕಿವಿಯಿಲ್ಲ.ಅದರೆ ಐಸಿಸ್ ಎಂಬ ಕಟ್ಟಾ ಮುಸ್ಲಿಂ ವಿರೋಧಿ ದುಷ್ಟಕೂಟವು ಮಸ್ಲಿಮರನ್ನು ಮತ್ತು ಮುಸ್ಲಿಂ ರಾಷ್ಟಗಳನ್ನು ಪವಿತ್ರ ಮದೀನವನ್ನು  ಟಾರ್ಗೇಟ್ ಮಾಡಿ ವಿದ್ವಂಸಕ ಕ್ರೌರ್ಯ ಮೆರೆಯತ್ತಾ ಇದ್ದರೂ ಅದನ್ನು ಮಸ್ಲಿಮರ ಮೇಲೆಯೇ ಹೊರಿಸಲಾಗುತ್ತಿದೆ.ಮತ್ತು ಹಾಗೇ ಚಿತ್ರಿಸಲಾಗುತ್ತಿದೆ.ಅದೇ ರೀತಿ
ನಮ್ಮಲ್ಲಿಯೂ ಸುಸೂತ್ರವಾಗಿ ಮುಸ್ಲಿಂ ವಿರುದ್ಧ ಕಾರ್ಯ ತಂತ್ರ ಜರುಗುತ್ತಲೇ ಇದೆ.ಹಿಂದೆ ರಾಜರುಗಳ ಕಾಲದಲ್ಲಿ ನಡೆದಿತ್ತೆಂಬ ಕ್ರೌರ್ಯ ಕ್ಕೆ ಇಂದಿನ ಕಾಲದಲ್ಲಿ ಪ್ರತಿಕಾರ ತೀರಿಸಲು ಮುಂದಾಗುವ ಮತಾಂಧರು,ಶಿಕ್ಷಣವನ್ನೂ ಮತೀಯ ವಿಷದಲ್ಲಿ ಮುಳುಗಿಸಲು ಹವಣಿಸುವವರು,ಧಾರ್ಮಿಕ ಸ್ವಾತಂತ್ರ್ಯ ವನ್ನೂ ಕಿತ್ತೆಸೆಯಲು ಕುತಂತ್ರ ಹೆಣೆಯುವ ಕಂತ್ರಿಗಳು, ಎಲ್ಲರೂ ಸೇರಿ ಮುಸ್ಲಿಮ್ ಸಮುದಾಯವನ್ನು ದುರ್ಬಲಗೊಳಿಸುವುದರಲ್ಲೇ ಮುಳುಗಿದ್ದಾರೆ.ಅದರ ಭಾಗವಾಗಿದೆ ಆಗಾಗ ಏಕನೀತಿ ಕಾನೂನಿನ ಅಪಸ್ವರದ ದ್ವನಿ ಕೇಳಿ ಬರುವುದು. ಅದು ಇದೀಗ ತ್ರಿವಳಿ ಹಾವಳಿ ಮೂಲಕ ಮತ್ತೆ ಸುದ್ದಿಯಾಗಿದೆ.ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಅಪರಾಧಿಯನ್ನಾಗಿಸಲು ಬಳಸುವ ಇನ್ನೊಂದು ಆಪಾದನೆ ಯಾಗಿದೆ ಲವ್ ಜಿಹಾದ್ ?
ಅನ್ಯ ಹೆಣ್ಣಿನ ಬಗ್ಗೆ ಅಪಾರ ಎಚ್ಚರಿಕೆ ವಹಿಸಿದ ಧರ್ಮವಾಗಿದೆ ಇಸ್ಲಾಂ.ಸ್ವಧರ್ಮಿಯ ಹೆಣ್ಣಿನೊಂದಿಗೂ ಒಂಟಿಯಾಗುವುದನ್ನು ಅನೈತಿಕವೆಂದು ಅದು ವಿಧಿಸುತ್ತದೆ.ಕಣ್ಣೆತ್ತಿ ನೋಡುವುದನ್ನು ಅನಾಚಾರವಾಗಿ ಕಾಣುತ್ತದೆ.ಸ್ವಂತ ಗಂಡನ ಸಹೋದರರೊಂದಿಗೂ ಇದನ್ನು ನಿಶೇಧಿಸುತ್ತದೆ.ಅದನ್ನು "ಮರಣ" ವೆಂದ ರಸೂಲರು ಅನ್ಯ ಹೆಣ್ಣಿನ ಕಡೆ ತಿರುಗಿ ನೋಟ ಬೀರುವುದು ಪಿಶಾಚಿನ ವಿಷಯುಕ್ತ ಬಾಣವೆನ್ನುತ್ತಾರೆ. ಮದುವೆ ಎಂಗೇಜ್ ಮೆಂಟ್ ನಡೆದ ಮೇಲೂ ಭಾವಿ ಪತ್ನಿಯಾಗುವವಳೊಂದಿಗೆ ಮಾತುಕತೆಯನ್ನು ನಿಶೇಧಿಸುತ್ತದೆ.
ದೇಹ ಮಚ್ಚಲು ಅವಕಾಶವಿಲ್ಲದ ,ಮೊಲೆಯುಣಿಸಲು ಹಕ್ಕು ಪಡೆಯಬೇಕಾದರೆ ತೆರಿಗೆ ಪಾವತಿಸಬೇಕಾದ ಹೆಂಗಸರಿಗೆ ಮಾನ ಮುಚ್ಚಲು ಅವಕಾಶ ಮಾಡಿಕೊಟ್ಟ ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ ಸ್ಮರಣೀಯ ರಾಗುತ್ತಾರೆ.

ಯಾವ ವಿಷಮ ಸ್ಥಿತಿಯಲ್ಲಿಯೂ ಅಪರಾಧವನ್ನು ಸಕ್ರಮ ಮಾಡುವ ಯಾವುದೇ ವಿಧಿ ಇಸ್ಲಾಮಿನಲ್ಲಿ ಇಲ್ಲ.ಹಾಗಿರುವಾಗ ಹೇಗೆ ಅನ್ಯ ಮತೀಯ ಹುಡುಗಿಯರನ್ನು ದುರುದ್ದೇಶದಿಂದ ವಂಚಿಸಲು ಸಾಧ್ಯ? ಅದೂ ಧರ್ಮದ ಹೆಸರಿನಲ್ಲಿ!
ಕಣ್ಣೂರಿನ ಎರಡು ಮಕ್ಕಳ ತಾಯಿಯನ್ನು ಪರ ಪುರುಷನ ಜೊತೆ ತೆರಳಲು ಕೋರ್ಟು ಅನುಮತಿಸುತ್ತದೆ.ಕಂದಮ್ಮಗಳು ತನ್ನ ಸಾರಿಯನ್ನು ಹಿಡಿದೆಳೆದಾಗಲೂ ಯಾರಿಗೂ ಅದು ಅಸಹ್ಯವಾಗಿ ಕಾಣಲಿಲ್ಲ.ಆದರೆ ವಿದ್ಯಾವಂತೆಯಾದ ಇಪ್ಪತ್ತನಾಲ್ಕರ ಹರೆಯದ ಹಾದಿಯ ಅನ್ನುವ ವೈದ್ಯೆ ಸ್ವಯಂ ಪ್ರೇರಿತಳಾಗಿ ಮತಾಂತರಗೊಂಡಿದ್ದೇನೆಂದು ಹೇಳುತ್ತಾಳೆ,ನಂತರ ಅದು ಸಂಬಂಧವಾಗಿ ಎಲ್ಲಾ ತಪಾಸಣೆಗೆ ಸಹಕರಿಸುತ್ತಾಳೆ,ಆದರೂ ಅರೇಂಜ್ಡ್ ಮದುವೆಯನ್ನು ರದ್ದುಮಾಡಿ ಹೆತ್ತವರ ಸುಪರ್ದಿಗೆ ಒಪ್ಪಿಸಲಾಗುತ್ತದೆ.ಅಲ್ಲಿಂದಲೂ ತನ್ನನ್ನು ಕಾಣಲು ಬಂದವರೊಂದಿಗೆ ಕಿಟಕಿ ಮೂಲಕ ಇಲ್ಲಿಂದ ನನ್ನನ್ನು ರಕ್ಷಿಸಿ ಎಂದು ಗೋಗರೆಯುತ್ತಾಳೆ.ಇದು ಡಿಜಿಟಲ್ ಇಂಡಿಯಾ ಎಂದು ಕರೆಯುವ ದೇಶದ ಸಂಪೂರ್ಣ ಸಾಕ್ಷರತೆ ಹೊಂದಿದ ಕೇರಳದ ಕಥೆ.
ಗೋವಿನ ಹೆಸರಲ್ಲಿ ನರಹತ್ಯೆಯನ್ನು ಸಕ್ರಮಗೊಳಿಸುವ ಮಂದಿ ಅರಿತಿರಬೇಕು ಇಸ್ಲಾಮಿನ ಪ್ರಾವಾದಿಯ ಸಂದೇಶ.
ನಲುವತ್ತರಷ್ಟು ಸತ್ಕರ್ಮಗಳಿವೆ ಅದರಲ್ಲಿ ಮಹೋನ್ನತವಾದದ್ದು ಒಬ್ಬ ಮುಸ್ಲಿಮನು ಹಸುವನ್ನು ಸಾಕಿ ಅದು ಹಾಲು ಕೊಡುವಷ್ಟು ಕಾಲ ಬಡವ ದರಿದ್ರನ ಮನೆಯಲ್ಲಿ ಬಿಟ್ಡು ನಂತರ ಹಿಂಪಡೆಯುವುದು (ಹಸಿವಿಗೆ ಏನೂ ಸಿಗದೇ ಇದ್ದಾಗ ಆ ಹಸುವಿನ ಹಾಲು ಕುಡಿದು ಅವರು ಹಸಿವು ನೀಗಿಸಲಿ ಎನ್ನುವ ಉದ್ದೇಶದಿಂದ)ಇದಕ್ಕೆ ಸ್ವರ್ಗ ಪ್ರತಿಫಲವಾಗಿರುತ್ತದೆ.

 ಇಸ್ಲಾಮಿನಲ್ಲಿ ಎಲ್ಲಾ ಹಂತದಲ್ಲೂ ಸಾಮಾಜಿಕ ಸೇವೆ ಮುಖ್ಯವಾಗುತ್ತದೆ.ವೃದ್ಧೆಯ ಭಾರವನ್ನು ಹೊತ್ತುಕೊಂಡು ನಡೆದ ಪ್ರವಾದಿ ಜನಸೇವೆಯನ್ನು ಸ್ವರ್ಗದ ದಾರಿ ಎಂದರು.ಖಲೀಪರು ಹಾಲು ಕರೆದು  ಅಸಹಾಯಕರಿಗೆ ಕುಡಿಸುವ, ವೃದ್ಧರನ್ನು ಆರೈಕೆ ಮಾಡುವ ಮಾದರಿ ತೋರಿದ್ದರು.
ದುರ್ಬಲರಿಗೆ  ತುತ್ತು ಅನ್ನ ಹೊತ್ತು ನಡೆದ,ರಾತ್ರಿಹೊತ್ತಲ್ಲಿ ಯಾರಿಗೂ ತಿಳಿಯದೇ ಬಡವರ ಮನೆಯಲ್ಲಿ ಆಹಾರದ ಗಂಟನ್ನು ಇಟ್ಟು ಬರುತ್ತಿದ್ದ ಪ್ರವಾದಿ ಕುಟುಂಬದವರ ಬಗ್ಗೆ ಚರಿತ್ರೆಯಲ್ಲಿ ಉಲ್ಲೇಖವಿದೆ.ರಿಫಾಯಿ (ರ) ರವರು ನಾಯಿಯನ್ನು ಪರಿಪಾಲಿಸಿದರೆ ,ಹಝ್ರತ್ ನಿಝಾಮುದ್ದೀನ್ (ರ)ರವರು ಬೀದಿಯಲ್ಲಿದ್ದವರ ಬಾಯಿಗೆ ರೊಟ್ಟಿ
ಇಟ್ಟು ಬರುತ್ತಾರೆ.
ಹಝ್ರತ್ ಇಬ್ರಾಹೀಂ(ಅ) ಒಂಟಿಯಾಗಿ ಆಹಾರ ಸೇವಿಸುತ್ತಿರಲಿಲ್ಲ.ಜೊತೆಯಾಗಿ ಯಾರನ್ನಾದರೂ ಸೇರಿಸಲು ಎರಡು ಕಿ.ಲೋ ಮೀಟರ್ ಹುಡುಕಿ ಹೋಗುತ್ತಿದ್ದರು.ಅದರಿಂದ ಅವರಿಗೆ ಅಬು ಲ್ಲೈಫಾನ್ ಎಂಬ ಕೀರ್ತಿಯೂ ಬಂದಿತ್ತು.ಒಂದು ದಿನ ಅವರು ಮಾಡಿದ ದಾನ ಬರೋಬ್ಬರಿ ಸಾವಿರ ಆಡುಗಳು! ಮನ್ನೂರಷ್ಟು ದನಗಳು!ನೂರರಷ್ಟು ಒಂಟೆಗಳು! ಇದನ್ನು ಕಂಡು ದೇವದೂತರು ಅಚ್ಚರಿಪಟ್ಟಾಗ ಅವರು ಹೇಳಿದ ಮಾತು  ದೈವ ಇಚ್ಚೆಗಾಗಿ ನಾನು ನನಗೊಂದು ಮಗನಿದ್ದರೆ ಅವನನ್ನೂ ಬಲಿ ಕೊಡುವೆ.ಅದರ ಸಾಕ್ಷಾತ್ಕಾರವಾಗಿತ್ತು ಮಗನ ಬಲಿಗೆ ಮುಂದಾದದ್ದು.ಆದರೂ ಹಝ್ರತ್ ಇಬ್ರಾಹಿಮರ (ಅ) ಆತ್ಮ ಸಮರ್ಪಣೆಯ ,ಮನೋ ಧೈರ್ಯ ದ ಮುಂದೆ ಬಲಿಕೊಡಬೇಕಾಗಲಿಲ್ಲ .ಬದಲಿಗೆ ಸ್ವರ್ಗದ ಆಡನ್ನು ಜಿಬ್ರೀಲ್ (ಅ) ಕರೆ ತಂದರು.ಅದು ಹಾಬೀಲ್ ಸಮರ್ಪಿಸಿದ ಕುರ್ಬಾನಿಯಾಗಿತ್ತು.
ಆದರೆ ಈ ಹಬ್ಬ ಯಾರಿಗೆ ಅನ್ವಯ?
ಅಧರ್ಮ ಚಟುವಟಿಕೆ ಮಾಡುವವರಿಗೋ?
ಅಮಲು ಪದಾರ್ಥ ಸೇವಕರಿಗೋ?
ಅನೈತಿಕವಾಗಿ ನಡೆದಾಡುವವರಿಗೋ?
ಅಕ್ರಮ ಸಂಪಾದನೆ ಮಾಡುವವರಿಗೋ?
ಅನ್ಯಾಯದ ಮಾರ್ಗದಲ್ಲಿ ನಡೆವವರಿಗೋ?
ಕಣ್ಣೆದುರಲ್ಲೆ ಮನೆ,ನೆಲೆ ಇಲ್ಲದೇ ಅನಾರೋಗ್ಯ ಪೀಡಿತ ಸಂಕಟ ಪಡುವವರನ್ನು ತಿರುಗಿನೋಡದ ಮಾನ್ಯರಿಗೋ?

ವರದಿ ಅಲ್ ಅಹ್ಸನ್ ಮಾಸಿಕ

ಒಡೆದ ಮನಸ್ಸುಗಳನ್ನು ಕಾನೂನಿನ ಬಲದಿಂದ ಒಗ್ಗೂಡಿಸಲಾಗದು.

ಸಾಹಿರಾಬಾನು ಗೆ ನ್ಯಾಯ ಕೊಡಲು ಮುಂದಾದ ಸರಕಾರ ಗುಂಪು ಮತ್ತು ಕೋಮು ಹತ್ಯೆಗಳ ಸಂತ್ರಸ್ತ ವಿಧವೆಯರಿಗೆ ನ್ಯಾಯ ಕೊಡುಬಹುದೇ?

ಮೌಲಾನಾ ಯುಕೆ ಅಝೀಝ್ ದಾರಿಮಿ ಚೊಕ್ಕಬೆಟ್ಟು ಭಾಷಣ 
ವರದಿ ಅಲ್ ಅಹ್ಸನ್

ಇಬ್ರಾಹೀಮ್ ರನ್ನು ಅವರ ಪ್ರಭು ಕೆಲವು ಆಜ್ಞೆಗಳ ಮೂಲಕ ಪರೀಕ್ಷಿಸಿದ ಮತ್ತು ಅವರು ಅದನ್ನು ನೆರವೇರಿಸಿದ ಸಂದರ್ಭ(ವನ್ನು ಸ್ಮರಿಸಿರಿ). (ಆಗ) ಅಲ್ಲಾಹು ಅವರೊಂದಿಗೆ ಹೇಳಿದನು: ‘ನಾನು ತಮ್ಮನ್ನು ಮಾನ ವರಿಗೆ ನಾಯಕನನ್ನಾಗಿ ಮಾಡುವೆನು’. ಇಬ್ರಾಹೀಮ್ ಹೇಳಿದರು: ‘ನನ್ನ ಸಂತತಿಗಳಲ್ಲಿ ಸೇರಿದವರನ್ನೂ (ನಾಯಕರನ್ನಾಗಿ ಮಾಡು)’. ಅಲ್ಲಾಹು ಹೇಳಿದನು: ‘(ಸರಿ, ಆದರೆ) ನನ್ನ ಈ ನಿರ್ಧಾರವು ಅಕ್ರಮಿಗಳಿಗೆ ಅನ್ವಯವಾಗಲಾರದು’.ಕುರಾನ್ -೨:೧೨೪

ಪರೀಕ್ಷೆಗಳ ಅಗ್ನಿ ಭೂಮಿಯಲ್ಲಿ ಉಜ್ವಲ ಬೆಳಕಾಗಿ ಬೆಳಗಿದ ಹಝ್ರತ್ ಇಬ್ರಾಹಿಂ (ಅಲೈಸ್ಸಲಾಂ) ರ ತ್ಯಾಗ ಪೂರ್ಣ ಸ್ಮರಣೆಯನ್ನು ಕುರಾನ್ ಈ ರೀತಿ ವರ್ಣಿಸುತ್ತದೆ.ಆ ಮೂಲಕ ಇಬ್ರಾಹೀಮ್ (ಅ)ಮಾಡಿದ ಸತ್ಯಕ್ಕಾಗಿ ಸರ್ವ ತ್ಯಾಗದ ಮತ್ತು ಬಲಿದಾನದ
ಅಧ್ಯಾಯ ವನ್ನು ಜಗತ್ತಿಗೆ ಪರಿಚಯಿಸುತ್ತದೆ. ಇದನ್ನು ಈದುಲ್ ಅಝ್ಹಾ ಮೂಲಕ ಮುಸ್ಲಿಂ ಜಗತ್ತು ಸ್ಮರಿಸುತ್ತದೆ.
ಆಡಳಿತಾತ್ಮಕವಾಗಿ ನುಂರೂದ್,ಕೌಟುಂಬಿಕವಾಗಿ ತಂದೆ,ಸಾಮಾಜಿಕವಾಗಿ ಸಮಾಜವನ್ನು ಎದುರಿಸಬೇಕಾದ ಹಝ್ರತ್ ಇಬ್ರಾಹಿಂ (ಅ)ಪರೀಕ್ಷಾರ್ಥ ವಾಗಿ  ಮಡದಿಯರಾದ ಸಾರ ಬೀವಿ,ಹಾಜರಾಬೀವಿ,ಸುಪುತ್ರ ಇಸ್ಮಾಯಿಲ್ (ಅ) ಎಲ್ಲರಿಂದಲೂ ಸಂಕಟವನ್ನು ಎದುರಿಸಿದರು.
ಅಧಾರ್ಮಿಕತೆಯ ವಿರುಧ್ಧ ಅಗ್ನಿಯನ್ನು ಭೇದಿಸಿ,ದೇವಭಕ್ತಿಗಾಗಿ,ಜನ್ಮಭೂಮಿಯನ್ನು ತೊರೆದು,  ಪುತ್ರ ವಾತ್ಸಲ್ಯವನ್ನೂ ಬದಿಗೆ ಸರಿಸಿ ಪುತ್ರನ ಕುತ್ತಿಗೆಗೆ ಖಡ್ಗವನ್ನಿಡಲು ಮುಂದಾದ ಇಬ್ರಾಹಿ (ಅ )ರ ಆದರ್ಶ ವನ್ನು ಕೊಂಡಾಡಿದ ಅಲ್ಲಾಹನು ಅವರಿಗೆ  ನಾಯಕತ್ವವನ್ನು ನೀಡುತ್ತಾನೆ.ಪರಮಾಪ್ತ ಸ್ಥಾನವನ್ನು ಕರುಣಿಸುತ್ತಾನೆ.ಈ ನಾಯಕತ್ವ ಅಕ್ರಮಿಗಳಿಗೆ ಇಲ್ಲ ಎಂದೂ ಸ್ಪಷಪಡಿಸುತ್ತಾನೆ.
ಯಾವುದೇ ಸಂದರ್ಭದಲ್ಲಿಯೂ ಅನ್ಯಾಯ ಅಕ್ರಮ ಅಧರ್ಮದ ವಿರುದ್ಧ ಎದೆಗುಂದದೇ ಹೋರಾಡಬೇಕೆನ್ನುವುದು ಬಕ್ರೀದಿನ ಸಂದೇಶವಾಗಿದೆ.
ಪ್ರಚಲಿತ ಕಾಲ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದೇನೆಂದರೆ ದೇಶದ    ಬಹು ಕೋಟಿ ಜನರ ಕಟ್ಟ ಕಡೆಯ ಅಭಯ ಕೇಂದ್ರವಾದ ಸುಪ್ರೀಂಕೋರ್ಟಿನ ತೀರ್ಪು ಹೊರಬಿದ್ದಿದೆ.ಒಂದೆ ಘಳಿಗೆಯಲ್ಲಿ ಮೂರು ತಲಾಕು ಹೇಳುವ ತ್ರಿವಳಿ ತಲಾಕನ್ನು ರದ್ದು ಮಾಡಿ ಹೊಸ ಕಾನೂನನ್ನು ತರಲು ಕೇಂದ್ರಕ್ಕೆ ಶಿಪಾರಸು ಮಾಡಿದೆ.ಇದರಿಂದ ಮುಸ್ಲಿಂ ವೈಯುಕ್ತಿಕ ನಿಯಮವನ್ನು ಕೋರ್ಟು  ಎತ್ತಿ  ಹಿಡಿದಿದೆ  ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿಕೆ ನೀಡಿದರ ಜೊತೆಗೆ ಹಲವು ಅನುಮಾನ, ಆತಂಕವನ್ನೂ ವ್ಯಕ್ತ ಪಡಿಸಿದೆ .ತ್ರಿವಳಿ ಪದ್ದತಿಯನ್ನು ನಿರುತ್ಸಾಹ ಗೊಳಿಸಲು ಪ್ರಯತ್ನಿವುದಾಗಿ ಅದು ಹೇಳಿದೆ. ಬಹುಕಾಲದ ಬೇಡಿಕೆ ಈಡೇರಿದೆ ಎಂದು ಕೆಲವರು ಬೀಗಿದರೆ,ಹಲವರು ಸಿಹಿ ಹಂಚಿ ಆನಂದಿಸಿದ್ದಾರೆ.ವಿಷೇಸವೇನೆಂದರೆ ಕೆಲವು ನಾಮದಾರಿ ಮುಸ್ಲಿಂ ಮಹಿಳೆಯರು ವಿಷಯದ ವಸ್ತುಸ್ಥಿತಿ ಅರಿಯದೆ  ಚಾನಲ್ ಮುಂದೆ ಕೂತು ತಮ್ಮ ಅಜ್ಞಾನವನ್ನು ಬಹಿರಂಗ ಪಡಿಸಿದ್ದಾರೆ. ಕೋರ್ಟಿನ ವಿಧಿ ಬಂದದ್ದೇ ತಡ ಮಾಧ್ಯಮಗಳು ತಾ ಮುಂದು ತಾ ಮುಂದು ಎಂಬಂತೆ ಚರ್ಚೆಗಳನ್ನು ನಡೆಸಿದವು. ಶರೀಅತ್ತಿನ ಮೇಲೆ ಮುಗಿಬಿದ್ದವು. ಹೆಚ್ಚೇಕೆ ದೇಶದ ಪ್ರಧಾನಿ ಯವರು ಮಾಜಿ ಪ್ರಧಾನಿ ಮನಮೋಹನ್ ಸಿಂಗರಿಗೆ ಟ್ವೀಟ್ ಮಾಡಿದರೆಂಬ ಮೆಸೇಜು  ಹರಿದಾಡಲಾರಂಬಿಸಿತು. ಸುಪ್ರೀಮ್ ಕೋರ್ಟು  ತ್ರಿವಳಿ ತಲಾಕನ್ನು ರದ್ದು ಮಾಡಿ  ಐತಿಹಾಸಿಕ ತೀರ್ಪನ್ನು ನೀಡಿದೆ ಎಂಬ ಪ್ರಧಾನಿ  ಮನಮೋಹನ್ ಸಿಂಗರಿಗೆ  ಟ್ವೀಟ್ ಮಾಡಿದರಂತೆ.  ಆಗ ಸಿಂಗರು ಪ್ರತಿಕ್ರಯಿಸುತ್ತಾ  "ಅದು ತ್ರಿವಳಿ ಅಲ್ಲ instent tripale ಎಂದು ತಿದ್ದಿ ಇದನ್ನು ನಿಮ್ಮ ಹಿಂಬಾಲಕರಿಗೂ ತಿಳಿಸಿ"ಎಂದರಂತೆ.
ಇದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಪರಮೋಚ್ಚ ಕೋರ್ಟಿನ ತೀರ್ಮಾನವನ್ನು ಪ್ರಶ್ನಿಸುವಂತಿಲ್ಲ.ಕೆಲವರ ವಾದ ಪ್ರಕಾರ ತಲಾಕಿನ ದುರುಪಯೋಗವನ್ನು ತಡೆಯುವ ಉದ್ದೇಶವಾದರೆ ಸ್ವಾಗತಾರ್ಹವಾಗಿದೆ. ಆದರೆ ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗಿದೆ.
ಕಾರಣ ಒಮ್ಮೆಲೆ ಹೇಳುವ  ಮೂರು ತಲಾಕ್ ಇಸ್ಲಾಮಿನ ನಿರ್ದೇಶಿತ ವ್ಯವಸ್ಥೆ ಅಲ್ಲದಿದ್ದರೂ  ಒಂದು ವೇಳೆ ಕೆಲವೊಂದು ಸಂದರ್ಭದಲ್ಲಿ ಆ ರೀತಿ ನಡೆದರೆ ಅದರಿಂದ ತಲಾಕ್  ಸಿಂಧುವಾಗುತ್ತದೆ ಎಂದು ಶರೀಅತ್ತು ಹೇಳಿದೆ.ಮುಸ್ಲಿಂ ವೈಯಕ್ತಿಕ ಕಾನೂನಿನ ಬಗ್ಗೆ ಪರಿಜ್ಞಾನ ಇಲ್ಲದ ಮಂದಿ ಇದನ್ನು ಅಲ್ಲಗಳೆಯುತ್ತಾರೆ.
ಶರೀಅತ್ತು ಅ್ಯಾಕ್ಟ್ ಪ್ರಕಾರ ಇಸ್ಲಾಮಿನ ಕರ್ಮಶಾಸ್ತ್ರದ ವಿಭಿನ್ನ ದಾರಿಗಳಾದ ಮದ್ಹಬುಗಳ ಪರಮೋನ್ನತ ಗ್ರಂಥಗಳನ್ನು ಆಧಾರವಾಗಿ ಕೋರ್ಟು  ಸ್ವೀಕರಿಸಿದೆ.ಹನಫಿ ಪಂಥದವರಿಗೆ ಕರ್ಮಶಾಸ್ತ್ರ ಗ್ರಂಥಗಳಾದ ಹಿದಾಯ  ಮತ್ತು ಪತಾವ ಆಲಂಗೀರಿ ಗ್ರಂಥಗಳನ್ನು ಹಾಗೇ
ಶಾಫಿಈ  ಪಂಥದವರಿಗೆ  ಮಿನ್ಹಾಜ್ ಗ್ರಂಥವನ್ನು ಅವಲಂಬಿಸಿ ವಿಧಿ ನಿರ್ಣಯಿಸಲಾಗುತ್ತದೆ. ಇಸ್ಲಾಮಿನ ನಾಲ್ಕು ಮದ್ಹಬಿನಲ್ಲೂ ತ್ರಿವಳ ಬಗ್ಗೆ ಸ್ಪಷ್ಟ ವಿವರಣೆ ಕೊಟ್ಟಿದೆ.ಇನ್ನು ಕೆಲವರು ಕುರಾನಿನಲ್ಲಿ ಹೇಳಿಲ್ಲ ಅಂತ ಹೇಳುವವರಿದ್ದಾರೆ‌.ಅದು ಅವರಿಗಿರುವ ಅರಿವಿನ ಕೊರತೆಯಾಗಿದೆ.ಧರ್ಮದ ನಾಲ್ಕು ಆಧಾರಗಳು ಕುರಾನ್ ,ಹದೀಸು, ಇಚ್ಮಾ ,ಕಿಯಾಸು ,ಇವೆಲ್ಲದಕ್ಕೂ  ಕುರಾನ್ ಆಧಾರವಾಗಿದೆ.ಆದ್ದರಿಂದ ಮೂರು ತಲಾಕನ್ನು ಒಂದೇ ಸಮಯದಲ್ಲಿ ಹೇಳಿದರೆ ಅದು ಸಿಂಧುವೆಂಬುದನ್ನು ಹಝ್ರತ್ ಉಮರ್ (ರ)ಮತ್ತು ಸ್ವಾಹಾಬಿಗಳು ಅಂಗೀಕರಿಸಿದ ಇಜ್ಮಾ ಆಗಿದೆ.ಇದನ್ನು ಇಮಾಂ ಮುಸ್ಲಿಂ ಸಹೀಹ್ ಮುಸ್ಲಿಂ ಹದೀಸು ಗ್ರಂಥದಲ್ಲಿ ಹೇಳಿದ್ದಾರೆ.ಇಮಾಂ ನಸಾಯಿ (ರ) ವರದಿ ಮಾಡಿದ ಹದೀಸಿನಲ್ಲಿ ಮೂರು ತಲಾಕನ್ನು ಒಮ್ಮೆಲೇ ಹೇಳಿದ ವ್ಯಕ್ತಿಯೊಂದಿಗೆ ನಬಿ (ಸ) ಹೇಳುತ್ತಾರೆ ,
ನಾನು ನಿಮ್ಮ ಮುಂದೆ ಇರುವಾಗಲೇ ಅಲ್ಲಾಹನ ಗ್ರಂಥದೊಂದಿಗೆ ಆಟವೇ? ಇದೇ ರೀತಿ
ರುಕಾಣ ಇಬ್ನು ಅಬ್ದು ಯಸೀದ್ ರ ರವರು ತನ್ನ ಪತ್ನಿ ಸುಹೈಮರನ್ನು "ಅಲ್ ಬತ್ತ" ಪದ ಉಪಯೋಗಿಸಿ ತಲಾಕ್ ಹೇಳುತ್ತಾರೆ (ಅಲ್ಬತ್ತ ಪದವು ಒಂದು ಮತ್ತು ಮೂರನ್ನೂ ಉದ್ದೇಶಿಸಬಹುದಾಗಿದೆ)ಆವಾಗ ರುಕಾನ ರೊಂದಿಗೆ ನಬಿಯವರು ಕೇಳುತ್ತಾರೆ ನೀವು ಈ ಮೂಲಕ ಎಷ್ಟು ಉದ್ದೇಶಿಸಿರುವಿರಿ?ನಾನು ಒಂದನ್ನು ಮಾತ್ರ ಬಯಸಿದ್ದೇನೆ ಎಂದು ರುಕಾನಾ( ರ)ಹೇಳುತ್ತಾರೆ.‌ಆಗ ನಬಿಯ ವರು ಅವರೊಂದಿಗೆ ಆಣೆ ಮಾಡಿಸುತ್ತಾರೆ.
ನಂತರ ಪತ್ನಿಯೊಂದಿಗೆ ತೆರಳಲು ಅನಮತಿಸುತ್ತಾರೆ.ಈ ಹದೀಸನ್ನು ಇಮಾಮ್ ಮುಸ್ಲಿಂ ರ ರವರ ಹದೀಸಿ ಗ್ರಂಥದ ವ್ಯಾಖ್ಯಾಕಾರರಾದ  ಇಮಾಂ ನವವೀ( ರ)ರವರು  ಶರಹುಲ್ ಮುಸ್ಲಿಮಿನಲ್ಲಿ ವಿವರಿಸಿದ್ದಾರೆ.ಈ ಎಲ್ಲಾ ಮಾಹಿತಿ ಪ್ರಕಾರ ತ್ರಿವಳಿ ತಲಾಕು ಅನಿಸ್ಲಾಮಿಕ ಎಂದು ಹೇಳಲಾಗದು.ಆದರೂ ಅದನ್ನು ಇಸ್ಲಾಂ ಪ್ರೋತ್ಸಾಹಿಸುವುದಿಲ್ಲ.ಆ ಕಾರಣವಾಗಿಯೇ ದೇಶದಲ್ಲಿ ಬರೀ ೦.೩೭ ಶೇಕಡಾ ಪ್ರಮಾಣದಲ್ಲಿ ತಲಾಕು ನಡೆದಿದೆ.ಇನ್ನು ಕೆಲವರ ವಾದ ಇಸ್ಲಾಂ ಪ್ರೊತ್ಸಾಹಿಸದ ನಿಯಮ ಯಾಕೆ ?ಎಂದು.ಅಲ್ಲಾಹನ ನಿಯಮದಲ್ಲಿ  ಯಾವ ಲೋಪವೂ ಇರಲಿಕ್ಕೆ ಸಾಧ್ಯವಿಲ್ಲ .ಕೆಲವೊಂದು  ಸಂದರ್ಬದಲ್ಲಿ ಇದು ಅನಿವಾರ್ಯವಾಗುವುದುಂಟು.
ವಾಹನಗಳಲ್ಲಿ ತುರ್ತು ನಿರ್ಗಮನ ಬಾಗಿಲು ಇರುತ್ತದೆ ಹಾಗಂತ ಯಾರೂ ಅದರ ಮೂಲಕ ಇಳಿಯಲಿಕ್ಕೋ ಹತ್ತಲಿಕ್ಕೋ ಹೋಗೋದಿಲ್ಲ.ನಿನ್ನೆ ಮೈಸೂರಿನ ನರಸಿಪುರ ತಾಲೂಕಿನ ಸುರೇಶ ಎಂಬಾತ ತನ್ನ ಪತ್ನಿ ಬೇರೆಯೊಬ್ಬನ ಜೊತೆ ಮಲಗಿರುವುದನ್ನು ನೋಡಿ ದಿಗ್ಭ್ರಾಂತನಾಗುತ್ತಾನೆ.ಇದನ್ನು ಕಂಡು ಸಹಿಸದೇ ವಿಷ ಸೇವಿಸಿ ಪ್ರಾಣ ಬಿಡುತ್ತಾನೆ.ಒಂದು ವೇಳೆ ತ್ರಿವಳಿ ತಲಾಕು ಅವಕಾಶ ಆತನಿಗೆ ಇರುತ್ತಿದ್ದರೆ ಆತ ಅದನ್ನು  ಕೊಟ್ಟು ತಾಳ್ಮೆ ವಹಿಸುತ್ತಿದ್ದ .ಜೀವ ಉಳಿಯುತ್ತಿತ್ತು. ಕಣ್ಣೂರಿನಲ್ಲಿ ಕೋರ್ಟು ಆವರಣದಲ್ಲೇ ಮುಸ್ಲಿಂ ಹೆಣ್ಣು ಮಗಳೊಬ್ಬಳು ತನ್ನ ಮೂರು ವರ್ಷದ ಮಗ ಅತ್ತು ತಾಯಿಯ ಸೆರಗನ್ನೆಳೆದು ಕರೆದರೂ ಲೆಕ್ಕಿಸದೇ ಬೇರೆಯವನ ಜೊತೆ ಹೊರಟು ಹೋಗುತ್ತಾಳೆ. ಹೆಂಡತಿಯಾದವಳು ಗಂಡನನ್ನು ಕೊಂದು ಮನೆಯಲ್ಲೇ ಸುಡಲು  ಮಗನನ್ನೇ ಬಳಸಿಕೊಂಡ ದಾರುಣ ಘಟನೆಯ ಬಗ್ಗೆ ಎಲ್ಲರೂ ಅರಿತಿರುವ ವಿಚಾರ. ಇಂತಹಾ ಅಸಹಜ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ  ಅತಿರೇಕದಿಂದ ವರ್ತಿಸದೇ  ತಕ್ಷಣ ಮೂರು  ತಲಾಕನ್ನು ಹೇಳಿ ಹೆಚ್ಚಿನ ಅನಾಹುವನ್ನು ತಪ್ಪಿಸಿ ಯಾವ ಎಡವಟ್ಟನ್ನೂ ಮಾಡದೇ ಪರಿಸ್ಥಿತಿಯನ್ನು ನಿಭಾಯಿಸುವ   ಸಾಧ್ಯತೆ ಇದೆ.ಇಂತಹಾ ಸಂದರ್ಭಗಳಲ್ಲಿ ಕೋಪಗೊಂಡು ಎಷ್ಟೋ ಮಂದಿ  ಅನಾಹುತ ಮಾಡಿ ಜೈಲು ಸೇರಿದವರಿದ್ದಾರೆ. ಅದ್ಯಾವುದಕ್ಕೂ ಅನುವು  ಮಾಡದೇ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಅಂತ ಹೊರಟು ಹೋಗುವ ದಾರಿ ತ್ರಿವಳಿ ತಲಾಕಿನಿಂದ ಸಾಧ್ಯ ವಾಗಬಹುದು.ಇದು ಉತ್ತಮವೋ ಅಲ್ಲಾ ಆ ಆಕ್ರೋಶದ ಸಮಯದಲ್ಲಿ ಏನಾದರೂ ಎಡವಟ್ಟು ಮಾಡಿಕೊಳ್ಳುವುದು ಸರಿಯೋ ?ಇದಕ್ಕೆ ಉತ್ತರ ಕೊಡಬೇಕಾದವರು ಚಾನಲುಗಳ ಮುಂದೆ ಕೂತು ಏನೆಲ್ಲಾ ಮಾತಾಡುವವರು.  ಶರೀಅತ್ತನ್ನು ವಿರೋದಿಸುವವರೊಂದಿಗೆ ಇನ್ನೂ ಒಂದು ಪ್ರಶ್ನೆ ಜಾಲೆಂಜಾಗಿ ಹೇಳುತ್ತೇನೆ . ಕೊಲ್ಲಲು ಕುತಂತ್ರ ಮಾಡುವ , ಬೇರೆಯವನ ಜೊತೆ ಸಂಗ ಬಯಸುವ,ಕಣ್ಣ ಮುಂದೆಯೇ ಬೇರೆಯವನ ಜೋತೆ ಕೈ ಹಿಡಿದು  ಗಂಡನನ್ನು ಬಿಟ್ಟು ನಡೆದು ಹೋಗುವ ಮಡದಿಯರೊಂದಿಗೆ ಸ್ಪಲ್ಪ ತಾಳಿ ಮೂರು ತಿಂಗಳು ಬಿಟ್ಟು ತಲಾಕ್ ಹೇಳು ಅಂತ ಹೇಳುವ ಎದೆಗಾರಿಕೆ ಯಾವನಿಗಿದೆ ?

ಆದರೂ ಈ ಪದ್ದತಿಯನ್ನು ಬಳಸಿ ಮುಗ್ಧ ಹೆಣ್ಣುಮಕ್ಕಳ ಜೊತೆ ಕೌರ್ಯ ತೋರುವ ಮಂದಿಗೆ ಕಾನೂನು ಕ್ರಮ ಜರುಗಿಸಲೇ ಬೇಕು.ಅದು ಶರೀಅತ್ತಿನ ನಿಯಮಗಳ ಮೇಲೆ ಹಸ್ತಕ್ಷೇಪ ಮಾಡದೇ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸದೇ ಆಗಬೇಕು.ಅದು ಹೇಗೆ ಸಾಧ್ಯ ? ಎಂದು ಕೇಳಬಹುದು.   ದುರುಪಯೋಗದ ಆರೋಪ  ಸಾಬಿತಾದರೆ ಬರೋಬ್ಬರಿ ದಂಡ ವಿಧಿಸುವುದೋ,ಶಿಕ್ಷೆ ಕೊಡುವುದೋ ಆಗಬಹುದು .ಗುಲಾಮ ಪದ್ದತಿಯನ್ನು ಇಸ್ಲಾಂ ನಿರ್ಮೂಲನೆ ಮಾಡಿದ್ದು ನಿಶೇಧದಿಂದಲ್ಲ.ಬದಲಿಗೆ
ಕ್ರಿಯಾತ್ಮಕ ಪದ್ದತಿ ಅಳವಡಿಸುವ ಮೂಲಕವಾಗಿತ್ತು.ಹೆಲ್ಮೇಟ್ ಹಾಕದವನ  ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವುದಕ್ಕಿಂತ ದಂಡ ವಿಧಿಸೋದು  ಉತ್ತಮ ಪದ್ದತಿಯಾಗಬಹುದು .ಪ್ರಸವ ಸಮಯ ಮಗು ಸತ್ತಿದೆ ಅಂತ ಮದುವೆ ಬೇಡ ಎಂದು ಹೇಳುವ ಅಜ್ಞಾನಿಗಳು ಇಲ್ಲಾ ಅಂತ ಹೇಳಕ್ಕಾಗಲ್ಲಾ.ಕಾನೂನಾತ್ಮಕ ಹೋರಾಟದ ಕಾಲ ದೂರವಿಲ್ಲ.ಪಾರ್ಲಿಮೆಂಟಿನಲ್ಲಿ ರಚನಾತ್ಮಕ ಕಾನೂನು ಜಾರಿಯಾಗಲಿ . ಆ ಮೂಲಕ ತ್ರಿವಳಿ ದುರುಪಯೋಗ ಕೊನೆಯಾಗಲಿ. ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆಯಾಗದಿರಲಿ ಎಂದೇ ನಮ್ಮ ಅಭಿಮತ.ಆದರೂ
ನಾವು ಸಿಹಿ ಹಂಚುವ  ಸಂತಸ ಪಡುವ ಸ್ಥಿತಿಯಲ್ಲಿ ಖಂಡಿತಾ ಇಲ್ಲ .ಕಾರಣ ಗುಜರಾತಿನ ಗುಲ್ಬರ್ಗ ಸೊಸೈಟಿಯಲ್ಲಿ ಸುಟ್ಟು ಕರಕಲಾದ ನಾನೂರು ಶವಗಳಲ್ಲಿ ಒಬ್ಬರಾದ ಮಾಜಿ ಸಂಸದ ಇಹ್ಸಾನ್ ಜಾಪ್ರಿಯ ವಿಧವೆ ಝಕಿಯಾ ಜಾಫ್ರಿ,ಸಾಮೂಹಿಕ ಅತ್ಯಾಚಾರದ ಕಥೆ ಬರೆದ ಬಲ್ಖೀಸ್ ಬಾನು ,ಆಮ್ನಷ್ಟಿ ಇಂಟರ್ ನ್ಯಾಶನಲ್ ಮುಂದೆ ಅತ್ಯಾಚಾರಿಗಳಿಗೆ ಶಿಕ್ಷೆಯಾದರೆ ನಾನು ಬದುಕುವೆ ಎಂದು ಕೈ ಮುಗಿದು ಬೇಡಿದ ಮಝಪರ ಬಾದಿನ ಇಶಾ ಬಾನು ,"ಗೋ" ಕಾರಣ ಗುಂಪು ಹತ್ಯೆಯಲ್ಲಿ ಸಾವನ್ನಪ್ಪಿದ ನೂರಾರು ಅಮಾಯಕರ ಪತ್ನಿಯರು,ರೈಲಿನಲ್ಲಿ ಕೊಲೆಯಾದ ಹದಿನಾರರ ಹರೆಯದ ಜುನೈದ್ನ ತಾಯಿ ,ದೆಹಲಿಯ ಕಾಣೆಯಾದ ನಜೀಬನ ತಾಯಿ ನಫೀಸಾ, ಹೀಗೇ ಸಾವಿರಾರು ಅಕ್ಕ ತಂಗಿಯರು ಕಣ್ಣೀರಲ್ಲಿ ದಿನ ದೂಡುತ್ತಿರುವಾಗ ಸಂತೋಷದ ಅಚ್ಚೇ ದಿನ್ ಗಳು  ನಮಗೆ ಬರಲು ಸಾದ್ಯವೇ,? ಸಮಾನತೆಯ ಸೂರ್ಯೋದಯ ವನ್ನು ಕಾಯಬಹುದೇ? ಸಾಮಾಜಿಕ ನ್ಯಾಯ‌ ನಿಶೇಧಿಸಲ್ಪಟ್ಟವರಿಗೆ ಏನು ಸಮಾನತೆ?
ಸಾಯಿರಾ ಬಾನುಗೆ ನ್ಯಾಯ ಕೊಡಲು ಮುಂದಾದ ಸರಕಾರ ಗುಂಪು ಮತ್ತು ಕೋಮು ಹತ್ಯೆಯ ಸಂತ್ರಸ್ತ ವಿಧವೆಯರಿಗೆ ನ್ಯಾಯ ಕೊಡಬಹುದೇ?

ವರದಿ ಅಲ್ಅಹ್ಸನ್ ಮಾಸಿಕ

"ಕಾನೂನು ಮತ್ತು ಕೋರ್ಟುಗಳಿರೋದು ಅಮಾಯಕರನ್ನು ದಂಡಿಸಲು ಮತ್ತು ಅಪರಾಧಿಗಳನ್ನು ರಕ್ಷಿಸಲಿಕ್ಕಲ್ಲ."

🎤ಭಾಷಣ

ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು

🎆 ವರದಿ  "ಅಲ್ ಅಹ್ಸನ್ " ಮಾಸಿಕ

ದೆಹಲಿಯ ರಸ್ತೆಯಲ್ಲಿ ಚಾಲಕನೊಬ್ಬ ರಸ್ತೆ ದಾಟುತ್ತಿದ್ದಾಗ ವಾಹನವೊಂದು  ಡಿಕ್ಕಿ ಹೊಡೆದ ಕಾರಣ ಬಿದ್ದು ಒದ್ದಾಡುತ್ತಿದ್ದ .ಅಸಹಾಯಕ ಸ್ಥಿತಿ ಕಂಡು ಏಳಲಾರ ಎಂದು ಖಾತರಿ ಪಡಿಸಿಕೊಂಡು ದಾರಿಹೋಕ ಆತನ ಮೊಬೈಲನ್ನು ಮತ್ತು ಉಳಿದುಕೊಂಡಿದ್ದ ಹನ್ನೆರಡು ರುಪಾಯಿಯನ್ನೂ ಎಗರಿಸಿ ಹೊರಟು ಹೋಗ್ತಾನೆ.ಅವಕಾಶ ಸಿಕ್ಕರೆ ಕಬಳಿಸುವ ಗುಣ ಮನುಷ್ಯ ಬದುಕಿಗೆ ಸಮಂಜಸವೇ? ಬದುಕಿಗೆ ಅರ್ಥವಿಲ್ಲವೇ?

ಒಮ್ಮೆ ರಾಜನೊಬ್ಬ ತನ್ನ ಆಸ್ಥಾನ ವಿದ್ವಾಂಸರಿಗೆ ಸ್ಪರ್ಧೆಯೊಂದನ್ನು ಏರ್ಪಡಿಸುತ್ತಾನೆ . ಅದು  ಮನುಷ್ಯ ಜೀವನ ಚರಿತ್ರೆಯನ್ನು ಬರೆಯುವುದಾಗಿತ್ತು.ಅಪಾರ ಕೊಡುಗೆ ಸಿಗಬಹುದೆಂದು ವಿದ್ವಾಂಸರು  ನೂರಾರು ಗ್ರಂ‌ಥ ಗಳನ್ನು ಬರೆದು ತಂದರು.ಇದನ್ನು ಓದಿ ಮುಗಿಸಲು ಬದುಕು ಸಾಕಾಗದು ಇರೋದು ಒಂದು ಬದುಕು ಅದನ್ನು ಒಂದೇ ಗ್ರಂಥದಲ್ಲಿ ಸಂಕ್ಷಿಪ್ತವಾಗಿ ಬರೆದು ತನ್ನಿ ಎಂದು ರಾಜ ಹಿಂದಕ್ಕೆ ಕಳುಹಿಸುತ್ತಾನೆ. ನಂತರ ಒಂದು ಪುಸ್ತಕದಲ್ಲಿ ಬರೆದು ಪುನಃ ರಾಜನ ಮುಂದೆ ಹಾಜರುಪಡಿಸುತ್ತಾರೆ.ಆದರೆ ಅದು ಕೂಡಾ ಜಾಸ್ತಿ ಆಗಿದೆ ಇನ್ನಷ್ಟು ಕಡಿತಗೊಳಿಸಿ ಎಂದು ಕರೆ ಕೊಡುತ್ತಾನೆ.
ವಿದ್ವಾಂಸರು ತಮ್ಮ ಬುದ್ಧಿವಂತಿಕೆ ಉಪಯೋಗಿಸುತ್ತಾರೆ .ಮಾನವ ಚರಿತ್ರೆಯನ್ನು  ಒಂದು ಚೀಟಿಯಲ್ಲಿ ಬರೆದು ಲಕೋಟೆಯಲ್ಲಿ ಹಾಕಿ ಆಸ್ಥಾನಕ್ಕೆ ತಲುಪಿಸುತ್ತಾರೆ.ರಾಜ ಅಚ್ಚರಿಯಾಗುತ್ತಾನೆ .ಏನಿದು?ವಿದ್ವಾಂಸರು ಹೇಳುತ್ತಾರೆ. ಅದು ಮಾನವ ಚರಿತ್ರೆ!
ಆ ಚೀಟಿಯಲ್ಲಿ ಇಷ್ಟೇ ಇತ್ತು.
"ಮಾನವ ಹುಟ್ಟುತ್ತಾನೆ.ಅನುಭವಿಸುತ್ತಾನೆ.ಸತ್ತು ಹೋಗ್ತಾನೆ,"ವಿದ್ವಾಂಸರು ಹೇಳಿದರು ಇದುವೇ ಬದುಕು.
ನಮ್ಮ ನಿರೀಕ್ಷೆ ಯಂತೆ ಏನಾದರೂ ನಡೆಯುತ್ತದಾ? ನಾವು ಚಿಕ್ಕದರಲ್ಲಿ  ಆಟಕ್ಕಾಗಿ ಏನು ಬೇಕಾದರೂ ಬಿಡುತ್ತೇವೆ. ಊಟ,ಪಾಠ,ನಿದ್ದೆ ಎಲ್ಲವನ್ನೂ ಬಿಡುತ್ತೇವೆ. ಆಟದ ಕಾಲದಲ್ಲಿ ಬೇರೆ ಏನೂ ಕಾಣಲೇ ಇಲ್ಲ.ನಮ್ಮ ಆಲೋಚನಾ ಪರಿಧಿ ಚಿಕ್ಕದಾಗಿತ್ತು.ಮನೆ ಮಂದಿ ,ಮನೆ ಜಗಲಿ,ಶಾಲೆ,ಒಂದಿಷ್ಟು ಸ್ನೇಹಿತರು.ನಂತರ ಕಲಿಕೆ ಮುಗಿಯುತ್ತಿದ್ದಂತೆ ಅಥವಾ ಕಲಿಕೆ  ಬೇಡವೆಂದಾದರೆ  ನಿರೀಕ್ಷೆಗಳು ಬದಲಾಗುತ್ತದೆ.ಮತ್ತೆ ಸಂಪಾದನೆ ಮಾಡಬೇಕೆಂದು ಚಿಂತಿಸುತ್ತಾನೆ, ಹಾಗಾಗಬೇಕು ಹೀಗಾಗಬೇಕು.ಕನಸುಗಳು ಕನವರಿಕೆಗಳು! ನಂತರ ಹಲವು ಪ್ರಯತ್ನ ಮತ್ತು ಸಂಪಾದನೆ ಮಾಡಿದ ಮೇಲೆ ಸಂಸಾರಿ ಯಾಗಬೇಕೆಂದಾಯಿತು.ಹೆಣ್ಣಿನ ಹುಡುಕಾಟ ,ಮನಸ್ಸು. ಗರಿಗೆದರಿ ಹಾರಾಡುವ ಕನಸುಗಳು ಒಂದಿಷ್ಟು ದಿನ ಅದೂ ಮುಗೀತು.  ಸಂಸಾರಿಯಾಗುವಷ್ಟರಲ್ಲಿ ಸ್ನೇಹಿತರು   ದೂರವಾಗಿ ಬಿಡ್ತಾರೆ. ಕೆಲವು ವರ್ಷಗಳಲ್ಲಿ ಮರಿಮಕ್ಕಳು ಅಂತ ದುಡೀಯುತ್ತಾ ಇರುವಾಗ ನಂತರದ ಬದುಕು ಮಕ್ಕಳಿಗಾಗಿ ಮತ್ತು ಮನೆ ನಿಭಾಯಿಸೋದಕ್ಕೆ ಮೀಸಲಾಗುತ್ತದೆ .ಇಷ್ಟಾಗುವಾಗ ಸಹೋದರರು ಸಹೋದರಿಯರು ಮತ್ತು ಹತ್ತಿರವಿದ್ದವರೆಲ್ಲಾ ದೂರ ದೂರವಾಗ್ತಾರೆ.ತಂದೆ ತಾಯಿಯೂ ಅಪರೂಪವಾಗಿ ಹೋಗುತ್ತಾರೆ.ನಾವೀಗ ಮಕ್ಕಳ ಕಡೆ ಗಮನ ಕೊಡುತ್ತೇವೆ.ಮಕ್ಕಳು ದೊಡ್ಡವರಾಗುತ್ತಾ ಕ್ರಮೇಣ ನಮ್ಮನ್ನು ತಿರಸ್ಕರಿಸುತ್ತಾ ಬರುತ್ತಾರೆ .ಎನಾದರೂ ಸಂಪಾದನೆಯ ಉಳಿಕೆ ಇದ್ದರೆ ನಮ್ಮನ್ನು ಸ್ವಲ್ಪ ನೋಡಿಕೊಳ್ಳಬಹುದು.ಹೇಗಾದರೂ ನಾವೇ ನಮ್ಮ ಮಕ್ಕಳಿಗೆ ಭಾರವಾಗುವ ಸ್ಥಿತಿ ನಿರ್ರ್ಮಾಣವಾಗುತ್ತದೆ.ಇಂತಹಾ ಅವಗಣನೆಯ ಮತ್ತು ಅಸಹಾಯಕತೆಯ ಬದುಕಿಗಾಗಿ ಹಲವರೊಂದಿಗೆ ವೈರ,ಹಗೆ,ಪೈಪೋಟಿ, ಹಠ ಸಾದನೆ ಎಲ್ಲವೂ?ಈ ಹಟ ಸಾದನೆಗೆ ಅಧಿಕಾರ ,ಸಂಪತ್ತು,ಪ್ರಭಾವ ದುರುಪಯೋಗ ನಡೆಯುತ್ತದೆ.ಕಡೆಗೆ ನಮ್ಮ ದಿನ ಮುಗಿಯುತ್ತದೆ.ಈ ಬದುಕಿಗೇನು ಅರ್ಥ.ನಮ್ಮ ನಿರೀಕ್ಷೆಯಂತೆ ಯಾರು ಇರೋದಿಲ್ಲ ಅವರವರ ನಿರೀಕ್ಷೆಗಾಗಿ ಎಲ್ಲರೂ ಇರುತ್ತಾರೆ.
ಈ ಅತಂತ್ರ ಬದುಕಿಗಾಗಿ ನಾವು ನಮ್ಮ ಜೀವನವನ್ನೇ ಸವೆಸುತ್ತೇವೆ.ಆಟ,  ಸಂಪಾದನೆ, ಕುಟುಂಬ ಎಲ್ಲಾ ಮುಗಿವಾಗ ಏನೂ ಇಲ್ಲ. ಅರ್ಥ ಸಿಗದ ಒಂದಿಷ್ಟು ಕಾಲ!
ಮಾಡಿದ್ದು ಉಣ್ಣಲಾರದ ಸ್ಥಿತಿಯಲ್ಲಿ ಹೊರಟು ಹೋಗ್ತೇವೆ.ಜೊತೆಗೆ ಅನಾರೋಗ್ಯವೂ ಸತಾಯಿಸುತ್ತಿರುತ್ತದೆ.
ನನ್ನ ಇಚ್ಚೆಯಂತೆ ಆಗಬೇಕು.ನನಗೇ ಸಿಗಬೇಕು.ಸಿಗದೇ ಹೋದರೆ ಬೇರೆಯವರಿಗೆ ಸಿಗಬಾರದು.ಆಸೆ, ಅತಿಯಾಸೆ, ದುರಾಸೆ,ಅಸೂಯೆ ಹಗೆ, ಪೈಪೋಟಿ, ಲೂಟಿ, ಕೊಲೆ.ಕೊನೆಗೆ ಗಾಳಕ್ಕೆ ಸಿಕ್ಕ ಮೀನಿನಂತೆ ವಿಲವಿಲ ಒದ್ದಾಡಿ ಸಾಯಬೇಕಾಗುತ್ತದೆ.

ಬಯಲು ಪ್ರದೇಶದಲ್ಲಿ ಹದ್ದೊಂದು ಹಕ್ಕಿಯೊಂದನ್ನು ಬೇಟೆಯಾಡಿ ತನ್ನ ಎರಡು ಕಾಲುಗಳಿಂದ ಗಟ್ಟಿಯಾಗಿ ಅದುಮಿ ಹಿಡಿದಿತ್ತು.ಇದನ್ನು ಕಂಡ ಬೇರೆ ಎರಡು ಪಕ್ಷಿಗಳು ಹದ್ದಿನ ಮೇಲೆ ಎರಗುತ್ತಿತ್ತು ಆದರೂ ತನ್ನ ಬಲವಾದ ರೆಕ್ಕೆಗಳಿಂದ ರಕ್ಷಣೆ ಮಾಡುತ್ತಿತ್ತು. ನಂತರ ತನ್ನ ಕೊಕ್ಕಿನಿಂದ ಕುಕ್ಕಿ ತಿಂದು ಬಿಡುತ್ತದೆ. ಈ ಪ್ರಾಣಿಗಳಿಗಿಂತ ಮನುಷ್ಯ ಮಿಗಿಲಾಗುವುದು ಹೇಗೆ?.
ಜನ ಬಲ, ಹಣ ಬಲ,ರಟ್ಟೆ ಬಲ ಕಾಂಚನದ ಮುಂದೆ ಕಾನೂನು ತಲೆಬಾಗುತ್ತದೆ.ಪುರಾವೆಗಳು ಬದಲಾಗುತ್ತದೆ.ಜೈಲಿಗೆ ಹೋಗುವಾಗಲು ಹಾರ ತುರಾಯಿ ?ಬರುವಾಗಲೂ ಹಾರ ತುರಾಯಿ?.
ವಿಜಯದ ಸಂಕೇತ ಅಂತ ತೋರು ಬೆರಳು ಮತ್ತು ನಡು ಬೆರಳುಗಳನ್ನು ಎತ್ತಿ ಪ್ರದರ್ಶಿಸುತ್ತಾರೆ.ಯಾರು ಯಾರ ಮೇಲೆ ವಿಜಯ ಸಾಧಿಸುವುದು?
ಸತ್ಯದ ಮೇಲೆ ಅಸತ್ಯದ ಜಯವೋ?
ಕಾನೂನಿನ ಮೇಲೆ ಅನ್ಯಾಯದ ಜಯವೋ?
ಧರ್ಮದ ಮೇಲೆ ಅಧರ್ಮದ ಜಯವೋ?
ಸ್ವ ಇಚ್ಚೆಗಳು ಆತ್ಮದ ಮೇಲೆ ಹೆಚ್ಚು ಹೆಚ್ಚು ಗೆಲ್ಲಲಾರಂಭಿಸಿದೆ.ಸತ್ಯ ,ನ್ಯಾಯ ಧರ್ಮ ಸೋಲುತ್ತಿದೆ.ಆದರೆ ಅದು ಅವನತಿಯತ್ತ ಸಮಾಜವನ್ನು ಕೊಂಡೊಯ್ಯಲಿದೆ.
ಜಗತ್ತಿನಲ್ಲಿ ಹಲವು ರೀತಿಯಾಗಿ ಮಾನವ ಬದುಕು ಕಳೆದು ಹೋಗಿದೆ.ಸ್ವೇಚ್ಛಾಧಿಪತಿಗಳ ಕಾಲ.ದುಷ್ಟ ಅಹಂಕಾರಿ ರಾಜರುಗಳ ಕಾಲ.ದುರ್ಭಲರನ್ನು ದುಡಿಸಿಕೊಂಡ ಬಲಾಡ್ಯರ ಕಾಲ.ಆದರೆ ಇಂದು ಕಾಂಚಣ ಜಗತ್ತನ್ನುಆಳುವಂತಾಗಿದೆ.ನ್ಯಾಯಪೀಠ ಕಟ್ಟಲು ಖರ್ಚು ಇದೆ.(ಅ)ನ್ಯಾಯ ವಿಧಿ ಪಡೆಯಲು  ಕೂಡಾ ಖರ್ಚು ಮಾಡಬೇಕಾಗಿದೆ.ಅಪರಾಧ,ಅನ್ಯಾಯ,ಅತ್ಯಾಚಾರ ಯಾವುದು ಕಾಣೋದೇ ಇಲ್ಲ. ಹಣದ ಹೊಳೆಯಲ್ಲಿಅವೆಲ್ಲವೂ ಕೊಚ್ಚಿ ಹೋಗುತ್ತಿದೆ.ಕಾನೂನು ಮತ್ತು ಕೋರ್ಟುಗಳಿರೋದು ಅಮಾಯಕರನ್ನು ದಂಡಿಸಲು ಮತ್ತು ಅಪರಾಧಿಗಳನ್ನುರಕ್ಷಿವುದಕ್ಕೋ ? ಎಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ.ಸ್ವಾರ್ಥವು ಒಳಿತನ್ನು ಆಪೋಶನ ತೆಗೆದು ಕೊಳ್ಳುತ್ತಿದೆ.
ಒಂದಂತೂ ಸತ್ಯ.ಯಾರು ಏನೆಲ್ಲಾ ಮಾಡಿ ಕೂಡಿಟ್ಟದ್ದನ್ನು ಕಟ್ಟಿ ಕೊಂಡು ಹೊಗೋದಿಲ್ಲ .ಅದು ಇನ್ನೂ ಹಲವರನ್ನು ಕಚ್ಚಾಡಿಸಲು ಮಾತ್ರ ಪ್ರಯೋಜನವಾಗುತ್ತದೆ.
ನಾವು ನೀರೀಕ್ಷಿಸಿದವರಾರೂ ನಮ್ಮಜೊತೆ ಇರೋದಿಲ್ಲ.ಯಾರು ಯಾರನ್ನೂ ಬಯಸುವುದಿಲ್ಲ. ಸಂಪೂರ್ಣವಾಗಿ ನಮ್ಮನ್ನು ಬಯಸುವವನು ಅಲ್ಲಾಹನು ಮಾತ್ರ. ಆತನನ್ನು ಬಯಸುವವರು ಜನ ಹಿತ ಕಾಯುವರು.ಅವರು ಜನರನ್ನು ನೇರವಾಗಿ ಬಯಸುತ್ತಿಲ್ಲ ಬದಲಿಗೆ ಅಲ್ಲಾಹನಿಗಾಗಿ ಬಯಸುತ್ತಾರೆ.
ಅಲ್ಲಾಹನಿಗಾಗಿ ಯಾವನೊಬ್ಬ ಪ್ರೀತಿಸಿದರೆ ,ಕೋಪಿಸಿದರೆ,ಕೊಟ್ಟರೆ ,ತಡೆದರೆ,ಆತನ ಧರ್ಮವಿಶ್ವಾಸ ಪರಿಪೂರ್ಣಗೊಳ್ಳುತ್ತದೆ.(ಹದೀಸು)

ಅಲ್ ಅಹ್ಸನ್ ಮಾಸಿಕ

ಬುರ್ಖಾಧಾರಿ ಮುಸ್ಲಿಂ ಮಹಿಳೆಯರಿಗಿರುವ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇಂದಿನ ಡೋಂಗಿ ದೇಶ ಭಕ್ತರಿಗಿಲ್ಲ.

ಭಾಷಣ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು (ಕೊಯ್ಯೂರು)

ವೀರ ಇತಿಹಾಸದ ರೋಮಾಂಚಕ ಘಟನೆಗಳ ಚರಿತ್ರೆಯನ್ನು ಸ್ಮರಿಸುವ  ಸಂಭ್ರಮವೇ ಸ್ವಾತಂತ್ರ್ಯೋತ್ಸವದ ಸಂಭ್ರಮ.ಅದು ಶತಶತಮಾನಗಳಲ್ಲಿ ನಡೆದು ಬಂದ ವಿಸ್ತಾರವಾದ ಹೋರಾಟದ ಚರಿತ್ರೆ.ಬ್ರಿಟೀಷರು ದೇಶಗಳಲ್ಲಿ ಕಾಲೂರುವ ತನಕ ಪರಸ್ಪರ ಧರ್ಮಗಳ ಮಧ್ಯೆ ಸಂಘರ್ಷವಿರಲಿಲ್ಲ.
ಎಂಟು ನೂರು ವರ್ಷಗಳ ಕಾಲ ಮುಸ್ಲಿಮರು ದೇಶವನ್ನಾಳಿದ್ದರೂ ಮತೀಯ ಸಂಘರ್ಷದ ಯಾವುದೇ ಸಂಕಟಕ್ಕೆ ದೇಶ ಬಲಿಯಾಗಲಿಲ್ಲ.ವಂಚನೆಯ ಮೂಲಕ ವ್ಯಾಪಾರ ಕ್ಕಾಗಿ ಬಂದ ಆಂಗ್ಲೇಯರು ಅವರ ವ್ಯಾಪಾರ ಬುದ್ದಿಯನ್ನೇ ತೋರಿ ಹಿಂದು ಮುಸ್ಲಿಮ್ ಎಂಬ ಮತೀಯ ದೊಂಬಿಗೆ ಶಿಲಾನ್ಯಾಸವನ್ನು ಮಾಡಿಯೇ ಬಿಟ್ಟರು. ಮೂಲಕ ಮತೀಯ ಗಲಭೆಗಳ ಕರಾಳ ಅಧ್ಯಾಯದ ಪುಟಗಳು ತೆರೆದುಕೊಳ್ಳಲು ಆರಂಭವಾಯಿತು.
ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ರಾಜತಂತ್ರ ಕಾಲದಲ್ಲೂ ಒಂದಾದ ಮನಸ್ಸುಗಳನ್ನು ಒಡೆಯುವ ಮೂಲಕ ಕಾಲಕಾಲದಲ್ಲಿ ಹಿಂದು ಮುಸ್ಲಿಂ ಮಧ್ಯೆ ಆಳವಾದ ಕಂದಕವನ್ನು ಸೃಷ್ಟಿಸಲಾಯಿತು.
ಆದರೆ ಭಾರತ ಬಲಿಷ್ಟ ಪ್ರಜಾತಂತ್ರ ವ್ಯವಸ್ಥೆ, ಗಟ್ಟಿಯಾದ ಸಂವಿಧಾನ ಮತ್ತು  ಭಾರತೀಯ ಪ್ರಜ್ಞೆ ಎಲ್ಲಾ ಸಂಘರ್ಷವನ್ನು ಮೆಟ್ಟಿ ನಿಂತಿದೆ. ಆದರೆ ಅದೀಗ ಅಪಾಯದ ಅಂಚಿನಲ್ಲಿದೆ. ಪ್ರಬುದ್ಧ ಬಹುರೂಪತೆಯ ಭಾರತೀಯತೆಯನ್ನು ಉಳಿಸಲು  ಪರಸ್ಪರ ಕೂಡಿಬಾಳುವ ಸಂಕಲ್ಪ ಒಂದೇ ಪರಿಹಾರ. ಕಾರಣವಾಗಿ ಬಲಿಷ್ಟ ವಿದ್ಯಾರ್ಥಿ ಸಂಘಟನೆ ಎಸ್ಕೆ ಎಸ್ಸೆಸ್ಸಫ್ ಪ್ರತಿ ವಲಯ ಮಟ್ಟದಲ್ಲಿ ಬ್ರಹತ್ತಾದ ಕಾರ್ಯಕ್ರಮ ವನ್ನು ಆಯೋಜಿಸಿದೆ .ಅದುವೇ ಫ್ರೀಡಂ ಸ್ಕ್ವೇರ್.ಒಂದಾಗಿ ಬಾಳೋಣ ಸೌಹಾರ್ದ ಕಾಯೋಣ
ಎಂಬ ಘೋಷ ವಾಕ್ಯದಡಿ ಲಕ್ಷಾಂತರ ಮಂದಿ ಒಟ್ಟು ಸೇರಿ ಸಂಕಲ್ಪ ಕೈಗೊಳ್ಳಲಿದ್ದಾರೆ.
ಭಾರತದಂತಹಾ ಬಹುರೂಪತೆಯ ಪ್ರಜಾತಂತ್ರ ದೇಶದ ಶಕ್ತಿ ಭ್ರಾತೃತ್ವ, ಬಂಧುತ್ವ ಮಾತ್ರ.
ತೆ ಮುಸಲ್ಮಾನರಲ್ಲಿ ರಕ್ತಗತವಾದ ಸಂಗತಿ.ಸ್ವರಾಜ್ಯವನ್ನು ಪ್ರೀತಿಸುವ ವಿಚಾರದಲ್ಲಿ ಮುಹಮ್ಮದ್ ಪೈಗಂಬರರು( )ಅನನ್ಯ ಮಾದರಿಯಾಗಿದ್ದಾರೆ.
ನನ್ನನ್ನು ನನ್ನ ಊರಿನ ಜನ ಹೊರ ಹಾಕದೇ ಇರುತ್ತಿದ್ದರೆ ನಾನು ನಿನ್ನ ಬಿಟ್ಟು ಹೊಗುತ್ತಿರಲಿಲ್ಲ. ಎಂದು ಹಿಜರಿ ಸಮಯ ಅತ್ತು ಬಿಟ್ಟಿದ್ದರು.ನನ್ನೂರುನನ್ನ ಊರು ಎಂದು ಕನವರಿಸುತ್ತಿದ್ದರು. ಸಂದರ್ಭದಲ್ಲಿ
ಸ್ವರಾಜ್ಯದ ವಿಜಯವು ಮಹೋನ್ನತ ವಿಜಯವೆಂದು ಕುರಾನ್ ಘೋಷಿಸುತ್ತದೆ. ಕಾರಣಗಳಿಂದ ಸ್ವಂತ ಊರಿನೊಂದಿಗೆ ಅಚಲವಾದ ಭಕ್ತಿ ಸ್ನೇಹವನ್ನು ಕಾಲ,ದೇಶ ಬೇಧವಿಲ್ಲದೇ ಮುಸಲ್ಮಾನರು ತೋರಿಕೊಟ್ಟರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿದವರು ಮುಸ್ಲಿಮರಾಗಿದ್ದರು.ಹದಿನೇಳಯ ಶತಮಾನದ ತನಕ ಎಂಟುನೂರು ವರ್ಷಗಳ ಕಾಲ ಮುಸ್ಲಿಂ ಆಡಳಿತವಿದ್ದರೂ ಯಾರೂ ಸ್ವಾತಂತ್ರ್ಯ ಕ್ಕಾಗಿ ಧ್ವನಿ ಎತ್ತಲಿಲ್ಲ.
ಸ್ವಾತಂತ್ರ್ಯ ಮೊದಲ ಕಹಳೆ ಮೊಳಗಿದ್ದು ೧೫೨೫ ರಲ್ಲಿ .ವೀರ ಕಲಿಗಳಾದ ಕುಂಙಾಲಿ ಮರಕ್ಕಾರ್ ಕುಟುಂಬವೇ ಅದರ ಸಾರಥ್ಯ ವಹಿಸಿತ್ತು೧೭೫೮  ರಲ್ಲಿ ಬಂಗಾಳದ ನವಾಬ ಸಿರಾಜುದ್ದೌಲ ಬ್ರಿಟಿಷರ ವಿರುದ್ಧ ಹೋರಾಡಿದರೆ, ೧೭೫೮ ರಲ್ಲಿ ಬಹಾದ್ದೂರ್ ಷಾ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಾಯಕನಾಗಿ ಹೋರಾಡಿದರು.೧೭೬೧ ರಿಂದ ೧೭೯೯ ತನಕ ಹೋರಟದ ವರ್ಣರಂಜಿತ ಅಧ್ಯಾಯ ಬರೆದ ಹೈದರಲಿ ಟಪ್ಪು ಸುಲ್ತಾನ್ ಹೋರಾಟ. ೧೮೧೯ರಲ್ಲಿ   ವೆಳಿಯಂಗೋಡು ಉಮರ್ ಖಾಝಿ ಜೈಲು ಸೇರಿದ್ದು  ಭೂಕಂದಾಯ ನೀಡದ ಆರೋಪದಲ್ಲಿ ಆಗಿತ್ತು.ನನ್ನ ಮಣ್ಣಿನ ತೆರಿಗೆ ಪರಕಿಯರಾದ ನಿಮಗೆ ಯಾಕೆ ನೀಡಬೇಕು ?ಎಂಬ ವಾದವಾಗಿತ್ತು ಅವರದು."
"ಯೋಧರಿಗೊಂದು ಕೊಡುಗೆ(ತುಹ್ಪತುಲ್ ಮುಜಾಹಿದೀನ್)ಎಂಬ ಕೃತಿಯನ್ನು ಬರೆದು ಸಯ್ಯಿದ್ ಅಹ್ಮದ್ ಝೈನುದ್ದೀನ್ ಮಖ್ದೂಂ()ಸ್ವಾತಂತ್ರ್ಯ  ಹೋರಾಟಗಾರರನ್ನು ಹುರಿದುಂಬಿಸಿದ್ದರು.ಸಯ್ಯಿದ್ ಝೈನದ್ದೀನ್ ಅಲಿಯ್ಯಿ ಒಂದನೆಯವರು ಸತ್ಯ ವಿಶ್ವಾಸಿಗಳಿಗೆ  ಪ್ರೇರಣೆ (ತಹ್ರೀಲು ಅಹ್ಲಿಲ್ ಈಮಾನ್)ಎಂಬ ಕೃತಿಯನ್ನು ಬರೆದು ಸಾಹಿತ್ಯ ಹೋರಾಟವನ್ನೇ ನಡೆಸಿದ್ದರು. ಮುಹ್ಯುದ್ದೀನ್ ಮಾಲೆಯ ರಚನೆಕಾರರಾದ ಖಾಝಿ ಮುಹಮ್ಮದ್ ಪತ್ಹುಲ್ ಮುಬೀನ್ ಕೂಡಾ ಹೋರಾಟಕ್ಕೆ ಕಿಚ್ಚು ಹೊತ್ತಿಸುವ ಗ್ರಂಥ ವಾಗಿತ್ತು.ವೀರ ಸೇನಾನಿ ಅಲೀ ಮುಸ್ಲಿಯಾರ್ ಮಲಬಾರ್ ದಂಗೆಯ ಸೇನಾನಿಯಾಗಿದ್ದರೆ, ಸಯ್ಯಿದ್ ಮಂಬುರಂ ತಂಙಲ್ ಸಮರ ಮುಂಚೂಣಿಯಲ್ಲಿದ್ದರು.ಅವರ ಮಗನಾದ ಸಯ್ಯಿದ್ ಪಝಲ್ ಪೂಕೋಯ ತಂಙಲ್ ಸೈಫುಲ್ ಬತಾರ್ (ಪ್ರವಾದಿ ಖಡ್ಗ )ಎಂಬ ಹೆಸರಲ್ಲಿ ಗ್ರಂಥ ಬರೆದು ಪರಕೀಯರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು.ಪಾಣಕ್ಕಾಡ್ ಹುಸೈನ್ ತಂಙಲ್ ಕೂಡಾ ಸಮರ ಮುಖದಲ್ಲಿದ್ದರು.
ಸಮರ ಸೇನಾನಿಗಳಾಗಿ ಹೋರಾಡಿದ ಅಸಂಖ್ಯಾತ ಮುಸ್ಲಿಮರ ಚರಿತ್ರೆಯನ್ನು ಇತಿಹಾಸ ಕಾರರು ಉಲ್ಲೇಖಿಸುತ್ತಾರೆ.ಯಾವುದೇ ಕಾಲದಲ್ಲೂ ಮುಸ್ಲಿಮರು ಬ್ರಿಟಿಷರ ಅಧಿಕಾರದ ಭಾಗವಾಗಲಿಲ್ಲ.ಅವರೊಂದಿಗೆ ಸಹಕಾರ ಒಪ್ಪಿಗೆ ಪತ್ರ ಬರೆಯಲಿಲ್ಲ.
ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಮಾಹಿತಿ ಕೊಡುವ ನಯ ವಂಚಕ ಕೆಲಸವನ್ನೂ ಮಾಡಲಿಲ್ಲ.ಆದರೂ ಮುಸಲ್ಮಾನರನ್ನು ದೇಶಪ್ರೇಮದ ವಿಚಾರದಲ್ಲಿ ಅನುಮಾನದಿಂದ ನೋಡುವವರಿಗೆ ಕಮ್ಮಿ ಇಲ್ಲ.ಇನ್ನು ದೇಶಿಯ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರು ಮಾಡಿದ ಹೋರಾಟ, ನಿರ್ಮಿಸಿದ ಇತಿಹಾಸ ಇಂದಿನ ದೇಶಭಕ್ತರೆನಿಸಿಕೊಂಡವರ ಪೂರ್ವ ಹಿರಿಯರು ಮಾಡಲಿಲ್ಲ.ಅಂತಹಾ ಅಪ್ರತಿಮ ಹಿನ್ನಲೆ ಮುಸ್ಲಿಂ ಮಹಿಳಾಮಣಿಗಳಿಗಿದೆ.ಬುರ್ಖಾದೊಳಗೆ ಬಂಧಿತಳು,ತ್ರಿವಳಿ ತಲಾಖ್ ನೊಳಗೆ ಅತಂತ್ರಳು ,ನಾಲ್ಕು ಗೋಡೆಯೋಳಗೆ ಅಶಕ್ತಳು? ಎಂದೆಲ್ಲಾ ಹೇಳಿಕೆ ಕೊಡುವ ಮಸ್ಲಿಂ ವಿರೋಧಿ ನಂಜನ್ನು ಕಾರುವ ನಕಲಿ ದೇಶ ಭಕ್ತರು ಅರಿಯಬೇಕಾದ ಸಂಗತಿ! ಗಂಡಸರೆನಿಸಿಕೊಂಡವರು ಬ್ರಿಟಿಷರ ಸೆರಗಿನೊಳಗೆ ನುಸುಳಿ ಕೂತಾಗ ರಣ ವೀರೆಯರಾಗಿ ರಣರಂಗದಲ್ಲಿ ಧೀರವಾಗಿ ಹೋರಾಡಿದ ಚರಿತ್ರೆ ಮುಸ್ಲಿಂ ಮಹಿಳೆಯರಿಗಿದೆ.ಸ್ವಾತಂತ್ರ್ಯ ನಂತರ ಎಲ್ಲೋ ಅಡಗಿದ್ದ ಭಕ್ತರು ಮೆಲ್ಲಮೆಲ್ಲನೆ ಜಡೆ ಎತ್ತಿ ಕೊನೆಗೆ ನಿಜವಾದ ಹೋರಾಟಗಾರರನ್ನು ಪಕ್ಕಕ್ಕೆ ಸರಿಸಿ ತಾವೇ ತಮ್ಮ ಪೂರ್ವಿಕರೇ ಹೋರಾಟಗಾರರೆಂದು ಬಿಂಬಿಸುತ್ತಿದ್ದಾರೆ. ಮೂಲಕ ಮುಸ್ಲಿಮರ ಹೋರಾಟದ ಅಧ್ಯಾಯ ವನ್ನು ಮರೆಮಾಚಲಾಗುತ್ತಿದೆ.ಅಲ್ಪಸಂಖ್ಯಾತರ ಮೇಲಾಗುವ ದೌರ್ಜನ್ಯ ವನ್ನುಮುಚ್ಚಿಹಾಕಲು  ಮುಸ್ಲಿಮ್ ರಾಜರುಗಳ ಮೇಲೆ ಹೆಣೆಯಲ್ಪಟ್ಟ ಕಟ್ಟುಕಥೆಗಳಾದ ಮತಾಂತರ,ಮಂದಿರ ದ್ವಂಸ ಎಂಬಿತ್ಯಾದಿ ವಿಚಾರಗಳೊಂದಿಗೆ ಭಯೋತ್ಪಾದನೆಯ ಭೂತವನ್ನು ಮುಸ್ಲಿಮ್ ತಲೆ ಮೇಲೆ ಕೂರಿಸಲಾಗುತ್ತದೆ.
ಬುರ್ಖಾಧಾರಿ ಮಹಿಳೆಯರ ಸ್ವಾತಂತ್ರ್ಯ ಹೋರಾಟದ ವೀರ ಇತಿಹಾಸ ಅದ್ಭುತವಾದದ್ದು.೧೮೪೭ರಲ್ಲಿ  ಬೇಗಂ ಹಝ್ರತ್ ಮಹಲ್ ಬುರ್ಖಾಧಾರಿ ಮಹಿಳೆ ಬ್ರಿಟೀಷರ ವಿರುದ್ಧ ಏಳು ಲಕ್ಷ ಸೈನಿಕರನ್ನು ಕಟ್ಟಿ ಹೋರಾಡಿದ ಮಹಿಳೆ. ಬ್ರಿಟಿಷರಿಗೆ ತಲೆ ನೋವಾಗಿದ್ದ ಮಹಲನ್ನ ಮುಗಿಸಲು ಪ್ರಯತ್ನ ಪಟ್ಟರೂ ಸಾದ್ಯವಾಗಲಿಲ್ಲ.ಅನೇಕ ಸಲ ಹಝ್ರತ್ ಮಹಲನ್ನು ಓಲೈಸಕೊಳ್ಳಲು  ಬ್ರಿಟಿಷರು ಮುಂದಾದರೂ ಸಾಧ್ಯವಾಗಲಿಲ್ಲ.ಕಡೆಗೆ ಅವರು ನೇಪಾಳದಲ್ಲಿ ನೆಲೆಸುತ್ತಾರೆ ಧೀರ ವನಿತೆ.
ಮೊದಲ ಸ್ವಾತಂತ್ರ್ಯ ಸಮರದಲ್ಲಿ ವೀರಾವೇಶದಿಂದ ಹೋರಾಡಿದ ಸಾಹಿರಾ ಬೇಗಂ.ಇವರ ಹೋರಾಟ ಕಂಡು ಬ್ರಿಟಿಷ್ ಸೈನ್ಯ ದಂಗಾಗಿ ಹೋಗಿತ್ತು.ಸೇನಾ ಕಮಾಂಡರ್ ವೈ. ಡಬ್ಲ್ಯು,ಹಡ್ಸನ್ ಹೇಳಿದ್ದು  ಸಾಹಿರಾ ಸಾಮಾನ್ಯಳಲ್ಲ  ಅವಳು ಅಸಾಮಾನ್ಯ ಸಮರ ರತ್ನ  ಎಂದಾಗಿತ್ತು.ಸಾಹಿರಾ ಬೇಗಂ ದೆಹಲಿಯ ಚಾಂದ್ನಿ ಚೌಕಿಯ ವೌಲವಿಯ ಮಗಳಾಗಿದ್ದರು.ಕೊನೆಗೆ ಸಮರ ರತ್ನವನ್ನು ಗಲ್ಲಿಗೇರಿಸಲಾಯಿತು.ಜಾಮಿಯಾ ಮಿಲ್ಲಿಯ ಪ್ರಿನ್ಸಿಪಾಲರಾದ ಮಾಜಿದ್ ಪತ್ನಿ ಖುರ್ಶಿದಾ ಬೇಗಂ  ಹಿಂದ್ ಎನ್ನುವ ಪತ್ರಿಕೆ ಮೂಲಕ ವಿಚಾರ ಹೋರಾಟಕ್ಕೆ ಮುಂದಾದರು.ಅಹ್ಮದಾಬಾದಿನಲ್ಲಿಹಮೀದಿಯಾ ಕಾಲೇಜನ್ನು ಸ್ಥಾಪಿಸಿದ್ದರು.
ಕಾನ್ಪುರದಲ್ಲಿ ಮಹಿಳಾ ಸೇನೆಯನ್ನು ಕಟ್ಟಿದ ದೀರ ವನಿತೆ ಅಝೀಝ ಖಾನಂ. ಗುಪ್ತವಾಗಿ ಬ್ರಿಟಿಷ್ ವಿರುದ್ಧ ಮಹಿಳಾ ಶಕ್ತಿಯನ್ನು ಸಂಘಟಿಸುತ್ತಿದ್ದ ಖಾನಂ ನನ್ನು ಹಿಡಿದು ತಂದು ಬೆಂಕಿಯನ್ನು ಉಗುಳುವ ತೋಪಿನ ಮುಂದೆ ನಿಲ್ಲಿಸಿ ಅಜೀಮುಲ್ಲಾ  ಖಾನ್ ಎಲ್ಲಿ ಎಂದು ಹೇಳು ಎನ್ನುತ್ತಾ ಗದರಿಸಿ ನೀನು ಅವನ ಬಗ್ಗೆ ಹೇಳಿದರೆ ನಿನ್ನನ್ನು ಸುಮ್ಮನೇ ಬಿಡುತ್ತೇವೆ.ಆಗ ಅಝೀಝ ಖಾನಂ ಹೇಳಿದ್ದು
 ಸ್ವಾತಂತ್ರ್ಯ ಸೇನಾನಿಯನ್ನು ನಿಮಗೆ ಬಲಿಕೊಡುವುದಕ್ಕಿಂತ ನಾನೇ ನಿಮ್ಮ ತೋಪಿಗೆ ತಲೆ ಒಡ್ಡುವೆ.
ಕೊನೆಗೆ ರುಂಡವನ್ನು ಅವರ ತೋಪು ಬಲಿ ತೆಗೆದಿತು.
ದೇಶಿಯ ಪ್ರಸ್ಥಾನದ ನೇತಾರ ಬದ್ರುದ್ದೀನ್ ತಯ್ಯಿಬ್ ಜೀ ಪತ್ನಿ ಆಮಿನಾ.ಸಂಬಂಧಿಕರಾದ ರಹನಾ ,ಸುಹೈಲಾ ಗಾಂದೀ ಜೊತೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸಿ ಮದ್ಯಪಾನ ವಿರುದ್ಧ ಹೋರಾಡಿದರು.
ಬದ್ರುದ್ದೀನ್ ತಯ್ಯಿಬ್ ಮಗಳು ಸಕೀನಾ ಲುಖ್ಮಾನಿ ಬಾಂಬೆಯ ಬೆಂಕಿ ಉಗುಳುವ ಭಾಷಣಗಾರರಾಗಿದ್ದರು.ಸಮರ ವೀರ ರಸೂಲ್ ಕುರೇಸಿ ಪತ್ನಿ ಆಮಿನಾ,ಸೈಫುದ್ದೀನ್ ಪತ್ನಿ ಸಹಾದತ್ ಬಾನು ಹೋರಾಟದ ಹಾದಿಯಲ್ಲಿ ಸಬರಮತಿ ಆಶ್ರಮದಲ್ಲೇ ಇದ್ದರು.ಹಝ್ರತ್ ಮೋಹಾನಿ ಪತ್ನಿ ನಿಹ್ಮತುನ್ನಿಸಾ ಬೇಗಂ ,ಬ್ಯಾರಿಸ್ಟರ್ ಆಸಿಫ್ ಅಲಿ ಪತ್ನಿ ಅಕ್ತರ್ ಬೇಗಂ ಕೂಡಾ ಸಮರ ರಂಗದಲ್ಲಿದ್ದರು.ಭಾರತ ಕಂಡ ಅಪ್ರತಿಮ ಹೋರಾಟಗಾರರಾದ ಮುಹಮ್ಮದಲಿ ಶೌಕತ್ ಅಲೀ ತಾಯಿ ಬೀಯುಮ್ಮ ತೋರಿದ ಧೀರತೆ ಅಪಾರ. ಸರಳುಗಳು ಮಧ್ಯೆ ಬಂದಿತ ಮಕ್ಕಳೊಂದಿಗೆ ಹೇಳಿದ್ದು ಯಾವುದೇ ಕಾರಣದಿಂದ ನೀವು ಬ್ರಿಟೀಷರಿಗೆ ಶರಣಾಗಬೇಡಿ ಸಹಕರಿಸಬೇಡಿ.ಒಂದು ವೇಳೆ ಹಾಗೇ ಮಾಡಿದರೆ ನನ್ನ ಎದೆಹಾಲು ನಿಮಗೆ ಹಾರಾಂ  (ನಿಷಿದ್ದ)ಆದೀತು.ಇಸ್ಲಾಮಿನ ಬುರ್ಖಾಧಾರಿ ಮುಸ್ಲಿಮರ ಹೋರಾಟದ ಹತ್ತಿರಕ್ಕೆ ಬರಲು ಇಂದಿನ ಸ್ವಯಂ ಘೋಷಿತ ದೇಶ ಭಕ್ತರಿಗೆ ಅಸಾಧ್ಯ. ಗಾಂಧಿಯವರನ್ನು ಕೊಂದವರು,ರಾಷ್ಟ್ರಧ್ವಜ ಕ್ಕೆ ಅವಮಾನ ಮಾಡಿದವರು, ಹೋರಾಟದ ವಿಷಮ ಘಟ್ಟದಲ್ಲಿ ಪರಕಿಯರ ಜೊತೆ ಇದ್ದವರು ನಿಜವಾದ ದೇಶ ಭಕ್ತರಲ್ಲ .ಅವರು ದೇಶ ಭಕ್ಷಕರು.ಹಚ್ಚಗಿದ್ದಲ್ಲಿ ಮೇಯುವ ಬೆಚ್ಚಗಿದ್ದಲ್ಲಿ ಮಲಗುವ ಇಲ್ಲವಾದರೆ ಬಿಲ ಸೇರುವ ಸಮಯಸಾಧಕರು ಮಾತ್ರ.ಇವರ ಸಿದ್ದಾಂತ ಭಾರತೀಯ ಬಹು ರೂಪತೆಯ ಸಂಸ್ಕೃತಿಯ ವಿರೋಧಿ, ಪ್ರಜಾಪ್ರಭುತ್ವಕ್ಕೆ ಕಂಟಕ, ಸಂವಿಧಾನ ವ್ಯವಸ್ಥೆಗೆ ವಿನಾಶಕಾರಿ.ಇಂತವರಿಗೆ ಮಣೆ ಹಾಕೋದು ಹುಚ್ಚುತನ ಮಾತ್ರವಾಗಬಹುದು.ಇದರಿಂದ ದೊಡ್ಡ ಗಂಡಾಂತರಕ್ಕೆ ಕಾರಣವಾಗಲೂಬಹುದು. ದೇಶದ ಸಮಾನ ಮನಸ್ಕರಾದ ಬಹು ಸಂಖ್ಯಾತ ಪ್ರಗತಿಪರ ಚಿಂತಕರು ದಮನಿತ  ಅಲ್ಪಸಂಖ್ಯಾತರ ಪರ ದ್ವನಿ ಎತ್ತುತ್ತಿದ್ದಾರೆ.ಆದರೆ ಕೆಲ ವಿದ್ವಾಂಸರೆನಿಸಿಕೊಂಡವರ ಅವಿವೇಕದ ವರ್ತನೆಯು ಪ್ರಗತಿಪರರನ್ನು ವಿಮುಖರಾಗುವಂತೆ ಮಾಡಿದರೆ ಅದು ದೊಡ್ಡ ದುರಂತವಾಗಬಹುದು.

ವರದಿ ಅಹ್ಸನ್ ಮಾಸಿಕ