ಲೇ: ಅನೀಸ್ ಕೌಸರಿ ವೀರಮಂಗಿಲ
ದಕ್ಷಿಣದ ವೆನಿಸ್ ಅದೊಂದು ದಿನಕ್ಕಾಗಿ ತನ್ನ ಸೌಂದರ್ಯವನ್ನೇ ಬದಲಾಯಿಸಿತ್ತು...!! ಹಸಿರ ಕೈರಳಿಯ ಮುಕುಟವೆಂದೇ ಖ್ಯಾತಿ ಪಡೆದ "ಕಾಯಲ್" ನ ನಾಡು ಆಲಪ್ಪುಯದ ಹಸಿರ ಬಣ್ಣವನ್ನು ಶ್ವೇತವರ್ಣವಾಗಿ ಮಾರ್ಪಟ್ಟಿತ್ತು. ಈ ಸವಿಶೇಷತೆಯನ್ನು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಮಾತಿನಲ್ಲೇ ಹೇಳಬೇಕೆಂದರೆ "ಆಲಪ್ಪುಯದ ಕಡಲ ಕಿನಾರೆಯಲ್ಲಿ ಇನ್ನೋದು ಕ್ಷೀರ ಸಾಗರ, ಸಾಗರದ ವಿಶಾಲತೆಯ ಮುಂದೆ ನಮ್ಮ ಕಣ್ಣು ಸೋಲುವಂತೆ ಈ ಶಿಸ್ತು ಬದ್ಧ ಜನ ಸಾಗರದ ಮತ್ತೊಂದು ತುದಿಯನ್ನು ನೋಡಲು ನನ್ನೆರಡು ನಯನಗಳು ಸಾಕಾಗುತ್ತಿಲ್ಲ”.
ವಿದೇಶದಿಂದ ಬಂದಿದ್ದ ಪ್ರತಿನಿಧಿಗಳಂತೂ "ನಾವೀಗ ಅರಫದಲ್ಲಿದ್ದೇವೆಯೋ ಎಂದು ಭಾಸವಾಗುತ್ತಿದೆ’ ಎಂದಿದ್ದರು.
ಅಷ್ಟಕ್ಕೂ ಇಷ್ಟೆಲ್ಲಾ ವಿಶೇಷತೆಗಳಿಗೆ ಆಲಪ್ಪುಯ ಎಂಬ ಆ ಪ್ರದೇಶವು ಸಾಕ್ಷಿಯಾಗಿದ್ದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ೯೦ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭವಾಗಿತ್ತು.
ಫೆಬ್ರವರಿ ತಿಂಗಳ ೧೧ ತಾರಿಖಿನಿಂದ ನಾಲ್ಕು ದಿನಗಳ ಕಾಲ ಆಲಪ್ಪುಯದ ಇಎಂಎಸ್ ಸ್ಟೇಡಿಯಂನಲ್ಲಿ ಹಾಗೂ ಫೆ.೧೪ರಂದು ಅತೀ ವಿಶಾಲವಾದ ಕಡಲ ಕಿನಾರೆಯಲ್ಲಿ ನಡೆದ ಸಮಸ್ತ ಮಹಾ ಸಮ್ಮೇಳನದಲ್ಲಿ ಶ್ವೇತವಸ್ತ್ರದಾರಿಗಳ ದಂಡೇ ಹರಿದು ಬಂದಿದ್ದವು. ಸಮಸ್ತವೆಂಬ ಆಧ್ಯಾತ್ಮಿಕ ಸಂಘಟನೆಯ ಅಗ್ರಗಣ್ಯ ನೇತಾರರು, ಉಲಮಾಗಳು, ದೇಶ-ವಿದೇಶಗಳ ಪ್ರತಿನಿಧಿಗಳು, ರಾಜಕೀಯ ಮುಖಂಡರು, ದೀನೀಪ್ರೇಮಗಳಿಂದ ಆಲಪ್ಪುಯ ನಗರವು ಆ ಒಂದು ವಾರಗಳ ಕಾಲ ತುಂಬಿ ತುಳುಕುತ್ತಿದ್ದವು. ಅಲ್ಲಾಹನ ಇಷ್ಟದಾಸರ ಪಾದಸ್ಪರ್ಶದಿಂದ ಇಸ್ಲಾಮಿನ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಆ ಪುಣ್ಯ ನಗರದವು ಇನ್ನಷ್ಟು ಧನ್ಯಗೊಂಡವು.
ದಕ್ಷಿಣದ ವೆನಿಸ್ ಅದೊಂದು ದಿನಕ್ಕಾಗಿ ತನ್ನ ಸೌಂದರ್ಯವನ್ನೇ ಬದಲಾಯಿಸಿತ್ತು...!! ಹಸಿರ ಕೈರಳಿಯ ಮುಕುಟವೆಂದೇ ಖ್ಯಾತಿ ಪಡೆದ "ಕಾಯಲ್" ನ ನಾಡು ಆಲಪ್ಪುಯದ ಹಸಿರ ಬಣ್ಣವನ್ನು ಶ್ವೇತವರ್ಣವಾಗಿ ಮಾರ್ಪಟ್ಟಿತ್ತು. ಈ ಸವಿಶೇಷತೆಯನ್ನು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಮಾತಿನಲ್ಲೇ ಹೇಳಬೇಕೆಂದರೆ "ಆಲಪ್ಪುಯದ ಕಡಲ ಕಿನಾರೆಯಲ್ಲಿ ಇನ್ನೋದು ಕ್ಷೀರ ಸಾಗರ, ಸಾಗರದ ವಿಶಾಲತೆಯ ಮುಂದೆ ನಮ್ಮ ಕಣ್ಣು ಸೋಲುವಂತೆ ಈ ಶಿಸ್ತು ಬದ್ಧ ಜನ ಸಾಗರದ ಮತ್ತೊಂದು ತುದಿಯನ್ನು ನೋಡಲು ನನ್ನೆರಡು ನಯನಗಳು ಸಾಕಾಗುತ್ತಿಲ್ಲ”.
ವಿದೇಶದಿಂದ ಬಂದಿದ್ದ ಪ್ರತಿನಿಧಿಗಳಂತೂ "ನಾವೀಗ ಅರಫದಲ್ಲಿದ್ದೇವೆಯೋ ಎಂದು ಭಾಸವಾಗುತ್ತಿದೆ’ ಎಂದಿದ್ದರು.
ಅಷ್ಟಕ್ಕೂ ಇಷ್ಟೆಲ್ಲಾ ವಿಶೇಷತೆಗಳಿಗೆ ಆಲಪ್ಪುಯ ಎಂಬ ಆ ಪ್ರದೇಶವು ಸಾಕ್ಷಿಯಾಗಿದ್ದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ೯೦ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭವಾಗಿತ್ತು.
ಫೆಬ್ರವರಿ ತಿಂಗಳ ೧೧ ತಾರಿಖಿನಿಂದ ನಾಲ್ಕು ದಿನಗಳ ಕಾಲ ಆಲಪ್ಪುಯದ ಇಎಂಎಸ್ ಸ್ಟೇಡಿಯಂನಲ್ಲಿ ಹಾಗೂ ಫೆ.೧೪ರಂದು ಅತೀ ವಿಶಾಲವಾದ ಕಡಲ ಕಿನಾರೆಯಲ್ಲಿ ನಡೆದ ಸಮಸ್ತ ಮಹಾ ಸಮ್ಮೇಳನದಲ್ಲಿ ಶ್ವೇತವಸ್ತ್ರದಾರಿಗಳ ದಂಡೇ ಹರಿದು ಬಂದಿದ್ದವು. ಸಮಸ್ತವೆಂಬ ಆಧ್ಯಾತ್ಮಿಕ ಸಂಘಟನೆಯ ಅಗ್ರಗಣ್ಯ ನೇತಾರರು, ಉಲಮಾಗಳು, ದೇಶ-ವಿದೇಶಗಳ ಪ್ರತಿನಿಧಿಗಳು, ರಾಜಕೀಯ ಮುಖಂಡರು, ದೀನೀಪ್ರೇಮಗಳಿಂದ ಆಲಪ್ಪುಯ ನಗರವು ಆ ಒಂದು ವಾರಗಳ ಕಾಲ ತುಂಬಿ ತುಳುಕುತ್ತಿದ್ದವು. ಅಲ್ಲಾಹನ ಇಷ್ಟದಾಸರ ಪಾದಸ್ಪರ್ಶದಿಂದ ಇಸ್ಲಾಮಿನ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಆ ಪುಣ್ಯ ನಗರದವು ಇನ್ನಷ್ಟು ಧನ್ಯಗೊಂಡವು.