ಅವಕಾಶವಾದಿ ಮತ್ತು ಜಾತಿ ರಾಜಕೀಯ ದೇಶವನ್ನು ಸೋಲಿಸಬಹುದು.


ಅಲ್ ಅಹ್ಸನ್ ಪ್ರಧಾನ ಸಂಪಾದಕ 
ಮೌಲನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಅವರ  ಜುಮ್ಮಾ ಭಾಷಣ

ಹಿಜರಿ ಐದನೆಯ ವರ್ಷ ಸ್ಥಾಪಿಸಲ್ಪಟ್ಟ  ಕೇರಳದ ಕೊಡುಂಗಲ್ಲೂರಿನ ಮಸೀದಿ ಪ್ರಥಮ ಮಸೀದಿಯಾಗಿದೆ.
ಆರನೇಯ ಶತಮಾನದಲ್ಲೇ ಅರಬರೊಂದಿಗೆ ಭಾರತದ ವ್ಯಾಪಾರ ಸಂಬಂಧ ವನ್ನು ಉಲ್ಲೇಖಿಸಲಾಗುತ್ತದೆ.
ಕಣ್ಣೂರಿನ ಪ್ರಥಮ ಮುಸ್ಲಿಂ ರಾಜ ಕುಟುಂಬ ಅರಕ್ಕಲ್ ರಾಜ ವಂಶವಾಗಿರುತ್ತದೆ.ಚೇರಮಾನ್ ಪೆರುಮಾಳ್ ರಾಜರ ಮಕ್ಕಾ  ಸಂದರ್ಶನ ಮತ್ತು ಇಸ್ಲಾಂ ಸ್ವೀಕಾರ ಹಾಗೇ ಮಾಲಿಕುದ್ದೀನಾರ್ ಕುಟುಂಬದ ಜೊತೆ ವೈವಾಹಿಕ ಸಂಬಂಧ ವನ್ನು ಒಂಬತ್ತನೇಯ ಶತಮಾನದಲ್ಲಿ ಜೀವಿಸಿದ್ದ ಖ್ಯಾತ ಚರಿತ್ರೆ ವಿದ್ವಾಂಸರಾದ ಶೈಖ್ ಅಲೀಯ್ಯಿ ತ್ತಿಬ್ರಿ (ರ) ವಿವರಿಸುತ್ತಾರೆ.
ಕಣ್ಣೂರು ಕೇಂದ್ರವಾಗಿ ಸ್ಥಾಪಿಸಲ್ಪಟ್ಟ ಅರಕ್ಕಲ್ ಅರಮನೆ ಗೋಡೆಗಳನ್ನು ಕೆಡವಿದಾಗ ಸಿಕ್ಕ ಲಿಖಿತಗಳು ಚೇರಮಾನ್ ರಾಜರು ಮಕ್ಕಾ ಯಾತ್ರೆ ಕೈಗೊಂಡದ್ದು,ತಾಜುದ್ದೀನ್ ಆಗಿ ಬದಲಾದ ಘಟನೆಯನ್ನು ವಿವರಿಸುತ್ತದೆ.ಅರಕ್ಕಲ್ ಅಲೀರಾಜ ತಾಯಿ ಶ್ರೀದೇವಿ ಚೇರಮಾನ್ ಪೆರುಮಾಳ್ ಸಹೋದರಿಯಾಗಿದ್ದರು.ಮಲಬಾರ್ ಲೈಬ್ರರಿಗಳಲ್ಲಿ ಈ ಸಂಬಂಧ ದಾಖಲೆಗಳಿವೆ.
ಇಸ್ಲಾಂ ಶತಮಾನಗಳ ಹಿಂದೆ ಭಾರತದಲ್ಲಿ ನೆಲೆಯಾದ ಧರ್ಮ.ಅದು ಇಲ್ಲಿಯ ದೇಶಿಯತೆಗೆ ಮಾರಕವಾಗಿರಲಿಲ್ಲ.
ನಂತರ ಮುಸ್ಲಿಂ ರಾಜರುಗಳು ಆಳ್ವಿಕೆ ಮಾಡಿದ್ದಾರೆ ಆ ಕಾಲದಲ್ಲೂ ದೇಶಕ್ಕೆ ಧಕ್ಕೆ ಇರಲಿಲ್ಲ.ಮೊದಲ ಸ್ವಾತಂತ್ರ್ಯ ಸಂಗ್ರಾಮ (ಸಿಪಾಯಿ ದಂಗೆ) ರುವಾರಿ ಮತ್ತು ಸಾರಥಿ ಮೊಗಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದ್ದೂರ ಶಾ ಸಫರ್ ಆಗಿದ್ದರು.ದಕ್ಷಿಣ ಭಾರತವನ್ನು ನಲುವತ್ತು ವರ್ಷಗಳ ಕಾಲ ರಕ್ಷಿಸಿದ ಹೈದರಲಿ ,ಟಿಪ್ಪು ಸುಲ್ತಾನ್ ಆಡಳಿತ ಕಾಲವೂ ಮತ ಆಧಾರಿತವಾಗಿ ವಿಭಜನೆಯಾಗದೇ ದೇಶ ಉಳಿಯಿತು.ಈ ಸಂದರ್ಭಗಳಲ್ಲಿ ಮತ್ತು ನಂತರದ ವಿದೇಶಿ ವಿರುದ್ಧ ಹೋರಾಟದ ಕಾಲದಲ್ಲೂ ಮತೀಯ ಆಧಾರಿತ ಸಂಘರ್ಷಕ್ಕೆ ಅವಕಾಶವಿರಲಿಲ್ಲ.
ಯಾವಾಗ ರಾಜಕಾರಣವನ್ನು ಧರ್ಮಾಧಾರಿತವಾಗಿ ವಿಭಜಿಸಲು ಶುರುವಾಯಿತೋ ಅಂದಿನಿಂದ ಈ ದೇಶ ಸಂಕಷ್ಟ ಎದುರಿಸುತ್ತಿದೆ.
ಹಾಗೇ ಆಡಳಿತವನ್ನು ಸಂಖೆಯ ಲೆಕ್ಕದಲ್ಲಿ ಕಟ್ಟುವ ಅವಕಾಶವಾದ ರಾಜಕೀಯವೂ ದೇಶಕ್ಕೆ ಆತಂಕ ಒಡ್ಡಿದೆ.ಬಿಹಾರ ಇದಕ್ಕೆ ಉತ್ತಮ ಉದಾಹರಣೆ. ಪಟ್ಟ ಕಟ್ಟಲು ಮಹಾ ಘಟ್ ಬಂಧನ್ ಪಟ್ಟ ಉಳಿಸಲು ಕಟ್ ಬಂಧನ್? ತತ್ವವಿಲ್ಲ ಸಿದ್ದಾಂತ ವಿಲ್ಲ!
ಆದರೆ ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಭಾರತೀಯ ರಿಗೆ ಎಸಗುವ ಅನ್ಯಾಯ.
73% ಶೇಕಡಾ  23% ಶೇಕಡವನ್ನು ತಿರಸ್ಕರಿಸುತ್ತದೆ .ಎರಡುವರ್ಷ ಆಡಳಿತ ಮಾಡಿ 29%ಶೇಕಡಾ 23%ಶೇಕಡಾ ಜೊತೆ ಸೇರುತ್ತದೆ! ಆದರೆ ಮತಹಾಕಿದ ಶೇಕಡಾ 73%  ಮಂದಿ ಈ ಆಡಳಿತವನ್ನು ವಿರೋದಿಸುತ್ತಾರೆ.ಇದು ಹೇಗೆ ಪ್ರಜಾ ತಂತ್ರ? ಇದು ಲೆಕ್ಕದ ತಂತ್ರ ಮಾತ್ರ.
ದೇಶದಲ್ಲಿ ನಡೆವ ಅನ್ಯಾಯ ಅಕ್ರಮ ದೌರ್ಜನ್ಯ ವನ್ನೆಲ್ಲಾ ಭಾರತೀಯರು ವಿರೋದಿಸುತ್ತಾರೆ ಅನ್ನುವುದು ಸತ್ಯ .ಅಖ್ಲಾಕ್ ಮತ್ತು ಜುನೈದ್ ಹತ್ಯೆ ಸಮಯ ಭುಗಿಲೆದ್ದ ಅಸಹಿಷ್ಣುತೆಯ ವಿರುದ್ಧ ಜನಾಂದೋಲನ ಇದಕ್ಕೆ ಸಾಕ್ಷಿ.
ಅದೇರೀತಿ ಅಮರನಾಥ ಯಾತ್ರಿಕರನ್ನು ಬಚಾವು ಮಾಡಿದ ಸಲೀಂ ಭಾರತೀಯತೆಗೆ ಹೊಸ ರೀತಿಯ ‍ಭಾವನೆಯನ್ನು ಮೂಡಿಸಿದ್ದಾರೆ.
ಇಂತಹಾ ಭಾವನೆಗಳನ್ನು ಅವಕಾಶವಾದಿ ರಾಜಕೀಯದ ಕುತಂತ್ರ ಸೋಲಿಸಲು ಸಾದ್ಯವಿದೆ.ಭಾರತವನ್ನು ಸೋಲಿಸಲು ಚೀನಾ ಪಾಕಿಗೆ ಅಸಾದ್ಯ ಆದರೆ ಅವಕಾಶವಾದಿ ರಾಜಕೀಯ ದೇಶಕ್ಕೆ ಅಪಾಯವಾಗಿದೆ.ಇಂದು ಪಶ್ಚಿಮೇಶ್ಯ ಬಿಕ್ಕಟ್ಟು ಇಂತಹಾ ಅವಕಾಶವಾದದಿಂದಲೇ ಪರಿಹಾರವಾಗದೇ ಉಳಿದಿದೆ.ಅಲ್ಲಿಯ ನಿಜವಾದ ದ್ರೋಹಿಗಳು ಪ್ಯಾಲಸ್ತೀನಿಯರಲ್ಲ !ಬದಲಿಗೆ ವಲಸಿಗರಾದ ಯಹೂದಿಗಳಾಗಿದ್ದಾರೆ.ಜನ್ಮ ಭೂಮಿಯಿಂದ ಹೊರದಬ್ಬಲ್ಪಟ್ಟ ಪ್ಯಾಲಸ್ತೀನರು ಸ್ವಂತ ನಾಡಿಗಾಗಿ ಹೋರಾಡುತ್ತಿದ್ದರೆ ಅವರನ್ನು ಭಯೋತ್ಪಾದಕರಾಗಿ ಚಿತ್ರೀಕರಿಸಲಾಗುತ್ತಿದೆ.1948 ಮೇ 15 ರಂದು ದಬ್ಬಾಳಿಕೆಯ ಮೂಲಕ ಭೂಮಿಯನ್ನು ಕಬಳಿಸಿದ ಇಸ್ರೇಲರ    ಗುಣಗಾಣ ಮಾಡಲಾಗುತ್ತಿದೆ.ಅವರ ಜೊತೆ ಸಂಬಂಧ ಸ್ಥಾಪಿಸಲಾಗುತ್ತಿದೆ.ನಿರಂತರವಾಗಿ ದೌರ್ಜನ್ಯಕ್ಕೊಳಗಾದ ,ಜನ್ಮಭೂಮಿಯಿಂದ ಹೊರದಬ್ಬಲ್ಪಟ್ಟ ಪ್ಯಾಲಸ್ತೀನ್ ಜನತೆ ನ್ಯಾಯಕ್ಕಾಗಿ ಹೋರಾಡುತ್ತಿದ್ದರೂ ಅವರಿಗೆ ನ್ಯಾಯ ಕೊಡಲು ವಿಶ್ವ ಸಂಸ್ಥೆ ಅಥವಾ ಜಗತ್ತಿನ ದೊಡ್ಡನ್ನ ಅಮೇರಿಕ ಮುಂದಾಗುತ್ತಿಲ್ಲ.ರೋಮನ್ನರಿಂದ ತುಳಿತಕ್ಕೊಳಗಾದ ಯಹೂದಿಗಳು ವಲಸೆಯಲ್ಲೇ ಜೀವನ ಸಾಗಿಸಿದರು.
ಒಂದನೆಯ ಮಾಹಾ ಯುದ್ದ ಬಳಿಕ ಬ್ರಿಟನ್ನಿನ ವಸಾಹತುಗೊಳಗಾದ ಪ್ಯಾಲಸ್ತೀನ್ ನಲ್ಲಿ ಯಹೂದಿಗಳ ವಲಸೆ ಜಾಸ್ತಿಯಾಗುತ್ತದೆ.ಹಿಟ್ಲರನ ಕ್ರೌರ್ಯದ ಕಾರಣ ಅದು ಇಮ್ಮಡಿಯಾಗುತ್ತದೆ.ಇದರಿಂದ
ತಲೆಕೆಡಿಸಿಕೊಂಡ ಬ್ರಿಟನ್ ಪ್ಯಾಲಸ್ತೀನ್ ಹೊಣೆಗಾರಿಕೆಯನ್ನು ವಿಶ್ವ ಸಂಸ್ಥೆಗೆ ಒಪ್ಪಿಸುತ್ತಾದೆ.ಪ್ಯಾಲಸ್ತೀನನ್ನು ತುಂಡು ಮಾಡಲೊಪ್ಪದ ಅರಬರು ಇಸ್ರೇಲ್ ರಾಷ್ಟ್ರದ ಉದಯವನ್ನು ವಿರೋಧಿಸುತ್ತಾರೆ.ಆದರೂ ಯಾರನ್ನೂ ಲೆಕ್ಕಿಸದೇ 1948  ಮೇ15 ರಂದು ಇಸ್ರೇಲ್ ರಾಷ್ಟ್ರದ ಘೋಷಣೆ ಯಾಗುತ್ತದೆ.ವೀರೋಧಿಸಿದ ಜೋರ್ಡಾನ್, ಸಿರಿಯಾ,ಈಜಿಪ್ಟು ಸೋಲನಿಭವಿಸುತ್ತದೆ.ನಂತರ ಉಳಿದದ್ದು ಗಾಝಾ ಮತ್ತು ಪಶ್ಚಿಮ ದಂಡೆ ಮಾತ್ರ.1964 ರಲ್ಲಿ ಅದನ್ನೂ ಕಳಕೊಳ್ಳಬೇಕಾಯಿತು.1974ರಲ್ಲಿ ಈಜಿಪ್ಟ್ ಸಂಧಾನ ಮೂಲಕ ಸಿನಾಯ್ ದ್ವೀಪವನ್ನು ಪಡೆದುಕೊಂಡಿತು.‌ಪ್ಯಾಲಸ್ತೀನರು ಜೋರ್ಡಾನ್ ,ಲೆಬನಾನ್ ಟ್ಯೂನೀಶಿಯಾ ದೇಶಗಳಲ್ಲಿ ಅಲೆದಾಡಬೇಕಾಗುತ್ತದೆ.ಆದರೆ ಯಾರಿಗೂ ಕನಿಕರವಾಗಲಿಲ್ಲ.ಈ ಕಾರಣದಿಂದಲೇ ಭಾರತ ಈ ತನಕ ಪ್ಯಾಲಸ್ತೀನರ ಪರವಾಗಿತ್ತು .ಗಾಂದೀಜಿಯೂ ನನ್ನ ಒಲವು ಪ್ಯಾಲಸ್ತೀನ್ ಪರ ಎಂದಿದ್ದರು.ಅವರು ಇತಿಹಾಸ ಕಲಿತ ಮುತ್ಸಧ್ಧಿ ಗಳಾಗಿದ್ದರು ಎನ್ನುವುದು ಉಲ್ಲೇಖನೀಯ. ನಂತರ
1993 ರಲ್ಲಿ ನಡೆದ ಅರಾಫತ್  ಒಪ್ಪಂದ ಪ್ಯಾಲಸ್ತೀನ್ ಜನತೆಗೆ ಒಂದಿಷ್ಟು ನ್ಯಾಯ ಕೊಟ್ಟಿತು.ಇದೀಗ ಪವಿತ್ರ ಅಕ್ಸಾ ಮಸೀದಿ ನಿರ್ಬಂಧ ಮತ್ತು ದೌರ್ಜನ್ಯ ಪ್ಯಾಲಸ್ತೀನರನ್ನು ಹೊರದಬ್ಬುವ ಹುನ್ನಾರವೇ  ಆಗಿದೆ .ಇಷ್ಡೆಲ್ಲಾ ರಕ್ತರಂಜಿತ ಅಧ್ಯಾಯ ಗಳ ನಿಜ ಸ್ವರೂಪ ಇದ್ದರೂ ವಿಶ್ವಸಂಸ್ಥೆ ಮತ್ತು ಅಮೇರಿಕ ಅವಕಾಶ ವಾದಿ ರಾಜಕಾರಣವನ್ನೇ ಮಾಡುತ್ತಲಿದೆ .
ಜಗತ್ತಿನಾದ್ಯಂತ ಮಸ್ಲಿಮರೇ ಅನ್ಯಾಯಕ್ಕೊಳಗಾದರೂ ಜಗತ್ತು ಮುಸ್ಲಿಮರಿಂದಲೇ ಭಯ ಆತಂಕ ಎದುರಿಸುತ್ತಿದೆ ಎಂದು ಬಿಂಬಿಸಲಾಗುತ್ತಿದೆ .ದೇಶದಲ್ಲಿ ಹಿಂದೆ  ರಾಜರುಗಳು ಮಾಡಿದರೆಂದ ಅನ್ಯಾಯ, ದೌರ್ಜನ್ಯದ ಸುಳ್ಳು ಚರಿತ್ರೆಯನ್ನು ವೈಭವೀಕರಿಸಿ  ಆ ಮೂಲಕ ಇಂದಿನ ಭಾರತೀಯ ಮುಸಲ್ಮಾನರನ್ನು ಟಾರ್ಗೇಟ್ ಮಡುವಂತೆ ಜನ್ಮಭೂಮಿಗಾಗಿ ಹೋರಾಡುವ ಪ್ಯಾಲಸ್ತೀನ್ ಹೋರಾಟಗಾರರೂ ಭಯೋತ್ಪಾದನೆಯ ಆರೋಪದ ಬಲಿಪಶು ಗಳಾಗುತ್ತಾರೆ.
ಅಲ್ಲಾಹನು ಹೇಳುತ್ತಾನೆ.
ಅವರು ಅಲ್ಲಾಹನ ಪ್ರಕಾಶವನ್ನು ಬಾಯಿಯಿಂದ ಊದಿ ಆರಿಸಲು ಪ್ರಯತ್ನಿಸುತ್ತಾರೆ.ಆದರೆ ಅಲ್ಲಾಹನು ಅವನ ಪ್ರಕಾಶವನ್ನು ಪೂರ್ತಿಮಾಡುತ್ತಾನೆ. (ಕುರಾನ್)

"ಪವಿತ್ರ ಕಾಬಾ ಶರೀಫಿಗೆ ರತ್ನಕಂಬಳಿ ಹಾಸುವುದಕ್ಕಿಂತ ಶ್ರೇಷ್ಠ ಹಸಿದ ಹೊಟ್ಡೆಗೆ ಹಿಟ್ಡು ತುಂಬುವುದಾಗಿದೆ."

ಭಾಷಣ ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು"

ಅವರ ಸಂಪತ್ತಿನಲ್ಲಿ ಬೇಡುವವನಿಗೆ ಮತ್ತು  ತಡೆಯಲ್ಪಟ್ಟವನಿಗೆ ಒಂದು ಹಕ್ಕಿರುವುದು. ಕುರಾನ್
ಸೂರ ಅದ್ದಾರಿಯಾತ್:೧೯

ಮಂಗಳೂರಿನಿಂದ ಪುತ್ತೂರಿಗೆ ಹೋಗುವ ದಾರಿ ಮಾಣಿ ಹತ್ತಿರದ ಕೊಡಾಜೆಯ ಮನೆಯೊಂದಕ್ಕೆ ಗುರುವಾರದಂದು ಸಾವಿರಾರು ಮಂದಿ ಬೇಟಿ ನೀಡಿ ಕಣ್ಣೀರಿನೊಂದಿಗೆ  ಮರಳುತ್ತಿದ್ದರು. ಏನು ಕಾರಣ ಎಂದರೆ ಬರೀ ಸಿಂಪಲ್! ಆ ಮನೆಗೆ ಕಷ್ಟಗಳೊಂದಿಗೆ ಕಣ್ಣೀರಿನೊಂದಿಗೆ ಬಂದವರು ಹಿಂದಿರುಗುವಾಗ ಸಂತಸದಿಂದ ನಗುನಗುತ್ತಾ ಹೋಗುತ್ತಿದ್ದರು. ಯಾವುದೇ ಸಂದರ್ಭದಲ್ಲಿ ಅವರು ಅಹವಾಲು ಹೇಳಲು ಬಂದವರಿಗೆ ಬಾಗಿಲು ಮುಚ್ಚಲಿಲ್ಲ.ಯಾವದೇ ಒತ್ತಡದ ಸಮಯದಲ್ಲೂ ಯಾರೊಂದಿಗೂ ರೇಗಾಡಲಿಲ್ಲ.ಅವರೇ ಸುಲ್ತಾನ್ ಹಾಜಿ ಎಂದೇ ಪ್ರಸಿದ್ಧರಾದ ಕೊಡಾಜೆ ಹುಸೈನ್ ಹಾಜಿ.
ಇಂತಹಾ ಶ್ರೀಮಂತಿಕೆಯನ್ನು ಎಲ್ಲರೂ ಆಶಿಸಬೇಕಾಗಿದೆ.
ಕಾರಣ
ಅಲ್ಲಾಹನು ಹೇಳುತ್ತಾನೆ ಅವರ ಸೊತ್ತಿನಲ್ಲಿ ಬೇಡುವವರಿಗೂ ದರಿದ್ರರಿಗೂ ಒಂದು ಹಕ್ಕು ಇದೆ.
ಸಂಪತ್ತಿನಲ್ಲಿ ಒಂದಂಶವನ್ನು ಬಡ ನಿರ್ಗತಿಕರಿಗಾಗಿ ಮೀಸಲಿಡುವುದು
ಸ್ವರ್ಗ ಪ್ರವೇಶವನ್ನು ಕೊಡುವ ಕರ್ಮವಾಗಿರುತ್ತದೆ. ಇದರಿಂದಲೇ
ಇಸ್ಲಾಮಿನ ಸೌಂದರ್ಯ ವನ್ನು ಕಾಣಲು ಸಾಧ್ಯವಾಗುವುದು. ಅದಲ್ಲದೇ ಬರೀ ಭಕ್ತಿ ಆರಾಧನೆಯಿಂದ ಮಾತ್ರ ಧರ್ಮವನ್ನು ಮೇಳೈಸಲಾಗದು.
ಪ್ರವಾದಿ (ಸ) ರವರು ಹೇಳುತ್ತಾರೆ .ಅಲ್ಲಾಹನು ಕೆಲವು ಜನರನ್ನು ಸೃಷ್ಟಿಸಿದ್ದಾನೆ.ಜನರು ಸಂಕಷ್ಟದ ಸಮಯ ಅವರ ಬಳಿ ತೆರಳುತ್ತಾರೆ.ಅಲ್ಲಾಹನ ಶಿಕ್ಷೆಯಿಂದ ಅವರು ನಿರ್ಭೀತರಾಗಿರುತ್ತಾರೆ.
ಈ ರೀತಿಯ ಜನರನ್ನು ಜನ ಕೊಂಡಾಡುತ್ತಾರೆ.ಅಂತಹಾ ವ್ಯಕ್ತಿತ್ವ ಸುಲ್ತಾನ್ ಹಾಜಿ.
ಇನ್ನು ಶ್ರೀಮಂತಿಕೆಯಿರುವ ಎಲ್ಲಾ ಜನರ ಬಳಿ ಹೋಗುವುದಕ್ಕೇ ಎಷ್ಟೇ ಕಷ್ಟಇದ್ದರೂ  ಜನ ಇಷ್ಟ ಪಡುವುದಿಲ್ಲ .
ಇನ್ನೂ ಸಂಪತ್ತು ನಮ್ಮದಲ್ಲ.ನಾವು ಅದನ್ನು ವಿಲೇವಾರಿ ಮಾಡುವವರು ಮಾತ್ರ.
ನಾವು ಅವರಿಗೆ ನೀಡಿದ್ದರಿಂದ ಅವರು ದಾನವಾಗಿ ಖರ್ಚು ಮಾಡ್ತಾರೆ. ಕುರಾನ್
 ಯಾಕೆ ಯತೀಮನನ್ನು ಪರಿಗಣಿಸಲಿಲ್ಲ ?ಬಡವರನ್ನು ಉಣಿಸಲು ಯಾಕೆ ಪ್ರೇರೇಪಿಸಲಿಲ್ಲ.?ಉತ್ತರದಾಯಿ ಸೊತ್ತನ್ನು ಧಾರಾಳವಾಗಿ ತಿನ್ನುವಿರಿ, ಸಂಪತ್ತನ್ನು ತೀವ್ರವಾಗಿ ಪ್ರೀತಿಸುವಿರಿ
ಈ ಸತ್ಯ ಪ್ರಾಣವು ಗಂಟಲಿಗೆ ತಲುಪಿದಾಗ ತಿಳಿಯುವುದು ಕುರಾನ್.
ಅಲ್ಲಾಹನಿಗೆ ಸಾಲ ಕೊಡುವವರು ಯಾರು? ಕುರಾನ್
ಅಲ್ಲಾಹನ ದಾರಿಯಲ್ಲಿ ದಾನ ಮಾಡುವವರ ಉದಾಹರಣೆ ಯು ಒಂದು ದಾನ್ಯಕ್ಕೆ ಏಳುನೂರು ಕಾಳು ಬೆಳೆಯುವುದಾಗಿದೆ.(ಕುರಾನ್)
ರಸೂಲರು ಹೇಳುತ್ತಾರೆ,
 ನಿಮ್ಮಲ್ಲಿ ನನಗೆ ಹತ್ತಿರ ಕೈ ಉದ್ದವಿರುವವರಾಗಿರುತ್ತಾರೆ
ಆಯಿಷಾ ಬೀವಿ ಹೇಳುತ್ತಾರೆ ನಮ್ಮಲ್ಲಿ ಕೈ ಉದ್ದ ಝೈನಬಾ ‌ಆಗಿದ್ದರು.
ಅವರಂತೆ ದಾನ ಮಾಡುವ ,ಕುಟುಂಬ ಸೇರಿಸುವ,ಸಹಾಯ ಮಾಡುವ ಹೆಣ್ಣನ್ನು ನಾನು ನೋಡಿಲ್ಲ.ಅವರು ಕೈಯಿಂದ ಸಂಪಾದಿಸಿ ದಾನ ಮಾಡುತ್ತಿದ್ದರು.
ಹೀಗೆ ಧಾರಾಳ ದಾನ ಮಾಡುವ ಗುಣ ಅವರಲ್ಲಿತ್ತು.
ಜೀವಕಾರುಣ್ಯ ಕೆಲಸಗಳನ್ನು ಹಲವು ಸಂಘ ಸಂಸ್ಥೆಗಳು ಮಾಡುತ್ತಲಿದೆ.ಟ್ಯಾಲೆಂಟ್ ನಡೆಸುವ ನಂಡೆ ಪೆಂಙಲ್ ಕಾರ್ಯಕ್ರಮ ಶ್ಲಾಘನೀಯ.ಬರುವ ಶುಕ್ರವಾರ ಸಂಜೆ ಮದುವೆಯ ಜೋಡಿಗಳನ್ನು ಒಟ್ಟು ಮಾಡುವ ಮಹನೀಯರನ್ಮು ಸೇರಿಸಿ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ
ಅದನ್ನು ಬೆಂಬಲಿಸಿ ಎಂದು ಸಾಂದರ್ಭಿಕ ವಾಗಿ ಹೇಳಬಯಸುತ್ತೇನೆ.ಮದುವೆ ದಲ್ಲಾಳಿಗಳು ಖಂಡಿತ ಅತ್ಯುನ್ನತ ಕರ್ಮವನ್ನು ಮಾಡುತ್ತಿದ್ದಾರೆ.
ಹಿಂದಿನ ತಲೆಮಾರು ಮಸಲ್ಮಾನರು ಸೇವಾ ಮಾರ್ಗದಲ್ಲೇ ‌ನಿರತರಾಗುತ್ತಿದ್ದರು.
ಹಝ್ರತ್ ಹುಸೈನ್ (ರ )ರ ಸುಪುತ್ರ ಹಝ್ರತ್ ಝೈನುಲ್ ಆಬಿದೀನ್ ರನ್ನು ಮಯ್ಯಿತ್ತ್ ಸ್ನಾನ ಮಾಡಿಸುವಾಗ ಕುತ್ತಿಗೆ ಭಾಗದಲ್ಲಿ ಕಪ್ಪಾದ ಕಲೆಗಳಿದ್ದವು ಅದು ಬಡ ಮತ್ತು ವಿಧವೆಯರ ಮನೆಗೆ ವಸ್ತುಗಳನ್ನು ಹೊತ್ತು ಕೊಂಡು ಹೋದ ಗರುತುಗಳಾಗಿತ್ತು.ನಾವಾದರೆ ನಮಗೇ ಬೇರೆಯವರು ಹೊತ್ತು ತರಬೇಕೆಂದು ಬಯಸುವೆವು!
ಖಲೀಫಾ ಉಮರ್ (ರ)ಅಳುತ್ತಿರುವ ಮಗುವನ್ನು ಗಮನಿಸುತ್ತಾರೆ.ನಮಾಜಿಗೂ ಆ ಮಗುವಿನ ಅಳು ಕಿರಿಕಿರಿಯನ್ನು ಉಂಟು ಮಾಡುತ್ತದೆ.ಸಂಗತಿಯನ್ನು ತಿಳಿದಾಗ ಮೊಲೆಹಾಲನ್ನು ನಿಲ್ಲಿಸಲು ಒತ್ತಡ ಹೇರುವ ತಾಯಿಯ ಬಗ್ಗೆ ಅರಿತು ಕೊಳ್ಳುತ್ತಾರೆ. ಅಂದಿನಿಂದ  ಹಾಲುಣಿಸುವ ತಾಯಿಗಾಗಿ ವಿಶೇಷ ಪ್ಯಾಕೇಜ್ ನ್ನು ಸರಕಾರದ ವತಿಯಿಂದ ಘೋಷಿಸಿ ಆಜ್ಞೆ ಹೊರಡಿಸುತ್ತಾರೆ.ಮತ್ತು ಮಕ್ಕಳನ್ನು ಮೊಲೆಹಾಲು ಬಿಡಲು ಒತ್ತಡ ಮಾಡಬೇಡಿ ಎಂದು ಕರೆ ಕೊಡುತ್ತಾರೆ ಒಂದು ಮಗು ಅತ್ತರೂ ಅದಕ್ಕೆ ಪರಿಹಾರ ಕೊಡುವ ಸರಕಾರವಾಗಿತ್ತು ಖಲೀಫರದ್ದು.
ಒಮ್ಮೆ ಉಮರಿಬ್ನು ಅಬ್ದುಲ್ ಅಝೀಝ್ (ರ) ರ ಬಳಿ ಹಜ್ಜಾಜಿಗಳು ಕಾಬಾ ಶರೀಪಿಗೆ "ಕಿಸ್ವಾ" ಹೊದಿಸಲು ಅನುಮತಿ ಕೇಳುತ್ತಾರೆ‌.ಆಗ ಖಲೀಫಾ ಹೇಳಿದ್ದು,
ನೀವು  ಪವಿತ್ರ ಕಾಬಾ ಶರೀಪಿಗೆ ರತ್ನಕಂಬಳಿ ಹಾಸುವುದಕ್ಕಿಂತ ಹಸಿದಿರುವ ಹೊಟ್ಟೆಗೆ ಹಿಟ್ಟನ್ನು ತುಂಬಿ ಅದು ನನಗಿಷ್ಟ.
ಎಂದಾಗಿತ್ತು.
ಹಝ್ರತ್ ಅಲೀ ರ ಹೇಳುತ್ತಾರೆ ನಾಲ್ಕು ಬೊಗಸೆ ಅನ್ನ ಉಣಿಸುವುದು ಒಂದು ಕೊರಳನ್ನು ಜೀತ ಮುಕ್ತಿ ಮಾಡುವುದಕ್ಕಿಂತ ನನಗೆ ಇಷ್ಟವಾಗಿದೆ.
ಸ್ವಾಹಾಬಿಗಳಲ್ಲಿ ಹಲವರು ಬಡ ಮನೆಗಳಿಗೆ ತೆರಳಿ ನಮಗೆ ಏನಾದರೂ ಆವಶ್ಯಕತೆ ಇದೆಯಾ?
ಉಪ್ಪು,ಝೈತ್ ಎಣ್ಣೆ ಇದೆಯಾ? ಎಂದು ವಿಚಾರಿಸುತ್ತಿದ್ದರು.
ಇಬ್ನು  ಉಮರ್ (ರ )ಹೇಳುತ್ತಾರೆ "ಹಜ್ಜ್ ಬಳಿಕ ಪುನಃ ಹಜ್ಜ್ ಮಾಡುವುದಕ್ಕಿಂತ ತಿಂಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಬಡವರ ಮನೆಗಳನ್ನು ಸಂದರ್ಶಿಸುದನ್ನು ಬಯಸುವೆ."
ಇಂತಹಾ ಸಂಗತಿಗಳಿಗೆ ಉತ್ತಮ ಮಾದರಿ ಶ್ರೀಮಂತ ರಾದ ಸುಲ್ತಾನ್ ಹಾಜಿ ಯಂತೆ ಶ್ರೀಮಂತ ರು ಮಾದರಿಯಾಗಲಿ

ಜಿಲ್ಲೆಗೆ ಹಬ್ಬಿದ ಬೆಂಕಿಯನ್ನು ಬೆಳಕಾಗಿ ಪರಿವರ್ತಿಸೋಣ

ಭಾಷಣ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಮನುಷ್ಯರ ಕೈಗಳ ಪ್ರವೃತ್ತಿ ಕಾರಣ ಕಡಲು ಮತ್ತು ತೀರಗಳೆರಡರಲ್ಲಿಯೂ ಕ್ಷೋಭೆ ಹರಡಿದೆ 
ಕುರಾನ್ ಅರ್ರೂಮ್ :೪೧

ಸಮಾಜದಲ್ಲಿ  ಶಾಂತಿ ನೆಮ್ಮದಿಗಾಗಿ ಎಲ್ಲರೂ ಶ್ರಮಿಸುವುದು ಅನಿವಾರ್ಯವಾಗಿದೆ, ಮತ್ತು ಅದು  ಜವಾಬ್ದಾರಿಯೂ ಆಗಬೇಕಾಗಿದೆ.ಆ ಮೂಲಕ ಜಿಲ್ಲೆಗೆ ಹಬ್ಬಿದ ಬೆಂಕಿಯನ್ನು ಬೆಳಕಾಗಿ ಪರಿವರ್ತಿಸೋಣ.
 ಸಾಮಾಜಿಕ ತಾಣ ಹಲವು ಕುತೂಹಲಕರ ಮತ್ತು ಸತ್ಯನ್ವೇಷನೆಗೆ ಟ್ವಿಸ್ಟನ್ನು ಒದಗಿಸುತ್ತದೆ ನಿಜ. ಆದರೆ
ಬೇಜವಾಬ್ದಾರಿ ಪೋಸ್ಟುಗಳಿಗೂ ಬರವಿಲ್ಲ.ಆದರೂ ಸುಳ್ಳರಿಗೆ ,ಬೆಂಕಿ,ಮತ್ತು ರಕ್ತ ಕಂಪನಿಯವರಿಗೆ,ಕಲ್ಲು ತೂರುವವರಿಗೆ ವಿರುಧ್ದ‌ವಾದ ಹಲವು ವೀಡಿಯೋ ಗಳನ್ನು ಅದು ನೀಡುತ್ತಿದೆ. ಆ ಮೂಲಕ ಸಮಾಜದ ಜನ ಪ್ರಬುದ್ದ ರಾಗುತ್ತಿದ್ದಾರೆ.
ಕೆಲವು ಚಾನಲುಗಳ ಬಿಗ್ ಬ್ರೇಕಿಂಗ್ ನ್ಯೂಸ್ ವರದಿ ಮಾಡಿ ಗಾಳಿ ಹೋದ ಬಲೂನು ತರ ಮುದುಡಿ ಹೋಗಿ ಸುಳ್ಳಿನ ವಾಹಕರಾಗಿ ಮುಜುಗರಕ್ಕೊಳಗಾಗುತ್ತಾರೆ.ಸಮಾಜದಿಂದಲೂ ಉಗಿಸಿಕೊಳ್ಳುತ್ತಾರೆ. ಇನ್ನಾದರೂ ಸಾಮಾಜಿಕ ಜವಾಬ್ದಾರಿ ತೋರದಿದ್ದರೆ  ಕೆಲವು ಚಾನಲ್ ಕಛೇರಿಗಳನ್ನು  ಗುಜರಿ ಗೋದಾಮು ಮಾಡಬೇಕಾದಿತು.
ನಾನು ನೋಡಿದ ಎರಡು ಸಾಮಾಜಿಕ ತಾಣದ ವೀಡಿಯೋಗಳು ಸಮಾಜದ ಕಣ್ಣು ತೆರೆಸುವಂತಿದೆ.ಒಂದನ್ನು ನೋಡಿ ಕಣ್ಣೀರು ಸುರಿಸಿದರೆ ಇನ್ನೊಂದನ್ನು ನೋಡಿ ಮೌಲ್ಯಗಳು ಇನ್ನೂ ಉಳಿದು ಕೊಂಡಿದೆ ಎಂದೆನಿಸಿತು.
ಮೊದಲು ತೃಪ್ತಿ ಯ ವಿಷಯಕ್ಕೆ ಬರೋಣ,ಮೂರು ಮಂದಿ ಹುಡುಗರು ಗುಡ್ಡಗಾಡು ಪ್ರದೇಶದದಲ್ಲಿ ಕುರಿ ಮೇಯಿಸುತ್ತಿದ್ದರು.ಎಲ್ಲಿಂದಲೋ ಅವರಿಗೆ ನರಳುವ ಕೂಗು ಕೇಳಿಸುತ್ತದೆ.ಸುತ್ತಲೂ ಹುಡುಕುತ್ತಾರೆ.ಕೊನೆಗೆ ಒಂದು ಕಿರಿದಾದ ಕೊಳವೆ ಬಾವಿ ತರದ ಗುಂಡಿಯಿಂದ ಆ ಶಬ್ದವು ಬರುವುದೆಂದು ಖಾತರಿ ಪಡಿಸುತ್ತಾರೆ.ಆದರೆ ಅವರ ಕೈ ಅದರೊಳಗೆ ತಲುಪುತ್ತಿಲ್ಲ.ಕಡೆಗೆ ಅವರೊಂದು ಉಪಾಯ ಮಾಡುತ್ತಾರೆ.ಸವಕಲಾಗಿರುವ ಒಬ್ಬನನ್ನು ತಲೆ ಕೆಲಗಾಗಿಸಿ ಇಬ್ಬರು ಎತ್ತಿ ಹಿಡಿದು ಗುಂಡಿಯೊಳಗೆ ಕಳುಹಿಸುತ್ತಾರೆ.ಒಂದೆರಡು ಸಲ ಹುಡುಗ ಉಸಿರುಗಟ್ಟಿ ಒದ್ದಾಡುತ್ತಾನೆ.ಆವಾಗ ಅವನನ್ನು ಮೇಲಕ್ಕೆತ್ತುತ್ತಾರೆ.ಆದರೂ ಛಲ ಬಿಡದೇ ಪ್ರಯತ್ನವನ್ನು ಮಾಡುತ್ತಾರೆ. ಬಹಳ ಶ್ರಮಪಟ್ಟು ಗುಂಡಿಯೊಳಗಿಂದ ಆಡಿನ ಮರಿಯನ್ನು ಎತ್ತಿ ತಂದು ಕುಣಿಯುತ್ತಾರೆ.ಇದನ್ನು ನೋಡಿದಾಗ ಓ ಅಲ್ಲಾಹನೇ ನೀನು ಕೆಲವರ ಹೃದಯವನ್ನು ಎಷ್ಡು ಚೆನ್ನಾಗಿಟ್ಡಿರುವಿ ಎಂದು ಆತನನ್ನು ಸ್ತುತಿಸಿದೆ.ಹಝ್ರತ್ ಪ್ರವಾದಿ (ಸ)ರ ಸಂದೇಶದ ಮಹತ್ವ ಇದರಿಂದ ಸ್ಪಷ್ಟವಾಗುತ್ತದೆ.
ಭೂಮಿಯಲ್ಲಿರುವ ಎಲ್ಲರೊಂದಿಗೆ ಕರುಣೆ ತೋರಿ ಆಗ  ಆಕಾಶದೊಡೆಯ ಅಲ್ಲಾಹನು ಕರುಣೆ ತೋರುತ್ತಾನೆ.ಹದೀಸು.
ಇನ್ನು ಅತ್ಯಂತ ಆಘಾತಕಾರಿಯಾದ ಸಂಗತಿಯಾಗಿತ್ತು ಇನ್ನೊಂದು ವೀಡಿಯೋ. ಒಂದು ರೂಮಿನೊಳಗೆ ನಾಯಿ ಮರಿಯನ್ನು ಕೂಡಿಸಿ ಹೆಣ್ಣುಹುಡುಗಿಯರು ನಾಲ್ಕೈದು ಮಂದಿ ಕಾಲಿನಿಂದ ಎತ್ತಿ ಬಿಸಾಕುತ್ತಿದ್ದರು. ಗೋಡೆಗೆ ಹೊಡೆದು,ಬಡಿದು ಸತಾಯಿಸುತ್ತಿದ್ದರು.ಕಡೆಗೆ ಆ ನಾಯಿ ಮರಿಯು ಏಳಲಾಗದೇ ಬಿದ್ದು ಕೊಂಡಾಗ ಒಂದು ಕಡೆಯಿಂದ ಒಬ್ಬಳು ನಾಯಿ ಮರಿಯನ್ನು ಒದ್ದು ಆ ಕಡೆ ಹೋಗ್ತಾಳೆ ಬೇರೆಯೊಬ್ಬಳು ಈ ಕಡೆ ಬರ್ತಾಳೆ.ಕಡೆಗೆ ನೆಲದ ಮೇಲೆ ಅಪ್ಪಚ್ಚಿಯಾಗಿ ರಕ್ತ ಕಾರಿ ಪ್ರಾಣ ಬಿಡುತ್ತದೆ.ಈ ಘಟನೆಯು ನನ್ನನ್ನು ಹೆಚ್ಚು ಘಾಸಿಗೊಳಿಸಿತು.ನೊಂದು  ಕಣ್ಣೀರಿಟ್ಟೆ. ಕೆಲ ದಿನ ಅದೇ ನನ್ನ ಮನಸ್ಸನ್ನು ಕೊರೆಯುತ್ತಿತ್ತು.ನಾನು ಆಗ ತಿಳಿದುಕೊಂಡದ್ದು ಹೆಣ್ಣುಮಕ್ಕಳಲ್ಲಿಯೂ ಇಂತಹ ಕ್ರೂರಿಗಳು ಇದ್ದಾರೆ ಎಂದು.ಹೆಣ್ಣಿನ ಮನಸ್ಸು ಮೃದು ಎಂದು ಮಾತ್ರ ತಿಳಿದಿದ್ದೆ .ಇಂತಹ ವಿಕೃತ ವಿಘ್ಣ ಸಂತೋಷಿಗಳು ಇರುತ್ತಾರೆಂದು ತಿಳಿದಿರಲಿಲ್ಲ.ನರರಾಕ್ಷಸ ರೂಪದಂತೆ ಅವರು ಕಾಣುತ್ತಿದ್ದರು.ಹಂದಿ ಕೂಟಕ್ಕಿಂತಲೂ ನೀಚವಾಗಿತ್ತು ಅವರ ವರ್ತನೆ.ಇಲ್ಲಿಯೂ ರಸೂಲರ (ಸ) ಸಂದೇಶ ಪ್ರಸ್ತುತವೆನಿಸಿತು.
ಬೆಕ್ಕನ್ನು ಕಟ್ಟಿಹಾಕಿ ಕೊಂದ ಹೆಂಗಸಿಗೆ ಅಲ್ಲಾಹನು ನರಕದ ಶಿಕ್ಷೆ ಕೊಟ್ಟನು.ಅವಳು ಅದಕ್ಕೆ ತಿನ್ನಿಸಲೂ ಕುಡಿಸಲೂ ಇಲ್ಲ.ಅದನ್ನುಅದರಷ್ಟಕ್ಕೆ ಭೂಮಿಯಲ್ಲರುವ ಪ್ರಾಣಿಗಳನ್ನು ತಿಂದು ಬದುಕಲೂ ಬಿಡಲಿಲ್ಲ.ಹಾಗೇ ಅದು ಸತ್ತು ಹೋಯಿತು.(ಹದೀಸು)
ಒಂದು ಪ್ರಾಣಿಗೂ ಅನ್ಯಾಯ ವಾಗಬಾರದೆನ್ನುವುದು ಧರ್ಮನೀತಿ.ಆದರೆ ಇಂದು ದುಷ್ಟ ಪ್ರವೃತ್ತಿ ಯೇ ಹೆಮ್ಮೆಯೆಂದು ಬೀಗುತ್ತಾರೆ ಕೆಲವರು.ರಕ್ತಹರಿಸುವ ಬೆಂಕಿ ಹಚ್ಚುವ ಸಂಗತಿಗಳೇ ವಿಜ್ರಂಬಿಸುತ್ತಿದೆ.ಅದೂ ಕರುನಾಡಿನ ಪಲ್ಲಕ್ಕಿ ಕನಸು ಕಾಣುವವರು.ಯಾರೇ ಆದರೂ ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕಿ ಎಂದು ಹೇಳಬೇಕಾದವರು ಬಂಧನವಾದರೇ ಬೆಂಕಿ ಉರಿಯಬಹುದು? ಎನ್ನುತ್ತಾರೆ.
ಆಯುಧಗಳನ್ನು ಸಿದ್ದಪಡಿಸಿ ?ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ.ಹಾಗಾದರೆ ಅಪರಾಧ ಮಾಡಿದವ ಪ್ರಭಾವಿಯಾದರೆ ಪಲ್ಲಕ್ಕಿ ? ಸಾಮಾನ್ಯನಾದರೆ ಜೈಲು ಗತಿಯಾ?ಏನಿದು ಶಿಸ್ತಿನ ಸಂಘಟನೆಯ ಧೋರಣೆ?ಕೋಳಿ ಕಾಲಿಗೆ ಕತ್ತಿ ಕಟ್ಟಿ ಅಂಕ ಮಾಡಿ ಗೆದ್ದರೆ ದುಡ್ಡು ಸೋತರೆ ಮಾಂಸ ತರ ಜನರ ಕೊರಳಿಗೆ ಮತಾಂಧತೆಯ ಕತ್ತಿ ಯನ್ನು ಕಟ್ಟಿ ಅಧಿಕಾರ ಕ್ಕಾಗಿ ಹವಣಿಸುವ ಮಂದಿಯನ್ನು ಕಂಡರೆ ಪಾಪ ಅನಿಸುತ್ತದೆ.ಬೌದ್ಧಿಕ ದಿವಾಳಿತನದ ದುರವಸ್ಥೆ.ಸ್ವಧರ್ಮಿಯನಿಂದ ಕೊಲೆಯಾದರೆ,ಅಥವಾ ಹಲ್ಲೆಗೊಳಗಾದರೆ ಕೇಳೋರಿಲ್ಲ!.ಬೇರೆ ಜಾತಿಯವನನ್ನು ಕೊಂದರೂ ಪರ್ವಾಗಿಲ್ಲ!ಸ್ವಧರ್ಮಿಯನಿಂದ ಅತ್ಯಾಚಾರ,ಪೀಡನೆಗೆ ಒಳಗಾದರೆ ಯಾರೂ ಸುಳಿಯೋದಿಲ್ಲ!
ದಿನನಿತ್ಯದ ಬದುಕಿನ ಹೋರಾಟದಲ್ಲಿ,ಕಷ್ಟ ಸುಖದಲ್ಲಿ ಎಲ್ಲಾ ಜಾತಿಯವರೂ ಅನ್ಯೋನ್ಯತೆ ಯಿಂದ ಸಹಕರಿಸಿ ಬದುಕುತ್ತಿದ್ದಾರೆ.ಅನ್ಯ ಮತದವರ ಉದ್ಯಮದಲ್ಲಿ ಎಲ್ಲರೂ ಶೇರಾಗುತ್ತಾರೆ.ಕಂಪನಿ ಫ್ಯಾಕ್ಟರಿ ಗಳಲ್ಲಿ ಜಾತಿ ಮಾತ್ರ ವರ್ಕೌಟಾಗೋದೇ ಇಲ್ಲ.ಅದು ಸಾದ್ಯವೂ ಅಲ್ಲ.ಅನೇಕ ಸಂದರ್ಭಗಳಲ್ಲಿ ಸಹಾಯಕ್ಕೆ ಬರುವವರು ಜಾತೀಯವರೇ ಅಲ್ಲ.
ಹೀಗೇ ಸಮಾಜ ಸಾಗುತ್ತಿರುವಾಗ ಸ್ವಾರ್ಥಿಗಳ ಕುತಂತ್ರಕ್ಕೆ ಬಲಿಯಾಗಿ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತದೆ.ವಾಸ್ತವ ವಿರುಧ್ದ ಸುಳ್ಳುಗಳು ಹರಡಲಾರಂಬಿಸುತ್ತದೆ.ಕಲ್ಲು ಎಸೆದು ಗಲಭೆ ಯನ್ನು ಹೊತ್ತಿಉರಿಸೋದು ,ಪಾಕ್ ದ್ವಜ ಹಾರಿಸೋದು,ಸ್ಫೋಟ ನಡೆಸೋದು
ಪೂಜಾ ಮಂದಿರಗಳನ್ನು ಮಲಿನ ಮಾಡೋದು, ನಂತರ ಅದನ್ನು ಅನ್ಯರ ತಲೆ ಮೇಲೆ ಕಟ್ಟುವುದು.ಇದು ಸಮಾಜದ ಕೆಲ ದ್ರೋಹಿಗಳ ಕುತಂತ್ರವಾದರೂ ಅದರ ನಾಶವನ್ನು ಸಮಾಜ ಅನುಭವಿಸಬೇಕಾಗುತ್ತದೆ. ಇಷ್ಟಕ್ಕೂ ಜನ ಹಿಂಸೆಗೆ ಒಗ್ಗಿಕೊಳ್ಳಲು ಕಾರಣ ಅಧಾರ್ಮಿಕ ಸುಖಾಡಂಬರ ವ್ಯಾಮೋಹ ಮತ್ತು ಅಧಿಕಾರದ ಸ್ವಾರ್ಥ ಮಾತ್ರವಾಗಿರುತ್ತದೆ.
ಎಲ್ಲಾ ಮಕ್ಕಳು ಪ್ರಾಕೃತಿಕವಾಗಿ ಉತ್ತಮ ಗುಣದಲ್ಲೇ ಹುಟ್ಟುತ್ತಾರೆ ಆದರೆ ಅವರು ಅವರ ಹೆತ್ತವರು ನಿಮಿತ್ತ ಬದಲಾಗುತ್ತಾರೆಎನ್ನುವುದು ಹದೀಸಿನ ಸಾರವಾಗಿದೆ.
ಹುಡುಗಿಯೊಬ್ಬಳಿಗೆ ಬೊಂಬೆ ಆಟ ಎಂದರೆ ಪಂಚಪ್ರಾಣ.ಒಮ್ಮೆ ಅದರ ಕಾಲು ಮುರಿದು ಹೋಯಿತು.ಮುಂದೆ ಹುಡುಗಿ ಕೆಲಸ, ಅದಕ್ಕೆ ಗಮ್ಮು ಹಚ್ಚೋದು,ಟೇಪು ಕಟ್ಟೋದು.ಬಟ್ಟೆ ಸುತ್ತೋದು.ಇದನ್ನು ಕಂಡು ಕಂಡು ರೋಸಿ ಹೋದ ತಾಯಿ ಆ ಗೊಂಬೆಯನ್ನು ಎತ್ತಿ ಮಾರ್ಗದ ಆ ಕಡೆ‌ ಬಿಸಾಡುತ್ತಾಳೆ.ಇದನ್ನು ನೋಡಿ ಆ ಮಗಳು ಕೇಳಿದ್ದು ನನ್ನ ಕಾಲು ಮುರಿದರೆ ಇದೇ ತರ ಬಿಸಾಡುತ್ತಿಯಾ?
ಮಗಳ ಮನಸ್ಸನ್ನು ನೋಡಿ? ಮಕ್ಕಳ ಮನಸ್ಸಿನಲ್ಲಿ ದ್ವೇಷ,ಕ್ರೌರ್ಯ,ಹಗೆ ಇರೋದಿಲ್ಲ.ಅವರಲ್ಲಿ ಮತಾಂಧತೆ ಸುಳಿದಿರೋದಿಲ್ಲ.ಆ ಮಕ್ಕಳ ಮನಸ್ಸನ್ನು ಹಾಳುಗೆಡವದು ಮತಾಂಧತೆಯ ಕುರುಡುತನವಾಗಿದೆ.ಮಕ್ಕಳನ್ನು ಕ್ರೂರರಾಗಿಸುವುದು ಹೆಚ್ಚಾಗಿ ಸಂಘಟನೆಯ ಸ್ವಾರ್ಥ ವಾಗಿರುತ್ತದೆ.ಉದ್ರೇಕವನ್ನು ಹಸಿ ಸುಳ್ಳಿನ ಮೂಲಕ ಸಿದ್ದಪಡಿಸಲಾಗುತ್ತದೆ.ಮೊನ್ನೆ ಯುವ ನಾಯಕನೊಬ್ಬ ತನ್ನವರನ್ನು ಸಮರ್ಥಿಸಲು ಟಿಪ್ಪುಸುಲ್ತಾನರನ್ನು ಎಳೆದು ತಂದಿದ್ದ .ಸುಲ್ತಾನರಿಗೆ ಸೇವಕರು ದಿನಾಲು ಅವರು ಮಾಡಿದ ಮಾತಾಂತರ,ದೇವಸ್ತಾನ ದ್ವಂಸ,ಕೊಲೆ,ಬಗ್ಗೆ ವರದಿ ನೀಡಬೇಕಿತ್ತಂತೆ ? ಈ ಸುಳ್ಳನ್ನು ಕೇಳುವಾಗ ವ್ಯಕ್ತಿಯಲ್ಲಿರುವ ಅಸಹಿಷ್ಣುತೆಯನ್ನು ಅಳತೆ ಮಾಡಬಹುದಿತ್ತು.ನಾಡು,ನುಡಿ ಕಟ್ಟಿದ ಕೀರ್ತಿ ಶ್ರೇಷ್ಟ,ದೇಶಪ್ರೇಮಿ, ಮತ ಸಹಿಷ್ಣು ದೇವಸ್ತಾನ ಸಂರಕ್ಷಕನಾದ ಸುಲ್ತಾನ ಬಗ್ಗೆ ಕ್ಷುದ್ರ ಜೀವಿಗಳು ಬರೆದ ಅವಿವೇಕದ ಕಟ್ಟು ಕಥೆಯನ್ನು ಹೇಳುವಾಗ ಅಸಹ್ಯವೆನಿಸಿತ್ತು.ಇಂತಹ ಸಮಾಜ ಘಾತುಕ ಬೆಂಕಿ,ರಕ್ತ,ನಂಜು,ಸುಳ್ಳನ್ನು ಬಂಡವಾಳ ವಾಗಿಸಿದವರಿಗಿಂತ ಗುಡ್ಡೆಗಾಡಲ್ಲಿ ಗುಂಡಿಗೆ ಬಿದ್ದ ಆಡಿನ ಮರಿಯನ್ನು ರಕ್ಷಿಸಿದ ಕುರಿ ಕಾಯೋಮಂದಿ ವಾಸಿಯೆಂದು ಬಾವಿಸಿದರೆ ತಪ್ಪಿರಲಿಕ್ಕಿಲ್ಲ.

🎆 ವರದಿ ಅಲ್ ಅಹ್ಸನ್

ಜೀವ ಉಳಿಸೋದು ಯಾಕೆ ಸುದ್ದಿಯಾಗುವುದಿಲ್ಲ ?

ವಿಪರೀತ ಟ್ಯೂಷನ್ ಕೊಟ್ಟು ಮಕ್ಕಳನ್ನು ಮಂದ ಬುಧ್ದಿಗಳಾಗಿಸಬೇಡಿ

-ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು
...................................................

ನಮ್ಮ ಸಮಾಜದಲ್ಲಿ  ನಡೆಯುತ್ತಿರುವ ಘಟನೆಗಳಲ್ಲಿ ಆಘಾತ ಕಾರಕ ಸಂಗತಿಗಳ ಜೊತೆಗೆ ಮೌಲ್ಯಯುತವಾದದ್ದೂ, ಸ್ವಾರಸ್ಯಕರವಾದುದ್ದೂ ನಡೆಯುವುದಿದೆ.ಗೋರಕ್ಷಕರ ಅಟ್ಟಹಾಸವನ್ನು ಗಾಬರಿಯಿಂದ ವಿಶ್ಲೇಷಿಸಿ ರಾಷ್ಟ್ರಪತಿಯೂ ಎಚ್ಚರಿಕೆಯನ್ನು ನೀಡಿದರು.ಪ್ರಧಾನಿ ಗೋರಕ್ಷಣೆಯ ಹೆಸರಲ್ಲಿ ಸಾವು ಸಹಿಸಲಾಗದು ಎಂದು ಹೇಳಿಕೆಯನ್ನೇ ಕೊಟ್ಟರು.ಇದರ ಮದ್ಯೆ ಜನರನ್ನು  ಅಟ್ಟಾಡಿಸಿ ಕೊಲ್ಲಲು ಮುಂದಾಗುವ ನರರಕ್ಷಸರು ನಡೆದಾಡುವ ಜಾಗದಲ್ಲಿ ತಾಳಿಪಡ್ಪು ನಿವಾಸಿ ಉಮರಬ್ಬ ಮಗ ಅಬ್ದುರ್ರವೂಫ್ ಸಮಾಜದಲ್ಲಿ ಹೆಚ್ಚು ಪ್ರಿಯನಾಗಿ ನಮ್ಮ ಕಣ್ಣ ಮುಂದೆ ಬರುತ್ತಾನೆ.ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಎತ್ತಿ ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದಾಗದಿದ್ದಾಗ ಆಪದ್ಭಾಂದವನಾಗಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ರಕ್ಷಿಸಿ ದೇಶಕ್ಕೇ ಮಾದರಿಯಾದ ಸಂದೇಶವನ್ನು ಅಬ್ದುರ್ರವೂಫ್ ಕೊಟ್ಟಿದ್ದಾನೆ.ಈ ಘಟನೆಯೂ ಅನೇಕ ಸತ್ಯವನ್ನು ಹೊರಗೆಡವಿದೆ. ಯಾರನ್ನು  ವೈರಿಗಳೆಂದು ಕಾಣುತ್ತೆವೆಯೋ ಅವರು ವೈರಿಗಳಾಗಿರುವುದಿಲ್ಲ.ಹಾಗೇ ಯಾರನ್ನು ನಮ್ಮವರು ಎಂದು ಭಾವಿಸುತ್ತೇವೋ ಅವರೇ ರಕ್ಷಣೆಗೆ ಬರಬೇಕೆಂದಿಲ್ಲ.?ಹಾಗೇ ಜೀವವನ್ನೇ ಉಳಿಸೋದು ಧರ್ಮವೆಂದು ಕುರಾನಿನ ಸಂದೇಶವನ್ನು ಪರೋಕ್ಷವಾಗಿ ಸಾರಿದೆ.ಅಚ್ಚರಿಯೆಂದರೆ ಈ ಘಟನೆಯಲ್ಲಿ ಜೀವ ಉಳಿದಿದ್ದರಿಂದ ಕೆಲವರು ಗುಂಪು ಸೇರುವುದು ಉಳಿಯಿತು! ಆದರೆ  ಸಮಾಜದ ರಕ್ಷಣೆಯ ಹೊಣೆ ಹೊತ್ತವರು ಯಾರೂ ಧ್ವನಿ ಎತ್ತಲೇ ಇಲ್ಲ.ಇಂತಹಾ ಘಟನೆಗಳನ್ನು ಸಮಾಜಕ್ಕೆ ಎತ್ತಿ ತೋರಿಸಬೇಕಿತ್ತು ಆದರೆ ಮನಸ್ಸು ಬದಲಾಗಬೇಕಷ್ಟೆ.!ಇಸ್ರೇಲಿನ ಟೆಲ್ ಅವೀವ್ ಸುತ್ತಾ ಸುತ್ತಿದ ಚಾನಲುಗಳ ಅಕ್ರಮಣಕಾರಿ ಇಸ್ರೇಲಿನನ್ನು ಹೊಗಳುವುದರಲ್ಲೇ ಕಾಲ ಕಳೆಯಿತು.ಇಸ್ರೇಲಿನ ಕ್ರೌರ್ಯಗಳನ್ನು ಹೋರಾಟವೆಂದು ಬಣ್ಣಿಸಲಾರಂಭಿಸಿದೆ.ಕಾಲಾಯ ತಸ್ಮೇಯ!
ಒಂದು ಮೆಸೇಜ್ ಕಾರ್ಕಳದಿಂದ ಹರಿದಾಡುತ್ತಿದೆ! ಹಸುವನ್ನು ಕದ್ದೊಯ್ಯಲು ಬಂದಿದ್ದಾರೆ ಎಂದು ಹೇಳಿ ಆ ಅಯ್ಯಮ್ಮ ಕೆಲ ಪುಂಡರನ್ನು ಕರೆಯುತ್ತಾಳೆ. ಭರ್ಜರಿ ಕೆಲಸ ಸಿಕ್ಕಿತೆಂದು ಓಡಿ ಬಂದರು ರಕ್ಷಕರು?ಬಂದವರೇ ಕದೀಮರ ಬಗ್ಗೆ ವಿಚಾರಿಸುತ್ತಾರೆ.ಆಗ ಅ ಹೆಂಗಸು ಅವರ ಕೈಗೆ ಹಾರೆ ಕೊಟ್ಟು ನೋಡಿರಪ್ಪ ನಮ್ಮನೆಯಲ್ಲಿ ಪ್ರಾಯದ ಹಸು ಇತ್ತು ಮಾರಲು ನೀವು ಬಿಡಲಿಲ್ಲ!ನಮ್ಮಿಂದ ಅದನ್ನು ನೋಡಿಕೊಳ್ಳಲಾಗದೇ ಸತ್ತು ಹೋಯಿತು. ಅದನ್ನು ಮಣ್ಣು ಮಾಡಲೂ ನಮ್ಮಲ್ಲಿ ಹಣ ಇಲ್ಲ. ನೀವೇ ಅದನ್ನು ಮಾಡಿಬಿಡಿ,ನೀವು ರಕ್ಷಕರಲ್ವಾ? ಬಂದವರಿಗೆ ಏನೂ ತೋಚದೇ ಕೆಲಸ ಶುರು ಮಾಡಿದರಂತೆ.
ವಿಷಯ ಏನೇ ಆಗಿದ್ದರೂ!
ಒಟ್ಟಿನಲ್ಲಿ ಕೆಲವರಿಗೆ ಜನರ ಜೀವದೊಂದಿಗೆ ಲಾಬಿ ನಡೆಸಬೇಕು ಅಷ್ಟೇ.ಎಲ್ಲಾ ಸ್ವಾರ್ಥಕ್ಕಾಗಿ ನ ಹೋರಾಟ. ಅದೇರೀತಿ ಜನರಲ್ಲಿ ಲೂಟಿಯೂ ವ್ಯಾಪಕವಾಗಿ ನಡೆಯುತ್ತಲಿದೆ. ಸಮಾಜದಲ್ಲಿ ಲೂಟಿಯನ್ನು ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗುತ್ತದೆ.ಅದರ ಪ್ರಮುಖವಾದ ಎರಡು ಆಯಾಮಗಳಾಗಿವೆ ಗರ್ಭಿಣಿಯರು ಮತ್ತು ವಿದ್ಯಾರ್ಥಿಗಳು.ಋತು ನಿಂತಿತು ಎಂದಾಗಲೇ ಆರಂಭಗೊಳ್ಳುತ್ತದೆ ಟೆಸ್ಟ್?ರಕ್ತ, ಮೂತ್ರ,ಬಿ ಪಿ,ಸುಗರ್ ಎಲ್ಲಾ! ಇಂಜೆಕ್ಷನ್ ಬೇರೆ ಅದರೊಟ್ಟಿಗೆ ಸ್ಕ್ಯಾನಿಂಗ್ !?ಬೆರಳಾಗಲಿ,ಕೂದಲಾಗಲಿ ವ್ಯತ್ಯಾಸ ವಿಲ್ದದೇ ಹಾನಿಯಾಗದೇ ಮಗುವನ್ನು ತರುವವನು ಅಲ್ಲಾಹನು,ಆದರೆ ಮಗುವಿನ ಪೊಝಿಷನ್ ಸರಿಯಿಲ್ಲ, ನೀರು ಕಮ್ಮಿ ಇದೆ,ತೂಕ ಸರಿಯಾಗಿಲ್ಲ,ಹಾರ್ಟ್ ಬಿಟ್ ಕರೆಕ್ಟಿಲ್ಲ,ಸುಗರ್ ಲೆವೆಲ್ ಸರಿ ಇಲ್ಲ,ಹೀಗೆಲ್ಲಾ ಪುರಾಣಗಳು ಹೇಳುತ್ತಾ ಇರ್ತಾರೆ. ಜನ ಕೈಕಾಲು ಬಿಟ್ಟು ಕಂಗಾಲಾಗುತ್ತಾರೆ. ಲೂಟಿಗೆ ತಕ್ಕ ಸಮಯವೂ ಅದಾಗಿರುತ್ತದೆ.ಖರ್ಚು ಮಾಡಲು ಸಾದ್ಯವಿಲ್ಲದ ಜನ.ಮನೆ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆರಾಮವಾಗಿ ಹೆತ್ತು ಬರುತ್ತಿರೋದು ಇದಕ್ಕೆ ಅಪವಾದವೂ ಆಗಿರಬಹುದು.
ಎರಡನೆಯ ಲೂಟಿ ಹಾಗೇ ಹೆತ್ತ ಮಗುವನ್ನು ಶಾಲೆಗೆ ಸೇರಸಿದಂದಿನಿಂದ ಆರಂಭವಾಗುತ್ತದೆ.ಐದಾರು ವರ್ಷಗಳ ಕಾಲ ತಾಯಿ ಜೊತೆ ಇರಬೇಕಾದ ಮಗು ಮೂರು ವರ್ಷದಿಂದಲೇ ತಾಯಿ ಸಂಪರ್ಕ ಕಡಿದು ಕೊಳ್ಳುತ್ತದೆ.
ಅದಕ್ಕಿಂತಲೂ ದೊಡ್ಡ ದುರಂತ ಎಲ್ ಕೆ ಜಿ, ಮತ್ತು ಪ್ರೈಮರಿ, ಹೈ ಪ್ರೈಮರಿ,ಸಮಯದಲ್ಲಿ ಟ್ಯೂಷನ್ ಮೊರೆ ಹೋಗೋದು?ಶಾಲೆಯಲ್ಲಿ ಆರೇಳು ಘಂಟೆ ಶಿಕ್ಷಕರು ಮಾಡುವುದಾದರೂ ಏನು?ಇಂತಹಾ ಟ್ಯೂಷನ್ ನಿಂದ ನಮ್ಮ ಮಕ್ಕಳು ದಡ್ಡರಾಗುತ್ತಾರೆ.ಕಾರಣ ಟ್ಯೂಷನ್ ಇದೆ ಅಂತ ಶಾಲೆ ಪಾಠವನ್ನು ವಿದ್ಯಾರ್ಥಿಗಳು ಗಮನಿಸುವುದಿಲ್ಲ. ಟ್ಯೂಷೆನ್ಗೆ ಹೋಗಿ ಅಂತ ಶಿಕ್ಷಕರು ಜವಾಬ್ದಾರಿ ವಹಿಸೋದೂ ಇಲ್ಲ. ಇತ್ತ ಟ್ಯೂಟರ್ ಶಾಲೆಯಲ್ಲಿ ಕಲಿತದ್ದೇ ಅಂತ ಮಕ್ಕಳನ್ನು ಯಾಮಾರಿಸಿದರೆ ದೇವರೇ ಗತಿ! ಎಸ್ ಎಸ್ ಎಲ್ ಸಿ ಸಿದ್ದತೆಗಲ್ಲದೇ ಟ್ಯೂಷನನ್ನು ನಿರ್ಭಂಧಿಸಬೇಕಾಗಿದೆ.
ಅದು ಹಣವನ್ನು ಫೋಲು ಮಾಡುವ ವಿಧಾನ ಮಾತ್ರ.
ಒಟ್ಟಿನಲ್ಲಿ ಮಗು ಮದ್ದು ಇಂಜಕ್ಷನ್ ನಿಂದ ಬೆಂದುಹೋಗ್ತಾರೆ. ಟ್ಯೂಷನ್ ದಂಧೆಯಿಂದ ಮಂದರಾಗ್ತಾರೆ.Rank ಸ್ಟೂಡೆಂಟುಗಳು ಯಾರೂ ಟ್ಯೂಷನ್ ಪಡೆದವರಾಗಿರೋದಿಲ್ಲ.ಹಿಂದಿನ ಕಾಲದಲ್ಲಿ ಮಂದ ಬುಧ್ಧಿಗಳಿಗೆ ಮೇಷ್ಟ್ರುಗಳು ಹೇಳಿಕೊಡುತ್ತಿದ್ದ ಹೆಚ್ಚುವರಿ ಪಾಠವೇ ಹಳೇಕಾಲದ ಟ್ಯೂಷನ್!ಇವತ್ತು ಅದರಿಂದಲೇ ಮಕ್ಕಳು ಕಂಗಾಲಾಗುತ್ತಾರೆ.
ಎಲ್ಲದಕ್ಕಿಂತಲೂ ದೊಡ್ಡ ವಿಚಾರ ಮುಸ್ಲಿಮರು ದಂಧೆಯ ವಾಹಕರಬಾರದು.ವಂಚನೆ ಯಾವತ್ತೂ ನಡೆಯಬಾರದು.ಧರ್ಮವು ಅನ್ಯಾಯದ ಸೊತ್ತನ್ನು ಅಂಗೀಕರಿಸುವುದಿಲ್ಲ.ಅದು ಆತನ ಸಂಪತ್ತೂ ಆಗುವದಿಲ್ಲ.ಅನ್ಯಾಯದ ಸೊತ್ತಿನಿಂದ ವೃದ್ಧಿಯಾದ ರಕ್ತ ನರಕಕ್ಕೆ ಹೆಚ್ಚು ಸೂಕ್ತವಾಗಿರುತ್ತದೆ.ಹದೀಸು
ಪ್ರವಾದಿ (ಸ) ರವರು ಆಹಾರ ವ್ಯಾಪಾರಿಯ ಮುಂದೆ ಸಾಗುತ್ತಿರುವಾಗ ಸಂದರ್ಭ ಆಹಾರದ ರಾಶಿಯೊಂದರ ಒಳಗೆ ಕೈಹಾಕುತ್ತಾರೆ, ಆಗ ನಬಿಯವರ ಕೈಗೆ ಒಳಗೆ ಒದ್ದೆಯಾಗಿರುವ  ಅನುಭವ ಆಗುತ್ತದೆ.ನಬಿ  (ಸ) ಪ್ರಶ್ನಿಸಿದರು ಏನಿದು?ವ್ಯಾಪಾರಿ ಅದು ಮಳೆ ಸುರಿದ ಕಾರಣ ಹಾಗಾಗಿದೆ ಎಂದು
ಸಮಜಾಯಿಕೆ ಕೊಡುತ್ತಾನೆ. ಇದರಿಂದ ಸುಮ್ಮನಾಗದ ಪ್ರವಾದಿ ಹೇಳುತ್ತಾರೆ ಮತ್ಯಾಕೆ ಅದನ್ನು ಮೇಲ್ಭಾಗದಲ್ಲಿ ಹಾಕಲಿಲ್ಲ ?ನಮ್ಮನ್ನು ಯಾರದರೂ ವಂಚಿಸಿದರೆ ಅವನು ನಮ್ಮವನಲ್ಲ.
ಕೆಲವು ತಿಂಗಳ ಹಿಂದೆ ಲಂಡನಿನಲ್ಲ್ಲಿ ನಡೆದ ಘಟನೆಯ ಪೋಸ್ಟು ಫೇಸ್ಬುಕ್ಕಲ್ಲಿ ಹರಿದಾಡುತ್ತಿತ್ತು ವಿಷಯ ಇಷ್ಟೇ,ಬಸ್ ಕಂಡಕ್ಟರ್ ಒಬ್ಬ ಮುಸಲ್ಮಾನ ಯುವಕನಿಗೆ ಚಿಲ್ಲರೆ ಕೊಡುವಾಗ ಇಪ್ಪತ್ತು ಪೈಸೆಯಷ್ಟು ಉದ್ದೇಶ ಪೂರ್ವಕವಾಗಿ ಹೆಚ್ಚು ಕೊಟ್ಟಿದ್ದ  ಲೆಕ್ಕ ಮಾಡಿದ ಮುಸ್ಲಿಂ ಯುವಕ ಅದನ್ನು ಹಿಂದಿರುಗಿಸುತ್ತನೆ. ಆಗ ಬ್ರಿಟಿಷ್ ಕಂಡಕ್ಟರ್ ಹೇಳ್ತಾನೆ ನಿಮ್ಮ ಕುರಾನ್ ಓದಿದ್ದೇನೆ ಅದರಲ್ಲಿ ವಂಚನೆಯನ್ನು ಮಾಡಿದವ ಅಂತ್ಯದಿನದಲ್ಲಿ ಅದನ್ನು ಹೊತ್ತು ಬರುತ್ತಾನೆ ಎಂದಿದೆ ಹಾಗೆ ಮುಸ್ಲಿಮರಾದ ನೀವು ಇದ್ದೀರಾ ಎಂದು ಪರೀಕ್ಷಿಸಲು ಹೀಗೇ ಮಾಡಿದೆ. ಮುಸ್ಲಿಂ ಯುವಕ ಮನಸ್ಸಿನಲ್ಲಿ ಅಂದು ಕೊಂಡ, ನಾನು ಈ ಮಾಡದೇ ಹೋಗಿದ್ದರೆ ಮುಸ್ಲಿಮರನ್ನು ಆತ ವಂಚಕರೆಂದು ಭಾವಿಸುತ್ತಿದ್ದ.!

ವರದಿ ಅಹ್ಸನ್ ಮಾಸಿಕ

ಶ್ಲೋಕಗಳ ,ಸೂಕ್ತಗಳ ಧ್ವನಿ ರಾಜಧಾನಿಯಲ್ಲಿ ಮೊಳಗಲಿ...!!!

"Not in my name"
"ಮಾ ವಿದ್ದುಷಾವಹೀ"
"ಮಾ ನಿಷಾದ,"
"ಒಬ್ಬನ ಕೊಲೆ ಜಗತ್ತಿನ ಮಾನವ ಸಮೂಹದ ಕೊಲೆಯಾಗಿದೆ" (ಕುರಾನ್)
ಶ್ಲೋಕಗಳ ,ಸೂಕ್ತಗಳ ಧ್ವನಿ ರಾಜಧಾನಿಯಲ್ಲಿ ಮೊಳಗಲಿ

ಮೌಲಾನಾ ಯುಕೆ ದಾರಿಮಿ ಚೊಕ್ಕಬೆಟ್ಟು ಜುಮ್ಮಾ ಭಾಷಣ

ವಿಶುದ್ಧ ರಮಳಾನ್ ವಿದಾಯ ಹೇಳಿದ ಬಳಿಕ ಮುಂದೆ ಏನು ? ಎಂಬ ಪ್ರಶ್ನೆ ಮಾಡಬೇಕಾಗಿಲ್ಲ.ಕಾರಣ ಉಪವಾಸ ಭಾಗಶಃ ಉಳಿದುಕೊಂಡಿದೆ.ಪ್ರತೀ ತಿಂಗಳ ಎಲ್ಲಾ 13,14,15 ಹಾಗೇ27,28,29 ಮತ್ತು ಎಲ್ಲಾ ಸೋಮವಾರ ಹಾಗೂ ಮಂಗಳವಾರ ,ದುಲ್ಹಜ್ಜ್ 9 ದಿವಸಗಳು.ಒಟ್ಟು ಸುಮಾರು 190 ದಿವಸಗಳು ಉಪವಾಸ ಸುನ್ನತ್ತಿದೆ.ಬರಾಅತ್ತು,ಮಿಹ್ರಾಜ್ ಸೇರಿಸಿದರೆ ಇನ್ನೂ ಜಾಸ್ತಿಯಾಗಬಹುದು. ಪ್ರತಿ ಜಾಮಾತ್ತಿಗೆ 27 ರ ಪ್ರತಿಫಲವೂ ಇದೆ ,ಇನ್ನು ಇವೆಲ್ಲದಕ್ಕಿಂತ ಮಹತ್ವಪೂರ್ಣ ವಾದ ಒಂದು ಅತ್ಯಮೂಲ್ಯ ವಸ್ತುವಿದೆ .ಅದು ರಮಳಾನಿನೊಂದಿಗೆ ನಿಕಟ ಸಂಬಂಧ ಹೊಂದಿದೆ. ಅದುವೇ ಕುರಾನ್. ರಮಳಾನನ್ನು ಗೌರವಿಸಿದವರು ಕುರಾನನ್ನು ಗೌರವಿಸಲೇ ಬೇಕು.ಆಗ ಮಸೀದಿಗಳಲ್ಲಿ ಜನ ಕಮ್ಮಿಯಾಗದು ಕಾರಣ ಮಸೀದಿಯೂ ಅದರ ಒಡೆಯನೂ ನಮ್ಮಿಂದ ದೂರ ಹೋಗಲಿಲ್ಲ.

ಇನ್ನು ಹಬ್ಬದ ವಿಷಯಕ್ಕೆ ಬಂದರೆ ಯಾಕೋ ಸಮಾಧಾನವಾಗುತ್ತಿಲ್ಲ.ನಮ್ಮ ಹಬ್ಬವು ತರ್ಕದಲ್ಲೇ ಮುಗಿದು ಹೋಯಿತು.ತಿಂಗಳು ಪೂರ್ತಿ ವೃತ, ಆರಾಧನೆ,ನಿದ್ದೆ ಬಿಟ್ಟು ಮಾಡಿದ ಪುಣ್ಯ ಕರ್ಮಗಳಿಂದ ಧನ್ಯಗೊಂಡ ಹೃದಯ ಪರಸ್ಪರ ಅಪ್ಪಿಕೊಳ್ಳುವ, ಕ್ಷಮಿಸುವ ಮನಸ್ಸಿನೊಂದಿಗೆ ಈದುಲ್ ಫಿತರನ್ನು ಕಾಯುತ್ತಿತ್ತು.ಆದರೆ ಸಮುದಾಯ ಏನೂ ತೋಚದೇ ಕಂಗಾಲಾಯಿತು.ಮಗಳನ್ನು ಕರೆತರುವ ಉತ್ಸಾಹ ತಂದೆಗಿಲ್ಲ.ಮಗಳು ಬಾರದೇ ಮನೆಯಲ್ಲಿ ಹಬ್ಬವಿಲ್ಲ! ಎಲ್ಲರೂ ಧರ್ಮಸಂಕಟ ಅನುಭವಿಸಿದರು.ಪಕ್ಕದ ಮನೆ ಬಾಗಿಲು ಹಬ್ಬದಂದೇ ಮುಚ್ಚುವಂಥಾ ಪರಿಸ್ಥಿತಿ ನಿರ್ಮಾಣವಾಯಿತು.ಒಟ್ಟಿನಲ್ಲಿ ಮಕ್ಕಳು ಬಹಳ ನೊಂದು ಬಿಟ್ಟರು.ಅ ಮನೆ ಆಂಟಿ ಪೆರ್ನಾಳಿನಂದು ಕೊಡುವ ನೂರರ ನೋಟಿಗೆ ಕಾದದ್ದು ಕೂಡಾ  ಫಲವಿಲ್ಲದಾಯಿತು.ಹೀಗೇ ನಮ್ಮೂರಿನಲ್ಲಿ ಹಬ್ಬ ಇದ್ದೂ ಇಲ್ಲದಂತಾಯಿತು.

ಇದಕ್ಕಿಂತಲೂ ಶೋಚನೀಯವಾದ ವಾರ್ತೇಯಾಗಿತ್ತು ಹರಿಯಾಣದ ಬಲ್ಲಾಭಾಗ ರ ಹಳ್ಳಿಯ ಸ್ಥಿತಿ ದಯನೀಯವಾಗಿತ್ತು.ಆ ಹಳ್ಳಿಯಲ್ಲಿ ಈದ್ ಬಗ್ಗೆ ಸಂತೋಷವಿರಲಿಲ್ಲ.ಊರೆಲ್ಲೆಲ್ಲಾ ದುಖಃದ ಛಾಯೆ ಆವರಿಸಿತ್ತು.ಉಪವಾಸದ ಮುನ್ನ ದಿನ ತಾಯಿ ಸಾಯಿರಾ ಕೊಟ್ಟ ಸಾವಿರದೈನೂರು ರುಪಾಯಿ ಯಿಂದ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿ ತನ್ನ ಸಹೋದರ ಮತ್ತು ಕಝೀನ್ ಜೊತೆ ಮನೆಯತ್ತಾ ಹೊರಟಿದ್ದ ಹಾಫಿಲ್ ಜುನೈದ್ ಡೆಲ್ಲಿ-ಮಥುರೈ ರೈಲಿನಲ್ಲಿ ಸಂಚರಿಸುತ್ತಿದ್ದರು.ಓಕ್ಲಾ ಸ್ಟೇಷನ್ ತಲುಪುವಷ್ಟರಲ್ಲಿ ಜುನೈದ್ ರಕ್ತಮಡುವಿನಲ್ಲಿ ತನ್ನ ಸಹೊದರನ ಮಡಿಲಲ್ಲಿ ಪ್ರಾಣ ಬಿಟ್ಟಾಗಿತ್ತು.ಹದಿನಾರರ ಹುಡುಗ ಗೋ ರಾಕ್ಷಸರ ಕೈಯಲ್ಲಿ ಇರಿತಕ್ಕೊಳಗಾಗುವಾಗ ಅವರು ಧ್ವನಿ ಎತ್ತಿ ಕೂಗಾಡುತ್ತಿದ್ದುದು,
"beef eaters and anti national"
ಗೋ ರಾಕ್ಷಸರ ಅಟ್ಟಹಾಸದಿಂದ ಹಾಫಿಲ್ ಬಿರುದು ಪಡೆದು ಬರುತ್ತಿದ್ದ ಮಗನನ್ನು ಜೀವಂತ ಕಾಣಲು ತಾಯಿ ಸಾಯಿರಾ ಗೆ ಸಾಧ್ಯವಾಗಲಿಲ್ಲ.ದೆಹಲಿಯ ಜಾಮಿಯ ಮಸೀದಿಯಲ್ಲಿ ಒಂದು ದಿನವಾದರೂ ಇಮಾಮ್ ಆಗಬೇಕೆಂದು  ಬಯಕೆ ಇಟ್ಟು ಕೊಂಡಿದ್ದ ಜುನೈದ್ ತನ್ನ ಆಸೆ ಈಡೇರದೇ ಯಾತ್ರೆಯಾದ.ಈ ದುಖಃ ಕಾರಣ ಬಲ್ಲಾಬಾಗ್ ರ ಊರು ಕಣ್ಣೀರಿನಲ್ಲೇ ತಕ್ಬೀರ್ ಮೊಳಗಿಸಿತು.ಯಾರಿಗೂ ಹೊಸ ಬಟ್ಟೆ ಉಡಲು ಅಥವಾ ಬಿರಿಯಾನಿ ತಯಾರಿಸಲು ಮನಸ್ಸು ಬರಲಿಲ್ಲ.ತಾಯಿ ಕಣ್ಣೀರು  ಇನ್ಶೂ ಶಮನವಾಗಿಲ್ಲ.

ಗೋ ಭಯೋತ್ಪಾದನೆಗೆ ಬಲಿಯಾದ ಜೀವಗಳೆಷ್ಟು?
ಈ ವರ್ಷದ ಆರೇ ತಿಂಗಳಲ್ಲಿ ಬರೋಬ್ಬರಿ ಇಪ್ಪತ್ತು.ಅವರೆಲ್ಲರೂ ಮುಸ್ಲಿಮರು.ಮಾಂಸ ಮನೆಯಲ್ಲಿದ್ದ ಆರೋಪ ಕಾರಣ ದೇಶದ ಜವಾನನ ತಂದೆ ಅಖ್ಲಾಕ್ ಕೊಲೆಯಾದ,ಹೈನುಗಾರಿಕೆಗಾಗಿ ಹಸುವನ್ನು ಕರೆ ತರುವಾಗ ಫೈಲೂ ಖಾನ್ ಕ್ರೂರಿಗಳಿಗೆ ಬಲಿಯಾದ,ಮನೆಪಕ್ಕದಲ್ಲಿ ಸತ್ತ ಹಸುವಿಗಾಗಿ ಜಾರ್ಖಂಡಿನಲ್ಲಿ ವ್ಯಕ್ತಿಯನ್ನು ಜಜ್ಜಿ ಹಾಕಿ ಮನೆಯನ್ನು ಸುಡಲಾಯಿತು,ಹದಿನಾರು ವರ್ಷ ಮಾತ್ರ ಪ್ರಾಯದ ಬಾಲಕನನ್ನು ಕೊಲ್ಲಲು ಅಲ್ಲಿ ಹಸು ಸತ್ತಿರಲಿಲ್ಲ,ಹಸುವನ್ನು ಸಾಗಿಸಲೂ ಇಲ್ಲ,ಕೈಯಲ್ಲಿ ಮಾಂಸವು ಇರಲಿಲ್ಲ! ಮಾಂಸ ತಿನ್ನುವವ ಎಂಬ ಆರೋಪ ಮಾತ್ರವಾಗಿತ್ತು.
ಇದೊಂದು ರೀತಿಯ ಫೋಭಿಯಾ ರೋಗವಾಗಿ ದೇಶದಾದ್ಯಂತ ಹರಡುತ್ತಿದೆ.

ಉಡುಪಿ ಯ ಮಠದಲ್ಲಿ ನಡೆದ ಇಪ್ತಾರನ್ನು ವಿರೋಧಿಸುವ ಮಂದಿ ಆರೋಪಿಸುವುದೂ
 ಅವರು ಮಾಂಸ ಭಕ್ಷಕರುಎಂಬುದಾಗಿದೆ.
ಇಫ್ತಾರಿನಿಂದ ಸಮುದಾಯಕ್ಕೆ ದೊಡ್ಡ ಲಾಭವೇನು ಸಿಗಲಿಕ್ಕಿಲ್ಲ ಎಂದು ಎಲ್ಲರಿಗೂ ಗೊತ್ತು.ಆದರೆ
ನಂತರ ಸ್ವಾಮಿಗಳಿಂದ ಬಂದ ವಿವರಣೆಯಲ್ಲಿ ಕೆಲವು ಆಶಾದಾಯಕ ಅಂಶಗಳಿವೆ. ಸ್ವಧರ್ಮ ಆಚರಣೆ ಅನ್ಯರೊಂದಿಗೆ ಸಹಿಷ್ಣುತೆ.ಆದರೆಅದೆಷ್ಟು ಪ್ರಾಮಾಣಿಕವಾಗಿದೆ ಎಂದು ಕಾದು ನೋಡಬೇಕಷ್ಟೆ.
ನಂಬುವಂಥಾ ಸ್ಥಿತಿ ಯಲ್ಲಿ ಮುಸ್ಲಿಮರೂ ಇಲ್ಲ.ಕಾರಣ ಮಸ್ಲಿಮರನ್ನು ಕೊಲ್ಲಲು. ಬರೀ ಮಾಂಸ ತಿನ್ನುವರೆಂಬ ಕಾರಣ ಸಾಕು. ಮಾಂಸ ತಿನ್ನುವವರನ್ನೆಲ್ಲಾ ಕೊಂದರೆ ಈ ದೇಶದಲ್ಲಿ ಯಾರು ಉಳಿದಾರು ? ಕೊಲ್ಲವುದೊಂದೇ ದಾರಿಯಾ ?

ದೇಶದ ಪ್ರಧಾನಿ ಈ ಕೊಲೆಯನ್ನೆಲ್ಲಾ ಸಹಿಸಲಾಗದು ಅಂತಾರೆ ಗಾಂಧಿಯವರ ಅಹಿಂಸೆಯ ಸಾಬರಮತಿ ವೇದಿಕೆಯಲ್ಲಿ. ಆದರೆ ದೇಶದ ಪ್ರಧಾನಿ ಭಾಷಣವನ್ನು ಆಲಿಸುತ್ತಿರುವ ಕೋಟ್ಯಾಂತರ ಮಂದಿ ಟಿ ವಿ ಪರದೆಯ ಎಕ್ಸ್ಲ ಕ್ಲೂಸಿವ್ ಲೈನಲ್ಲಿ ಜಾರ್ಕಂಡಿನಲ್ಲಿ ಮುಸ್ಲಿಮನೋರ್ವನನ್ನು ಸಾರ್ವಜನಿಕ ವಾಗಿ ಹೊಡೆದು ಸಾಯಿಸಿದ ಮತ್ತು ವಾಹನವನ್ನು ಸುಟ್ಟ ವರದಿ ಹರಿದಾಡುತ್ತಿರುತ್ತದೆ.
ಮೋದಿಯ ದೇಶದ ಕಾನೂನಿಗೆ ತಾಕತ್ತಿಲ್ಲವೇ ?! ಪೋಲೀಸರಿಗೆ ಬಲವಿಲ್ಲವೇ?.ಬರೀ ಪುಂಡರಿಗೆ ಮಾತ್ರ ತಾಕತ್ತು ಇರೋದಾ?!
ಕಾನೂನಿನ ಮೂಲಕ ಗೋವನ್ನು ನಿಷೇಧಿಸುವುದೂ ಇಲ್ಲ.ಮಾಂಸ ರಫ್ತನ್ನು ರದ್ದು ಮಾಡುವ ಉದ್ದೇಶವೂ ಇಲ್ಲ.

ದೇಶದಲ್ಲಿ ಈಶಾನ್ಯಕ್ಕೊಂದು ಕಾನೂನು!ಉಳಿದ ಭಾಗಕ್ಕೊಂದು ಕಾನೂನು! ಗೋವಾದಲ್ಲೊಂದು, ಕೇರಳದಲ್ಲಿ ಇನ್ನೊಂದು! ಮುಸಲ್ಮಾನರನ್ನು ಕೊಲ್ಲಲು ಒಂದೇ ಕಾರಣ ಸಾಕು, ಅದುವೇ ಗೋ ಹತ್ಯೆ
ಮಂದೆ ಒಂದು ದಿನ ಈ ದೇಶ ಪುಂಡರ ಶ್ಮಶಾನ ಭೂಮಿಯಾಗದಂತೆ ಕಾಪಾಡಬೇಕಾಗಿದೆ.ನೀರಿಕ್ಷೆಗಳಿವೆ. ತಮಿಳುನಾಡಿನ ಪೋಲೀಸರು ಲಾಠಿ ಬೀಸಲು ಆರಂಭಿಸಿದ್ದಾರೆ.ಜಂತರ್ ಮಂತರ್ ಮಾತಾಡಲಾರಂಭಿಸಿದೆ,
not in my name
ನನ್ನ ಹೆಸರಿನಲ್ಲಿ ಬೇಡಾ
ಹೌದು ಜನ ಎಚ್ಚೆತ್ತು ಕೊಳ್ಳುತ್ತಿದ್ದಾರೆ.ಒಂದು ಹನಿ ರಕ್ತ ಬೀಳಬಾರದೆನ್ನುವ ವಾಲ್ಮೀಕಿ ಶ್ಲೋಕ
ಮಾನಿಷಾದ,
ಮಾ ವಿದ್ದುಷಾವಹೀಶ್ಲೋಕ,
 ಉಪನಿಷತ್ತುಗಳ ಸಂದೇಶವಾಹಕರು, ಹಾಗೇ
ಒಬ್ಬ ವ್ಯಕ್ತಿಯನ್ನು ಬದುಕಿಸುವುದು ಜಗತ್ತನ್ನು ಬದುಕಿಸಿದಂತೆಎಂಬ ಕುರಾನಿನ ವಾಹಕರು ಒಂದಾಗಿ ಈ ಭರತ ಖಂಡವನ್ನು ಉಳಿಸಬೇಕಾಗಿದೆ.

ಸುನ್ನೀಟುಡೇ