ಜಗತ್ತಿನಲ್ಲಿ ಒಳಿತು ಪ್ರಚಾರ ಪಡೆಯದೇ ಕೆಡುಕು ಮತ್ತು ಸುಳ್ಳು ವ್ಯಾಪಕ ಪ್ರಾಚಾರ ಪಡೆಯತ್ತಿರುವುದು ಮಹಾ ದುರಂತ

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಪ್ರತಿಮ ಸಾಧನೆ ಅನುಕರಣೀಯ.
ಭಾಷಣ: ಮೌಲಾನಾ  ಅಝೀಝ್  ದಾರಿಮಿ ಚೊಕ್ಕಬೆಟ್ಟು

ನಮ್ಮ ಸುತ್ತಾ ನೂರಾರು ಜನಪರ ಸೇವಾ ಕಾರ್ಯಗಳು ನಡೆಯತ್ತಾ ಇದೆ. ಸಂಘ ಸಂಸ್ಥೆಗಳು ಬೇರೆಬೇರೆ ಯಾಗಿ ದಿನನಿತ್ಯ ಹತ್ತಾರು ಜನ ಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತವೆ.ಅಷ್ಟಕ್ಕೂ ಈ ಜಗತ್ತಿನಲ್ಲಿ  ಸುಮಾರು ಆರುನೂರ ಐವತ್ತು ಕೋಟಿ ಜನ ದಿನನಿತ್ಯ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುತ್ತಾರೆ. ಅದುವೇ ಒಂದು ಅದ್ಬುತ ಕಾರ್ಯ. ನಮ್ಮ ಸುತ್ತಲೂ ನೋಡಿದರೆ
ಹಲವು ಸಂಘ ಸಂಸ್ಥೆಗಳು ಅಹರ್ನಿಶಿ ದುಡಿಯುತ್ತಲಿದೆ.ಬೇರೆಬೇರೆ ಗುರಿಯನ್ನು ಮುಂದಿಟ್ಟು
ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್,
ಅಲ್ ಹಿದಾಯ ,ಬ್ಯಾರಿ ಫೌಂಡೇಶನ್. ಬ್ಲಡ್ ಹೆಲ್ಫ ಲೈನ್, ನೂರಾರು ಸೋಷಿಯಲ್ ಮೀಡಿಯಾ ಗ್ರೂಪ್ ಗಳ ಅಸಂಖ್ಯಾತ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲಿದೆ. ಅವುಗಳು ಫಲ ಬಯಸದೇ ಕಾರ್ಯಾಚರಿಸುತ್ತಿದೆ.ಬಡ ಹೆಣ್ಮಕ್ಕಳ ಮದುವೆ,ಶಿಕ್ಷಣ ಮೆಡಿಕಲ್ ಹೆಲ್ಪ್ ಮುಂತಾದವು.ಆದರೆ ಅದ್ಯಾವುದೂ ಸಮಾಜದ ಮುಂದೆ ಹೆಚ್ಚು ಪ್ರಚಾರಪಡೆಯುತ್ತಿರುವಂತೆ ಕಾಣಸಿಗುವುದಿಲ್ಲ.ಇದರ ಕಾರಣ ಸಮಾಜದಲ್ಲಿ ಅನಿಷ್ಟ,ಮತ್ತು ಸುಳ್ಳುಗಳನ್ನು ಹೆಚ್ಚಾಗಿ ಪ್ರಚಾರ ಮಾಡಲು ಜನರು ಹೆಚ್ಚು ಉತ್ಸಾಹ ತೋರುವಂತಿದೆ.  ಇದು ಉತ್ತಮ ಬೆಳವಣಿಗೆ ಅಲ್ಲವೇ ಅಲ್ಲ.

ಮುಸ್ಲಿಂ ಸಮಾಜದಲ್ಲಿ ಅತ್ಯದ್ಭುತ ವೂ ವಿಸ್ಮಯವೂ ಆದ ಸೇವೆಯ ಮಾರ್ಗವನ್ನು ತರೆದಿಟ್ಟ ಒಂದು ಸಂಸ್ಥೆ ಸಮಸ್ತ ಎಂಬ ವಿದ್ವಾಂಸ ಸಭೆ.ಇಸ್ಲಾಮಿಕ್ ವಿದ್ಯಾಭ್ಯಾಸ ಶಿಕ್ಷಣವನ್ನು ಅದು ವ್ಯವಸ್ಥೆ ಗೊಳಿಸಿದು ಒಂದು ಪವಾಡವೇ ಆಗಿದೆ.ಶಾಲೆಗಳಿಂದ ಧರ್ಮದ ಶಿಕ್ಷಣವನ್ನು ತಡೆಯಲ್ಪಟ್ಟಾಗ ಅದು ಕಂಡುಕೊಂಡ ಮಾರ್ಗ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಗಿದೆ. ಅದರ ಸಮಯ ಬೆಳಗ್ಗೆ ಮತ್ತು ಸಂಜೆಯ ಸಮಯ.ಇನ್ನೂರ ಮುವತ್ತು ದಿನಗಳಲ್ಲಿ ಆರುನೂರ ತೊಂಬತ್ತು ಕ್ಲಾಸುಗಳಲ್ಲಿ(ಒಂದು ಕ್ಲಾಸು ನಲವತ್ತೈದು ನಿಮಿಷ) ಪ್ರೀ ಪ್ರೈಮರಿ ಯಿಂದ ಪ್ಲಸ್ ಟು ತನಕದ ದಾರ್ಮಿಕ ಶಿಕ್ಷಣ ಸಿಲಬಸ್ ಸಿದ್ದಪಡಿಸಿ ಇದು ಕಾರ್ಯಾಚರಿಸುತ್ತದೆ.1952ರಲ್ಲಿ ಇದರ ಅಂಗೀಕಾರ ಪಡೆದ ಕೇವಲ ಹತ್ತು ಮದರಸವಿದ್ದರೆ ಇದೀಗ (2017 ಜೂನ್ ತನಕ) 9709 ಮದರಸವನ್ನು ಅದು ಹೊಂದಿದೆ.ಹನ್ನೆರಡು ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣದ ದಾರಿಯನ್ನು ಅದು ಪ್ರಸ್ತುತ ಪಡಿಸಿದೆ.ಪ್ರತಿ ಮದ್ರಸಕ್ಕೂ ಪ್ರತಿ ವರ್ಷ ಮದ್ರಸಕ್ಕೆ ಬೇಕಾದ ಎಲ್ಲಾ ರೆಕಾರ್ಡ್ ಪುಸ್ತಕಗಳನ್ನು ಅದು ಉಚಿತವಾಗಿ ನೀಡುತ್ತದೆ.ಹೀಗೆ ಹತ್ತು ಸಾವಿರ ಮದ್ರಸಗಳಿಗೆ ಕೊಡುವಾಗ ಎಷ್ಟು ಖರ್ಚು ಬರಬಹುದೆಂದು ನೀವೇ ಊಹಿಸಿ. ವರ್ಷಕ್ಕೆ ಎರಡು ಸಲ ಶೋಧಕ ರನ್ನು ಕಳುಹಿಸುತ್ತದೆ.ಒಂದು ಲಕ್ಷದಷ್ಟು ಮುಅಲ್ಲಿಮರು ಸರ್ವೀಸ್ ರಿಜಿಸ್ಟರ್ (ಎಮ್ ಎಸ್ ಆರ್) ಪಡೆದವರಿದ್ದಾರೆ.ನೂರ ಐದು ಶೋಧಕರು (ಮುಫತ್ತಿಸ್).ಐದು ಖಾರಿವುಗಳು,ನಾಲ್ಕು,(ಟ್ರೈನರುಗಳು)ಐವತ್ತರಷ್ಟು ಮುದರ್ರಿಬುಗಳು ಸೇವಾ ನಿರತರಾಗಿದ್ದಾರೆ.  ಅದೂ ಅಲ್ಲದೇ ಹತ್ತು ಸಾವಿರ ಮದ್ರಸಗಳ ಪರೀಕ್ಷೆಗಳನ್ನು ಬೋರ್ಡ್ ಕ್ರಮಬದ್ಧವಾಗಿ ಕಂಪ್ಯೂಟರೀಕೃತ ವ್ವವಸ್ಥೆಯೊಂದಿಗೆ ಕಾರ್ಯ  ನಿರ್ವಹಿಸುತ್ತದೆ. ಸುಮಾರು ಇನ್ನೂರಕ್ಕಿಂತಲೂ ಅಧಿಕ ನೌಕರರು ಅಲ್ಲಿ ದುಡಿಯುತ್ತಾರೆ .ಅವರೆಲ್ಲರೂ ಉತ್ತಮ ಸಂಬಳವನ್ನೂ ಪಡೆಯುತ್ತಾರೆ.ಇದೂ ಅಲ್ಲದೇ ಪ್ರತಿಯೊಂದು ಜಿಲ್ಲೆಯ ಒಬ್ಬ ಬಡ ಮುಅಲ್ಲಿಮರಿಗೆ ಐದು ಲಕ್ಷ   ರುಪಾಯಿ ಮೌಲ್ಯದ ಮನೆಯನ್ನು ಕಟ್ಟಿ ಕೊಡುತ್ತಿದೆ.ಮದುವೆಗೆ ಸಹಾಯ,ಅಪಘಾತ,ಮರಣ ಮುಂತಾದ ಸಮಯದಲ್ಲಿ ಸಹಾಯ, ಮನೆ ಸಹಾಯ,ನೀಡುತ್ತಲಿದೆ. ಮುಅಲ್ಲಿಂ ಗಳಗೆ ಉತ್ತೇಜನ ನೀಡುವ ಸಲುವಾಗಿ ಮುಅಲ್ಲಿಂ ಅವಾರ್ಡ್ ಸುವರ್ಣ ಅವಾರ್ಡ್ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ.  ಹೀಗೆ ನೂರಾರು ಕಾರ್ಯಗಳನ್ಮುಅದು ನಿರ್ವಹಿಸುತ್ತದೆ. ಮದರಸ ಎಂಬ ವ್ಯವಸ್ಥೆಯು ಯಾವುದೇ ವಂತಿಗೆ ಇಲ್ಲದೇ ನಡೆಸುತ್ತಿದ್ದರೆ ಅದು ಒಂದು ಅದ್ಭುತ ವಲ್ಲವೇ ?ಅದಕ್ಕೆ ಏನಾದರೂ ವರಮಾನ ವಿದ್ದರೆ ಅದು ಮಕ್ಕಳ ಪಠ್ಯಪುಸ್ತಕ ದಿಂದ ಸಿಗುವ ಒಂದೆರಡು ರುಪಾಯಿ ಗಳು ಮಾತ್ರ. ಇನ್ನು ಮುಅಲ್ಲಿಮರ ಸಂಬಳ ಕೊಡಿತ್ತಿಲ್ಲವಲ್ಲ ಎನ್ನುವುದಾದರೆ ಇಂತಹಾ  ಬ್ರಹತ್ ವ್ಯವಸ್ಥೆ ಗೆ ಅದು ಅಪವಾದವಲ್ಲ. ಯಾವ ಕಲೆಕ್ಷನ್ ಕೂಡಾ ಅದು ಮಾಡುತ್ತಿಲ್ಲ.

ಇದೀಗ ಮುಅಲ್ಲಿಮರ ಕ್ಷೇಮ ಮತ್ತು ದಅವಾ ಕಾರ್ಯ ಉದ್ದೇಶಕ್ಕಾಗಿ ನೂರು ರುಪಾಯಿ ಸಂಭಾವನೆ ಯನ್ನು "ಒರು ಕೈ ತಾಂಙ್" (ಒಂದು ಅಭಯಹಸ್ತ)ಎಂಬ ಯೋಜನೆ ನಡೆಸಲು ಮುಂದಾಗಿದ್ದರೆ, ಉಮ್ಮತ್ತಿನ ಬಡ ನಿರ್ಗತಿಕರಿಗೆ ಹಾಗೂ ಧಾರ್ಮಿಕವಾಗ ತೀರ ಹಿಂದುಳಿದಿರುವ ಪ್ರದೇಶಗಳಲ್ಲಿ ದ ಅವಾ ಕಾರ್ಯ ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ಮಾಣ ಕ್ಕೂ ಬಳಕೆಯಾಗುತ್ತದೆ.ಇಂತಹಾ ಅಭೂತ ಪೂರ್ವ ಕಾರ್ಯ ಹೆಚ್ಚಿನವರಿಗೆ ತಿಳಿದಿರುವುದಿಲ್ಲ.ಸುಮ್ಮನೇ ನಾಲ್ಕು ಮನೆಗೆ ಹೋಗಿ ಬಾ ಎಂದರೆ ಹಿಂಜರಿಯುವ ಕಾಲ! ಹತ್ತು ಸಾವಿರ ಮದ್ರಸಗಳನ್ನು ಸುವ್ಯವಸ್ಥೆ ಯಲ್ಲಿ ಮುನ್ನಡೆಸುವುದು ಸಾಮಾನ್ಯ ವಿಷಯವಲ್ಲ.
ಈ ರೀತಿಯ ಪ್ರಾಮಾಣಿಕ ಶೈಕ್ಷಣಿಕ,ಸಾಮುದಾಯಿಕಕ್ರಾಂತಿಯು ನಮಗೂ ಮಾದರಿಯಾಗಬೇಕಿದೆ.

ಆದರೆ ಅಮಾನವೀಯತೆ,ವಂಚನೆ ಅನಾಚಾರಗಳು,  ದೌರ್ಜನ್ಯ ದಬ್ಬಾಳಿಕೆಗಳು ಮಾತ್ರವೇ ಹೆಚ್ಚು ಪ್ರಾಚಾರ ಪಡೆಯುತ್ತಿರುದು ಆಶ್ಚರ್ಯ. ಅದರ ಕಾರಣ ಇಂದು ಜನರು ಎರಡು ಕಾರ್ಯಗಳಿಗೆ ಹೆಚ್ಚು ಪ್ರಾಚಾರ ಕೊಡುತ್ತಾರೆ ಎನ್ನುವುದಾಗಿದೆ.ಒಂದು ಕೆಟ್ಟ ವಾರ್ತೆ ಗಳಿಗೆ ಮಾನ್ಯತೆ ಕೊಡುವುದು ಮತ್ತು ಸುಳ್ಳನ್ನು ಒಪ್ಪಿಕೊಳ್ಳುವುದು.ಇಂದು ಸುಳ್ಳು ಹೇಳದೇ ಬದುಕಲಾಗದು ಎಂಬಲ್ಲಿಗೆ ಬಂದು ನಿಂತಿದೆ ಪರಿಸ್ಥಿತಿ!
ಧರ್ಮ ನಂಬಿಕೆ,ಆದ್ಯಾತ್ಮ ,ರಾಜಕೀಯ,ಉದ್ಯಮ ವ್ಯಾಪಾರ ವ್ಯವಹಾರ ಎಲ್ಲವೂ ಸುಳ್ಳಿನ ಮೇಲೆಯೇ ಕಟ್ಟಲು ಶ್ರಮಿಸುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿದೆ.ಕೈಯಲ್ಲಿರುವ ಮೊಬೈಲ್ ನಲ್ಲಿ ಸುಳ್ಳನ್ನು ಹೇಳದೇ ಯಾರಿಗೂ ಬಚಾವುಇಲ್ಲ.ರಂಗುರಂಗಿನ ವಾರ್ತೆಗಳು ಬಿತ್ತರಿಸಲು ಮಾದ್ಯಮ ಗಳು ತೀವ್ರ ಪೈಪೋಟಿ ನಡೆಸುತ್ತದೆ.
ಒಟ್ಟಿನಲ್ಲಿ ಒಂದು ಕಥೆ ನೆನಪಾಗುತ್ತದೆ. ಸುಳ್ಳು ಮತ್ಯು ಸತ್ಯ ಸರೋವರದಲ್ಲಿ ಬಟ್ಟೆಗಳನ್ನು ಕಳಚಿ ಮೈಮರೆತು ಈಜುತ್ತಿದ್ದವಂತೆ.ಅಲ್ಲಿಂದ ಬೇಗ ಎದ್ದು ಬಂದ ಸುಳ್ಳು ಸತ್ಯದ ಬಟ್ಟೆಯನ್ನು ಧರಿಸಿ ಹೊರಟಿತು.ಸತ್ಯ ಸ್ನಾನ ಮುಗಿಸಿ ಬಂದು ನೋಡಿದರೆ ತನ್ನ ಬಟ್ಟೆ ಕಾಣಲಿಲ್ಲ ಅಲ್ಲೆ ಇದ್ದ ಸುಳ್ಳಿನ ಬಟ್ಟೆ ಧರಿಸಿ ಕೊಳ್ಳಲು ಸತ್ಯಕ್ಕೆ ಮುಜುಗರವಾಯಿತು.ಈ ಕಾರಣಗಳಿಂದ ಸುಳ್ಳು ಜನ ಮುಂದೆ ಸತ್ಯದ ವೇಷ ಹಾಕಿ ಕುಣಿಯುತ್ತಿದೆಯಂತೆ.ಸತ್ಯ ಮಾನ ಮುಚ್ಚಲು ಕದ್ದು ಮುಚ್ಚಿ ಬದುಕುತ್ತಿದೆಯಂತೆ.ಇದು ಕತೆಯಾದರೂ ನಿಜ ಅದರಲ್ಲಿದೆ.

ಆಧುನಿಕತೆಯಲ್ಲಿ ಎಷ್ಟು ಅಸಹಜವಾದ ಘಟನೆಗಳಿಗೆ ಸಮಾಜ ಸಾಕ್ಷಿಯಾಗುತ್ತದೋ ಅದಕ್ಕಿಂತ ಹೆಚ್ಚಾಗಿ ಉತ್ತಮ ಕಾರ್ಯಗಳಿಗೂ ಈ ಸಮಾಜ ವೇದಿಕೆಯಾಗುತ್ತದೆ.
ಅದರೆ ಅದು ಪ್ರಚಾರ ಪಡೆಯುವುದು ಕಮ್ಮಿ. ಕಾರಣ ಸಮಾಜದ ಹೆಚ್ಚಿನ ಮಂದಿ ಅನಿಷ್ಟ ವಾರ್ತೆಗಳಿಗೆ ಇನ್ನಷ್ಟು ಒಗ್ಗರಣೆ ಸೇರಿಸಿ ಸ್ವಯಂ ಪ್ರೇರಿತ ರಾಗಿ ಪ್ರ‌ಚಾರಕ ರಾಗಿದ್ದಾರೆ ಎನ್ನುವುದಾಗಿದೆ.
ಅದೇ ರೀತಿಯ ಪ್ರಚಾರ ಒಳಿತಿಗೆ ಸಿಗದೇ ಹೋಗುವದು ದುರಾದೃಷ್ಟವಾಗಿದೆ.
ಒಂದು ಉದಾಹರಣೆ
ಒಂದು ಊರಿನಲ್ಲಿ ಪ್ರಾಮಾಣಿಕ ವ್ಯಕ್ತಿ ಬಗ್ಗೆ ಒಂದು ಸುಳ್ಳಾರೋಪ ಹರಡಿದಾಗ ಊರಿನ ಕಟ್ಟ ಕಡೆಯ ಯಾವತ್ತೂ ಮಾತಿಗೆ ಸಿಗದ ವ್ಯಕ್ತಿ ಫೋನ್‌ ಮೂಲಕ ಕರೆ ಮಾಡಿ ಪರಮ ಹಿತೈಶಿಯಂತೆ ಮಾತಾಡಿಸುತ್ತಾನೆ.ಆತನ ಉದ್ದೇಶ ಸುಖ ದುಃಖ ವಿಚಾರಣೆಯಲ್ಲ ಬದಲಿಗೆ ಆರೋಪವನ್ನು ವ್ಯಕ್ತಿಯಿಂದಲೇ ಹೇಳಿಸಿ ನೋಯಿಸಿ ಆನಂದ ಪಡುವುದಾಗಿದೆ. ಒಂದು ವೇಳೆ ಅದೇ ವ್ಯಕ್ತಿಗೆ ಅತ್ಯುನ್ನತ ಸ್ಥಾನ ಸಿಕ್ಕಾರೆ ಅದು ಯಾರಿಗೂ ತಿಳಿದಿರುವುದಿಲ್ಲ ಬದಲಿಗೆ ಅಪ್ಪಿತಪ್ಪಿ ಮಾತಾಡಲು ಸಿಕ್ಕಾಗ ಈ ವಿಚಾರ ಎತ್ತಿದರೆ ಹೌದಾ ನನಗೆ ಗೊತ್ತೇ ಇಲ್ಲ ಅಂತ ಎದುರುಸಿರು ಬಿಡುತ್ತಾನೆ.ಇದು ಒಳಿತಿಗೂ ಕೆಡುಕಿಗೂ ಇರುವ ವ್ಯತ್ಯಾಸ.
قال تعالى: ﴿ إِنَّ اللَّهَ لَا يَهْدِي مَنْ هُوَ مُسْرِفٌ كَذَّابٌ ﴾ [غافر: 28].

ಅತಿಕ್ರಮಿ ಮತ್ತು ಸುಳ್ಳನಿಗೆ ಅಲ್ಲಾಹನು ಸನ್ಮಾರ್ಗ ನೀಡಲಾರ ಎಂದು ಅಲ್ಲಾಹನು ಹೇಳುತ್ತಾನೆ.
ಪ್ರವಾದಿ ಹೇಳುತ್ತಾರೆ,
برُّ الوالدين يزيد في العمر، والكذب ينقص الرزق، والدعاء يرد القضاء)).
ಮಾತಾಪಿತರ ಸೇವೆ ಆಯುಷ್ಯವನ್ನು ಹೆಚ್ಚಾಗಿಸುತ್ತದೆ.ಸುಳ್ಳು ಆಹಾರ ವನ್ನು ಕುಂಟಿತಗೊಳಿಸುತ್ತದೆ.ಪ್ರಾರ್ಥನೆ ವಿಧಿಯನ್ನು ತೆರಯುತ್ತದೆ

قيل في منثور الحكم: الكذب لص لأن اللص يسرق مالك والكذب يسرق عقلك
ಸುಳ್ಳು ಕಳ್ಳನಾಗಿರುತ್ತಾನೆ.ಕಳ್ಳನು ಸೊತ್ತನ್ನು ಕದ್ದರೆ ಸುಳ್ಳು ಬುದ್ದಿಯನ್ನು ಕದಿಯುತ್ತದೆ.ಎಂದು ಮಂಸೂರುಲ್ ಹಿಕಮಿನಲ್ಲಿ ಉಲ್ಲೇಖಿಸಲಾಗಿದೆ.

ವರದಿ ಅಲ್ ಅಹ್ಸನ್ ಮಾಸಿಕ

ಕಣ್ಣೀರಲ್ಲಿ ಕರಗಿದ ಕಲ್ಲಗುಡ್ಡೆಗೆ ಹೆಜ್ಜೆ ಇಟ್ಟಾಗ ಕಂಗಳು ತುಂಬಿಕೊಂಡವು...


ಮಕ್ಕಳನ್ನು ಕಳಕೊಂಡ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ "ಸಮಸ್ತ"
ಎಳೆಯದರಲ್ಲಿ ಅಗಲಿದ ಮಕ್ಕಳು ಹೆತ್ತವರ ಸ್ವರ್ಗ ಪ್ರವೇಶಕ್ಕೆ ದಾರಿ ಸುಗಮಗೋಳಿಸುವರೆಂಬ ಪ್ರವಾದಿ ವಚನ ಗಮನಾರ್ಹ
ಭಾಷಣ: ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

 ಮೂಲರ ಪಟ್ನ ದ ಹತ್ತಿರದ ಊರು ಕಲ್ಲುಗುಡ್ಡೆ.ತೀರಾ ಬಡ ಕುಟುಂಬಗಳು ಚಿಕ್ಕ ಚಿಕ್ಕದಾದ ಮನೆಕಟ್ಟಿಕೊಂಡು ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಆ ಊರಿನ ಜನರಲ್ಲಿ ಕಡು ಬಡವರೇ ಜಾಸ್ತಿ.
ಆದರೆ ಹೃದಯ ಶ್ರೀಮಂತಿಕೆಯ ಲ್ಲಿ ಅವರನ್ನು ಮೀರಲು ಸಾಧ್ಯವಾಗದು.ಧಾರ್ಮಿಕ ಅರಿವು ಮತ್ತು ಉಲಮಾರೊಂದಿಗೆ ಅವರಿಗಿರುವ ಗೌರವ ವರ್ಣಿಸುವುದು ಕಷ್ಟ.ಆ ಕಾರಣದಿಂದಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಧಾರ್ಮಿಕ ವಿದ್ಯಾರ್ಜನೆಗೆ ಕಳುಹಿಸಿದ ಹೆಮ್ಮೆ ಆ ಊರಿಗಿದೆ.ಇಷ್ಟೆಲ್ಲಾ ಹೇಳಲು ಕಾರಣ ಮೊನ್ನೆ ಸೋಮವಾರ ಸಂಜೆಯಾಗುತ್ತಲೇ ಕಲ್ಲುಗುಡ್ಡೆ ಕರಗಲಾರಂಬಿಸಿತು.ಕಣ್ಣೀರ ಕೋಡಿ ಹರಿಯಲಾರಂಭಿಸಿತು.ನಿರಸ ಮೌನ ಆ ಊರನ್ನೇ ಆವರಿಸಿತ್ತು.ಮಸೀದಿಯ ಪಕ್ಕದಲ್ಲಿ ಲವಲವಿಕೆಯಿಂದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಭವಿಷ್ಯದಲ್ಲಿ  ಉನ್ನತ ವಿದ್ವಾಂಸರಾಗಿ ಬೆಳಗಬೇಕಾಗಿದ್ದ ಹದಿಹರೆಯದ
SKSSF ತ್ವಲಬಾವಿಂಗ್ ಸದಸ್ಯರು, ಶಂಶುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತ್ವೈಬಾ ಕಿನ್ಯ ಇದರ ವಿದ್ಯಾರ್ಥಿ  ಮುಬಶ್ಶಿರ್ ಕಲ್ಲಗುಡ್ಡೆ ಹಾಗೂ SKSSF ಕ್ಶಾಂಪಸ್ ವಿಂಗ್ ಇದರ ಸದಸ್ಯರಾದ ಅಸ್ಲಾಮ್,ರಮೀಝ್,ಅಝ್ಮಲ್, ಸವಾದ್ ಐದು ಮಂದಿ ತರುಣರು
ಪಕ್ಕದ ಪಲ್ಗುಣಿ ನದಿಯಲ್ಲಿ ಬದುಕಿನ ಯಾತ್ರೆ ಮುಗಿಸಿ ಜೊತೆಯಾಗಿ ಮರಣವನ್ನು ಅಪ್ಪಿಕೊಂಡು ಬಿಟ್ಟಿದ್ದರು.
ಸಂಜೆಯಾಗುತ್ತಲೇ ಊರಿಗೆ ಊರೇ ಬೆಚ್ಚಿಬಿದ್ದಿತು.ಎಲ್ಲರೂ ದುಃಖ ತಾಳಲಾರದೇ ಕಣ್ಣೀರಿಡುತ್ತಿದ್ದರು.ಒಂದರ ಮೇಲೆ ಒಂದರಂತೆ ಐದು ಮಕ್ಕಳ ಮೃತ ದೇಹಗಳನ್ನು ಹೋರ ತೆಗೆಯುವಾಗ ಹೃದಯವೇ ಒಡೆದು ಹೋಗುವಂತಿತ್ತು.ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ನಂತರ ಬಂಟ್ವಾಳದಲ್ಲಿ ಮರಣೋತ್ತರ ಪರೀಕ್ಷೆ ಯ ಬಳಿಕ ಪಾರ್ಥಿವ ಶರೀರವನ್ನು ಹೊತ್ತ ವಾಹನ ಊರಿಗೆ ಬರುತ್ತಿದ್ದಂತೆ ಊರಿಗೆ ಊರೇ ದುಃಖ ಸಾಗರದಲ್ಲಿ ಮುಳುಗಿತ್ತು.ಇನ್ನೂ ಆ ಶೋಕ ಆರಿದಂತಿಲ್ಲ ಅದಕ್ಕೆ ಇನ್ನೆಷ್ಟೋ ಸಮಯ ಬೇಕಾದಿತು.ಶುಂಟಿ ಹಿತ್ತಲಿನ ಮಸೀದಿಯ ಮಾರ್ಗದ ಬದಿಯಲ್ಲಿರು ಕಬರಸ್ತಾನದ ಎತ್ತರದ ಹಾದಿ ಏರುತ್ತಾ ಹೋದರೆ ಅಲ್ಲಿ ಒಂದೇ ಜಾಗದಲ್ಲಿ ಅಕ್ಕ ಪಕ್ಕಗಳಲ್ಲಿ ಜೋತೆಯಾಗಿ ಮಲಗಿರುವ ಮಕ್ಕಳ ಕಬರುಗಳು ಉತ್ತರ ಸಿಗದೇ  ಮೌನವಾಗಿದೆ ಎಂದು ಭಾವಿಸುವಂತಿತ್ತು.
ಗುರುವಾರ ಬೆಳಗಾಗುತ್ತಲೇ ಸಮಸ್ತದ ಆದೇಶ ಪ್ರಕಾರ ಶೈಖುನಾ ಎಂ ಟಿ ಉಸ್ತಾದರು ದುರಂತ ಸ್ಥಳಕ್ಕೆ ಬೇಟಿ ನೀಡಿ ಮರಣಹೊಂದಿದ ಮಕ್ಕಳ ಮನೆಗಳಿಗೆ ಭೇಟಿ ನೀಡುತ್ತಾರೆ ಎಂದು ತಿಳಿದೊಡನೇ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕಲ್ಲುಗುಡ್ಡೆ ಗೆ ಧಾವಿಸಿದೆವು.ಸಮಸ್ತ ನೇತಾರರೆಲ್ಲರೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಪ್ರಥಮವಾಗಿ ಕಬರ್ ಝಿಯಾರತ್ತು ನಡೆಸಿ ದುಅಃ ನಿರ್ವಹಿಸಲು ಶೈಖುನಾ ಮುಂದಾದಾಗ ಐದು ಮಕ್ಕಳ ತಂದೆಯರನ್ನು ಹತ್ತಿರ ಕರೆದು ನೀವು ಯಾರು ಮಕ್ಕಳನ್ನು ಕಳಕೊಂಡಿಲ್ಲ !ಅವರ್ಯಾರೂ ಮರಣಿಸಿಲ್ಲ!ಸಹನೆ ವಹಿಸಿ ನಮ್ಮನ್ನು ಮತ್ತು ನಿಮ್ಮನ್ನು ಸ್ವರ್ಗಕ್ಕೇ ಸೇರಿಸುವ ಮಕ್ಕಳು ಅವರು ಎಂದು ದುಖಃ ತಾಳಲಾರದೇ ಗದ್ಗದಿತರಾಗಿ ಹೇಳಿದಾಗ ಅಲ್ಲಿದ್ದ ಎಲ್ಲರ ಕೆನ್ನೆಯಲ್ಲಿ ಕಣ್ಣೀರು ಹರಿದಾಡುತ್ತಿತ್ತು.
ಚಿಕ್ಕ ಪ್ರಾಯದಲ್ಲೇ ಮರಣಹೊಂದಿದ ಪ್ರವಾದಿ (ಸ) ರ ಮಗನಾದ ಇಬ್ರಾಹಿಂ ಎಂಬ ಒಂದುವರೆ ವರ್ಷ ಪ್ರಾಯದ ಮಗುವಿನ ಬಗ್ಗೆ ಪ್ರವಾದಿಯರು ಅನುಭವಿಸಿದ ನೋವಿನ ಬಗ್ಗೆ ವಿವರಿಸಿ ಸಾಂತ್ವನ ಹೇಳಿದಾಗ ಮಕ್ಕಳನ್ನು ಕಳಕೊಂಡ ತಂದೆಯರ ಮುಖದಲ್ಲಿ ಸಮಾಧಾನದ ಭಾವ ಕಾಣುತ್ತಿತ್ತು.
ನಂತರ ಐದು ಮನೆಗಳಿಗೂ ಬೇಟಿ ನೀಡಿ ಪ್ರಾರ್ಥಿಸಿ ಕುಟುಂಬದವರಿಗೂ ಸಾಂತ್ವನ ಹೇಳಿದರು.ಜೊತೆಗೆ ಸಮಸ್ತದ ಎಲ್ಲಾ ಕಾರ್ಯಕರ್ತರೂ ಸಾಥ್ ನೀಡಿದ್ದರು.

ಮರಣವು ಕೂಡಾ ಒಂದು ಪರೀಕ್ಷೆ ಎಂದು ಕುರಾನ್ ಹೇಳುತ್ತದೆ.

وَلَنَبْلُوَنَّكُمْ بِشَيْءٍ مِنَ الْخَوْفِ وَالْجُوعِ وَنَقْصٍ مِنَ الْأَمْوَالِ وَالْأَنْفُسِ وَالثَّمَرَاتِ ۗ وَبَشِّرِ الصَّابِرِينَ

ಕೆಲವೊಂದು ಭಯ, ಹಸಿವು, ಸೊತ್ತುನಾಶ, ಪ್ರಾಣಹಾನಿ, ಫಲಗಳ ನಾಶ ಇತ್ಯಾದಿಗಳ ಮೂಲಕ ನಾವು ನಿಮ್ಮನ್ನು ಖಂಡಿತವಾಗಿಯೂ ಪರೀಕ್ಷಿಸುವೆವು. (ಇಂತಹ ಸಂದರ್ಭಗಳಲ್ಲಿ) ತಾಳ್ಮೆ ವಹಿಸುವವರಿಗೆ ಶುಭವಾರ್ತೆ ಯನ್ನು ತಿಳಿಸಿರಿ.

ಪ್ರವಾದಿ ಸ ರವರ ಸನ್ನಿಧಿಯಲ್ಲಿ ಹಾಜರಿರುತ್ತಿದ್ದ ಸ್ಹಹಾಬಿಯೋರ್ವರನ್ನು ಕಾಣದಾದಾಗ  ನಬಿಯವರು ಅವರ ಬಗ್ಗೆ ವಿವರ ಕೇಳುತ್ತಾರೆ.ಅವರು ತನ್ನ ಸಣ್ಣ ಮಗನ ಮರಣ ಕಾರಣ ಬರುತ್ತಿಲ್ಲ ಎಂದು ಸ್ವಹಾಬಿಗಳು ಉತ್ತರಿಸುತ್ತಾರೆ.ಪ್ರವಾದಿ ಸ ರವರು ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು ನಂತರ.

ثم قال: يا فلان أيما كان أحب إليك أن تمتع به عمرك أو لا تأتي غدا إلى باب من أبواب الجنة إلا وجدته قد سبقك إليه يفتحه لك. قال: يا نبي الله بل يسبقني إلى باب الجنة فيفتحها لي لهو أحب إلي. قال: فذاك لك. رواه النسائي وصححه ابن حبان والحاكم وابن ﺣﺠﺮ (ر)

ನಂತರ ಮಗುವಿನ ತಂದೆಯನ್ನು ಕರೆದು ನಿಮಗೆ ನಿಮ್ಮಮಗುವಿನ ಜೊತೆ ಸುಖವಾಗಿ ಬಾಳುವುದನ್ನು ಇಷ್ಟ ಪಡುವಿರೋ ಅಥವಾ ಆಗು ಸ್ವರ್ಗದ ಬಾಗಿಲ ಬಳಿ ತೆರಳಿ ನಿಮಗಾಗಿ ಸ್ವರ್ಗದ ಬಾಗಿಲನ್ನು ತೆರೆಯುವುದಾದರೆ ನಿಮಗೆ ಯಾವುದು ಇಷ್ಟ  ?ಅಂತ ಕೇಳುತ್ತಾರೆ.ಆಗ ಆ ಸ್ವಹಾಬಿ ಹೇಳುತ್ತಾರೆ ನಬಿಯವರೇ ಆ ನನ್ನ ಮಗು ಸ್ವರ್ಗದ ಬಾಗಿಲನ್ನು ತೆರೆಯುವ ಮಗುವಾಗುವುದನ್ನು ನಾನು ಬಯಸುವೆ.
وعن أبي موسى الأشعري أن رسول الله صلى الله عليه وسلم قال: إذا مات ولد العبد قال الله لملائكته: قبضتم ولد عبدي؟ فيقولون: نعم. فيقول: قبضتم ثمرة فؤاده. فيقولون: نعم. فيقول: ماذا قال عبدي؟ فيقولون: حمدك واسترجع. فيقول الله: ابنوا لعبدي بيتا في الجنة وسموه بيت الحمد. رواه الترمذي وحسنه، وأحمد،
ಓರ್ವ ವ್ಯಕ್ತಿಯ ಮಗು ಮರಣ ಹೊಂದಿದರೆ ಅಲ್ಲಾಹನು ತನ್ನ ಮಲಕ್ಕುಗಳಿಗೆ ಕೇಳುತ್ತಾನೆ, ನನ್ನ ದಾಸನ ಮಗನನ್ನು ಮರಣಿಸಿದಿರೋ ? ಹೌದು ಎಂದು ಮಲಕ್ಕುಗಳು ಉತ್ತರಿಸುತ್ತಾರೆ.ಆತನ ಹೃದಯ ದ ಹೂವನ್ನು ಮರಣಿಸಿದಿರೋ?
ಹೌದೆಂದು ದೇವದೂತರು ಹೇಳುತ್ತಾರೆ. ಆಗ ಅಲ್ಲಾಹನು ಪ್ರಶ್ನಿಸುತ್ತಾನೆ,ಆಗ ಆತ ಏನು ಹೇಳಿದ ?ಆತ ಸ್ತುತಿಸಿದ ಮತ್ತು "ಇನ್ಮಾಲಿಲ್ಲಾ"ಆಪತ್ತಿನ ವಾಕ್ಯ ಉಚ್ಚರಿಸಿದ.ಎಂದು ಮಲಕ್ಕುಗಳು ಉತ್ತರಿಸುತ್ತಾರೆ.
ಹಾಗಾದರೆ ನೀವು ಆತನಿಗೆ ಸ್ವರ್ಗದಲ್ಲಿ ಮನೆಯೊಂದನ್ನು ಸಿದ್ದಪಡಿಸಿ ಅದಕ್ಕೆ ಬೈತುಲ್ ಹಂದು"ಸ್ತುತಿಯ ಮನೆ"ಎಂದು ಹೆಸರಿಡಿ,

أنه رأى صحابياً يبكي على فرطاً له فقال له رسول الله صلى الله عليه وسلم أو مايسرك أنه الآن يلاعب أبني إبراهيم تحت ضل العرش قال بلي
ಪ್ರವಾದಿ (ಸ) ರವರು ಒಮ್ಮೆ ತನ್ನ ಸ್ವಹಾಬಿಗಳಲ್ಲಿ ಓರ್ವರು ಮಗನ ಮರಣ ನಿಮಿತ್ತ  ಅಳುತ್ತಿರುವುದನ್ನು ಕಂಡು ಪ್ರಶ್ನಿಸುರಾಗಿದ್ದರು.ನಿಮ್ಮ ಮಗ ಈಗ ನನ್ನ ಮಗನಾದ ಇಬ್ರಾಹಿಮ್ ನೊಂದಿಗೆ ಅರ್ಶಿನ ನೆರಳಿನಲ್ಲಿ ಆಟ ಆಡುತ್ತಿರುವುದನ್ನು ಇಷ್ಟಪಡುವುದಿಲ್ಲವೇ ?ಆಗ ಆ ದುಃಖಿತ ಸ್ವಹಾಬಿ ಹೇಳುತ್ತಾರೆ ನಾನು ಸಂತುಷ್ಟನಾಗಿದ್ದೇನೆ.

ನಬಿಯವರು ತಮ್ಮ ಮಗನ ಅಗಲಿಕೆಯ ಬಗ್ಗೆ ತುಂಬಾ ದುಃಖಿತ ರಾಗಿದ್ದರು.
ಕಣ್ಣೀರ ಸುರಿಸುತ್ತಾ ಹೀಗೆ ಹೇಳಿದ್ದರು.
إن العين تدمع، والقلب يحزن، ولا نقول إلا ما يرضي ربنا، وإنا بفراقك يا إبراهيم لمحزونون))

ಕಣ್ಣು ಕಣ್ಣೀರ ಸುರಿಸುತ್ತದೆ, ಹೃದಯ ದುಃಖಿಸುತ್ತದೆ.ಅಲ್ಲಾಹನು ತೃಪ್ತಿಪಡುವ ಕಾರ್ಯವನ್ನಲ್ಲದೇ ಬೇರೆ ಏನನ್ನೂ ನಾವು ಹೇಳಲಾರೆವು.ಓ ಇಬ್ರಾಹೀಮ್ ನಿಮ್ಮನ್ನು ಕಳಕೊಂಡು ನಾವು ದುಃಖಿತ ರಾಗಿದ್ದೇವೆ.
ಇಬ್ರಾಹೀಮ್ ಎಂಬ ಪುತ್ರನ ಬಗ್ಗೆ ಅಪಾರ ಮಹಾತ್ಮೆ ಯನ್ನೂ ಹೇಳಲಾಗಿದೆ.
أخرج البخاري في صحيحه من طريق إسماعيل بن أبي خالد قال: "قلت لابن أبي أوفى: رأيتَ إبراهيمَ ابنَ النبي؟ قال: مات صغيرًا، ولو قُضِيَ أن يكون بعد محمد صلى الله عليه وسلم نبيٌّ، عاش ابنه؛ ولكن لا نبي بعده
ಬುಖಾರಿ ರ ವರದಿ ಮಾಡಿದ ಹದೀಸಿನಲ್ಲಿ ಇಬ್ನು ಅಬೀ ಅವ್ ಪಾ (ರ) ಹೇಳುತ್ತಾರೆ,ಮುಹಮ್ಮದ್ ನಬಿ (ಸ) ನಂತರ ಪ್ರವಾದಿ ಬರುವ ವಿಧಿ ಇದ್ದಿದ್ದರೆ ನಬಿಯವರ  ಮಗ ಇಬ್ರಾಹೀಂ ಬದುಕುತ್ತಿದ್ದರು.ಆದರೆ ಅವರ ನಂತರ ಪ್ರವಾದಿಯೇ ಇಲ್ಲ.
ನಬಿಯವರ ನೋವನ್ನು ಬೇರೆ ಬೇರೆ ರೀತಿಯಲ್ಲಿ ಯೂ ಹೇಳಿಕೊಂಡಿದ್ದಾರೆ.
 وعن ابن عباس قال : قال رسول الله صلى الله عليه وسلم : " من كان له فرطان من أمتي أدخله الله بهما الجنة ، فقالت عائشة : فمن كان له فرط من أمتك ؟ قال : ومن كان له فرط يا
موفقة ، فقالت : فمن لم يكن له فرط من أمتك ؟ قال فأنا فرط أمتي ، لن يصابوا بمثلي . رواه الترمذي وقال : هذا حديث غريب .
ನಬಿಯವರು ಹೇಳುತ್ತಾರೆ
ಎರಡು ಮಕ್ಕಳು ಮರಣಿಸಿದ್ದರೆ ಅವರ ಕಾರಣ ಆತನನ್ನು ಅಲ್ಲಾಹನು ಸ್ವರ್ಗಕ್ಕೆ ಕಳುಹಿಸುತ್ತಾನೆ.ಆಗ ಆಯಿಷಾ ರ ರವರು ಹೇಳುತ್ತಾರೆ.ಒಂದು ಮಗು ಮರಣಿಸಿದ್ದರೆ ?ಅಗಲೂ ಸ್ವರ್ಗವಿದೆ ಎಂದು ಪ್ರವಾದಿ ಉತ್ತರಿಸುತ್ತಾರೆ.ಆಗ ಆಯಿಷಾ ರ ಕೇಳುತ್ತಾರೆ, ತಮ್ಮ ಉಮ್ಮತ್ತ್ ನಲ್ಲಿ ಒಬ್ಬರಿಗೆ ಯಾರೂ ಮರಣ ಹೊಂದದೇ ಇದ್ದರೆ ? ನಬಿ ಸ ಉತ್ತರಿಸುತ್ತಾರೆ,ನಾನು ನನ್ನ ಉಮ್ಮತ್ತಿಗಾಗಿ ಮುಂದಾಗಿ ಹೋಗಿ ಸಿದ್ದ ಪಡಿಸುವ  ವ್ಯಕ್ತಿ ಆಗಿರುತ್ತೇನೆ. ನನ್ನಂತೆ ಆಪತ್ತು ಯಾರಿಗೂ ಸಂಭವಿಸಿಲ್ಲ.
ಮಗನನ್ನು ಕಳಕೊಂಡ ಉಮ್ಮು ಸುಲೈಮ್ (ರ) ತನ್ನ ಪತಿ ಅಬೂ ತಲ್ಹಾ (ರ )ರ ಗಮನಕ್ಕೆ ಕೊಡದೇ ರಾತ್ರಿ ವೇಳೆ ಪತಿಯ ಜೊತೆ ಮಲಗಿ   ಬಳಿಕ ಬುದ್ದಿವಂತಿಕೆಯಿಂದ ಮಗನ ಮರಣದ ವಿಷಯವನ್ನು ಗಮನಕ್ಕೆ ತರುತ್ತಾರೆ.ಅಗ ಕೋಪಗೊಂಡ ಅಬೂ ತಲ್ಹಃ ರ ನೇರವಾಗಿ ನಬಿ (ಸ) ರ ಬಳಿ ತೆರಳುತ್ತಾರೆ.ವಿಷಯ ತಿಳಿಸಿದಾಗ ರಸೂಲರು ದುಅಃ ಮಾಡುತ್ತಾರೆ.

 بارك الله لكما في غابر ليلتكما.
ನಿಮಗಿಬ್ಬರಿಗೂ ಕಳೆದ ರಾತ್ರಿಯಲ್ಲಿ ಅಲ್ಲಾಹನು ಅನುಗ್ರಹಿಸಲಿ.
ಅದೇ ರಾತ್ರಿ ಗರ್ಭ ಧರಿಸಿದ  ಉಮ್ಮು ಸುಲೈಮ್ ಗಂಡು ಮಗುವಿಗ ಜನ್ಮ ಕೊಡುತ್ತಾರೆ.
ಈ ಎಲ್ಲಾ ಹದೀಸುಗಳ ಸಂದೇಶಗಳು ಆತಂಕ,ದುಃಖ ,ನೋವಿನಿಂದ ಕಂಗಾಲಾದ ಆ ಐದು ಮಕ್ಕಳ ಮನೆ ಮಂದಿಗೆ  ಸಮಾಧಾನ, ಸಹನೆಯ ಸುಗಮಗೊಳಿಸುತ್ತದೆ.ಆ ದೌತ್ಯವನ್ನು ನಿರ್ವಹಿಸಿದ ಸಮಸ್ತ ಮುಶಾವರ ಪ್ರತಿನಿಧಿ ಶೈಖುನಾ ಎಂ ಟಿ ಉಸ್ತಾದರಿಗೆ ಮತ್ತು ಸಮಸ್ತ ಉಲಮಾ ಸಭೆಗೆ  ಜಿಲ್ಲೆಯ  ಎಲ್ಲಾ ಸಮಸ್ತ ಅಭಿಮಾನಿಗಳ ಹೃದಯ  ಮಿಡಿಯುತ್ತಿತ್ತು.ನೋವಿನ ಒಂದಿಷ್ಟು  ಭಾರವನ್ನು ಸಾಂತ್ವನ ಮೂಲಕ ಕಡಿಮೆಗೊಳಿಸಿದ ಸಂತೃಪ್ತಿ ಅಲ್ಲಿ ನೆರೆದ ಎಲ್ಲರ ಮನದಲ್ಲಿತ್ತು.ಅಲ್ಲಾಹನು ಅವರಿಗೆ ವಿಜಯವನ್ನು ಕರುಣಿಸಲಿ ಆಮೀನ್.

☪ ವರದಿ ಅಲ್ ಅಹ್ಸನ್ ಮಾಸಿಕ☪

ಪ್ರವಾದಿ( ಸ) ಗುಣಗಾನವನ್ನು ನಮ್ಮ ಬದುಕಿನ ಭಾಗವಾಗಿಸಿದ ಮಂಖೂಸ್ ಮೌಲಿದ್.

ಜಗಬೆಳಗಿಸಿದ ನಾಯಕರ ಸ್ಮರಣೆ ಅನಿವಾರ್ಯ
ಮೌಲಾನಾ ಯುಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು"

ವಸಂತ ಕಾಲ ಆಗಮಿಸುತ್ತಿದೆ. ಪುಣ್ಯ ಪ್ರವಾದಿ  (ಸ)ಜನ್ಮದಿನ ಹತ್ತಿರವಾಗುತ್ತಿದೆ.ಸತ್ಯವಿಶ್ವಾಸಿಯ ಹೃದಯ ಆ ಪ್ರವಾದಿ ಜನ್ಮ ದಿನಕ್ಕಾಗಿ ಕಾಯುತ್ತಲಿದೆ.ಪ್ರವಾದಿ (ಸ) ರ ಗುಣಗಾನ ,ಮೌಲಿದ್ ಸ್ವಲಾತಿನಿಂದ ಜಗತ್ತಿನಾದ್ಯಂತ ಶೋಭೆ ಹರಡಲಿದೆ.
ನಮ್ಮೆಡೆಯಲ್ಲಿ ಹೆಚ್ಚು ಮನೆಮಾತಾಗಿರುವ ಮಂಕೂಸ್ ಮೌಲಿದ್ ಮೂಲಕ ಮನೆ ಮನೆಗಳಲ್ಲಿ ಸಂಭ್ರಮ ತುಂಬಲಿದೆ.
ಇಸ್ಲಾಂ ಪ್ರವಾದಿ ಮುಹಮ್ಮದ್ (ಸ)ರ ಕಾಲದಲ್ಲೇ ಭಾರತದಲ್ಲಿ  ಪ್ರವೇಶ ಪಡೆದಿರುವುದು ಐತಿಹಾಸಿಕ ಹಿನ್ನೆಲೆ ಯಾಗಿರುತ್ತದೆ.ಆರಂಭದಲ್ಲಿ ಮಸೀದಿಗಳ ನಿರ್ಮಾಣ ಮೂಲಕ ಧರ್ಮದ ಪ್ರಚಾರಕ್ಕೆ ಅವಕಾಶಗಳು ಸಿಕ್ಕವು.ಹೀಗೆ ಮುಂದುವರಿದು ಹಿಜರಿ ಒಂಬತ್ತನೇ ಶತಮಾನ ವಾಗುವ ಷ್ಟ ರಲ್ಲಿ ಈಜಿಪ್ಟ್ ,ತುರ್ಕಿ, ಸೌದಿ,ಸಿರಿಯಾ ಮುಂತಾದ ಕಡೆಗಳಿಂದ ವಿದ್ವಾಂಸರು ಭಾರತದ ಕೇರಳದತ್ತ ಧಾರ್ಮಿಕ ಅರಿವನ್ನರಸಿ ಬರುವಂತಹಾ ಸನ್ನಿವೇಶ ಸೃಷ್ಟಿಯಾಯಿತು. ಅದು ಕೂಡಾ ಅದ್ಭುತ ಮತ್ತು ಅಷ್ಟೇ ವಿಸ್ಮಯ.ಈ ಸಂಭ್ರಮ ಕ್ಕೆ ವೇದಿಕೆ ಒದಗಿಸಿದವರು ಒಂಬತ್ತನೇಯ ಶತಮಾನ ಕಂಡ ಅಪ್ರತಿಮ ವಿದ್ವತ್ ಪ್ರತಿಭೆ  ಹಝ್ರತ್ ಅಸ್ಸಯ್ಯದ್ ಝೈನುದ್ದೀನ್ ಮಖ್ದೂಮ್ ಅಲ್ ಕಬೀರ್ (ರ) ಆಗಿದ್ದರು.(1467.ಹಿಜರಿ -873-928)
ಯಮನ್ ದೇಶದಿಂದ ತಮಿಳುನಾಡಿನ ಕೀಲಕ್ಕರೆ,ಕಾಯಲ್ಪಟ್ಟಣಂ,ಮೂಲಕ ಕೊಚ್ಚಿ ತಲುಪಿದ ಮಖ್ದೂಂ ಕುಟುಂಬದ ಪಿತಾಮಹಾ ಅಸ್ಸಯ್ಯದ್ ಮಖ್ದೂಂ ಅಸ್ಸೈಖ್
ಝೈನುದ್ದೀನ್ ಇಬ್ರಾಹೀಮ್ ಬಿನ್ ಅಹ್ಮದ್ (ರ).ಅವರು  ಝೈನದ್ದೀನ್ ಮಖ್ದೂಮರ  ಚಿಕ್ಕಪ್ಪರಾಗಿರುತ್ತಾರೆ.ಝೈನದ್ದೀನ್ ಮಖ್ದೂಮ್ ಒಂದನೆಯವರು
ಹಿಜರಿ 873 ರಲ್ಲಿ ಕೊಚ್ಚಿಯಲ್ಲಿ ಜನ್ಮ ತಾಳಿದರು. ನಂತರ ಪಿತೃ ವಿಯೋಗ ನಿಮಿತ್ತ ಮಹಾನುಭಾವರು ತನ್ನ ಚಿಕ್ಕಪ್ಪರ ಜೊತೆ ಕೊಚ್ಚಿಯಿಂದ  ಪೊನ್ನಾನಿ ಗೆ ವಾಸ ಬದಲಿಸಿತ್ತಾರೆ.ಅಲ್ಲೇ ಧಾರ್ಮಿಕ ಅರಿವನ್ನು ಪಡೆದು ನಂತರ ಮಕ್ಕಾ ಶರೀಪಿಗೆ ತೆರಳಿ ಉನ್ನತ ವಿದ್ವಾಂಸರಿಂದ ಅರಿವನ್ನು ಪಡೆದುಕೊಳ್ಳುತ್ತಾರೆ.ಆಮೇಲೆ ಈಜಿಪ್ಟಿಗೆ ಹೋಗಿ ಅಲ್ ಅಝಹರ್ ವಿದ್ಯಾಲಯ ದಲ್ಲಿ ಜಗತ್ತು ಕಂಡ ಮಹಾ ವಿದ್ವಾಂಸರಾದ ಅಸ್ಸೈಖ್ ಝಕರಿಯ್ಯ ಲ್ ಅನ್ಸಾರಿ (ರ )ರ ಬಳಿ ಸೇರಿ ಕೊಳ್ಳುತ್ತಾರೆ.
ಅಸ್ಸೈಖ್ ಝಕರಿಯ್ಯ ಲ್ ಅನ್ಸಾರಿ (ರ )ಒಂಬತ್ತನೇ ಶತಮಾನದ ಮುಜದ್ದಿದ್ (ಯುಗ ಪರಿವರ್ತಕ)ಆಗಿದ್ದರು.ಖಾತಿಮತುಲ್ ಮುಹಖ್ಖಿಖ್ ಇಬ್ನು ಹಜರ್ (ರ)ಕೂಡಾ ಅವರ ಶಿಷ್ಯರು.ನನ್ನ ಕಣ್ಣು ಕಂಡ ಮಹಾನುಭಾವ ರಲ್ಲಿ ಸರ್ವಶ್ರೇಷ್ಠ ರು ನನ್ನ ಗುರುಗಳೆಂದು
ಇಬ್ನು ಹಜರ್ (ರ)ಹೇಳಿರುತ್ತಾರೆ.ಇಮಾಂ ಜಲಾಲುದ್ದೀನ್ ಮಹಲ್ಲಿ ,ಇಮಾಂ ಹಜರುಲ್ ಅಸ್ಕಲಾನಿ,ಇಮಾಂ ಇಝ್ಝುದ್ದೀನ್ ಅಬ್ದುಸ್ಸಲಾಂ,ಇಮಾಂ ಸಿರಾಜುದ್ದೀನ್ ಬುಲ್ಕೈನಿ ಮುಂತಾದ ವಿದ್ವಾಂಸರು ಅಸ್ಸೈಖ್ ಝಕರಿಯ್ಯ ಲ್ ಅನ್ಸಾರಿ (ರ)ಗುರುಗಳಾಗಿರುತ್ತಾರೆ.
ಇಮಾಂ ಶಾಫಿಈ(ರ)ರ ಬಳಿಯೇ ಅವರು ಅಂತ್ಯವಿಶ್ರಮ ಪಡೆದಿರುತ್ತಾರೆ.
ಅಸ್ಸೈಖ್ ಝಕರಿಯ್ಯಲ್ ಅನ್ಸಾರಿ ಮತ್ತು ಇಮಾಂ ಶಾಫಿ ರ ಮಧ್ಯೆ ಹದಿನೇಳು ಗುರುವರ್ಯರನ್ನು ಕಾಣಬಹುದಾಗಿದೆ.
ಅಶ್ಸೈಖ್ ಮಖ್ದೂಂ (ರ)ಈಜಿಫ್ಟಿನಿಂದ ಪೊನ್ನಾನಿಗೆ ಮರಳಿ ಬಂದ  ನಂತರ ಕಟ್ಟಿದ ಮಸೀದಿ ಖ್ಯಾತ ಇಸ್ಲಾಮಿಕ್ ಸಂಸ್ಕೃತಿಯ ಕೇಂದ್ರ ವಾಗಿ ಬೆಳಗಿದೆ.ಅಶ್ಸೈಖ್ ಮಖ್ದೂಂ (ರ)ರವರ ದಾರಿಯಲ್ಲೇ ಸಾಗಿದ ಮೊಮ್ಮಗ ಅಸ್ಸಯ್ಯದ್ ಅಹ್ಮದ್ ಝೈನುದ್ದೀನ್ ಎರಡನೆಯವರು  ಅಗಾಧವಾದ ಧಾರ್ಮಿಕ ಜ್ಞಾನವನ್ನು ಪಡೆಯುತ್ತಾರೆ.ಹರಂ ಶರೀಫಿನಲ್ಲಿ ಹತ್ತು ವರ್ಷಗಳ ಕಾಲ ಮಕ್ಕಾ ಹರಂ ಶರೀಫಿನಲ್ಲಿ ಜ್ಞಾನವನ್ನು ಪಡೆಯುತ್ತಾ
ಖಾತಿಮತುಲ್ ಮುಹಖ್ಖಿಖೀನ್ ಇಬ್ನು ಹಜರ್(ಹಿಜರಿ  .909-973)(ರ) ರ ಶಿಷ್ಯತ್ವವನ್ನು ಪಡೆಯುತ್ತಾರೆ.
ಆನಂತರ ಪೊನ್ನಾನಿಗೆ ಮರಳಿ ಪ್ರಸಿದ್ದ ಮಸೀದಿ ಕೇಂದ್ರವಾಗಿ ದರ್ಸ್ ನ್ನು ಮುನ್ನಡೆಸುತ್ತಾರೆ.ಆ ಸಂದರ್ಭದಲ್ಲಿ ಇಬ್ನು ಹಜರ್ (ರ) ಪೊನ್ನಾನಿ ದರ್ಸಿಗೆ ಬೇಟಿ ನೀಡಿ ಕೆಲಕಾಲ ತಂಗಿದ್ದು ಉಲ್ಲೇಖವಿದೆ. ಅಂದು ಪೊನ್ನಾನಿ ಯಲ್ಲಿ ತಂಗಿದ ಕಾಲ ತನ್ನ ಕೈಯಿಂದ ಬರೆದ ಕೆಲವು ಬರಹಗಳು ದಾರುಲ್ ಇಫ್ತಾತಾಹ್  ಅಝ್ಹರಿಯಾ ಅಹ್ಮದ್ ಕೋಯ ಸ್ಸಾಲಿಯಾತಿ ಲೈಬ್ರರಿಯಲ್ಲಿ ಲಭ್ಯವಿದೆ. ಅಲ್ ಜಾಮಿಯಲ್ ಅಝ್ಹರ್,ಕೈರೋ
ಅಲ್ ಜಾಮಿಯಲ್ ಅಮವೀ ಡಮಸ್ಕಸ್,ಅಲ್ ಜಾಮಿಯಲ್ ಫಾತಿಹ್ ಇಸ್ತಾಂಬುಲ್, ಅಲ್ ಹರಮೈನಿ ಶ್ಶರೀಪೈನಿ ವಿಶ್ವವಿದ್ಯಾಲಯ ಗಳಿಂದ ಜ್ಞಾನ ದಾಹಿಗಳು ಪೊನ್ನಾನಿ ಸಂದರ್ಶಿಸುತ್ತಿದ್ದುದು ಪೊನ್ನಾನಿ ವಿಶ್ವೋತ್ತರವಾಗಿ ಬೆಳೆದ ಉದಾಹರಣೆ ಯಾಗಿದೆ.ಇಷ್ಟೆಲ್ಲಾ ವಿವರಿಸಲು ಕಾರಣ ಸುಮಾರು ಐನೂರು ವರ್ಷಗಳಷ್ಟು ಹಿಂದೆ ಅರಬ್ ಜಗತ್ತನ್ನು ಕೇರಳದ ಕಡೆ ಆಕರ್ಶಿಸಿಸುವಂತೆ ಮಾಡಿದ ಮಹಾನುಭಾವ ರು ಸಾಮಾನ್ಯರಲ್ಲ.
ಮಖ್ದೂಂ ಒಂದನೆಯವರು ಬರೆದ ಮಂಖೂಸ್ ಮೌಲಿದ್ ಪ್ರವಾದಿ (ಸ) ರವರ ಸ್ತುತಿ ಕೀರ್ತನೆಗಳನ್ನು ಜೀವಂತವಾಗಿಸಿದೆ.ಅದು ಒಬ್ಬ ಮುಸ್ಲಿಮನ ಜನನ ಮರಣ,ಬಾಳು ಬದುಕಿನಲ್ಲಿ ಹಾಸುಹೊಕ್ಕಾಗಿ ರುವುದು ಮತ್ತು ಉಳಿದಿರುವುದು ಸಚ್ಚಾರಿತ್ಯವಿರುವ ಇಮಾಮರ ಪ್ರಜ್ಞಾವಂತಿಕೆಯಿಂದಲೇ ಆಗಿದೆ.
ಸಕಾಲದಲ್ಲಿ  ಸಮಸ್ತ ಉಲಮಾ ಸಭೆಯು ಕಾರ್ಯ ಪ್ರವೃತರಾಗಿರುವ ಕಾರಣ ಇಸ್ಲಾಮಿಕ್ ಸಾಹಿತ್ಯ ಕ್ಷೇತ್ರದಲ್ಲಿ ಬಲು ದೊಡ್ಡ ಸವಾಲನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದೆ.
ಮೌಲಿದ್ ಬಗ್ಗೆ ವಿರೋಧಿಗಳು ಎತ್ತುವ ಆರೋಪಗಳಲ್ಲಿ ಪ್ರಮುಖವಾದವುಗಳನ್ನು ಹೀಗೆ ಕಾಣಬಹುದು.

ಮೌಲಿದ್ ಪಾರಾಯಣ ನಬಿ ಕಾಲದಲ್ಲಿ ಇರಲಿಲ್ಲ.

ಕುರಾನ್ ಮತ್ತು ಮೌಲಿದಿನಲ್ಲಿ ವೈರುಧ್ಯಗಳಿವೆ.

ನಬಿಯನ್ನು ಕರೆದು ಅಪೇಕ್ಷಿಸುತ್ತಾರೆ.

ನೆಬಿ ಸ ರ ಕಾಲದಲ್ಲಿ ಮೌಲಿದ್ ಇರಲಿಲ್ಲ ಎನ್ನುವುದು ಹಸಿ ಸುಳ್ಳು. ಮೌಲಿದ್ ಎಂದರೆ ನಬಿ ಕೀರ್ತನೆ, ಗುಣಗಾನ ಮಾಡುವುದಾಗಿದೆ.
ಅದು ಕುರಾನ್ ಹದೀಸುಗಳಲ್ಲಿ ದಾರಾಳವಿದೆ.
 قُلْ بِفَضْلِ اللَّهِ وَبِرَحْمَتِهِ فَبِذَٰلِكَ فَلْيَفْرَحُوا هُوَ خَيْرٌ مِمَّا يَجْمَعُونَ

ಹೇಳಿರಿ: ‘ಇದು ಅಲ್ಲಾಹುವಿನ ಅನುಗ್ರಹ ಮತ್ತು ಕಾರುಣ್ಯದಿಂದಾಗಿದೆ. ಅದರಿಂದಾಗಿ ಅವರು ಸಂಭ್ರಮಪಡಲಿ. ಅವರು ಒಟ್ಟುಗೂಡಿಸಿಡುವುದಕ್ಕಿಂತಲೂ ಇದು ಅತ್ಯುತ್ತಮವಾದುದಾಗಿದೆ’.
ಯೂನುಸ್ ಸೂರ 58 ರ ತಫ್ಸೀರಿನಲ್ಲ فضل ಎಂಬುದು ಅರಿವು   رحمۃ ಎಂದರೆ ಪ್ರವಾದಿಯವರೆಂದು ಇಬ್ನ ಅಬ್ಬಾಸ್ (ರ)ವ್ಯಾಖ್ಯಾನಿಸಿರುವುದನ್ನು ತಫ್ಸೀರ್ ಬಹ್ರುಲ್ ಮುಹೀತಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರವಾದಿ (ಸ) ರ ಗುಣ ಗಾನ ಜಗತ್ತಿನಲ್ಲಿ ಸಂಪಾದಿಸುವ ಸರ್ವಕ್ಕಿಂತಲೂ ಉತ್ತಮವೆಂದು   ತಿಳಿಯಬಹುದು.ಗದ್ಯ
ಪದ್ಯಗಳಲ್ಲಿ ಪ್ರವಾದಿಗಳ ಮಹಾತ್ಮೆ ಯನ್ನು ಕೊಂಡಾಡಲಾಗುತ್ತಿದೆ.ಇಮಾಂ ಬುಖಾರಿ (ರ) ವರದಿ ಮಾಡಿದ ಹದೀಸು ಹೀಗಿದೆ ಆಯಿಷಾ ರ ಹೇಳುತ್ತಾರೆ. ಮದೀನ ಮಸೀದಿಯಲ್ಲಿ ಹಸ್ಸಾನ್ (ರ) ರವರಿಗೆ ಮಿಂಬರನ್ನು ಇಡಲು ಆಜ್ಞಾಪಿಸುತ್ತಿದ್ದರು.ಹಸ್ಸಾನ್ ರ  ಅದರ ಮೇಲೆ ನಿಂತು ನಬಿ ಬಗ್ಗೆ ಮಹತ್ವವನ್ನು ಹೇಳುತ್ತಿದ್ದರು ಮತ್ತು ವಿರೋಧಿಗಳ ಟೀಕೆ ಟಿಪ್ಪಣಿ ಗಳನ್ನು ಪ್ರತಿರೋಧಿಸುತ್ತಿದ್ದರು. ಪ್ರವಾದಿ (ಸ) ರವರು ಪವಿತ್ರ ಆತ್ಮ ಮೂಲಕ ಹಸ್ಸಾನನ್ನು ಬಲಪಡಿಸು ಎಂದು ಪ್ರಾರ್ಥಿಸುತ್ತಿದ್ದರು.
ಈ ಹದೀಸು ಮೂಲಕ ಇಮಾಮ್ ನವವೀ (ರ) ರವರು  ಮಸೀದಿಯಲ್ಲಿ ಪ್ರವಾದಿ ಗುಣಗಾನ ಸುನ್ನತ್ತ್ ಎಂದು ವಿವರಿಸಿದ್ದಾರೆ. (ಶರಹು ಮುಸ್ಲಿಂ.)
ಅಬ್ದುಲ್ಲಾಹಿಬ್ನು ರವಾಹಃ ಪದ್ಯ ಪ್ರವಾದಿ ಕೀರ್ತನೆಯಲ್ಲಿ ಪ್ರಮುಖವಾಗಿದೆ.
أَخْبَرَنَا يُونُسُ ، عَنِالزُّهْرِيِّ ، عَنِ الْهَيْثَمِ بْنِ أَبِي سِنَانٍ ، قَالَ : رَأَيْتُ أَبَا هُرَيْرَةَيَوْمَ جُمُعَةٍ يَقُصُّ قَائِمًا ، فَقَالَ فِي قَصَصِهِ : " إِنَّ أَخًا لَكُمْ كَانَ لَا يَقُولُ الرَّفَثَ يَعْنِي عَبْدُ اللَّهِ بْنُ رَوَاحَةَ ، فَقَالَ :
وَفِينَا رَسُولُ اللَّهِ يَتْلُو كِتَابَه
ُ إِذَا انْشَقَّ مَعْرُوفٌ مِنَ الْفَجْرِ سَاطِع
ُ أَرَانَا الْهُدَى بَعْدَ الْعَمَى فَقُلُوبُنَا
بِهِ مُوقِنَاتٌ أَنَّ مَا قَالَ وَاقِعُ
 يَبِيتُ يُجَافِي جَنْبَهُ عَنْ فِرَاشِه إِذَا اسْتَثْقَلَتْ بِالْكَافِرِينَ الْمَضَاجِعُ " . صَحِيحٌ رَوَاهُ الْبُخَارِيُّ .

ಅಬ್ದುಲ್ಲಾಹಿಬ್ನು ರವಾಹಃ ಬಗ್ಗೆ ನಬಿಯವರು ಹೇಳಿದ್ದನ್ನು ಅಬೂ ಹುರೈರ  ರ ಜ್ಞಾಪಿಸುತ್ತಾರೆ.
ನಿಮ್ಮ ಸಹೋದರ ಸುಳ್ಳು ಹೇಳುವ ವ್ಯಕ್ತಿಯಲ್ಲ.
ನಂತರ ಅವರು ಹೇಳಿದ ಪದ್ಯವನ್ನು ಹೇಳುತ್ತಾರೆ.

ಪ್ರಭಾತ ಸಮಯ ನಬಿಯವರು ಕುರಾನ್ ಪಠಿಸುತ್ತಾರೆ.ಕತ್ತಲೆಯ ನಂತರ ನಾವು ಬೆಳಕನ್ನು ಕಂಡೆವು.ಅವರು ಹೇಳಿದ್ದೇಲ್ಲವೂ ಘಟಿಸುತ್ತದೆ.ಜನ ಗಾಢವಾದ ನಿದ್ರೆಯಲ್ಲಿ ರುವಾಗ ನಬಿಯವರು ಹಾಸಿಗೆಯಿಂದ ಎದ್ದು ನಮಾಜಿನಲ್ಲಿ ಮಗ್ನರಾಗುತ್ತಾರೆ.

(ಪದ್ಯದ ಭಾವಾನುವಾದ)

ಉಂರತುಲ್ ಖಳಾ ಸಮಯ ನಬಿ ಬಳಿ ಅಬ್ದುಲ್ಲಾಹಿಬ್ನು ರವಾಹಃ ಪದ್ಯ ಹೇಳುತ್ತಾರೆ.

خَلُّوا بَنِي الْكُفَّارِ عَنْ سَبِيلِه
ِ الْيَوْمَ نَضْرِبْكُمْ عَلَى تَنْزِيلِهِ
 ضَرْبًا يُزِيلُ الْهَامَ عَنْ مَقِيلِهِ وَيُذْهِلُ الْخَلِيلَ عَنْ خَلِيلِهِ
فَقَالَ لَهُ عُمَرُ : يَابْنَ رَوَاحَةَ , بَيْنَ يَدَيْ رَسُولِ اللَّهِ , صَلَّى اللَّهُ تَعَالَى عَلَيْهِ وَسَلَّمَ ، وَفِي حَرَمِ اللَّهِ تَقُولُ شِعْرًا ؟ فَقَالَ النَّبِيُّ , صَلَّى اللَّهُ تَعَالَى عَلَيْهِ وَسَلَّمَ : خَلِّ عَنْهُ يَا عُمَرُ ، فَلَهِيَ أَسْرَعُ فِيهِمْ مِنْ نَضْحِ النَّبْلِ . .
ಪ್ರವಾದಿ ಒಂಟೆಯ ಲಗಾಮು ಹಿಡಿದು ಈ ಹಾಡನ್ನು ಹೇಳಿದಾಗ ಉಮರ್ (ರ) ಪ್ರಶ್ನಿಸುತ್ತಾರೆ ನಬಿಯವರ ಬಳಿ ಮತ್ತು ಹರಮಿನಲ್ಲಿ ನೀವು ಹಾಡುವುದೇ ?ಆಗ. ನಬಿಯವರು ಅವರನ್ನು ಬಿಡಿ‌ ಅವರ ಹಾಡು ಬಾಣಕ್ಕಿಂತ ಶಕ್ತಿಶಾಲಿ ಯಾಗಿದೆ.( ತಿರುಮುದಿ 2847)
ಕ‌ಅಬ್ ಇಬ್ನು ಝುಹೈರ್ ನಬಿಯ ಪರಮ ವೈರಿಯಾಗಿದ್ದರು.ಅವರ ಪದ್ಯವು ತೀರ ಅಸಹ್ಯವಾಗಿ ಕಂಡಾಗ ಅವರನ್ನು ವಧಿಸಲು ನಬಿಯವರು ಆಜ್ಞಾಪಿಸುತ್ತಾರೆ.
ಇದನ್ನರಿತ ಕ‌ಅಬ್  ವೇಷ ಬದಲಿಸಿ ನಬಿಯವರ ಬಳಿ ಬಂದು ಹಾಡುತ್ತಾರೆ.
إنّ الرسول لنور يستضاء به...مهند من سيوف الله مسلول
ಈ ಜಾಗ ತಲುಪಿದಾಗ ನಬಿಯವರು ತನ್ನ ಶಾಲನ್ನು ಹೊದಿಸುತ್ತಾರೆ.
ಆ ಶಾಲನ್ನು ಮುಆವಿಯಾ (ರ) ಕ‌ಅಬ್ (ರ) ಮಕ್ಕಳಿಂದ ಖರೀದಿಸುತ್ತಾರೆ.ನಂತರ ಅದನ್ನು ಅಬ್ಬಾಸಿಯಾ ಆಡಳಿತಾಧಿಕಾರಿಗಳು ಹಬ್ಬದ ದಿನಗಳಲ್ಲಿ ಧರಿಸುತ್ತಿದ್ದರು.ಬಗ್ದಾದ್ ನಗರವನ್ನು ಮುಘಲ್
ಅಕ್ರಮಿಸಿದಾಗ ಅಬ್ಬಾಸೀ ಆಡಳಿತ ಕೊನೆಗೊಂಡಿತು.ಆಗ ಅಬ್ಬಾಸಿಗಳಿಂದ  ಮುಘಲರು ಆ ಶಾಲನ್ನು ವಶಪಡಿಸಿಕೊಳ್ಳುತ್ತಾರೆ. ಅದನ್ನು ಬೆಂಕಿಗೆ ಹಾಕಿದಾಗ ಅದು ಸುಡಲಿಲ್ಲ.ಇದೀಗ ಅದು ಇಸ್ತಾಂಬುಲಿನಲ್ಲಿ  ಸಂರಕ್ಷಿಸಲಾಗುತ್ತಿದೆ. ಇಮಾಮ್ ಬೂಸ್ವೀರಿ (ರ) ರವರು ವಾತ ರೋಗದಿಂದ ಬಳಲುತ್ತಿದ್ದಾಗ ಪ್ರವಾದಿ ಸ್ನೇಹದ ಬಗ್ಗೆ ಅತ್ಯುನ್ನತ ಪದ್ಯ ರಚನೆ ಮಾಡಿದ ನಿಮಿತ್ತವಾಗಿ ಪ್ರವಾದಿಯು ಕನಸಿನಲ್ಲಿ ಶಾಲನ್ನು ಹೊದಿಸಿದ ಮತ್ತು ಆ ಮೂಲಕ ಸಂಪೂರ್ಣ ಗುಣಮುಖರಾದ ಘಟನೆ ಇಲ್ಲಿ ಗಮನಿಸಬಹುದು.
ಉಳಿದ ಭಾಗ ಮುಂದಿನ ವಾರದಲ್ಲಿ ನಿರೀಕ್ಷಿಸೋಣ.ಇನ್ಷಾ ಅಲ್ಲಾಃ.
ವರದಿ ಅಲ್ ಅಹ್ಸನ್ ಮಾಸಿಕ

ಕ್ರೌರ್ಯ ತುಂಬಿದ ಜಗತ್ತಿಗೆ ಪ್ರವಾದಿಯವರ ಮಾದರಿಯಾಗಿ ಶಾಂತಿಯ ಪಾಠ ಹೇಳಿ ಕೊಡೋಣ


ಭಾರತ ಜಗ ಶ್ರೇಷ್ಠ ವಾದದ್ದು   ಆತ್ಮಜ್ಞಾನ,ನಾಗರೀಕತೆಯಿಂದ ಉಳಿದ ಮಾನವೀಯತೆಯ ಕಾರಣಕ್ಕೆ
ಭಾಷಣ 🎤ಮೌಲಾನಾ ಯು. ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು
    By: AL Ahsan

ಕುರಾನ್ ಹೇಳುತ್ತದೆ.

لَقَدْ كَانَ لَكُمْ فِي رَسُولِ اللَّهِ أُسْوَةٌ حَسَنَةٌ لِمَنْ كَانَ يَرْجُو اللَّهَ وَالْيَوْمَ الْآخِرَ وَذَكَرَ اللَّهَ كَثِيرًا

ಖಂಡಿತವಾಗಿಯೂ ನಿಮಗೆ ಅಲ್ಲಾಹುವಿನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಂದರೆ ಅಲ್ಲಾಹುವನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹುವನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ.

ಅಮೇರಿಕದಲ್ಲಿ ಒಬ್ಬ ಐವತ್ತೆಂಟು ಮಂದಿ ಅಮಾಯಕರ ಮೇಲೆ ಗುಂಡಿನ ಮಳೆಗೆರೆದು ಕೊಂದು ಹಾಕಿದ ಅವನು ಸ್ಟೀಫನ್.
ಅದು ಅಮೇರಿಕಾ ಅಂತ ಸುಮ್ಮನಿರಬಹುದೇ ?

ನಿರ್ಭಯಾ ಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕ್ರೂರವಾಗಿ ಹತ್ಯೆಮಾಡಿದಾಗ ಜನಾರೋಷ ಎದ್ದು ಪ್ರತಿಭಟನೆ ನಡೆಯಿತು!ನಂತರ ತಣ್ಣಗಾಯಿತು?ಅತ್ಯಾಚಾರ ಕೊನೆಯಾಗಲಿಲ್ಲ.!

 ಗೋ ರಕ್ಷಣೆಯ ಗುಂಪು  ಅಖ್ಲಾಕ್ ಮತ್ತು ಅನೇಕರನ್ನು ಕೊಂದಾಗಲೂ ಅಸಹಿಷ್ಞುತೆಯ ಕೂಗು ದೇಶದಾದ್ಯಂತ ಎದ್ದಿತು ಮತ್ತೆ ತಣ್ಣಗಾಯಿತು, ?

ಹದಿಹರೆಯದ ಜುನೈದನನ್ನು ರೈಲಲ್ಲಿ ಅಮಾನುಷವಾಗಿ ಕೊಂದು ಹಾಕಿದಾಗ ಜಂತರ್ ಮಂತರ್ ದೇಶವೇ ನಡುಗುವಂತೆ ಹೇಳಿತು "NOT IN MY NAME" ಆನಂತರ ಸುಮ್ಮನಾಯಿತು.

ಅಸಹಿಷ್ಣುತೆಯ ಕಾರಣ ಅನೇಕ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದಿರುಗಿಸಲಾಯಿತು.ಆದರೂ ‌ ಪತ್ರಕರ್ತೆಯ ಸವಕಲು ದೇಹ ಮನೆ ಗೇಟಲ್ಲಿ ಜನರ ಮಧ್ಯೆ ಗುಂಡಿಗೆ ಬಲಿಯಾಯಿತು. ಅಲ್ಲಿ ಯೂ ಬ್ರಹತ್ ಪ್ರತಿಭಟನೆ ನಡೆಯಿತು.ಮುಂದೇನಾಯಿತು ?
 
ಮೊನ್ನೆ ರಾಜಸ್ತಾನಲ್ಲಿ ಶ್ಲೋಕ ಹಾಡಿದ ಅಹಮದನನ್ನು ಗುಂಪು ಕೊಂದಿತು.ಆ ಕಾರಣ ಅಲ್ಲಿಂದ ಇನ್ನೂರಕ್ಕಿಂತಲೂ ಹೆಚ್ಚು ಮುಸ್ಲಿಂ ಕುಟುಂಬ ಊರು ತೊರೆದು ಹೋಗುತ್ತಿದೆ .

ಇದೂ ಅಲ್ಲದೇ ಪ್ರತೀ ಮನೆಮನೆಯಲ್ಲಿ ಹರಿತವಾದ ತಲವಾರು ಕತ್ತಿ ಇಟ್ಟು ಸಿದ್ದ ರಾಗಿ ಎಂದು ಕರೆ ನೀಡಲಾಗುತ್ತದೆ.

ಇದೀಗ ಬೇಕಿರೋದು ಹೇಳಿ,ಕೂಗಿ ಪ್ರಯೋಜನ ವಿಲ್ಲವೆಂದಾಗ ಏನು ಮಾಡಬೇಕೆನ್ನುವುದಾಗಿದೆ.


ಈ ದೇಶ ಹಿಂಸೆಯತ್ತಾ ಮುಖ ಮಾಡಿದೆಯಾ ? ಮಂದಿರ, ಮಸೀದಿ, ದ್ಯಾನ ಜಪ ತಪ ಕೇಂದ್ರಗಳು ಅರ್ಥವನ್ನು ಕಳಕೊಂಡಿದೆಯಾ  ?
ಬೋಧನೆ,ಪ್ರವಚನಗಳು,
ಧರ್ಮನೀತಿ ತತ್ವಗಳು ಅಪ್ರಸ್ತುತ ವಾಯಿತೆ ?
ಶಾಂತಿದೂತರ, ಮಾಹಾನುಭಾವರ,ಸಾತ್ವಿಕರ,
ದರ್ಶನಗಳು ಅರ್ತಹೀನವಾಯಿತೇ ?
ಅದೆಲ್ಲಾ ಬಿಟ್ಟು ಬಿಡೋಣವೆಂದರೂ
ಆಧುನಿಕ ಶಿಕ್ಷಣಗಳಿಂದಾಗುವ ಪರಿಣಾಮಗಳೇನು ?
ಶಿಕ್ಷಣಕ್ಕಾಗಿ ಇಂದು ಬದುಕಿನ ಬಹುಮುಖ್ಯ ಭಾಗವನ್ನು ವ್ಯಯಿಸಲಾಗುತ್ತಿದೆ.ಆದರೆ ಆ ಶಿಕ್ಷಣವೂ ಜನರಿಗೆ ಮಾನವೀಯತೆಯನ್ನು ಕಲಿಸುತ್ತಿದೆಯೇ ?ಶಿಕ್ಷಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡುವ ರೀತಿಯಲ್ಲಿ
ಸಿದ್ದಪಡಿಸಲಾಗುತ್ತದೆ.ಆದರೆ ನಾಳೆಯ ಭವಿಷ್ಯದಲ್ಲಿ ಭಯ ,ಆತಂಕ ಅಭದ್ರತೆ,ಅಸಹಿಷ್ನುತೆ ಇಲ್ಲದ ನಾಡಲ್ಲಿ ನಮ್ಮ ಮಕ್ಕಳು ಕೂಡಿ ಬಾಳಬಹುದೇ ?ಸ್ವಾಸ್ಥ್ಯ ಸಮಾಜದಲ್ಲಿ ನಮ್ಮ ಮುಂದಿನ ಜನ ಬಾಳಬಹುದೇ ?
ಇನ್ನು ಈ ದೇಶವನ್ನು ಜಗತ್ತಿನ ಶ್ರೇಷ್ಠ ದೇಶವಾಗಿ ಜಗತ್ತು ಪರಿಗಣಿಸಿದ್ದು ಇಲ್ಲಿಯ ಜನಸಾಮಾನ್ಯರು  ಅನುಭವಿಸುವ ಶ್ರೀಮಂತಿಕೆಯ ಕಾರಣವೇ ? ಅಲ್ಲ
ರೋಗ ರುಜಿನಗಳಿಂದ ಮುಕ್ತವಾದ ದೇಶ ಅನ್ನುವ ಉದ್ದೇಶಕ್ಕಾಗಿಯೇ ? ಇಲ್ಲವೇ ಅತ್ಯುನ್ನತ ವಾದ ಸ್ವಚ್ಚ ಪರಿಸರವೆನ್ನುವ ಹೆಗ್ಗಳಿಕೆಗಾಗಿಯೇ ?    ಎಲ್ಲಾ ಸಮಸ್ಯೆಗಳಿಂದ ಮುಕ್ತವಾದ ರಾಷ್ಟ್ರ ಎನ್ನುವುದಕ್ಕಾಗಿಯೇ ?
ಕಳ್ಳ ,ದರೋಡೆ ಕೋರ,ಅತ್ಯಾಚಾರಿ,ಕೊಲೆಗಟುಕ ದುಷ್ಟರ ಯಾವುದೇ ತಂಟೆಗಳಿಲ್ಲದ ನಾಡು ಎಂಬ ಕಾರಣಕ್ಕಾಗಿ ಯೇ ?
ಕ್ಲೇಶಗಳಿಲ್ಲದ ಸ್ವಾಸ್ಥ್ಯ ಸಮಾಜದ ಮಧ್ಯೆ ಬದುಕಬಹುದೆಂಬ ಕಾಳಜಿಗಾಗಿಯೇ ?
ಇದೆಲ್ಲವನ್ನೂ ಗುರುತಿಸಲು ಅಸಾದ್ಯವಾಗಬಹುದು. ಆದರೆ ಈ ದೇಶ ಎದ್ದು ನಿಲ್ಲುವುದು ಧಾರ್ಮಿಕತೆಯಿಂದ ಪಡೆದ ಆತ್ಮ ಜ್ಞಾನ, ಮತ್ತು ನಾಗರೀಕತೆಯಿಂದ ಉಳಿದ ಮಾನವೀಯತೆಯ ಕಾರಣಗಳಿಗಾಗಿ ಮಾತ್ರ. ಬೇರೆ ಎಲ್ಲಾ ದೇಶಗಳಿಗಿಂತ ದೊಡ್ಡದಾದ ಮನುಷ್ಯತ್ವದ ಭೂಮಿಕೆಯನ್ನು ಹಾಗೂ ಬಲಿಷ್ಟವಾದ ಸಂವಿಧಾನ ಮೂಲಕ ಪ್ರಜಾತಂತ್ರವನ್ನೂ ಜಗತ್ತಿಗೆ ಸಾರಿದ್ದು ನಮ್ಮ ದೇಶ.
ಆದರೆ ಇಂದು ಕ್ರೌರ್ಯ ಮೆರೆಯುತ್ತಿದೆ.ಅಶಾಂತಿ ಬೆಳೆಯುತ್ತಿದೆ.
ಇಂತಹಾ ಸಂದರ್ಭದಲ್ಲಿ ನಾವು ಸರ್ವಶ್ರೇಷ್ಠ ಧರ್ಮದ ಅನುಯಾಯಿಗಳಾಗಿ,ಗತಿಸಿಹೋದ ಮಹಾನ್ ಚೇತನಗಳು ಅನುಸರಿಸಿದ ಆದರ್ಶದ ಮೂಲಕ ಪ್ರವಾದಿ (ಸ) ರವರ ಶಾಂತಿಯ ರಾಯಭಾರಿಗಳಾಗಿ ಪ್ರತಿಯೊಬ್ಬ ಮಸಲ್ಮಾನ ಬದಲಾಗಬೇಕಾಗಿದೆ.ನಿಯಮ ಕಾನೂನುಗಳು, ನೀತಿ ಪಾಠಗಳು,ಕಾರಾಗ್ರಹಗಳು,ಸೋತು ನಿಂತಾಗ ಸಮಾಜಕ್ಕೆ ದೀಪಸ್ತಂಭ ವಾಗಿ ಇಸ್ಲಾಂ ಬೆಳಕು ನೀಡಬೇಕು.ಆ ಮೂಲಕ ವಿರೋಧಿಗಳಿಗೆ, ಅತಿಕ್ರಮಿಗಳಿಗೆ  ಹೊಸ ದಾರಿಯನ್ನು ತೋರಲು ಮುಸ್ಲಿಂ ಸಮುದಾಯಕ್ಕೆ ಸಾಧ್ಯವಾಗಬೇಕು.ಇಸ್ಲಾಮನ್ನು ಪರಿಚಯಿಸಲು ಇದಕ್ಕಿಂತ ದೊಡ್ಡ ಅವಕಾಶ ಬೇರೆ ಇರಲಿಕ್ಕಿಲ್ಲ.ಪ್ರವಾದಿ ಆಗಮನದ
ಏಳನೇಯ ಶತಮಾನ ಕ್ರೌರ್ಯ ಗಳಿಂದಲೇ ತುಂಬಿ ಹೋಗಿತ್ತು.
ಕುರಾನ್ ಹೇಳುತ್ತದೆ.
كُنْتُمْ خَيْرَ أُمَّةٍ أُخْرِجَتْ لِلنَّاسِ تَأْمُرُونَ بِالْمَعْرُوفِ وَتَنْهَوْنَ عَنِ الْمُنْكَرِ وَتُؤْمِنُونَ بِاللَّهِ(3-10)

ನೀವು ಮನುಕುಲಕ್ಕಾಗಿ ಹೊರತರಲಾಗಿರುವ ಉತ್ತಮ ಸಮುದಾಯವಾಗಿರುವಿರಿ. ನೀವು ಸದಾಚಾರ ವನ್ನು ಆದೇಶಿಸುತ್ತಿರುವಿರಿ, ದುರಾಚಾರವನ್ನು ವಿರೋಧಿಸು ತ್ತಿರುವಿರಿ ಮತ್ತು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವಿರಿ.(3-10)
ಸದಾಚಾರದ ಉತ್ತಮ ರಾಯಭಾರಿಯಾಗಿ ನಾವು ಕಾರ್ಯಾಚರಿಸಬೇಕಾಗಿದೆ.
ಇನ್ನು ಕೆಡುಕನ್ನು ಕೆಡುಕಿನಿಂದ ಎದುರಿಸಲಾಗದು.ಜಗತ್ತಿನಲ್ಲಿ ಅನೇಕ ಹೋರಾಟಗಳು ದಾರಿ ತಪ್ಪುವುದು ಇಂತಹಾ ಸಂದರ್ಭಗಳಲ್ಲಿ ಆಗಿರುತ್ತದೆ.ಶಕ್ತಿ ಪ್ರದರ್ಶನಕ್ಕಿಂತ ಪರಿಣಾಮಕಾರಿ ಬುದ್ಧಿವಂತಿಕೆ ತೋರುವುದಾಗಿದೆ.ಮದವೇರಿದ ಆನೆಯನ್ನು ಪಳಗಿಸುವ,ಅಶ್ವಾರೋಹಿ ಯಾಗಿ ಬಲಿಷ್ಟ ಕುದುರೆಗೆ ಕಡಿವಾಣ ಹಾಕುವ ಮನುಜ,
ನಿಖರ ಗುರಿ ಮೂಲಕ ಕ್ಷಣಮಾತ್ರದಲ್ಲಿ ಬೇಟೆಯನ್ನು ಮುಗಿಸಿ ಬಿಡುವ ಹುಲಿ,ಸಿಂಹಗಳನ್ನೂ ತನ್ನ ಚಮತ್ಕಾರದಿಂದ ವಶೀಕರಿಸುವ ಮನುಷ್ಯನಿಗೆ ಬುಧ್ದಿ,ವಿವೇಕ,ಶಿಕ್ಷಣ ವಿರುವ ಸಮಾಜ ವನ್ನು ಸಂವೇದನಾಶೀಲ ವರ್ತನೆ ಮೂಲಕ ಋಜುವಾದ ದಾರಿಯೇಡೆಗೆ  ಆಕರ್ಶಿಸಬಹುದು.ಆಮೂಲಕ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.ಕುರಾನ್ ಹೀಗೆ ಹೇಳುತ್ತದೆ.
وَلَا تَسْتَوِي الْحَسَنَةُ وَلَا السَّيِّئَةُ ۚ ادْفَعْ بِالَّتِي هِيَ أَحْسَنُ فَإِذَا الَّذِي بَيْنَكَ وَبَيْنَهُ عَدَاوَةٌ كَأَنَّهُ وَلِيٌّ حَمِيمٌ

ಒಳಿತು ಮತ್ತು ಕೆಡುಕು ಸಮಾನವಾಗಲಾರದು. ಅತ್ಯುತ್ತಮವಾದುದು ಯಾವುದೋ ಅದರ ಮೂಲಕ ತಾವು (ಕೆಡುಕನ್ನು) ತಡೆಯಿರಿ. ಆಗ ಯಾರ ಮತ್ತು ತಮ್ಮ ಮಧ್ಯೆ ಶತ್ರುತ್ವವಿದೆಯೋ ಅವನು (ತಮ್ಮ) ಆಪ್ತ ಮಿತ್ರನೋ ಎಂಬಂತೆ ಮಾರ್ಪಡುವನು.
ತಸ್ಲೀಮಳಂತ ತಲೆಹಿಡುಕ ಕೂಟಕ್ಕೆ ಮಾತ್ರ ಕುರಾನ್ ಬಗ್ಗೆ ಅಸಹಜ ಅಸಹನೆ ಮತ್ತುಅಸೂಯೆ ಇದೆ ಎಂದು ಒಪ್ಪಿಕೊಳ್ಳಲೇ ಬೇಕು.
ಆದರೆ ಇಸ್ಲಾಮಿನ ದರ್ಶನ ವನ್ನು ಸಮಾಜಕ್ಕೆ ತಲುಪಿಸಲು ನಮ್ಮಿಂದ ಆಗಬೇಕು.
ಕೇರಳದ ಉಗ್ರ ಮತಾಂಧ ದ್ವೇಷ ಭಾಷಣದ ಬೆಂಕಿ ಉಗುಳುವ  ಟೀಚರ್ ಮನೆಗೆ ಹೋಗಿ ಇಸ್ಲಾಮಿನ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಾಲಾಡಿಸಲು ಪ್ರಯತ್ನ ಪಟ್ಟ ಎಸ್ ಕೆ ಎಸ್ ಎಸ್  ಎಫ್ ನ ಮಾದರಿ ನಮಗೆ ಅನುಕರಣೀಯ.ಅಲ್ಲಿಂದ ಗೌರವದೊಂದಿಗೆ ಆತಿಥ್ಯ ಸ್ವೀಕರಿಸಿ ಉಪಹಾರ ಸ್ವೀಕರಿಸಿ ಬಂದಿದ್ದರೆ ಅದು ಸಮಸ್ತ ಪೋಷಕ ಸಂಘಟನೆಯ ಶಕ್ತಿಯಾಗಿದೆ‌. ಅದಲ್ಲದೇ ಹಿಂಸೆಗೆ ಹಿಂಸೆ ,ತಲವಾರಿಗೆ ತಲವಾರು ಪರಿಹಾರವಲ್ಲ.
 ಹಝ್ರತ್ ಉಮರ್( ರ ) ಪ್ರವಾದಿಯ ರುಂಡ ಕತ್ತರಿಸಲು ಮುಂದಾಗಿ ಬಂದಿಧ್ದರು ಎನ್ನುವುದಂತು ಸತ್ಯ ಆದರೆ ಅವರನ್ನು ತಡೆಯುವ ಯಾವುದೇ  ಶಕ್ತಿ ಸಾಮರ್ಥ್ಯ  ನಬಿಯವರಿಗೆ ಇರಲಿಲ್ಲ. ಆದರೆ ಉಮರ್( ರ )ರವರ ಬಲಿಷ್ಟ ತಾಕತ್ತು ಕುರಾನಿನ ಎರಡು ಸೂಕ್ತಗಳಲ್ಲಿ ಕರಗಿ ಹೋಯಿತು.

 طه مَا أَنْزَلْنَا عَلَيْكَ الْقُرْآنَ لِتَشْقَىٰ

ತಾವು ಕಷ್ಟಪಡಬೇಕೆಂದು ನಾವು ತಮಗೆ ಕುರ್ ಆನ್ ನನ್ನು ಅವತೀರ್ಣಗೊಳಿಸಿಲ್ಲ

 إِلَّا تَذْكِرَةً لِمَنْ يَخْشَىٰ

ಇದು ಭಯಪಡುವವರಿಗಿರುವ ಒಂದು ಉಪದೇಶ ಮಾತ್ರವಾಗಿದೆ.

تَنْزِيلًا مِمَّنْ خَلَقَ الْأَرْضَ وَالسَّمَاوَاتِ الْعُلَى

ಇದು ಭೂಮಿಯನ್ನು ಮತ್ತು ಉನ್ನತವಾದ ಆಕಾಶಗಳನ್ನು ಸೃಷ್ಟಿಸಿದವನ ಬಳಿಯಿಂದ ಅವತೀರ್ಣ ಗೊಂಡಿರುವುದಾಗಿದೆ.

[ತ್ವಾಹಾ : 1 - 4]
ಆ ಕುರಾನಿನ ಸಂದೇಶಗಳನ್ನು ಮನುಕುಲಕ್ಕೆ ತಲುಪಿಸಬೇಕಾಗಿದೆ.
ಹಾಗೇ   ಸುರಾಖಾಃ ಕುದುರೆ ಮೇಲೆ ಏರಿ ಬಂದರೂ ಕೈಗಟುಕುವ ಸನಿಹದಲ್ಲಿ ಇದ್ದರೂ ಪ್ರವಾದಿಯನ್ನು ಸ್ಪರ್ಶಿಸಲು ಸಾದ್ಯವಾಗಲಿಲ್ಲ.
ಹದಿಮೂರು ವರ್ಷಗಳ ಕಾಲ ಕ್ರೂರವಾಗಿ ಕೊಲ್ಲುವ,ಜೀವಂತ ಮನುಷ್ಯ ಮಕ್ಕಳನ್ನು ಹೂಳುವ,ಹೆಣ್ಣುಮಕ್ಕಳನ್ನು ಬೇಕೆಂದೆನಿಸಿದಾಗ ಬೋಗಿಸಲಿಕ್ಕಿರುವ ವಸ್ತುವಾಗಿ ಬಳಸಿಕೊಳ್ಳುವ ಕಾಲದಲ್ಲಿ ಪ್ರವಾದೀ (ಸ)ರವರು ಸತ್ಯ ಸಂದೇಶಗಳನ್ನು ನೀಡುತ್ತಾರೆ.
ಅಲ್ಲಾಹನ ದಾರಿಯನ್ನು ಕೊಡುತ್ತಾರೆ.ಆದರೆ ಜನರಿಂದ ಅವರಿಗೆ ಸಿಕ್ಕಿದ್ದು  ಊರಿನಿಂದಲೇ ಪಲಾಯನ ಮಾಡ ಬೇಕಾದ ಪರಿಸ್ಥಿತಿ. ಊರು ತೊರೆದು ಹೋಗುವಾಗಲೂ ಬೆಂಬಿಡದೇ ಸುರಾಖಾಃ ಹಿಂಬಾಲಿಸುತ್ತಾರೆ.ಸುರಾಖಾಃ ಕಿನಾನಃ ಗೋತ್ರದ ನಾಯಕರಾಗಿದ್ದರು. ಪ್ರವಾದೀ ಇನ್ನೇನು ಕೈಗೆ ಸಿಕ್ಕಿ ಬಿಟ್ಟರು ಎನ್ನುವಷ್ಟರಲ್ಲಿ ಅವರ ಕುದುರೆಯ ಕಾಲು ಭೂಮಿಯಲ್ಲಿ ಹೂತು ಹೋಗುತ್ತದೆ.ಕಡೆಗೆ ಯಾವುದೇ ದಾರಿ ಇಲ್ಲದೇ ರಕ್ಷಿಸಲು ಬೇಡುತ್ತಾರೆ.
ಪ್ರವಾದಿ (ಸ) ರವರ ಪ್ರಾರ್ಥನೆ ಮೂಲಕ ಸುರಾಖಾಃ ಬಚವಾಗುತ್ತಾರೆ.ಆಗ ನಬಿ ಹೇಳುತ್ತಾರೆ.

كيف بك إِذا لبست سِوَارَيْ كسرى ومِنْطَقَتَه وتاجه، فقال سراقة: كسرى بن هرمز؟ فقال رسول الله: نعم
ಸುರಾಖಾ ಕಿಸ್ರಾ ರಾಜನ ಬಳೆ,ಕಿರೀಟ,ಮತ್ತು ಸೊಂಟದ ಪಟ್ಟಿಯನ್ನು ನಿಮಗೆ ಧರಿಸಲ್ಪಟ್ಟಾಗ ಹೇಗೇ ?

ಕಿಸ್ರಾ ರಾಜನೇ ? ಸುರಾಖಾ ಪ್ರಶ್ನೆ.
ನಬಿ ಸ ಹೇಳಿದರು ಹೌದು.
(ನಂತರ ಖಲೀಫಾ ಉಮರ್ ರ ಕಾಲ ಮದಾಯಿನ್ ಕೈವಶ ವಾದಾಗ ಕಿಸ್ರಾ ರಾಜನ ಬಳೆ,ಕಿರೀಟ ವನ್ನು ಖಲೀಫಾ ರವರು ಸುರಾಖಾ (ರ) ತೊಡಿಸುತ್ತಾರೆ.)
ಹೀಗೆ ಅಲ್ಲಾಹನ ಧರ್ಮದ ಕಾರ್ಯವನ್ನು ಆತ ಸರಿಯಾಗೇ ನಿರ್ವಹಿಸಿದ್ದಾನೆ. ಅಲ್ಲಾಹನಿಗಾಗಿ  ಕರ್ಮ ಮಾಡುವವನು  ಆತನ ಧರ್ಮದ ನೆಲೆಯಲ್ಲಿ ಗಟ್ಟಿಯಾಗೀ ನಿಲ್ಲಬೇಕಾಗಿದೆ.
ಅಲ್ಲಾಹನು ಹೇಳುತ್ತಾನೆ.

يَا أَيُّهَا الَّذِينَ آمَنُوا إِنْ تَنْصُرُوا اللَّهَ يَنْصُرْكُمْ وَيُثَبِّتْ أَقْدَامَكُمْ

ಓ ಸತ್ಯವಿಶ್ವಾಸಿಗಳೇ!, ನೀವು ಅಲ್ಲಾಹುವಿಗೆ ಸಹಾಯ ಮಾಡುವುದಾದರೆ ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಅಚಲವಾಗಿ ನಿಲ್ಲಿಸುವನು.
ಅಲ್ಲಾಹನಿಗೆ ಸಹಾಯ ಮಾಡುವುದೆಂದರೆ ನಾವು ಉತ್ತಮ ಆದರ್ಶ ವ್ಯಕ್ತಿಗಳಾಗಿ ವರ್ತಿಸುವುದಾಗಿದೆ.

يَا أَيُّهَا الَّذِينَ آمَنُوا كُونُوا قَوَّامِينَ لِلَّهِ شُهَدَاءَ بِالْقِسْطِ ۖ وَلَا يَجْرِمَنَّكُمْ شَنَآنُ قَوْمٍ عَلَىٰ أَلَّا تَعْدِلُوا ۚ اعْدِلُوا هُوَ أَقْرَبُ لِلتَّقْوَىٰ ۖ وَاتَّقُوا اللَّهَ ۚ إِنَّ اللَّهَ خَبِيرٌ بِمَا تَعْمَلُونَ

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿಗೋಸ್ಕರ ನೆಲೆಗೊಳ್ಳುವವರೂ, ನ್ಯಾಯಕ್ಕೆ ಸಾಕ್ಷಿವಹಿಸುವವರೂ ಆಗಿರಿ. ಒಂದು ಜನತೆಯೊಂದಿಗಿರುವ ಕ್ರೋಧವು ನ್ಯಾಯ ಪಾಲಿಸದಿರಲು ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯ ಪಾಲಿಸಿರಿ. ಅದು ಧರ್ಮನಿಷ್ಠೆಗೆ ಅತ್ಯಂತ ನಿಕಟವಾಗಿದೆ. ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.

ಒಂದು ವೇಳೆ ನಾವೇ ಅಕ್ರಮಿಗಳು ಮತ್ತು ಅನಾಚಾರಿಗಳಾದರೆ ಜಯಿಸಲು  ಸಾದ್ಯ ವಾಗದು.
(ಅಲ್ಮಾಯಿದಾ :೮)
ವರದಿ ಅಲ್ ಅಹ್ಸನ್ ಮಾಸಿಕ

ರಕ್ತದ ಹೆಸರಲ್ಲಿ ರಾಜಕೀಯ ಮಾಡುವ ಬದಲು ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ ನಡೆಯಲಿ.



ಮನುಷ್ಯನನ್ನು ಮುಗಿಸುವ ಮಾದಕ ಮಾಫಿಯಾದ ವಿರುದ್ಧ ಯಾಕೆ ಹೋರಾಟ,ಪ್ರತಿಭಟನೆಗಳು ನಡೆಯಲ್ಲ?
ಭಾಷಣ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಜಗತ್ತಿನಲ್ಲಿ ಕೋಟ್ಯಾನು ಕೋಟಿ ಜೀವ ಸಂಕುಲವನ್ನು ಸೃಷ್ಟಿಸಿದ ಅಲ್ಲಾಹನು ಯಾವ ಜೀವಿಗೂ ಕೊಡದೇ ಮನುಷ್ಯನಿಗೆ ಮಾತ್ರ ಕೊಟ್ಟ ಅತ್ಯಮೂಲ್ಯ ವಸ್ತು ಬುದ್ಧಿ ಎನ್ನುವುದಾಗಿದೆ.ಅದನ್ನು ಕೈಯಿಂದ ಜಜ್ಜಲಾಗದು,ಕತ್ತಿಯಿಂದ ಕೊಯ್ಯಲಾಗದು ಅಂತಹಾ ಬುದ್ಧಿಯನ್ನು ಅಮಲು ಉಪಯೋಗಿಸಿ ನಾಶಮಾಡುವುದು ಮಹಾ ದರಂತವೇ ಆಗಿದೆ.

ಕುರಾನ್ ಅಮಲು ಉಪಯೋಗದ ಬಗ್ಗೆ ಹೀಗೆನ್ನುತ್ತದೆ.

إِنَّمَا يُرِيدُ الشَّيْطَانُ أَنْ يُوقِعَ بَيْنَكُمُ الْعَدَاوَةَ وَالْبَغْضَاءَ فِي الْخَمْرِ وَالْمَيْسِرِ وَيَصُدَّكُمْ عَنْ ذِكْرِ اللَّهِ وَعَنِ الصَّلَاةِ ۖ فَهَلْ أَنْتُمْ مُنْتَهُونَ

ಸೈತಾನನು ಇಚ್ಛಿಸುವುದು ಮದ್ಯ ಮತ್ತು ಜೂಜಾ ಟದ ಮೂಲಕ ನಿಮ್ಮ ಮಧ್ಯೆ ಶತ್ರುತ್ವ ಹಾಗೂ ವಿದ್ವೇಷ ವನ್ನು ಬಿತ್ತಲು ಮತ್ತು ಅಲ್ಲಾಹುವಿನ ಸ್ಮರಣೆ ಹಾಗೂ ನಮಾಝ್ ನಿಂದ ನಿಮ್ಮನ್ನು ತಡೆಯಲು ಮಾತ್ರವಾಗಿದೆ. ಆದ್ದ ರಿಂದ ನೀವು (ಅವುಗಳನ್ನು) ನಿಲ್ಲಿಸಲು ಸಿದ್ಧರಿರುವಿರಾ?

ಮದ್ಯ ಸೇವನೆಯಂತೆ ಡ್ರಗ್ಸ್ ಕೂಡಾ ಬಯಾನಕವಾಗಿದೆ.

وقال النووي في المجموع: "وأما ما يزيل العقل من غير الأشربة والأدوية، كالبنج وهذه الحشيشة المعروفة فحكمه حكم الخمر في التحريم.

ಬುದ್ದಿಯನ್ನು ನಾಶ ಮಾಡುವ  ರೀತಿಯ ಎಲ್ಲಾ ಪಾನೀಯ, ಮದ್ದು ಅಲ್ಲದ ಅಮಲು ಪದಾರ್ಥ, ಗಾಂಜಾ ಮುಂತಾದವು ಗಳ ವಿಧಿಯೂ ಮದ್ಯದಂತೆ ನಿಶಿಧ್ಧವಾಗಿದೆ. ಎಂದು ಇಮಾಂ ನವವೀ (ರ) ವಿವರಿಸುತ್ತಾರೆ.

ಹದೀಸಿನಲ್ಲಿ ಎಲ್ಲಾ ಅಮಲು ಭರಿಸುವ ವಸ್ತು ನಿಶಿಧ್ಧವೆಂದು ಹೇಳಿದೆ.
نهى رسول الله - صلى الله عليه وسلم - عن كل مسكر ومفتر
ಜಗತ್ತಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವಲೋಕಿಸಿದರೆ ಗಾಬರಿಯಾಗುತ್ತಿದೆ ಸಹಸ್ರಾರು ವರ್ಷಗಳಿಂದ ಧರ್ಮಶ್ರಧ್ದೆಯ ಮೂಲಕ ಜನ ನಾಗರಿಕತೆ ಮತ್ತು ಸಂಸ್ಕಾರ ನೆಲೆನಿಂತಿದ್ದರೆ ಇದೀಗ ಧರ್ಮ, ನೀತಿ, ರೀತಿ ರಿವಾಜು ಹಳೆಯದಾಗುತ್ತಿದೆ.ಅಧಿಕಾರಕ್ಕಾಗಿ ಧರ್ಮವನ್ನು ಎಳೆತಂದಾಗ ಧರ್ಮಕ್ಕೂ ಬೆಲೆ ಇಲ್ಲ ಮನುಷ್ಯನಿಗೂ ನೆಲೆ ಇಲ್ಲದಾಗಿದೆ.ದ್ವೇಷ ಕ್ಕಾಗಿ ಮನುಷ್ಯ ಮನಸ್ಸಿನಲ್ಲಿ ವಿಷವನ್ನು ತುಂಬಿದ ಕಾರಣ ಅಪರಾಧಗಳು ಸರ್ವೇಸಾಮಾನ್ಯ ವಾಗಿ ಬಿಟ್ಟಿದೆ.ಅದರೊಟ್ಟಿಗೆ ಮಹಾಮಾರಿ ಡ್ರಗ್ಸ್ ಮಾಫಿಯಾ ಸಮಾಜವನ್ನೇ ಆಪೋಶನ ತೆಗೆದುಕೊಳ್ಳವಂತೆ ಬ್ರಹತ್ತಾಗಿ ಜಗತ್ತಿನಾದ್ಯಂತ ಬೆಳೆಯುತ್ತಿದೆ.
ಅದರ ಮುಂದೆ ಯಾವ ನಾಗರಿಕತೆ,ಸಂಸ್ಕಾರ ಯಾವುದೂ ಉಳಿಯುವ ಬಗ್ಗೆ ಗಾಬರಿ ಇದೆ.ವಿಶೇಷವಾಗಿ ದೇಶ ಅಮಲಿಗೆ ಬಲಿಯಾಗತ್ತಿದೆ. ಅದರಲ್ಲೂ ಯುವ ಸಮೂಹ!ಅದು ನಮ್ಮ ಮನೆ ಬಾಗಿಲಿಗೇ ಬಂದು ಮುಟ್ಟಿದೆಯೆಂದು ಬಾಸವಾಗುತ್ತದೆ . ರಸ್ತೆಗಳಲ್ಲಿ ಹೆಣಗಳು ಒಂದರ ಮೇಲೊಂದಂತೆ ಬೀಳುತ್ತಿದೆ.ಹಾಲಿಗಿಂತ ಸಲೀಸಾಗಿ ಮಾದಕವಸ್ತು ಲಭ್ಯವಾಗುತ್ತಿದೆ.ಗೋವಾ,
ಆಂದ್ರಪ್ರದೇಶ,ಪಂಜಾಬ್ ಅದರ ಕೆಂದ್ರ ವಾಗಿ ಆ ಮೂಲಕ ವಾಯು ,ಜಲ ,ನೆಲ ಮಾರ್ಗ ಮೂಲಕ ಸರಬರಾಜು ನಡೆಯುತ್ತಿದೆ.
ಅಂಗಡಿ, ಗೂಡಂಗಡಿ ,ಮಾಲು ಮಾರ್ಕೇಟು,ನಗರ ಮತ್ತು ಹಳ್ಳಿಗಳಲ್ಲಿ ಎಗ್ಗಿಲ್ಲದೇ ಗಾಂಜಾ ಹಾವಳಿ ನಡೆಯುತ್ತಿದೆ.
ಶಾಲಾ ಕಾಲೇಜು ಕ್ಯಾಂಪಸುಗಳಿಗೂ ಸಪ್ಲೈಮಾಡಲಾಗುತ್ತಿದೆ.ಈ ಮಹಾ ಮಾರಿಯ ಬಗ್ಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ಮೌನವಹಿಸುವುದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಧರ್ಮದ ಹೆಸರಿನ ಕೊಲೆಗಳ ಬಗ್ಗೆ ಮಾತ್ರ ಇಲ್ಲಿ ಚರ್ಚೆಯಾಗುತ್ತದೆ.ರ‌್ಯಾಲಿಗಳು ನಡೆಯುತ್ತದೆ.ಗದ್ದಲ ಗಲಾಟೆ ಪ್ರತಿಭಟನೆ?. ಆದರೆ ಮಾದಕ ವಸ್ತುಗಳ ದಂಧೆಯ ಬಗ್ಗೆ ಗೊತ್ತಿದ್ದೂ ಅಥವಾ ರಾಜಕೀಯ ಪುಡಾರಿಗಳ ಒತ್ತಡದ ಕಾರಣವಾಗಿ ಇಲ್ಲವೇ ಸರಕಾರದ ನಿರ್ಲಕ್ಷದಿಂದಲೋ ಡ್ರಗ್ಸ್ ಮಾಫಿಯಾ ಹೆಣಗಳು ಬೀಳುತ್ತಿದ್ದರೂ ಯಾವುದೇ ಕ್ರಮಗಳನ್ನು ಸಂಬಂಧ ಪಟ್ಟವರು ಕೈಗೊಳ್ಳುತ್ತಿಲ್ಲ. ಇದರ ನೇರ ಹೊಣೆ ಸರಕಾರವೇ ಆಲ್ಲವೇ?

ಟ್ರಂಪ್ ಮತ್ತು ಕಿಮ್ ಯುದ್ಧ ದಾಹಿಗಳಾಗಿ ಎಗರಾಡುತ್ತಿದ್ದಾರೆ. ಸರ್ವನಾಶದ ಮಾತನ್ನಾಡುತ್ತಿದ್ದಾರೆ ಆದರೆ ಅದಕ್ಕಿಂತಲೂ ದೊಡ್ಡ ಅನಾಹುತ ಮಾದಕವಸ್ತು ಸಂಬಂಧಿತ ಜಾಲದ ಸವಾಲಾಗಿದೆ. ಕಾರಣ ಯುದ್ದದಲ್ಲಿ ಮನುಷ್ಯರು ಸತ್ತರೆ ಅಮಲಿನಲ್ಲಿ ಮನುಷ್ಯತ್ವ ಸಾಯುತ್ತದೆ.
ಜಗತ್ತಿನ ಎರಡು ಹುಚ್ಚರ ಆಟ ನೋಡಿದರೆ ಮೂರನೆಯ ಮಹಾ ಯುದ್ಧ ಬೇಗನೇ ಬರುತ್ತದೋ ಎಂದು ಭಯವಾಗುತ್ತದೆ.
ಒಮ್ಮೆಐನ್‍ಸ್ಟೈನ್ ನೊಂದಿಗೆ ಯಾರೋ ಕೇಳಿದರು . ಮೂರನೆಯ ಮಹಾಯುದ್ಧದ ಅಯುಧಗಳೇನು? ಆಗ ಖ್ಯಾತ ವಿಜ್ಞಾನಿ ಹೇಳಿದ ಉತ್ತರ "ಮೂರನೆಯ ಯುದ್ಧದ ಆಯುಧ ಬಗ್ಗೆ ನನಗೆ ಗೊತ್ತಿಲ್ಲ.ಆದರೆ ನಾಲ್ಕನೇಯ ಯುದ್ಧ ದ ಆಯುಧ ಕಲ್ಲು ಮತ್ತು ಮರದ ತುಂಡುಗಳು ಆಗಿರಬಹುದು" ಅದು ಹೇಗೆ  ಎಂದು ಕೇಳಿದಾಗ ಮೂರನೆಯ ಯುದ್ಧದಲ್ಲಿ ಎಲ್ಲವೂ ನಾಶವಾಗಲಿದೆ
ಎಂದಾಗಿತ್ತು ಉತ್ತರ.ಆದರೆ ಅಮಲು ಪದಾರ್ಥ ಮೂಲಕ ಮುಂದಿನ ಯುಧ್ಧಕ್ಕೆ ಏನೂ ಉಳಿಯದು ಎನ್ನುವುದಂತು ಸತ್ಯ.

ಯಾವುದಾದರೊಬ್ಬ ರಾಜಕೀಯ ನಾಯಕನ ಮೇಲೆ ಯಾವುದಾದರೊಂದು ಆರೋಪ,(ಅದು ಮೊಬೈಲ್ ವಾಚು ಆಗಬಹುದು,)ಹಾಗೇ ಯಾರಾದರೂ ಅನೈತಿಕ ಸಂಬಂಧವನ್ನೋ, ಆತ್ಮಹತ್ಯೆ ಪ್ರೇರಣೆ ಆರೋಪವನ್ನೋ ಹೊರಿಸಿದರೆ ಗಂಟೆಗಟ್ಟಲೆ ಚಿತ್ರ ವಿಚಿತ್ರ ವಾರ್ತೆಯಾಗಿ ,ಡಿಬೇಟಾಗಿ ,ಬಿತ್ತರಿಸುವ ಚಾನಲುಗಳು!.ಯಾವುದಾದರೊಂದು ಹೆಣ್ಣು ಮಗಳ ಮೇಲೆ ಕಿರುಕುಳ ಕೇಸು ಸಿಕ್ಕರೆ ಗೌಪ್ಯತೆಯನ್ನು ಗೌರವಿಸದೇ ಸಂತ್ರಸ್ತೆಯನ್ನು ಸ್ಟುಡಿಯೋದಲ್ಲಿ ಕೂರಿಸಿ ಅಥವಾ ಫೋನಾಯಿಸಿ ಇನ್ನಷ್ಟು   ಸತಾಯಿಸುವ ರೀತಿಯಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ  ಎಕ್ಸ್ಲ್ ಕ್ಯೂಸಿವ್ ವರದಿಯಾಗಿ ಬಿತ್ತರಿಸುವ ಮೀಡಿಯಾ ಗಳು ?ಇನ್ನು ಯಾವದಾದರೊಂದು ಊಹಾಪೋಹ ವರದಿಯು ಮುಸ್ಲಿಂ ಸಮುದಾಯದ ಬಗ್ಗೆ ಬಂದರೆ ಸತ್ತ ಕಾಗೆ ಬಳಿ ಅರಚುವ ಕಾಗೆಗಳಂತೆ ಅಥವಾ ಮೈಮೇಲೆ ಬಂದಂತೆ ವರ್ತಿಸುವ ಜರ್ನಲಿಸ್ಟುಗಳು,  ಯಾಕೆ ಮಾದಕ ಜಾಲದ ಹಿಂದೆ ಕಾರ್ಯಾಚರಿಸುತ್ತಿಲ್ಲ ಅದರ ಬೆನ್ನತ್ತಿ ಹೋಗುವುದಿಲ್ಲ.?

ಮಾನವೀಯತೆ ಮತ್ತು ನಾಗರಿಕತೆ ಯನ್ನು ಕಾಪಾಡಬೇಕಾದ ಧರ್ಮವೇ ಅಮಲಿಗೆ ಬಲಿಯಾಗುವುದೇ?
ಅದು ದೊಡ್ಡ ದುರಂತವಾಗಬಹುದು.ಸ್ವಾಮೀ ವಿವೇಕಾನಂದರು ಹೀಗೇ ಬರೆಯುತ್ತಾರೆ.
ಬಾರತವು ಸಾಯುವುದೇ ?ಹಾಗೇನಾದರೂ ಆದರೆ ಪ್ರಪಂಚದ ಎಲ್ಲಾ ಅಧ್ಯಾತ್ಮ ವೂ ನಿರ್ನಾಮವಾಗುವುದು.ಎಲ್ಲಾ ನೈತಿಕತೆ ನಷ್ಟವಾಗುವುದು.ಎಲ್ಲಾ ಮತಗಳ ಬಗ್ಗೆ ಮಧುರ ಅನುಕಂಪವೂ ನಾಶವಾಗುವುದು‌. ಎಲ್ಲಾ ಆದರ್ಶ ತತ್ವಗಳು ‌ನಿರ್ನಾಮವಾಗುವುದು.ಲೈಂಗಿಕ ಕಾಮ ಸುಖ ಭೋಗಗಳೇ ಗಂಡು ಹೆಣ್ಣು ದೇವತೆಗಳಾಗಿ ,ಹಣವು ಅದರ ಪೂಜಾರಿಯಾಗಿ,ಮೋಸ ಬಲತ್ಕಾರ ಮತ್ತು ಸ್ಪರ್ಧೆ ಗಳು ಪೂಜಾ ಕ್ರಮವಾಗಿ ಮಾನವ ಆತ್ಮ ಬಲಿಪಶುವಾಗುವುದು.

ಎಲ್ಲಾ ಧರ್ಮಾದವರೂ ಒಂದಾಗಿ ಹೋರಾಡಬೇಕಾದದ್ದು ಅಮಲು ಹಾವಳಿಯ ಬಗ್ಗೆ. ಅದನ್ನು ಮಾಡದಿದ್ದರೆ ಧರ್ಮ ಧರ್ಮ ಅಂತ ಹೊಡೆದಾಡಲು ಯಾರೂ ಉಳಿಯಲ್ಲ.ಅಮಲು ಮಾಫಿಯಾದಲ್ಲಿ ಮನುಷ್ಯತ್ವವೇ ನಾಶವಾಗುತ್ತಿರುವಾಗ ,ಕೆಲವರು ರಕ್ತದ ಹೆಸರಿನಲ್ಲಿ ರಾಜಕೀಯದಾಟ ನಡೆಸಿದರೆ .ಇನ್ನೊಂದು ಕಡೆ ಕೆಲವರು ಉಗ್ರ ಕ್ರಮ,ಕಟ್ಟು ನಿಟ್ಟಿನ ಕ್ರಮ,ಮುಲಾಜಿಲ್ಲದೇ ಕ್ರಮ ಅಂತ ರಾಗ ಎಳೆದು ಜನರನ್ನು ವಂಚಿಸುತ್ತಾರೆ ?.
ಕಾನೂನು ಸುವ್ಯವಸ್ಥೆ ಯನ್ನು ಕಾಪಾಡಬೇಕಾದವರು ಅಮಲು ಮಾರಟಗಾರರ ಏಜನ್ಸಿಗಳಾಗುತ್ತಾರೆಯೇ ?
.
ಇದೀಗ ಧರ್ಮದ ಹೆಸರಲ್ಲಿ ರಾಜಕೀಯ ಮಾಡದೇ ,ಜನರನ್ನು ಪರಸ್ಪರ ಒಡೆಯದೇ ಮಾದಕ ಜಾಲವನ್ನು ಭೇಧಿಸಲು ಎಲ್ಲರೂ ಒಂದಾಗಬೇಕಾಗಿದೆ.ಇಲ್ಲವಾದರೆ ಧರ್ಮವೂ ಉಳಿಯದು ಮನುಷ್ಯತ್ವವೂ ಉಳಿಯದು.
ಅಪಘಾತವಾದರೆ
ಜೀವ ಉಳಿಸಲು ಹರಸಾಹಸ ಪಡುತ್ತಾರೆ,ಜೈಲು ಸೇರಿದರೆ ಅರೋಪ ಮುಕ್ತವಾಗಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ ? ಆದರೆ ಮನಷ್ಯತ್ವವನ್ನು ಕಾಪಾಡಲು ನಾವೇನು ಮಾಡುತ್ತಿದ್ದೇವೆ?ಅದಕ್ಕಾಗಿ ಏಕೆ ಹೋರಾಡಬಾರದು.?
ಒಂದು ಪ್ರದೇಶದಲ್ಲಿ ಈ ತರದ ಅಮಲು ದಂಧೆ ನಡೆಯುತ್ತಿದ್ದರೆ  ಅದಕ್ಕೆ ನೇರ ಹೊಣೆ ಸರಕಾರ ಮತ್ತು ಪ್ರಾದೇಶಿಕ ಆಡಳಿತ ಹಾಗೂ ಕಾನೂನು ಪಾಲಕ ಕೇಂದ್ರಗಳೇ ಕಾರಣವಾಗಬೇಕಿದೆ.
ಆದರೆ ಪುಂಡ ಪಟ್ಟಿಂಗರನ್ನು ಬೆಳೆಸುವುದು ಕೆಲ ರಾಜಕಾರಣಿಗಳು ಮತ್ತು ಪೋಲಿಸ್ ಠಾಣೆಗಳು ಎಂದು ಜನ ಆಡಿಕೊಳ್ಳುತ್ತಾರೆ.
ಸಾಮಾಜಿಕ ಭದ್ರತೆ ಒದಗಿಸಬೇಕಾದ ಸರಕಾರ ಇದಕ್ಕೆ ಬಧ್ಧವಾಗಬೇಕಿದೆ.

قُلْ إِنَّمَا حَرَّمَ رَبِّيَ الْفَوَاحِشَ مَا ظَهَرَ مِنْهَا وَمَا بَطَنَ وَالْإِثْمَ وَالْبَغْيَ بِغَيْرِ الْحَقِّ

ಹೇಳಿರಿ: ‘ನನ್ನ ಪ್ರಭು ನಿಷಿದ್ಧಗೊಳಿಸಿರುವುದು ಪ್ರತ್ಯಕ್ಷವಾಗಿರುವ ಮತ್ತು ಪರೋಕ್ಷವಾಗಿರುವ ನೀಚಕೃತ್ಯ ಗಳು, ಪಾಪಕೃತ್ಯಗಳು, ಅನ್ಯಾಯವಾದ ದಬ್ಬಾಳಿಕೆಗಳು ಆಗಿವೆ.

🎆 ವರದಿ ಅಲ್ ಅಹ್ಸನ್ ಮಾಸಿಕ