ದೀನಿಗಾಗಿ ಜೀವ ತೆತ್ತ ಶೈಖ್ ಜೀಲಾನಿ

ಔಲಿಯಾಗಳ ಅಧಿಪತಿಯಾಗಿ, ಪವಾಡ ಪುರುಷರಾಗಿ, ಧಾರ್ಮಿಕ ಚೈತನ್ಯತೆಯ ಪುನರುದ್ಧಾರಕರಾಗಿ ಇತಿಹಾಸ ನಿರ್ಮಿಸಿದ ಶೈಖ್ ಮುಹ್ಯದ್ಧೀನ್ ಅಬ್ದುಲ್ ಖಾದರ್ ಜೀಲಾನಿ(ರ)ರವರನ್ನು ವಿಶ್ವ ಮುಸ್ಲಿಮರು ಸ್ಮರಿಸುವ, ಅವರ ವಫಾತ್ ಆದ ದಿನ ರಬಿವುಲ್ ಆಖಿರ್ ತಿಂಗಳ ಹನ್ನೊಂದು ಮತ್ತೊಮ್ಮೆ ಬಂದು ನಿಂತಿದೆ.
ಹಿಜಿರಿ ೪೭೦ ರಂಝಾನ್ ತಿಂಗಳಲ್ಲಿ ಅರೇಬಿಯಾದ ಇರಾಕಿನ ಜಿಲಾನಿ ಎಂಬಲ್ಲಿ ಜನಿಸಿದ ಶೈಖ್‌ರವರ ಕೌಟಂಬಿಕ ಹಿನ್ನಲೆಯೇ ಅತ್ಯಂತ ಶ್ರೇಷ್ಠವಾದದ್ದು. ತಂದೆ ಧರ್ಮ ಭಕ್ತರಾದ ಅಬೂ ಸ್ವಾಲಿಹ್‌ರವರ ಕುಂಟುಂಬ ಪರಂಪರೆ ಪ್ರವಾದಿ(ಸಲ್ಲಲ್ಲಾಹು ಅಲೈವಸಲ್ಲಂ)ರವರ ಪೌತ್ರ್ರ ಹಸನ್(ರ)ರವರಿಗೆ ನಿಕಟವಾಗಿ ಸೇರುತ್ತದೆ. ಇನ್ನು ಅವರ ಮಾತೆ ಫಾತಿಮಾರ ಪರಂಪರೆ ಪ್ರವಾದಿಯ ಮತ್ತೊರ್ವ ಪೌತ್ರ ಹುಸೈನ್(ರ)ರವರಿಗೆ ಸೇರುತ್ತದೆ. ಕರೆಕ್ಟಾಗಿ ಹೇಳಬೇಕೆಂದರೆ ಪ್ರವಾದಿಯ ವಂಶ ಪರಂಪರೆಯ ಹತ್ತನೇ ಪುತ್ರ ಇವರ ತಂದೆಯಾದರೆ ಹದಿನೈದನೇ ಪುತ್ರಿಯಾಗಿದ್ದಾರೆ ಇವರ ಮಾತೆ.ಪವಿತ್ರ ಶ್ರೇಷ್ಠ ದಂಪತಿಗಳ ಪುತ್ರನಾಗಿ ಜನ್ಮತಾಳಿದ ಶೈಖ್ ಜೀಲಾನಿಯವರ ಜನನ ಒಂದು ರಂಝಾನ್ ತಿಂಗಳ ಮೊದಲ ದಿನವಾಗಿತ್ತು. ಜನಿಸಿದ ದಿನದಿಂದ ರಂಝಾನ್ ಮುಗಿಯುವವರೆಗೂ ಆ ಹಸುಗೂಸು ಹಗಲು ಸಮಯದಲ್ಲಿ ತಾಯಿಯ ಮೊಲೆಹಾಲು ಮುಟ್ಟಲಿಲ್ಲ.
ಅಂದರೆ ಮಗುವಾಗಿದ್ದಾಗಲೇ ಉಪವಾಸ ಆಚರಿಸಿದ ಅದ್ಬುತ ಶಿಶುವಾಗಿತ್ತು.

ಜಗತ್ತನ್ನೇ ಬದಲಾಯಿಸಿದ ಮುಸ್ಲಿಂ ಸಂಶೋಧನೆಗಳು

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ನಾಗಾಲೋಟದಲ್ಲಿ ಮುನ್ನುಗುತ್ತಿರುವಾಗ ಈ ಎಲ್ಲಾ ಬದಲಾವಣೆಗಳಲ್ಲಿ ಮುಸ್ಲಿಂ ಜಗತ್ತಿನ ಪಾಲುದಾರಿಕೆಯು ಬಹಳ ಪ್ರಮುಖ ಪಾತ್ರವಹಿಸಿದೆ ಎಂಬುವುದನ್ನು ಈ ಜಗತ್ತಿನ ಬಹುತೇಕ ಜನರು ತಿಳಿಯದೇ ಹೋಗಿದ್ದಾರೆ.
ಉದ್ದೇಶಪೂರ್ವಕವೋ, ಅಚಾತುರ‍್ಯದಿಂದಲೋ ಇಸ್ಲಾಮಿನ ಇತಿಹಾಸ ಪುಟಗಳಿಂದ ಮರೆಯಾಗಿ ಹೋಗಿರುವ ಕೆಲವೊಂದು ಮುಸ್ಲಿಂ ಸಂಶೋಧನೆಗಳು ಬೆಳಕಿಗೆ ತರುವ ಪ್ರಯತ್ನ ಇದಾಗಿದೆ. ನಾವು ಪ್ರತಿ ನಿತ್ಯ ಸೇವಿಸುವ ಕಾಫಿಯಿಂದ ಹಿಡಿದು, ಲಕ್ಷಾಂತರ ಜನರಿಗೆ ಅತ್ಯುನ್ನತ ಅವಿದಾಭ್ಯಾಸವನ್ನು ಧಾರೆ ಎರೆಯುವ ವಿಶ್ವವಿದ್ಯಾನಿಲಯವೆಂಬ ಶೈಕ್ಷಣಿಕ ವ್ಯವಸ್ಥೆಯವರೆಗೂ ಜಗತ್ತಿನ ಬದಲಾವಣೆಯಲ್ಲಿ  ಪ್ರಮುಖ ಪಾತ್ರವಹಿಸಿದ ವಿವಿಧ ರಂಗಗಳಲ್ಲಿ ಅರಬ್ಬನ್ನರ ಸಾಧನೆಯು ಪ್ರಶಂಸನೀಯವಾಗಿದೆ. ಅವುಗಳ ಕುರಿತ ವಿವರ ಇಲ್ಲಿದೆ....

ಮಧುರ ದಾಂಪತ್ಯದ ಮೊದಲ ರಾತ್ರಿ

ಹತ್ತು ಹಲವು ಕನಸುಗಳನ್ನು ಹೊತ್ತುಕೊಂಡು, ಬದುಕಿನ ಅತ್ಯಂತ ಸಂತಸದ ಕ್ಷಣಕ್ಕೆ ಕಾಲಿರಿಸುವ ಶುಭ ಮುಹೂರ್ತವಾಗಿರುತ್ತದೆ ಪ್ರತಿಯೊಬ್ಬ ದಂಪತಿಗಳ ಸಾಲಿನ ಮೊದಲ ರಾತ್ರಿ. ಸಂಭ್ರಮ, ಸುಖ, ಸಮೃದ್ಧಿ ಸಮಾಲೋಚನೆಗಳ ಸಂಘರ್ಷ ಹೀಗೆ ವಿಭಿನ್ನ ಮುಖಗಳ ದಿಗ್ದರ್ಶನವೇ ಈ ವೈವಾಹಿಕ ಬದುಕಿನ ಫಸ್ಟ್ ನೈಟ್.
ಒಳಿತಿನಿಂದ ಕೂಡಿದ ಯಾವುದೇ ಕಾರ‍್ಯಗಳ ಪ್ರಾರಂಭವು ಅಲ್ಲಾಹನ ಸ್ಮರಣೆಯೊಂದಿಗೆ ಆಗಿರುವುದು ಮುಸ್ಲಿಂ ವಿಶ್ವಾಸಿಯ ಮಟ್ಟಿಗೆ ಅತ್ಯವಶ್ಯಕ. ಪ್ರಾರ್ಥನೆ, ಉದ್ದೇಶ ಸಾಪಲ್ಯದ ನಮಾಝ್ ಮೊದಲಾದವುಗಳು ಈ ಶುಭಕ್ಷಣದಲ್ಲಿ ನಡೆಸುವುದು ವೈವಾಹಿಕ ಬದುಕು ಪೂರ್ತಿ ಸುಖ ಸಮೃದ್ಧಿ, ಸಂತಸ, ಐಶ್ವರ್ಯ ಉಂಟುಮಾಡುವುದು.
ದಾಂಪತ್ಯ ಸಂಬಂಧ ಎಲ್ಲ ತೆರನಾದ ಭಿನ್ನತೆ, ಎಡರು ತೊಡರು, ಅಲುಗುಗಳಿಂದ ಮುಕ್ತವಾಗಿ ಯಾವುದೇ ಅಡೆತಡೆಗಳಿಲ್ಲದೆ ಬದುಕಿನ ಸಂಧ್ಯಾ ಕಾಲದ ವರೆಗೂ ಸುಖ, ಸೌಹಾರ್ದತೆಯೊಂದಿಗೆ ಹೆಚ್ಚು ಸುದೃಢವಾಗಿ ಭದ್ರವಾಗಿ ಸುಸೂತ್ರವಾಗಿ ಬರಕತ್ತು ನಿಹಮತ್ತುಗಳಿಂದ ಮುಂದುವರಿಯಲು ಸೃಷ್ಟಿಕರ್ತನಲ್ಲಿ ನಿಸ್ವಾರ್ಥ ಪ್ರಾರ್ಥನೆ ನಡೆಸಬೇಕು ಇಮಾಂ ಮಾಲಿಕ್(ರ) ರವರು ತಮ್ಮ ‘ಮುವತ್ತ್ತ’ ಎಂಬ ಗ್ರಂಥದಲ್ಲಿ ಈ ಬಗ್ಗೆ ವಿವರವಾಗಿ ಹೇಳಿದ್ದಾರೆ “ಅಲ್ಲಾಹನೇ ನನ್ನ ಸಂಗಾತಿಯಿಂದ ನನಗೂ ನನ್ನಿಂದ ನನ್ನ ಕುಟುಂಬಕ್ಕೂ ಬರಕತ್ತು ವರ್ಷಿಸು” ಎಂದು ಪ್ರಾರ್ಥಿಸಬೇಕು (ಬಿಗ್‌ಯಾ ೨೪೭)

ಆಧುನಿಕ ಮೀಡಿಯಾ ದುರ್ಬಳಕೆಯಾಗದಿರಲಿ


ಇಂದಿನ ದುನಿಯಾದಲ್ಲಿ ಎಂಥ ಮನಸ್ಥತಿಯ ಜನರಿದ್ದಾರೆ ನೋಡಿ, ಆಧುನಿಕ ತಾಂತ್ರಿಕ ಸೌಲಭ್ಯಗಳು ಹೆಚ್ಚಾದಂತೆ ಪ್ರಬುದ್ಧರಾಗಬೇಕಾದ ಮನುಜ ಮಾತ್ರ ತನ್ನ ಮನುಷ್ಯತ್ವವನ್ನೇ ಕಳಕೊಳ್ಳುವ ಮಟ್ಟಿಗೆ ಇಳಿದು ಬಿಟ್ಟಿದ್ದಾನೆ ಎಂದರೆ ಅದೆಂಥ ವ್ಯಂಗ್ಯ ಹೇಳಿ?
   ಆಧುನಿಕ ಜಗತ್ತಿನಲ್ಲಿ ಮನುಷ್ಯನ ಬದುಕಿನ ಭಾಗವಾಗಿ ಬಿಟ್ಟಿರುವ ಅಂತರ್ಜಾಲ ಸೌಲಭ್ಯ ಇದೆಯಲ್ಲ, ಅದನ್ನೇ ಮನುಷ್ಯ ತನ್ನ ಕೀಲು ಮಟ್ಟದ ತೆವಲು ತೀರಿಸವ ಕಿರಿಕ್ಕು ತಾಣವಾಗಿ ಉಪಯೋಗಿಸಿ ಆ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮಟ್ಟಕ್ಕೆ ಇಳಿದು ಬಿಟ್ಟಿದ್ದಾನೆ.
ನಮ್ಮೆಡೆಯಲ್ಲಿ ಕೆಲವು ಜೀವಿಗಳಿವೆ. ಅವರ ಕೆಲಸವೇನೆಂದರೆ ಯಾರಿಗಾದರು ಕರೆ ಮಾಡುವುದು ಮತ್ತು ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಂಚುವುದು.  ಇದು ವಂಚನೆಯಲ್ಲವೇ? ಲಜ್ಜೆಗೆಟ್ಟ ಕೆಲಸ ಮಾಡಿ ಹೀರೋ ಆಗಲು ಹೊರಟ  ಪರಾಕ್ರಮಿಗಳೇ (ಡಿಂಗ) ನೀವು ಮಾಡುತ್ತಿರುವುದು ಹಸಿ ಮುನಾಫಿಕ್‌ಗಳ ಕೆಲಸವಾಗಿದೆ.

ನೈತಿಕ ಪ್ರೀತಿ ನಿರಂತರವಾಗಿರಲಿ


ಅದೇನೋ ಒಂಥರಾ ರೋಮಾಂಚನವೇ !
ಈ ಬದುಕಿನ ಪಯಣದಲ್ಲಿ ಎಡತಾಕುವ ಕೆಲವೊಂದು ವ್ಯಕ್ತಿಗಳ ಸಂಪರ್ಕ, ಒಡನಾಟ, ಗೆಳತನವಿದೆಯಲ್ಲ ಅದು ಬದುಕಿನೊಳು ಭದ್ರವಾಗಿ ಹೊಕ್ಕು ಬಿಟ್ಟು ಮನದಾಳ ಎಂದೆಂದೂ ಮೆಲುಕುವಂತೆ ಮಾಡಿಬಿಡುತ್ತದೆ.ಅದರಲ್ಲೂ ಗೆಳೆತನದ ಬೆಸುಗೆಯಲ್ಲಿ ಪ್ರೀತಿಯ ಭವ್ಯ ಬಾಂಧವ್ಯ ಕಟ್ಟಿಕೊಂಡು ಮನ ಪಟಲದಲ್ಲಿ ಏನೇ ಒಂಥರಾ ಸೆಳೆತ, ಮಿಡಿತ-ತುಡಿತಗಳು ಸೇರಿಕೊಂಡರೆ ಅದರ ರೋಮಾಂಚನವೇ ಬೇರೆ.
   ಹಾಗೆ ನೋಡಿದರೆ ಪ್ರೀತಿ ಎಂಬ ಪದಕ್ಕೆ ಅದೇನೋ ವಿಚಿತ್ರ ಮೋಡಿ ಇದೆ. ನೈತಿಕತೆಯ ಬೇಲಿ ದಾಟಿದ ಪ್ರೀತಿ, ಪ್ರಣಯದ ಕಥೆ ಪಕ್ಕಕ್ಕಿಡಿ. ನಿಷ್ಕಳಂಕ, ನಿರ್ಮಲ ಸ್ನೇಹ ಇದೆಯಲ್ಲಾ, ಅದು ಬದುಕಿನೊಳು ಬೆಸೆದುಕೊಂಡು ಗೆಳತನ ಎಂಬ ಸುಂದರ ಅಂಗಿ ತೊಡಿಸಿ ಬಾಳಿನುದ್ದಕ್ಕೂ ಜೊತೆ ಸೇರಿಸಿ ಎದುರಾಗುವ ಎಲ್ಲಾ ಸಿಹಿ -ಕಹಿ, ಅಳು -ನಗುವಿನಲ್ಲಿ ಭಾಗಿಯಾಗಿ ಬಿಟ್ಟರೆ ತಳುಕು-ಮೆಳುಕಿನ ಆ ಅಟ್ರಾಕ್ಷನ್ ಬರಹಕ್ಕೆ ನಿಲುಕದ್ದು.