ಸುನ್ನಿಗಳ ಚಿತ್ತ... ಆಲಪುಯದತ್ತ...

ಮತ್ತೊಂದು ಇತಿಹಾಸ ನಿರ್ಮಾಣವನ್ನು ಸುನ್ನೀ ಜನ ಕೋಟಿ ಎದುರು ನೋಡುತ್ತಿದೆ. ಪ್ರತಿಯೊಬ್ಬರೂ ಬದುಕಿನಲ್ಲಿ ಎಡವಿಬಿದ್ದು, ವಾಮ ಮಾರ್ಗ ಹಿಡಿಯದಂತೆ ಜತನದಿಂದ ಕಾಯ್ದುಕೊಂಡು,ಇಹ-ಪರ ಯಶಸ್ವಿಗೆ ಪೂರಕವಾದ ಸರಿ ದಾರಿ ತೋರಿ ನಮ್ಮ ಪರಿಸರದ ಮುಸ್ಲಿಂ ವಿಶ್ವಾಸಿಗಳನ್ನು ನಾಡಿನ ಪ್ರಜ್ಞಾವಂತ ಸತ್ಪ್ರಜೆಗಳಾಗಿ ರೂಪಿಸಿದ ಶ್ರೇಷ್ಠ ಉಲಮಾ ಸಂಘಟನೆಯಾದ ’ಸಮಸ್ತ’ದ 90ರ ಸಮಾರೋಪ ಸಮಾರಂಭಕ್ಕೆ ಕೇರಳದ ಆಲಪುಯ ಸಜ್ಜುಗೊಂಡಿದ್ದು ಶ್ವೇತ, ಶುಭ್ರ ವಸ್ತ್ರ ದಾರಿಗಳಿಂದ ಹಾಲ್ಗಡಲು ನಿರ್ಮಾಣವಾಗಲು ದಿನಗಣನೆ ಆರಂಭಗೊಂಡಿದ್ದು ಇಸ್ಲಾಮಿಕ್ ಸಾಂಘಿಕ ಕ್ಷೇತ್ರದಲ್ಲೊಂದು ಭವ್ಯ ಇತಿಹಾಸ ನಿರ್ಮಾಣವಾಗಲಿದೆ.
ಕೇರಳ ಬೌಗೋಳಿಕವಾಗಿ ಚಿಕ್ಕದಾದರೂ ದೇಶದಲ್ಲೇ ಗಮನ ಸೆಳೆದ ಸಾಕ್ಷರತಾ ರಾಜ್ಯವಿದು.ಕೋಮು ಸಾಮರಸ್ಯದಲ್ಲೂ ಈ ನಾರಿಕೇಳದ ನಾಡು ಮುಂದು. ಮುಸ್ಲಿಮರ ಮಟ್ಟಿಗೆ ಹೇಳುವುದಾದರೆ ಪವಿತ್ರ ಇಸ್ಲಾಮಿನ ಸಂದೇಶ ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ರವರ ಕಾಲದಲ್ಲಿಯೇ ಆ ರಾಜ್ಯಕ್ಕೆ ತಲುಪಿತ್ತು ಎಂಬುದು ಇತಿಹಾಸ .
ಆರಂಭ ಕಾಲದಲ್ಲಿ ಅರೇಬಿಯಾದಿಂದ ಬಂದ ಮಾಲಿಕ್‌ಬ್‌ನುದೀನಾರ್ (ರ) ಮತ್ತು ಅವರ ಅನುಚರರ ಮೂಲಕ ಇಸ್ಲಾಂ ಕೇರಳ ಹಾಗೂ ಕರ್ನಾಟಕದಂಥ ಪರಿಸರ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡಿತು. ಅವರ ನಂತರ ಅವರ ಶಿಷ್ಯಂದಿರು ಹಾಗೂ ಯಮಾನ್ ನಿಂದ ಬಂದ ಇನ್ನಿತರ ವಿದ್ವಾಂಸ-ಸಾದಾತ್ ಕುಟುಂಬಗಳ ಮೂಲಕ ಆ ಪ್ರಬೋಧನಾ ಹೊಣೆಗಾರಿಕೆ ಅಸಲು ರೂಪದಲ್ಲೇ ಪರಂಪರಾಗತ ಶುದ್ಧ ಆಶಯಾದರ್ಶಗಳೊಂದಿಗೆ ಸಾಗಿ ಬಂದು, ಕಡೆಗೆ ಕಾಲಿಕ ಅನಿವಾರ್ಯತೆ ಸಾಂಘಿಕ ರೂಪ ಅಗತ್ಯವಾಗಿ ಬಂದಾಗ ಆ ದಅವಾ ಕ್ಷೇತ್ರಕ್ಕೊಂದು ಸಂಘಟನೆಯ ರೂಪ ಕೊಟ್ಟು ವಿಶ್ವಾಸಿ ಆದರ್ಶದಲ್ಲಿ ಎಡವದಂತೆ ಕಾಯ್ದುಕೊಂಡು ಧರ್ಮ ಪ್ರಬೋಧನಾ ಕ್ಷೇತ್ರವನ್ನು ಸಕ್ರೀಯ ಗೊಳಿಸಿದ ಉಲಮಾಗಳ ಧಾರ್ಮಿಕ ಶುದ್ಧ ಆದರ್ಶದ ದಅವಾ ಚಳಿವಳಿ ರೂಪವೇ ಈ ’ಸಮಸ್ತ’ ಎಂಬ ಬಲಿಷ್ಠ ಉಲಮಾ ಸಂಘಟನೆಯಾಗಿದೆ.

ಇಂದು ಬೇರೆ ಕಡೆಗಳಿಗಿಂತ ಕೇರಳದ ಮುಸ್ಲಿಮರು ಎಲ್ಲಾ ಕ್ಷೇತ್ರಗಳಲ್ಲೂ ಒಂದಿಷ್ಟು ಪ್ರಗತಿ ಸಾಧಿಸದ್ದರೆ ’ಸಮಸ್ತ’ ಅಲ್ಲಿ ಉಂಟು ಮಾಡಿದ ಸಂಘಿಕ, ಸಾಮಾಜಿಕ, ಶೈಕ್ಷಣಿಕ ಜಾಗೃತಿಯೇ ಆಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರಾಯಶಃ ಹಿಂದಿನಿಂದಲೂ ನಮ್ಮ ಪರಿಸರದ ಮುಸ್ಲಿಂ ವಿಶ್ವಾಸಿಗಳು ಧಾರ್ಮಿಕ ವಿಚಾರದಲ್ಲಿ ಹೆಚ್ಚಾಗಿ ಕೇರಳವನ್ನೇ ಅವಲಂಬಿಸುತ್ತಿರುವುದು ಇದೇ ಕಾರಣಕ್ಕೇ ಆಗಿದೆ.
ಹಾಗೆ ನೋಡಿದರೆ ಈ ಪರಿಸರದ ಹೆಚ್ಚಿನ ಧಾರ್ಮಿಕ ವಿದ್ವಾಂಸರು ಅಲ್ಲಿನ ಕಾಲೇಜುಗಳಲ್ಲಿ ಕಲಿತವರೇ ಆಗಿದ್ದಾರೆ. ನಮ್ಮ ಮದ್ರಸಗಳು ಅದೇ’ ಸಮಸ್ತ’ದ ಪಠ್ಯಕ್ರಮದಡಿ ನೋಂದಾವಣೆ ಯಲ್ಲಿರುದು, ಹೆಚ್ಚಿನ ಪುಣ್ಯತ್ಮರ ಝಿಯಾರತ್ ಕೇಂದ್ರಗಳು ಅಲ್ಲಿವೆ.... ಹೀಗೆ ಒಂದರ್ಥದಲ್ಲಿ ಕೇರಳ ನಮ್ಮ ಪಾಲಿಗೆ ಧಾರ್ಮಿಕವಾಗಿ ಹೆಬ್ಬಾಗಿಲು ಇದ್ದಂತೆ ಎಂದರೆ ಅತಿಶಯೋಕ್ತಿಯಲ್ಲ ಬಿಡಿ, ಈ ನಾರಿಕೇಳದ ನಾಡಿಗೆ ’ಸಮಸ್ತ’ ಸಮ್ಮೇಳನ, ಕಾಲೇಜುಗಳ ಘಟಿಕೋತ್ಸವಗಳೆಂದು ಇಲ್ಲಿನ ವಿಶ್ವಾಸಿಗಳ ದಂಡು ವರ್ಷಕ್ಕೊಮ್ಮೆಯಾದರೂ ಹೋಗುತ್ತಾರೆ. ಇದೀಗ ’ಸಮಸ್ತ’ದ ೯೦ರ ಸಮಾರೋಪ ಸಮ್ಮೇಳನ ಫೆಬ್ರವರಿ ೧೧ರಿಂದ ೧೪ ರ ವರೆಗೆ ಆಲಪುಯದಲ್ಲಿ ಐತಿಹಾಸಿಕವಾಗಿ ನಡೆಯಲಿದ್ದು, ಪುಣ್ಯ ಸ್ಫುರಿಸುವ ಆ ಶುಭ್ರ ಸಾಗರದಲ್ಲಿ ಸೇರಿಕೊಳ್ಳುವ ತೀರದ ಬಯಕೆ, ತುಂಬಿ ನಿಂತ ಕನವರಿಕೆ ಇಲ್ಲಿನ ವಿಶ್ವಸಿಗಳದ್ದು, ಆದ್ದರಿಂದಲೇ ಎಲ್ಲರ ಚಿತ್ತ ಆಲಪುಯದತ್ತ....ಸಾಗಿದೆ.
   ಬನ್ನಿ,ಆ ಅನುಗ್ರಹಿತ ಸಮ್ಮೇಳನದಲ್ಲಿ ನಾವು ಕೂಡ ಪಾಲ್ಗೊಂಡು ದನ್ಯರಾಗೋಣ.








No comments:

Post a Comment