ಸೋಷಿಯಲ್ ಮೀಡಿಯಾ ಕಮೆಂಟ್ಸ್ ಗಳಿಂದ ಧರ್ಮವು ಉದ್ಧಾರ ವಾಗದು. ಅದರಿಂದ ದೂರವಿರಿ

ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು


ಜೂನ್ ಹದಿನಾಲ್ಕರ ದಿನ ಬೆಳಗಾಗುತ್ತಲೇ ಲಂಡನ್ ನಗರದಾದ್ಯಂತ ಮೊಳಗಿದ ಶಬ್ದ " ಥ್ಯಾಂಕ್ಸ್ ಟು ರಮದಾನ್ ಥ್ಯಾಕ್ಸ್ ಟು ಮುಸ್ಲಿಮ್ ''

ಹೌದು ಮುಂಜಾವಿನ ಸಮಯ ಲಂಡನಿನ ಗ್ರೆನ್ಫಲ್ ಬ್ರಹತ್ ವಸತಿ ಸಮುಚ್ಚಯದಲ್ಲಿ ನೂರಾರು ಮಂದಿ  ಸುಖ ನಿದ್ದೆಯಲ್ಲಿದ್ದರು.ಕಟ್ಟಡಕ್ಕೆ ಬೆಂಕಿ ಬಿದ್ದು ಧಗಧಗ ಉರಿಯುತ್ತಿದ್ದರೂ ಯಾರಿಗೂ ಗೊತ್ತಾಗಲಿಲ್ಲ.ಪಕ್ಕದಲ್ಲಿರುವ ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಹೊರ ಬರುತ್ತಿರುವ ಮುಸ್ಲಿಂ ಯುವಕರು ಬೆಂಕಿಯನ್ನು ಕಂಡದ್ದೇ ತಡ ವಸತಿಯತ್ತ ಧಾವಿಸಿ ಆಲಾರಂ ಹೊಡೆದು ಬೊಬ್ಬೆ ಹಾಕಿ ಎಬ್ಬಿಸಿದರು  ಅರ್ಧ ನಿದ್ದೆಯಿಂದ್ದೆದ್ದು ಗಾಬರಿಯಿಂದ ಬರುವ ಜನರ ಉಳಿಸಿಕೊಳ್ಳಲು ನೆರವಾದರು.ಆದರೂ ಅಷ್ಟರಲ್ಲೇ ಹನ್ನೆರಡು ಜೀವಗಳು ಬೆಂಕಿಗೆ ಅಹುತಿಯಾಗಿತ್ತು.ಬದುಕುಲಿದವರು
ಅವಾಗ ತೆಗೆದ ಉದ್ಗಾರವೇ ರಮದಾನಿಗೂ ಮುಸ್ಲಿಮರಿಗೂ ಹೃದಯ ತುಂಬಿದ ಕೃತಜ್ಞತೆಯ ಸುರಿಮಳೆ.
ಲಂಡನಿಗೆ ಲಂಡನೇ ಎದ್ದು ನಿಂತು ಗೌರವ ಕೊಟ್ಟಿತು.
ಬೆಳಗ್ಗಿನ ಆದಾನ್ (ಬಾಂಗ್)ಯಾರಿಗೂ ಕಿರಿಕಿರಿಯಾಗಲಿಲ್ಲ ಅದು ಜೀವ ಉಳಿಸಿದ ಧ್ವನಿಯಾಯಿತು.
ಇಂತಹಾ ಜನ ಜಗ ಮೆಚ್ಚುವ ಕಾರ್ಯ ಮುಸ್ಲಿಮರು ಮಾಡಬೇಕು.ಅಲ್ಲಾಹನು ಹೇಳುತ್ತಾನೆ ಒಳಿತನ್ನು ಮಾಡಿದವನಿಗೆ ಒಳಿತಿನ ಪ್ರತಿಫಲ ವಿದೆ.ಅದಕ್ಕಿಂತ ಜಾಸ್ತಿ (ಅಲ್ಲಾಹನ ದರ್ಶನ ವೂ) ಇದೆ  ಪ್ರಯಾಸ ಮತ್ತು ಅಪಮಾನ ಅವರ ಮುಖದಲ್ಲಿ ಆವರಿಸದು. ಅವರು ಸ್ವರ್ಗದಲ್ಲಿ ಕಾಲಕಾಲದಲ್ಲಿ ವಾಸಮಾಡುವರು.(ಯೂನುಸ್ 26:27
ಕೆಲವು ಮುಖ ಗಳು ಪ್ರಸನ್ನವೂ ಅಲ್ಲಾಹನ ನ್ನು ನೋಡುತ್ತಿರುತ್ತದೆ ಅಲ್ ಖಿಯಾಮ 23
ಒಳಿತು ಕೆಡುಕು ಸರಿಸಮಾನವಲ್ಲ. ಒಳಿತಿನಿಂದ ಕೆಡುಕನ್ನು ತಡೆಯಿರಿ. ಅವಾಗ ನಿನ್ನ ಮತ್ತು ಆತನ ಮದ್ಯೆ ವೈರ ವಿದ್ದರೂ ಪರಸ್ಪರ ಆಪ್ತ ಮಿತ್ರರಾಗುವಿರಿ.
ಮುಸಲ್ಮಾನ ಯಾವತ್ತು ಕೆಡುಕನ್ನು ಮಾಡಲಾರನು. ಒಂದು ವೇಳೆ ಆತ ಮಾಡಿದರೆ ಆತ ನೈಜ ಮುಸಲ್ಮಾನನೂ ಆಗಲಾರ.
ರಸೂಲರು ಹೇಳುತ್ತಾರೆ ಎಲ್ಲರೂ ಪ್ರತಿದಿನ ದಾನ ಮಾಡಬೇಕು.
ಆಗ ಅಬೂದರ್ರ್  ( )ಪ್ರಶ್ನೆ ಮಾಡುತ್ತಾರೆ ಎಲ್ಲಿಂದ ನಾವು ದಾನ ಮಾಡೋದು? ನಮ್ಮಲ್ಲಿ ಸೊತ್ತು ಇಲ್ಲವಲ್ಲಾ.?
ರಸೂಲರು () ಉತ್ತರಿಸುತ್ತಾರೆ,
ಅಲ್ಲಾಹನನ್ಮು ಸ್ತುತಿಸಿವುದು,ಪಶ್ಚಾತ್ತಾಪ ಪಡೋದು,ಒಳತಿನ ಉಪದೇಶ ಮಾಡೋದು ,ಕೆಡುಕನ್ನು ತಡೆಯೋದು,ದಾರಿ ಯಲ್ಲಿರುವ ಮುಳ್ಳು ಕಲ್ಲನ್ನು ತೆಗೆಯೋದು,ಕಣ್ಣು ಕಾಣಿಸಿದ ವ್ಯಕ್ತಿಗೆ ದಾರಿ ತೋರೋದು,ಮೂಕ ಕಿವುಡನನ್ನು ತಾಳ್ಮೆಯಿಂದ ಆಲಿಸುವುದು,ಬಲಿಷ್ವವಾದ ಕಾಲುಗಳಿಂದ ಅಸಹಾಯಕನ ಸಹಾಯಕ್ಕೆ ಶ್ರಮಿಸುವುದು,ಗಟ್ಟಿ ರಟ್ಟೆಯನ್ನು ದುರ್ಬಲರ ರಕ್ಷಣೆಗೆ ಉಪಯೋಗಿಸೋದು.ಇದು ನಿಮ್ಮಿಂದ ಮಾಡಬಹುದಾದ ದಾನವಾಗಿದೆ.(ನಸಾಯಿ: ಕಿತಾಬುಲ್ ಕುಬ್ರಾ)
ರಸೂಲರು ವಿವರಿಸುತ್ತಾರೆ,
ಜನರಿಗೆ ಹೆಚ್ಚು ಉಪಕಾರ ಮಾಡುವವನು ಅಲ್ಲಾಹನಿಗೆ ಇಷ್ಟಪಟ್ಟವನಾಗಿರುತ್ತಾನೆ.ಅಲ್ಲಾಹನಿಗೆ ಅತ್ಯಂತ ಇಷ್ಟಪಟ್ಟ ಕರ್ಮ ಒಬ್ಬರಿಗೆ ಸಂತಸವನ್ನು ಕೊಡುವುದಾಗಿದೆ.ಆತನ ತೊಂದರೆ ನೀಗಿಸೋದು ಅಥವಾ ಸಾಲ ತೀರಿಸೋದು,ಇಲ್ಲವೇ ಹಸಿವನ್ನು ನೀಗಿಸೋದು.ನನ್ನ ಮಸೀದಿಯಲ್ಲಿ ಒಂದು ತಿಂಗಳು ಇಅ್ ತಿಕಾಫ್ (ಭಜನೆ) ಕೂರುವುದರ ಬದಲು ಒಬ್ನನ ಸಹಾಯಕ್ಕಾಗಿನಡೆಯುವುದು ನನಗಿಷ್ಟವಾಗಿದೆ.ಕೋಪವನ್ನು ಸಹಿಸಿದರೆ ಅಲ್ಲಾಹನು ತನ್ನ ನ್ಯೂನತೆಗಳನ್ನು ಮರೆಮಾಚುತ್ತಾನೆ.ಕ್ರೋಧವನ್ನು ತಡೆದರೆ ಹೃದಯ ದಲ್ಲಿ ಅಲ್ಲಾಹನು ತೃಪ್ತಿ ಯನ್ನು ಕೊಡುತ್ತಾನೆ. ಮಿತ್ರನ ಆವಶ್ಯಕತೆ ಗಾಗಿ ನಡೆದರೆ ನರಕದ ಮೇಲಿನ ಸ್ವೀರಾತ್ (ಸೇತುವೆ)ಯನ್ನು ದಾಟುವಾಗ ಕಾಲುಗಳನ್ನು ಬಲಪಡಿಸುತ್ತಾನೆ.ಕೆಟ್ಟ ಸ್ವಭಾವ ಜೇನು ತುಪ್ಪ ದಲ್ಲಿ ಹುಳಿ ಹಿಂಡಿದಂತೆ ಪುಣ್ಯವನ್ನು ಹಾಳುಮಾಡುತ್ತದೆ
ನಮ್ಮಲ್ಲಿ ಹಲವರು ಮೇಲಿಂದಮೇಲೆ ಉಂರ ಯಾತ್ರೆ ಕೈಗೊಳ್ಳುತ್ತಾರೆ ಆದರೆ ತನ್ನ ಗಮನಕ್ಕೆ ಬಂದ ಯಾವದೇ ಅಸಹಾಯಕರಿಗಾಗಲಿ ಅನಾಥರಿಗಾಗಲಿ ಚಿಕ್ಕಾಸು ಸಹಾಯ ಮಾಡಲರರು ಆದರೆ ಮದೀನ ಮಸೀದಿಯಲ್ಲಿ,ರೌಳಾ ಶರೀಪಿನಲ್ಲಿ ತಂಗಲು ಸಾಹಸವನ್ನೇ ಮಾಡುತ್ತಾರೆ.
ಹಝ್ರತ್ ಸಿದ್ದೀಖ್ () ರವರು ಗೋತ್ರದ ಮಂದಿಗೆ ಹಾಲು ಕರೆದು ಕೊಡುತ್ತಿದ್ದರು.ಖಲೀಫ ಸ್ಥಾನ ವನ್ನು ಅಲಂಕರಿಸಿದಾಗ ಗೋತ್ರದ ಮಹಿಳೆಯು ನೀವು ಈಗ ಖಲೀಫರಾಗಿರುವಿರಿ ಆದ್ದರಿಂದ ನೀವು ಇನ್ನುಮುಂದೆ ಇದನ್ನು ನಿಲ್ಲಿಸಬೇಕೆಂದು ಹೇಳುತ್ತಾರೆ.
ಅದಕ್ಕುತ್ತರವಾಗಿ ಖಲೀಫಾ ಹೇಳುತ್ತಾರೆ ನನಗೆ ಸಿಕ್ಕ ಸ್ಥಾನ ನನ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ!.
 ಸ್ವಹಾಬಿಗಳಾದ ಅಬೂ ವಾಯಿಲ್ () ನೆರೆಯ ಅಸಹಾಯಕ ವೃದ್ದೆಯರಿಗೆ ಅತ್ಯಾವಶ್ಯಕ ವಸ್ತುಗಳನ್ನು ತಲುಪಿಸುತ್ತಿದ್ದರು.
ಪ್ರವಾದಿ ಮೊಮ್ಮಗ ಹಝ್ರತ್ ಹುಸೈನ್ () ಮಗನಾದ ಅಲಿಯ್ಯಿ ( )ಸಯ್ಯಿದ್ ಕುಟುಂಬ ನಾಯಕರು ಮನೆಯಲ್ಲಿ ರೊಟ್ಟಿ ಯನ್ನು ಮಾಡಿ ರಾತ್ರಿ ಹೊತ್ತಲ್ಲಿ ಯಾರಿಗೂ ತಿಳಿಯದಂತೆ ಹಸಿದವರ ಮತ್ತು ಬಡವರ ಮನೆ ತಟ್ಟಿ ಆಹಾರ ಕೈ ಗಿಟ್ಡು ಬರುತ್ತಿದ್ದರು .ಅದು ಯಾರು ಎಂದು ಯಾರಿಗೂ ತಿಳಿದಿರಲಿಲ್ಲ.ಅವರ ಮರಣದ ಮರುದಿನ ರೊಟ್ಟಿ ಕಟ್ಟು ಕಾಣದಾದಾಗ ಗೊತ್ತಾದದ್ದು ತಮಗೆ ಅನ್ನ ಕೊಡುತ್ತಿದ್ದವರು ಮಹಾನುಭಾವರೆಂದು.
ರಮಾಳಾನಿನ ಪ್ರಯುಕ್ತ ಅನೇಕ ರಿಲೀಫ್ ಗಳು ನಡೆಯುತ್ತಲಿದೆ.ನಮ್ಮ ಚೊಕ್ಕಬೆಟ್ಡುವಿನಲ್ಲೇ  ಎಸ್ ಎಸ್ ಗ್ರೂಪ್ ನವರು ನೂರಾರು ರಂಝಾನ್ ಕಿಟ್ ವಿತರಿಸಿದ್ದಾರೆ.ನಮ್ಮ ಊರಿನ
ಬೇರೆ ಉದ್ಯಮಿಗಳೂ ಊರಿನ ಹೊರಗೆ ಹಳ್ಳಿ ಪ್ರದೇಶದಲ್ಲಿ ಅತ್ಯಂತ ಬಡ ಕುಟುಂಬಗಳಿಗೆ ಬೆಳ್ತಂಗಡಿ ,ಚಾರ್ಮಾಡಿ ಕಡೆ ಸದ್ದಿಲ್ಲದೇ ಕಿಟ್ ವಿತರಣೆ ಮಾಡಿದ್ದಾರೆ.ಮಂಗಳೂರಿನ ಪ್ರಸಿದ್ದ ಸೇವಾ ಸಂಸ್ಥೆ ಟ್ಯಾಲೆಂಟ್ ಆಸ್ಪತ್ರೆಯ ಲ್ಲಿರುವ ರೋಗಿಗಳಿಗೆ ವಸ್ತ್ರ ವಿತರಣೆ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ಯಾವುದೇ ಪ್ರಚಾರ ಬಯಸದ ಇಂತಹಾ ಕಾರ್ಯಗಳು ಇಸ್ಲಾಮಿಗೆ ಹೆಚ್ಚು ಗೌರವ ತರುವಂತಹುದಾಗಿದೆ.
ವಿಷಾದ ವಿಚಾರವೇನೆಂದರೆ ಸೋಷಿಯಲ್ಲಿ ಮೀಡಿಯಾಗಳಲ್ಲಿ ಅನೇಕ ಮಂದಿ ಅಶ್ಲೀಲ ಬೈಗುಳ, ತೀರಾ ಕೆಲಮಟ್ಟದ ಕಮೆಂಟ್ಸಗಳನ್ನು ಹರಿಯಬಿಡೋದು ರೂಢಿಯಾಗಿಸಿದ್ದಾರೆ ಅದು ಯಾವತ್ತೂ ಇಸ್ಲಾಮಿಗೆ ಶೋಭೆಯಲ್ಲ.ಯಾರೋ ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ಏನೆಲ್ಲಾ ಗೀಚಿದರೆ ಅನ್ಯ ಕೋಮಿನ ಸುಸಂಸ್ಕೃತ ಮಂದಿ ಇಸ್ಲಾಮನ್ನು ತಪ್ಪಾಗಿ ಅರ್ಥೈಸಬಹುದು.
ಅದು ಇಸ್ಲಾಮಿನ ಸಂಸ್ಕಾರವೆಂದು ತಿಳಿಯಲೂ ಬಹುದು.
ಯಾವ ಧರ್ಮದವರಾಗಲಿ ಕೆಡುಕು ದ್ವೇಷ ಮೂಲಕ ಅವರ ಧರ್ಮವನ್ನು ಜಾಗ್ರತಿ ಮಾಡಲಾರರು.ಧರ್ಮಜಾಗ್ರತಿ ನಂಬಿಕೆಯಿಂದ ಮಾತ್ರ ಬಾಳುತ್ತದೆ ಅದನ್ನು ಬಲವಂತವಾಗಿ ಹೇರಲಾಗದು.ಹಾಗೇನಾದರೂ ಮಾಡಿದರೆ ಅದು ಹೆಚ್ಚು ಕಾಲ ಬಾಳಿಕೆಯೂ ಬಾರದು.
ಮಹನೀಯರು ತೋರಿದ ಆದರ್ಶ ನಮ್ಮದಾಗಬೇಕು. ಹಝ್ರತ್ ನಿಝಾಮುದ್ದೀನ್ ( )ರಾತ್ರಿಯಲ್ಲಿ ದೆಹಲಿಯ ಬೀದಿ ಬದಿ ಚಳಿಗೆ ನಡುಗುವ ಮಂದಿಯ ಬಾಯಿಗೆ ರೊಟ್ಡಿ ತುಂಡನ್ನು ಇಟ್ಡು ಬರುತ್ತಿದ್ದರು.ಹಝ್ರತ್ ನಿಝಾಮುದ್ದೀನ್ ರೈಲು,ಊರು ಸುಪರಿಚಿತವಾಗಿದೆ. ಅದೇ ಹೆಸರಲ್ಲಿ  ದೆಹಲಿಯ ಪಕ್ಕದಲ್ಲಿ ಪ್ರಸಿದ್ದ ದರ್ಗಾವೂ ಇದೆ.   ಹೆಸರು ಭಾರತದ ಸುಂದರ ಇತಿಹಾಸದಲ್ಲಿ ಅಮರ ನಾಮವಾಗಿದೆಶಹೀದೇ ಮಿಲ್ಲತ್ ಪತಹ್ ಅಲಿ ಟಿಪ್ಪೂ ದೇವಸ್ಥಾನ ದ್ವಂಸಕರನ್ನು ಮಟ್ಟಹಾಕಿದ್ದು ಚರಿತ್ರೆಯ ಭಾಗ.ಅವರು ಭಕ್ತಿಯಲ್ಲೂ ಕಮ್ಮಿ ಇರಲಿಲ್ಲ.ಮಸೀದಿಯ ಉದ್ಘಾಟನೆಯನ್ನು ಮಂಜಾವಿನ ಸುಬಹಿ ನಮಾಜು ಖಳಾ ಆಗದವರು  ನಿರ್ವಹಿಸಬೇಕೆಂಬ ಷರತ್ತಿಗೆ ಟಿಪ್ಪೂ ಸುಲ್ತಾನ್ ಅವರಲ್ಲದೇ ಬೇರೆ ಯಾರೂ  ಅಲ್ಲಿ ಇರಲಿಲ್ಲ.ಭಾರತದ ಚರಿತ್ರೆಯಲ್ಲಿ ಸಾತ್ವಿಕ ಅವುಲಿಯಾರ ಪಾತ್ರ ಮಹತ್ತರವಾದದ್ದು. ದಾರಿಯೇ ದೇಶದಲ್ಲಿ ಶಾಂತಿ ಸಮಾಧಾನ ನೆಮ್ಮದಿ ಯನ್ನು ತರಬಲ್ಲುದು.ಅದೆಲ್ಲವೂ ಪ್ರವಾದಿ ಮತ್ತು ಅನುಚರರ ಮಾರ್ಗವಾಗಿದೆ.
ಹಝ್ರತ್ ಉಮರ್ ರವರು ಜನರ ಅಹವಾಲು ಅರಿಯಲು ಹೊರಟಿದ್ದರು ಮದ್ಯರಾತ್ರಿಯಲ್ಲಿ.
ದೂರದಲ್ಲಿ  ಬೆಂಕಿಯನ್ನು ಕಂಡು ಅಲ್ಲಿಗೆ ತೆರಳುತ್ತಾರೆಹೆಂಗಸೊಬ್ಬಳು ಹಸಿವಿಗೆ ಮಕ್ಕಳಿಗೆ ಏನನ್ನೂ ಕೊಡಲಾಗದೇ ಕಂಗಾಳಾಗಿ ಬರೀ ನೀರು ಕಾಯಿಸುತ್ತಾ ಮಕ್ಕಳು ನಿದ್ದೆ ಹೋಗಳೆಂದು ಕಾಯುತ್ತಿದ್ದಳು.
ಇದನ್ನು ಕಂಡ ಖಲೀಫಾ ಮನ ಕರಗಿತು.ಸೀದಾ ಮನೆಗೆ ಬಂದು ರಾತ್ರಿಯ ಹೊತ್ತಿನಲ್ಲಿ ರೊಟ್ಟಿಯ ಕಟ್ಟನ್ನು ಎತ್ತಿ ಹಸಿದಿರುವ  ಮಕ್ಕಳ ಕಡೆ ಹೋಗುತ್ತಾರೆ. ಮಕ್ಕಳ ಹೊಟ್ಟೆ ತುಂಬಾ ತಿಂದು ನಗುವತ್ತಿರುವ ಆನಂದವನ್ನು ಕಂಡು ಮರಳುತ್ತಾರೆ.
 ಇಂತಹಾ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ನಾವು ಪ್ರಕಟಗೊಳಿಸಬೇಕಾಗಿದೆ.ಆದ್ದರಿಂದ  ಸೋಷಿಯಲ್ ಕಮೆಂಟ್ಸ್ ಗಳಿಂದ ಸಮುದಾಯದ ಎಲ್ಲರೂ ದೂರವಿರಬೇಕೆಂದು ಬಯಸುತ್ತೇನೆ.ಅದರಿಂದ ಧರ್ಮಕ್ಕೆ ಯಾವ ಲಾಭವೂ ಸಿಗದು.

ಮುಸಲ್ಮಾನನ ಮೌಲ್ಯ ಏರುವುದು ವಿನಯ ಮತ್ತು ಜನಸೇವೆಯಿಂದಾಗಿದೆ. ಹಾಗೇ ಯೋಗ್ಯತೆ ಜಾಸ್ತಿಯಾಗುವುದು ಅಲ್ಲಾಹನನ್ನು ಮತ್ತು ಜನರನ್ನು ಅರಿತುಕೊಂಡಾಗ ಮಾತ್ರವಾಗಿದೆ.

No comments:

Post a Comment