"ಪವಿತ್ರ ಕಾಬಾ ಶರೀಫಿಗೆ ರತ್ನಕಂಬಳಿ ಹಾಸುವುದಕ್ಕಿಂತ ಶ್ರೇಷ್ಠ ಹಸಿದ ಹೊಟ್ಡೆಗೆ ಹಿಟ್ಡು ತುಂಬುವುದಾಗಿದೆ."

ಭಾಷಣ ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು"

ಅವರ ಸಂಪತ್ತಿನಲ್ಲಿ ಬೇಡುವವನಿಗೆ ಮತ್ತು  ತಡೆಯಲ್ಪಟ್ಟವನಿಗೆ ಒಂದು ಹಕ್ಕಿರುವುದು. ಕುರಾನ್
ಸೂರ ಅದ್ದಾರಿಯಾತ್:೧೯

ಮಂಗಳೂರಿನಿಂದ ಪುತ್ತೂರಿಗೆ ಹೋಗುವ ದಾರಿ ಮಾಣಿ ಹತ್ತಿರದ ಕೊಡಾಜೆಯ ಮನೆಯೊಂದಕ್ಕೆ ಗುರುವಾರದಂದು ಸಾವಿರಾರು ಮಂದಿ ಬೇಟಿ ನೀಡಿ ಕಣ್ಣೀರಿನೊಂದಿಗೆ  ಮರಳುತ್ತಿದ್ದರು. ಏನು ಕಾರಣ ಎಂದರೆ ಬರೀ ಸಿಂಪಲ್! ಆ ಮನೆಗೆ ಕಷ್ಟಗಳೊಂದಿಗೆ ಕಣ್ಣೀರಿನೊಂದಿಗೆ ಬಂದವರು ಹಿಂದಿರುಗುವಾಗ ಸಂತಸದಿಂದ ನಗುನಗುತ್ತಾ ಹೋಗುತ್ತಿದ್ದರು. ಯಾವುದೇ ಸಂದರ್ಭದಲ್ಲಿ ಅವರು ಅಹವಾಲು ಹೇಳಲು ಬಂದವರಿಗೆ ಬಾಗಿಲು ಮುಚ್ಚಲಿಲ್ಲ.ಯಾವದೇ ಒತ್ತಡದ ಸಮಯದಲ್ಲೂ ಯಾರೊಂದಿಗೂ ರೇಗಾಡಲಿಲ್ಲ.ಅವರೇ ಸುಲ್ತಾನ್ ಹಾಜಿ ಎಂದೇ ಪ್ರಸಿದ್ಧರಾದ ಕೊಡಾಜೆ ಹುಸೈನ್ ಹಾಜಿ.
ಇಂತಹಾ ಶ್ರೀಮಂತಿಕೆಯನ್ನು ಎಲ್ಲರೂ ಆಶಿಸಬೇಕಾಗಿದೆ.
ಕಾರಣ
ಅಲ್ಲಾಹನು ಹೇಳುತ್ತಾನೆ ಅವರ ಸೊತ್ತಿನಲ್ಲಿ ಬೇಡುವವರಿಗೂ ದರಿದ್ರರಿಗೂ ಒಂದು ಹಕ್ಕು ಇದೆ.
ಸಂಪತ್ತಿನಲ್ಲಿ ಒಂದಂಶವನ್ನು ಬಡ ನಿರ್ಗತಿಕರಿಗಾಗಿ ಮೀಸಲಿಡುವುದು
ಸ್ವರ್ಗ ಪ್ರವೇಶವನ್ನು ಕೊಡುವ ಕರ್ಮವಾಗಿರುತ್ತದೆ. ಇದರಿಂದಲೇ
ಇಸ್ಲಾಮಿನ ಸೌಂದರ್ಯ ವನ್ನು ಕಾಣಲು ಸಾಧ್ಯವಾಗುವುದು. ಅದಲ್ಲದೇ ಬರೀ ಭಕ್ತಿ ಆರಾಧನೆಯಿಂದ ಮಾತ್ರ ಧರ್ಮವನ್ನು ಮೇಳೈಸಲಾಗದು.
ಪ್ರವಾದಿ (ಸ) ರವರು ಹೇಳುತ್ತಾರೆ .ಅಲ್ಲಾಹನು ಕೆಲವು ಜನರನ್ನು ಸೃಷ್ಟಿಸಿದ್ದಾನೆ.ಜನರು ಸಂಕಷ್ಟದ ಸಮಯ ಅವರ ಬಳಿ ತೆರಳುತ್ತಾರೆ.ಅಲ್ಲಾಹನ ಶಿಕ್ಷೆಯಿಂದ ಅವರು ನಿರ್ಭೀತರಾಗಿರುತ್ತಾರೆ.
ಈ ರೀತಿಯ ಜನರನ್ನು ಜನ ಕೊಂಡಾಡುತ್ತಾರೆ.ಅಂತಹಾ ವ್ಯಕ್ತಿತ್ವ ಸುಲ್ತಾನ್ ಹಾಜಿ.
ಇನ್ನು ಶ್ರೀಮಂತಿಕೆಯಿರುವ ಎಲ್ಲಾ ಜನರ ಬಳಿ ಹೋಗುವುದಕ್ಕೇ ಎಷ್ಟೇ ಕಷ್ಟಇದ್ದರೂ  ಜನ ಇಷ್ಟ ಪಡುವುದಿಲ್ಲ .
ಇನ್ನೂ ಸಂಪತ್ತು ನಮ್ಮದಲ್ಲ.ನಾವು ಅದನ್ನು ವಿಲೇವಾರಿ ಮಾಡುವವರು ಮಾತ್ರ.
ನಾವು ಅವರಿಗೆ ನೀಡಿದ್ದರಿಂದ ಅವರು ದಾನವಾಗಿ ಖರ್ಚು ಮಾಡ್ತಾರೆ. ಕುರಾನ್
 ಯಾಕೆ ಯತೀಮನನ್ನು ಪರಿಗಣಿಸಲಿಲ್ಲ ?ಬಡವರನ್ನು ಉಣಿಸಲು ಯಾಕೆ ಪ್ರೇರೇಪಿಸಲಿಲ್ಲ.?ಉತ್ತರದಾಯಿ ಸೊತ್ತನ್ನು ಧಾರಾಳವಾಗಿ ತಿನ್ನುವಿರಿ, ಸಂಪತ್ತನ್ನು ತೀವ್ರವಾಗಿ ಪ್ರೀತಿಸುವಿರಿ
ಈ ಸತ್ಯ ಪ್ರಾಣವು ಗಂಟಲಿಗೆ ತಲುಪಿದಾಗ ತಿಳಿಯುವುದು ಕುರಾನ್.
ಅಲ್ಲಾಹನಿಗೆ ಸಾಲ ಕೊಡುವವರು ಯಾರು? ಕುರಾನ್
ಅಲ್ಲಾಹನ ದಾರಿಯಲ್ಲಿ ದಾನ ಮಾಡುವವರ ಉದಾಹರಣೆ ಯು ಒಂದು ದಾನ್ಯಕ್ಕೆ ಏಳುನೂರು ಕಾಳು ಬೆಳೆಯುವುದಾಗಿದೆ.(ಕುರಾನ್)
ರಸೂಲರು ಹೇಳುತ್ತಾರೆ,
 ನಿಮ್ಮಲ್ಲಿ ನನಗೆ ಹತ್ತಿರ ಕೈ ಉದ್ದವಿರುವವರಾಗಿರುತ್ತಾರೆ
ಆಯಿಷಾ ಬೀವಿ ಹೇಳುತ್ತಾರೆ ನಮ್ಮಲ್ಲಿ ಕೈ ಉದ್ದ ಝೈನಬಾ ‌ಆಗಿದ್ದರು.
ಅವರಂತೆ ದಾನ ಮಾಡುವ ,ಕುಟುಂಬ ಸೇರಿಸುವ,ಸಹಾಯ ಮಾಡುವ ಹೆಣ್ಣನ್ನು ನಾನು ನೋಡಿಲ್ಲ.ಅವರು ಕೈಯಿಂದ ಸಂಪಾದಿಸಿ ದಾನ ಮಾಡುತ್ತಿದ್ದರು.
ಹೀಗೆ ಧಾರಾಳ ದಾನ ಮಾಡುವ ಗುಣ ಅವರಲ್ಲಿತ್ತು.
ಜೀವಕಾರುಣ್ಯ ಕೆಲಸಗಳನ್ನು ಹಲವು ಸಂಘ ಸಂಸ್ಥೆಗಳು ಮಾಡುತ್ತಲಿದೆ.ಟ್ಯಾಲೆಂಟ್ ನಡೆಸುವ ನಂಡೆ ಪೆಂಙಲ್ ಕಾರ್ಯಕ್ರಮ ಶ್ಲಾಘನೀಯ.ಬರುವ ಶುಕ್ರವಾರ ಸಂಜೆ ಮದುವೆಯ ಜೋಡಿಗಳನ್ನು ಒಟ್ಟು ಮಾಡುವ ಮಹನೀಯರನ್ಮು ಸೇರಿಸಿ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ
ಅದನ್ನು ಬೆಂಬಲಿಸಿ ಎಂದು ಸಾಂದರ್ಭಿಕ ವಾಗಿ ಹೇಳಬಯಸುತ್ತೇನೆ.ಮದುವೆ ದಲ್ಲಾಳಿಗಳು ಖಂಡಿತ ಅತ್ಯುನ್ನತ ಕರ್ಮವನ್ನು ಮಾಡುತ್ತಿದ್ದಾರೆ.
ಹಿಂದಿನ ತಲೆಮಾರು ಮಸಲ್ಮಾನರು ಸೇವಾ ಮಾರ್ಗದಲ್ಲೇ ‌ನಿರತರಾಗುತ್ತಿದ್ದರು.
ಹಝ್ರತ್ ಹುಸೈನ್ (ರ )ರ ಸುಪುತ್ರ ಹಝ್ರತ್ ಝೈನುಲ್ ಆಬಿದೀನ್ ರನ್ನು ಮಯ್ಯಿತ್ತ್ ಸ್ನಾನ ಮಾಡಿಸುವಾಗ ಕುತ್ತಿಗೆ ಭಾಗದಲ್ಲಿ ಕಪ್ಪಾದ ಕಲೆಗಳಿದ್ದವು ಅದು ಬಡ ಮತ್ತು ವಿಧವೆಯರ ಮನೆಗೆ ವಸ್ತುಗಳನ್ನು ಹೊತ್ತು ಕೊಂಡು ಹೋದ ಗರುತುಗಳಾಗಿತ್ತು.ನಾವಾದರೆ ನಮಗೇ ಬೇರೆಯವರು ಹೊತ್ತು ತರಬೇಕೆಂದು ಬಯಸುವೆವು!
ಖಲೀಫಾ ಉಮರ್ (ರ)ಅಳುತ್ತಿರುವ ಮಗುವನ್ನು ಗಮನಿಸುತ್ತಾರೆ.ನಮಾಜಿಗೂ ಆ ಮಗುವಿನ ಅಳು ಕಿರಿಕಿರಿಯನ್ನು ಉಂಟು ಮಾಡುತ್ತದೆ.ಸಂಗತಿಯನ್ನು ತಿಳಿದಾಗ ಮೊಲೆಹಾಲನ್ನು ನಿಲ್ಲಿಸಲು ಒತ್ತಡ ಹೇರುವ ತಾಯಿಯ ಬಗ್ಗೆ ಅರಿತು ಕೊಳ್ಳುತ್ತಾರೆ. ಅಂದಿನಿಂದ  ಹಾಲುಣಿಸುವ ತಾಯಿಗಾಗಿ ವಿಶೇಷ ಪ್ಯಾಕೇಜ್ ನ್ನು ಸರಕಾರದ ವತಿಯಿಂದ ಘೋಷಿಸಿ ಆಜ್ಞೆ ಹೊರಡಿಸುತ್ತಾರೆ.ಮತ್ತು ಮಕ್ಕಳನ್ನು ಮೊಲೆಹಾಲು ಬಿಡಲು ಒತ್ತಡ ಮಾಡಬೇಡಿ ಎಂದು ಕರೆ ಕೊಡುತ್ತಾರೆ ಒಂದು ಮಗು ಅತ್ತರೂ ಅದಕ್ಕೆ ಪರಿಹಾರ ಕೊಡುವ ಸರಕಾರವಾಗಿತ್ತು ಖಲೀಫರದ್ದು.
ಒಮ್ಮೆ ಉಮರಿಬ್ನು ಅಬ್ದುಲ್ ಅಝೀಝ್ (ರ) ರ ಬಳಿ ಹಜ್ಜಾಜಿಗಳು ಕಾಬಾ ಶರೀಪಿಗೆ "ಕಿಸ್ವಾ" ಹೊದಿಸಲು ಅನುಮತಿ ಕೇಳುತ್ತಾರೆ‌.ಆಗ ಖಲೀಫಾ ಹೇಳಿದ್ದು,
ನೀವು  ಪವಿತ್ರ ಕಾಬಾ ಶರೀಪಿಗೆ ರತ್ನಕಂಬಳಿ ಹಾಸುವುದಕ್ಕಿಂತ ಹಸಿದಿರುವ ಹೊಟ್ಟೆಗೆ ಹಿಟ್ಟನ್ನು ತುಂಬಿ ಅದು ನನಗಿಷ್ಟ.
ಎಂದಾಗಿತ್ತು.
ಹಝ್ರತ್ ಅಲೀ ರ ಹೇಳುತ್ತಾರೆ ನಾಲ್ಕು ಬೊಗಸೆ ಅನ್ನ ಉಣಿಸುವುದು ಒಂದು ಕೊರಳನ್ನು ಜೀತ ಮುಕ್ತಿ ಮಾಡುವುದಕ್ಕಿಂತ ನನಗೆ ಇಷ್ಟವಾಗಿದೆ.
ಸ್ವಾಹಾಬಿಗಳಲ್ಲಿ ಹಲವರು ಬಡ ಮನೆಗಳಿಗೆ ತೆರಳಿ ನಮಗೆ ಏನಾದರೂ ಆವಶ್ಯಕತೆ ಇದೆಯಾ?
ಉಪ್ಪು,ಝೈತ್ ಎಣ್ಣೆ ಇದೆಯಾ? ಎಂದು ವಿಚಾರಿಸುತ್ತಿದ್ದರು.
ಇಬ್ನು  ಉಮರ್ (ರ )ಹೇಳುತ್ತಾರೆ "ಹಜ್ಜ್ ಬಳಿಕ ಪುನಃ ಹಜ್ಜ್ ಮಾಡುವುದಕ್ಕಿಂತ ತಿಂಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಬಡವರ ಮನೆಗಳನ್ನು ಸಂದರ್ಶಿಸುದನ್ನು ಬಯಸುವೆ."
ಇಂತಹಾ ಸಂಗತಿಗಳಿಗೆ ಉತ್ತಮ ಮಾದರಿ ಶ್ರೀಮಂತ ರಾದ ಸುಲ್ತಾನ್ ಹಾಜಿ ಯಂತೆ ಶ್ರೀಮಂತ ರು ಮಾದರಿಯಾಗಲಿ

No comments:

Post a Comment