ಅವಕಾಶವಾದಿ ಮತ್ತು ಜಾತಿ ರಾಜಕೀಯ ದೇಶವನ್ನು ಸೋಲಿಸಬಹುದು.


ಅಲ್ ಅಹ್ಸನ್ ಪ್ರಧಾನ ಸಂಪಾದಕ 
ಮೌಲನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಅವರ  ಜುಮ್ಮಾ ಭಾಷಣ

ಹಿಜರಿ ಐದನೆಯ ವರ್ಷ ಸ್ಥಾಪಿಸಲ್ಪಟ್ಟ  ಕೇರಳದ ಕೊಡುಂಗಲ್ಲೂರಿನ ಮಸೀದಿ ಪ್ರಥಮ ಮಸೀದಿಯಾಗಿದೆ.
ಆರನೇಯ ಶತಮಾನದಲ್ಲೇ ಅರಬರೊಂದಿಗೆ ಭಾರತದ ವ್ಯಾಪಾರ ಸಂಬಂಧ ವನ್ನು ಉಲ್ಲೇಖಿಸಲಾಗುತ್ತದೆ.
ಕಣ್ಣೂರಿನ ಪ್ರಥಮ ಮುಸ್ಲಿಂ ರಾಜ ಕುಟುಂಬ ಅರಕ್ಕಲ್ ರಾಜ ವಂಶವಾಗಿರುತ್ತದೆ.ಚೇರಮಾನ್ ಪೆರುಮಾಳ್ ರಾಜರ ಮಕ್ಕಾ  ಸಂದರ್ಶನ ಮತ್ತು ಇಸ್ಲಾಂ ಸ್ವೀಕಾರ ಹಾಗೇ ಮಾಲಿಕುದ್ದೀನಾರ್ ಕುಟುಂಬದ ಜೊತೆ ವೈವಾಹಿಕ ಸಂಬಂಧ ವನ್ನು ಒಂಬತ್ತನೇಯ ಶತಮಾನದಲ್ಲಿ ಜೀವಿಸಿದ್ದ ಖ್ಯಾತ ಚರಿತ್ರೆ ವಿದ್ವಾಂಸರಾದ ಶೈಖ್ ಅಲೀಯ್ಯಿ ತ್ತಿಬ್ರಿ (ರ) ವಿವರಿಸುತ್ತಾರೆ.
ಕಣ್ಣೂರು ಕೇಂದ್ರವಾಗಿ ಸ್ಥಾಪಿಸಲ್ಪಟ್ಟ ಅರಕ್ಕಲ್ ಅರಮನೆ ಗೋಡೆಗಳನ್ನು ಕೆಡವಿದಾಗ ಸಿಕ್ಕ ಲಿಖಿತಗಳು ಚೇರಮಾನ್ ರಾಜರು ಮಕ್ಕಾ ಯಾತ್ರೆ ಕೈಗೊಂಡದ್ದು,ತಾಜುದ್ದೀನ್ ಆಗಿ ಬದಲಾದ ಘಟನೆಯನ್ನು ವಿವರಿಸುತ್ತದೆ.ಅರಕ್ಕಲ್ ಅಲೀರಾಜ ತಾಯಿ ಶ್ರೀದೇವಿ ಚೇರಮಾನ್ ಪೆರುಮಾಳ್ ಸಹೋದರಿಯಾಗಿದ್ದರು.ಮಲಬಾರ್ ಲೈಬ್ರರಿಗಳಲ್ಲಿ ಈ ಸಂಬಂಧ ದಾಖಲೆಗಳಿವೆ.
ಇಸ್ಲಾಂ ಶತಮಾನಗಳ ಹಿಂದೆ ಭಾರತದಲ್ಲಿ ನೆಲೆಯಾದ ಧರ್ಮ.ಅದು ಇಲ್ಲಿಯ ದೇಶಿಯತೆಗೆ ಮಾರಕವಾಗಿರಲಿಲ್ಲ.
ನಂತರ ಮುಸ್ಲಿಂ ರಾಜರುಗಳು ಆಳ್ವಿಕೆ ಮಾಡಿದ್ದಾರೆ ಆ ಕಾಲದಲ್ಲೂ ದೇಶಕ್ಕೆ ಧಕ್ಕೆ ಇರಲಿಲ್ಲ.ಮೊದಲ ಸ್ವಾತಂತ್ರ್ಯ ಸಂಗ್ರಾಮ (ಸಿಪಾಯಿ ದಂಗೆ) ರುವಾರಿ ಮತ್ತು ಸಾರಥಿ ಮೊಗಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದ್ದೂರ ಶಾ ಸಫರ್ ಆಗಿದ್ದರು.ದಕ್ಷಿಣ ಭಾರತವನ್ನು ನಲುವತ್ತು ವರ್ಷಗಳ ಕಾಲ ರಕ್ಷಿಸಿದ ಹೈದರಲಿ ,ಟಿಪ್ಪು ಸುಲ್ತಾನ್ ಆಡಳಿತ ಕಾಲವೂ ಮತ ಆಧಾರಿತವಾಗಿ ವಿಭಜನೆಯಾಗದೇ ದೇಶ ಉಳಿಯಿತು.ಈ ಸಂದರ್ಭಗಳಲ್ಲಿ ಮತ್ತು ನಂತರದ ವಿದೇಶಿ ವಿರುದ್ಧ ಹೋರಾಟದ ಕಾಲದಲ್ಲೂ ಮತೀಯ ಆಧಾರಿತ ಸಂಘರ್ಷಕ್ಕೆ ಅವಕಾಶವಿರಲಿಲ್ಲ.
ಯಾವಾಗ ರಾಜಕಾರಣವನ್ನು ಧರ್ಮಾಧಾರಿತವಾಗಿ ವಿಭಜಿಸಲು ಶುರುವಾಯಿತೋ ಅಂದಿನಿಂದ ಈ ದೇಶ ಸಂಕಷ್ಟ ಎದುರಿಸುತ್ತಿದೆ.
ಹಾಗೇ ಆಡಳಿತವನ್ನು ಸಂಖೆಯ ಲೆಕ್ಕದಲ್ಲಿ ಕಟ್ಟುವ ಅವಕಾಶವಾದ ರಾಜಕೀಯವೂ ದೇಶಕ್ಕೆ ಆತಂಕ ಒಡ್ಡಿದೆ.ಬಿಹಾರ ಇದಕ್ಕೆ ಉತ್ತಮ ಉದಾಹರಣೆ. ಪಟ್ಟ ಕಟ್ಟಲು ಮಹಾ ಘಟ್ ಬಂಧನ್ ಪಟ್ಟ ಉಳಿಸಲು ಕಟ್ ಬಂಧನ್? ತತ್ವವಿಲ್ಲ ಸಿದ್ದಾಂತ ವಿಲ್ಲ!
ಆದರೆ ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಭಾರತೀಯ ರಿಗೆ ಎಸಗುವ ಅನ್ಯಾಯ.
73% ಶೇಕಡಾ  23% ಶೇಕಡವನ್ನು ತಿರಸ್ಕರಿಸುತ್ತದೆ .ಎರಡುವರ್ಷ ಆಡಳಿತ ಮಾಡಿ 29%ಶೇಕಡಾ 23%ಶೇಕಡಾ ಜೊತೆ ಸೇರುತ್ತದೆ! ಆದರೆ ಮತಹಾಕಿದ ಶೇಕಡಾ 73%  ಮಂದಿ ಈ ಆಡಳಿತವನ್ನು ವಿರೋದಿಸುತ್ತಾರೆ.ಇದು ಹೇಗೆ ಪ್ರಜಾ ತಂತ್ರ? ಇದು ಲೆಕ್ಕದ ತಂತ್ರ ಮಾತ್ರ.
ದೇಶದಲ್ಲಿ ನಡೆವ ಅನ್ಯಾಯ ಅಕ್ರಮ ದೌರ್ಜನ್ಯ ವನ್ನೆಲ್ಲಾ ಭಾರತೀಯರು ವಿರೋದಿಸುತ್ತಾರೆ ಅನ್ನುವುದು ಸತ್ಯ .ಅಖ್ಲಾಕ್ ಮತ್ತು ಜುನೈದ್ ಹತ್ಯೆ ಸಮಯ ಭುಗಿಲೆದ್ದ ಅಸಹಿಷ್ಣುತೆಯ ವಿರುದ್ಧ ಜನಾಂದೋಲನ ಇದಕ್ಕೆ ಸಾಕ್ಷಿ.
ಅದೇರೀತಿ ಅಮರನಾಥ ಯಾತ್ರಿಕರನ್ನು ಬಚಾವು ಮಾಡಿದ ಸಲೀಂ ಭಾರತೀಯತೆಗೆ ಹೊಸ ರೀತಿಯ ‍ಭಾವನೆಯನ್ನು ಮೂಡಿಸಿದ್ದಾರೆ.
ಇಂತಹಾ ಭಾವನೆಗಳನ್ನು ಅವಕಾಶವಾದಿ ರಾಜಕೀಯದ ಕುತಂತ್ರ ಸೋಲಿಸಲು ಸಾದ್ಯವಿದೆ.ಭಾರತವನ್ನು ಸೋಲಿಸಲು ಚೀನಾ ಪಾಕಿಗೆ ಅಸಾದ್ಯ ಆದರೆ ಅವಕಾಶವಾದಿ ರಾಜಕೀಯ ದೇಶಕ್ಕೆ ಅಪಾಯವಾಗಿದೆ.ಇಂದು ಪಶ್ಚಿಮೇಶ್ಯ ಬಿಕ್ಕಟ್ಟು ಇಂತಹಾ ಅವಕಾಶವಾದದಿಂದಲೇ ಪರಿಹಾರವಾಗದೇ ಉಳಿದಿದೆ.ಅಲ್ಲಿಯ ನಿಜವಾದ ದ್ರೋಹಿಗಳು ಪ್ಯಾಲಸ್ತೀನಿಯರಲ್ಲ !ಬದಲಿಗೆ ವಲಸಿಗರಾದ ಯಹೂದಿಗಳಾಗಿದ್ದಾರೆ.ಜನ್ಮ ಭೂಮಿಯಿಂದ ಹೊರದಬ್ಬಲ್ಪಟ್ಟ ಪ್ಯಾಲಸ್ತೀನರು ಸ್ವಂತ ನಾಡಿಗಾಗಿ ಹೋರಾಡುತ್ತಿದ್ದರೆ ಅವರನ್ನು ಭಯೋತ್ಪಾದಕರಾಗಿ ಚಿತ್ರೀಕರಿಸಲಾಗುತ್ತಿದೆ.1948 ಮೇ 15 ರಂದು ದಬ್ಬಾಳಿಕೆಯ ಮೂಲಕ ಭೂಮಿಯನ್ನು ಕಬಳಿಸಿದ ಇಸ್ರೇಲರ    ಗುಣಗಾಣ ಮಾಡಲಾಗುತ್ತಿದೆ.ಅವರ ಜೊತೆ ಸಂಬಂಧ ಸ್ಥಾಪಿಸಲಾಗುತ್ತಿದೆ.ನಿರಂತರವಾಗಿ ದೌರ್ಜನ್ಯಕ್ಕೊಳಗಾದ ,ಜನ್ಮಭೂಮಿಯಿಂದ ಹೊರದಬ್ಬಲ್ಪಟ್ಟ ಪ್ಯಾಲಸ್ತೀನ್ ಜನತೆ ನ್ಯಾಯಕ್ಕಾಗಿ ಹೋರಾಡುತ್ತಿದ್ದರೂ ಅವರಿಗೆ ನ್ಯಾಯ ಕೊಡಲು ವಿಶ್ವ ಸಂಸ್ಥೆ ಅಥವಾ ಜಗತ್ತಿನ ದೊಡ್ಡನ್ನ ಅಮೇರಿಕ ಮುಂದಾಗುತ್ತಿಲ್ಲ.ರೋಮನ್ನರಿಂದ ತುಳಿತಕ್ಕೊಳಗಾದ ಯಹೂದಿಗಳು ವಲಸೆಯಲ್ಲೇ ಜೀವನ ಸಾಗಿಸಿದರು.
ಒಂದನೆಯ ಮಾಹಾ ಯುದ್ದ ಬಳಿಕ ಬ್ರಿಟನ್ನಿನ ವಸಾಹತುಗೊಳಗಾದ ಪ್ಯಾಲಸ್ತೀನ್ ನಲ್ಲಿ ಯಹೂದಿಗಳ ವಲಸೆ ಜಾಸ್ತಿಯಾಗುತ್ತದೆ.ಹಿಟ್ಲರನ ಕ್ರೌರ್ಯದ ಕಾರಣ ಅದು ಇಮ್ಮಡಿಯಾಗುತ್ತದೆ.ಇದರಿಂದ
ತಲೆಕೆಡಿಸಿಕೊಂಡ ಬ್ರಿಟನ್ ಪ್ಯಾಲಸ್ತೀನ್ ಹೊಣೆಗಾರಿಕೆಯನ್ನು ವಿಶ್ವ ಸಂಸ್ಥೆಗೆ ಒಪ್ಪಿಸುತ್ತಾದೆ.ಪ್ಯಾಲಸ್ತೀನನ್ನು ತುಂಡು ಮಾಡಲೊಪ್ಪದ ಅರಬರು ಇಸ್ರೇಲ್ ರಾಷ್ಟ್ರದ ಉದಯವನ್ನು ವಿರೋಧಿಸುತ್ತಾರೆ.ಆದರೂ ಯಾರನ್ನೂ ಲೆಕ್ಕಿಸದೇ 1948  ಮೇ15 ರಂದು ಇಸ್ರೇಲ್ ರಾಷ್ಟ್ರದ ಘೋಷಣೆ ಯಾಗುತ್ತದೆ.ವೀರೋಧಿಸಿದ ಜೋರ್ಡಾನ್, ಸಿರಿಯಾ,ಈಜಿಪ್ಟು ಸೋಲನಿಭವಿಸುತ್ತದೆ.ನಂತರ ಉಳಿದದ್ದು ಗಾಝಾ ಮತ್ತು ಪಶ್ಚಿಮ ದಂಡೆ ಮಾತ್ರ.1964 ರಲ್ಲಿ ಅದನ್ನೂ ಕಳಕೊಳ್ಳಬೇಕಾಯಿತು.1974ರಲ್ಲಿ ಈಜಿಪ್ಟ್ ಸಂಧಾನ ಮೂಲಕ ಸಿನಾಯ್ ದ್ವೀಪವನ್ನು ಪಡೆದುಕೊಂಡಿತು.‌ಪ್ಯಾಲಸ್ತೀನರು ಜೋರ್ಡಾನ್ ,ಲೆಬನಾನ್ ಟ್ಯೂನೀಶಿಯಾ ದೇಶಗಳಲ್ಲಿ ಅಲೆದಾಡಬೇಕಾಗುತ್ತದೆ.ಆದರೆ ಯಾರಿಗೂ ಕನಿಕರವಾಗಲಿಲ್ಲ.ಈ ಕಾರಣದಿಂದಲೇ ಭಾರತ ಈ ತನಕ ಪ್ಯಾಲಸ್ತೀನರ ಪರವಾಗಿತ್ತು .ಗಾಂದೀಜಿಯೂ ನನ್ನ ಒಲವು ಪ್ಯಾಲಸ್ತೀನ್ ಪರ ಎಂದಿದ್ದರು.ಅವರು ಇತಿಹಾಸ ಕಲಿತ ಮುತ್ಸಧ್ಧಿ ಗಳಾಗಿದ್ದರು ಎನ್ನುವುದು ಉಲ್ಲೇಖನೀಯ. ನಂತರ
1993 ರಲ್ಲಿ ನಡೆದ ಅರಾಫತ್  ಒಪ್ಪಂದ ಪ್ಯಾಲಸ್ತೀನ್ ಜನತೆಗೆ ಒಂದಿಷ್ಟು ನ್ಯಾಯ ಕೊಟ್ಟಿತು.ಇದೀಗ ಪವಿತ್ರ ಅಕ್ಸಾ ಮಸೀದಿ ನಿರ್ಬಂಧ ಮತ್ತು ದೌರ್ಜನ್ಯ ಪ್ಯಾಲಸ್ತೀನರನ್ನು ಹೊರದಬ್ಬುವ ಹುನ್ನಾರವೇ  ಆಗಿದೆ .ಇಷ್ಡೆಲ್ಲಾ ರಕ್ತರಂಜಿತ ಅಧ್ಯಾಯ ಗಳ ನಿಜ ಸ್ವರೂಪ ಇದ್ದರೂ ವಿಶ್ವಸಂಸ್ಥೆ ಮತ್ತು ಅಮೇರಿಕ ಅವಕಾಶ ವಾದಿ ರಾಜಕಾರಣವನ್ನೇ ಮಾಡುತ್ತಲಿದೆ .
ಜಗತ್ತಿನಾದ್ಯಂತ ಮಸ್ಲಿಮರೇ ಅನ್ಯಾಯಕ್ಕೊಳಗಾದರೂ ಜಗತ್ತು ಮುಸ್ಲಿಮರಿಂದಲೇ ಭಯ ಆತಂಕ ಎದುರಿಸುತ್ತಿದೆ ಎಂದು ಬಿಂಬಿಸಲಾಗುತ್ತಿದೆ .ದೇಶದಲ್ಲಿ ಹಿಂದೆ  ರಾಜರುಗಳು ಮಾಡಿದರೆಂದ ಅನ್ಯಾಯ, ದೌರ್ಜನ್ಯದ ಸುಳ್ಳು ಚರಿತ್ರೆಯನ್ನು ವೈಭವೀಕರಿಸಿ  ಆ ಮೂಲಕ ಇಂದಿನ ಭಾರತೀಯ ಮುಸಲ್ಮಾನರನ್ನು ಟಾರ್ಗೇಟ್ ಮಡುವಂತೆ ಜನ್ಮಭೂಮಿಗಾಗಿ ಹೋರಾಡುವ ಪ್ಯಾಲಸ್ತೀನ್ ಹೋರಾಟಗಾರರೂ ಭಯೋತ್ಪಾದನೆಯ ಆರೋಪದ ಬಲಿಪಶು ಗಳಾಗುತ್ತಾರೆ.
ಅಲ್ಲಾಹನು ಹೇಳುತ್ತಾನೆ.
ಅವರು ಅಲ್ಲಾಹನ ಪ್ರಕಾಶವನ್ನು ಬಾಯಿಯಿಂದ ಊದಿ ಆರಿಸಲು ಪ್ರಯತ್ನಿಸುತ್ತಾರೆ.ಆದರೆ ಅಲ್ಲಾಹನು ಅವನ ಪ್ರಕಾಶವನ್ನು ಪೂರ್ತಿಮಾಡುತ್ತಾನೆ. (ಕುರಾನ್)

No comments:

Post a Comment