ಬುರ್ಖಾಧಾರಿ ಮುಸ್ಲಿಂ ಮಹಿಳೆಯರಿಗಿರುವ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇಂದಿನ ಡೋಂಗಿ ದೇಶ ಭಕ್ತರಿಗಿಲ್ಲ.

ಭಾಷಣ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು (ಕೊಯ್ಯೂರು)

ವೀರ ಇತಿಹಾಸದ ರೋಮಾಂಚಕ ಘಟನೆಗಳ ಚರಿತ್ರೆಯನ್ನು ಸ್ಮರಿಸುವ  ಸಂಭ್ರಮವೇ ಸ್ವಾತಂತ್ರ್ಯೋತ್ಸವದ ಸಂಭ್ರಮ.ಅದು ಶತಶತಮಾನಗಳಲ್ಲಿ ನಡೆದು ಬಂದ ವಿಸ್ತಾರವಾದ ಹೋರಾಟದ ಚರಿತ್ರೆ.ಬ್ರಿಟೀಷರು ದೇಶಗಳಲ್ಲಿ ಕಾಲೂರುವ ತನಕ ಪರಸ್ಪರ ಧರ್ಮಗಳ ಮಧ್ಯೆ ಸಂಘರ್ಷವಿರಲಿಲ್ಲ.
ಎಂಟು ನೂರು ವರ್ಷಗಳ ಕಾಲ ಮುಸ್ಲಿಮರು ದೇಶವನ್ನಾಳಿದ್ದರೂ ಮತೀಯ ಸಂಘರ್ಷದ ಯಾವುದೇ ಸಂಕಟಕ್ಕೆ ದೇಶ ಬಲಿಯಾಗಲಿಲ್ಲ.ವಂಚನೆಯ ಮೂಲಕ ವ್ಯಾಪಾರ ಕ್ಕಾಗಿ ಬಂದ ಆಂಗ್ಲೇಯರು ಅವರ ವ್ಯಾಪಾರ ಬುದ್ದಿಯನ್ನೇ ತೋರಿ ಹಿಂದು ಮುಸ್ಲಿಮ್ ಎಂಬ ಮತೀಯ ದೊಂಬಿಗೆ ಶಿಲಾನ್ಯಾಸವನ್ನು ಮಾಡಿಯೇ ಬಿಟ್ಟರು. ಮೂಲಕ ಮತೀಯ ಗಲಭೆಗಳ ಕರಾಳ ಅಧ್ಯಾಯದ ಪುಟಗಳು ತೆರೆದುಕೊಳ್ಳಲು ಆರಂಭವಾಯಿತು.
ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ರಾಜತಂತ್ರ ಕಾಲದಲ್ಲೂ ಒಂದಾದ ಮನಸ್ಸುಗಳನ್ನು ಒಡೆಯುವ ಮೂಲಕ ಕಾಲಕಾಲದಲ್ಲಿ ಹಿಂದು ಮುಸ್ಲಿಂ ಮಧ್ಯೆ ಆಳವಾದ ಕಂದಕವನ್ನು ಸೃಷ್ಟಿಸಲಾಯಿತು.
ಆದರೆ ಭಾರತ ಬಲಿಷ್ಟ ಪ್ರಜಾತಂತ್ರ ವ್ಯವಸ್ಥೆ, ಗಟ್ಟಿಯಾದ ಸಂವಿಧಾನ ಮತ್ತು  ಭಾರತೀಯ ಪ್ರಜ್ಞೆ ಎಲ್ಲಾ ಸಂಘರ್ಷವನ್ನು ಮೆಟ್ಟಿ ನಿಂತಿದೆ. ಆದರೆ ಅದೀಗ ಅಪಾಯದ ಅಂಚಿನಲ್ಲಿದೆ. ಪ್ರಬುದ್ಧ ಬಹುರೂಪತೆಯ ಭಾರತೀಯತೆಯನ್ನು ಉಳಿಸಲು  ಪರಸ್ಪರ ಕೂಡಿಬಾಳುವ ಸಂಕಲ್ಪ ಒಂದೇ ಪರಿಹಾರ. ಕಾರಣವಾಗಿ ಬಲಿಷ್ಟ ವಿದ್ಯಾರ್ಥಿ ಸಂಘಟನೆ ಎಸ್ಕೆ ಎಸ್ಸೆಸ್ಸಫ್ ಪ್ರತಿ ವಲಯ ಮಟ್ಟದಲ್ಲಿ ಬ್ರಹತ್ತಾದ ಕಾರ್ಯಕ್ರಮ ವನ್ನು ಆಯೋಜಿಸಿದೆ .ಅದುವೇ ಫ್ರೀಡಂ ಸ್ಕ್ವೇರ್.ಒಂದಾಗಿ ಬಾಳೋಣ ಸೌಹಾರ್ದ ಕಾಯೋಣ
ಎಂಬ ಘೋಷ ವಾಕ್ಯದಡಿ ಲಕ್ಷಾಂತರ ಮಂದಿ ಒಟ್ಟು ಸೇರಿ ಸಂಕಲ್ಪ ಕೈಗೊಳ್ಳಲಿದ್ದಾರೆ.
ಭಾರತದಂತಹಾ ಬಹುರೂಪತೆಯ ಪ್ರಜಾತಂತ್ರ ದೇಶದ ಶಕ್ತಿ ಭ್ರಾತೃತ್ವ, ಬಂಧುತ್ವ ಮಾತ್ರ.
ತೆ ಮುಸಲ್ಮಾನರಲ್ಲಿ ರಕ್ತಗತವಾದ ಸಂಗತಿ.ಸ್ವರಾಜ್ಯವನ್ನು ಪ್ರೀತಿಸುವ ವಿಚಾರದಲ್ಲಿ ಮುಹಮ್ಮದ್ ಪೈಗಂಬರರು( )ಅನನ್ಯ ಮಾದರಿಯಾಗಿದ್ದಾರೆ.
ನನ್ನನ್ನು ನನ್ನ ಊರಿನ ಜನ ಹೊರ ಹಾಕದೇ ಇರುತ್ತಿದ್ದರೆ ನಾನು ನಿನ್ನ ಬಿಟ್ಟು ಹೊಗುತ್ತಿರಲಿಲ್ಲ. ಎಂದು ಹಿಜರಿ ಸಮಯ ಅತ್ತು ಬಿಟ್ಟಿದ್ದರು.ನನ್ನೂರುನನ್ನ ಊರು ಎಂದು ಕನವರಿಸುತ್ತಿದ್ದರು. ಸಂದರ್ಭದಲ್ಲಿ
ಸ್ವರಾಜ್ಯದ ವಿಜಯವು ಮಹೋನ್ನತ ವಿಜಯವೆಂದು ಕುರಾನ್ ಘೋಷಿಸುತ್ತದೆ. ಕಾರಣಗಳಿಂದ ಸ್ವಂತ ಊರಿನೊಂದಿಗೆ ಅಚಲವಾದ ಭಕ್ತಿ ಸ್ನೇಹವನ್ನು ಕಾಲ,ದೇಶ ಬೇಧವಿಲ್ಲದೇ ಮುಸಲ್ಮಾನರು ತೋರಿಕೊಟ್ಟರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿದವರು ಮುಸ್ಲಿಮರಾಗಿದ್ದರು.ಹದಿನೇಳಯ ಶತಮಾನದ ತನಕ ಎಂಟುನೂರು ವರ್ಷಗಳ ಕಾಲ ಮುಸ್ಲಿಂ ಆಡಳಿತವಿದ್ದರೂ ಯಾರೂ ಸ್ವಾತಂತ್ರ್ಯ ಕ್ಕಾಗಿ ಧ್ವನಿ ಎತ್ತಲಿಲ್ಲ.
ಸ್ವಾತಂತ್ರ್ಯ ಮೊದಲ ಕಹಳೆ ಮೊಳಗಿದ್ದು ೧೫೨೫ ರಲ್ಲಿ .ವೀರ ಕಲಿಗಳಾದ ಕುಂಙಾಲಿ ಮರಕ್ಕಾರ್ ಕುಟುಂಬವೇ ಅದರ ಸಾರಥ್ಯ ವಹಿಸಿತ್ತು೧೭೫೮  ರಲ್ಲಿ ಬಂಗಾಳದ ನವಾಬ ಸಿರಾಜುದ್ದೌಲ ಬ್ರಿಟಿಷರ ವಿರುದ್ಧ ಹೋರಾಡಿದರೆ, ೧೭೫೮ ರಲ್ಲಿ ಬಹಾದ್ದೂರ್ ಷಾ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಾಯಕನಾಗಿ ಹೋರಾಡಿದರು.೧೭೬೧ ರಿಂದ ೧೭೯೯ ತನಕ ಹೋರಟದ ವರ್ಣರಂಜಿತ ಅಧ್ಯಾಯ ಬರೆದ ಹೈದರಲಿ ಟಪ್ಪು ಸುಲ್ತಾನ್ ಹೋರಾಟ. ೧೮೧೯ರಲ್ಲಿ   ವೆಳಿಯಂಗೋಡು ಉಮರ್ ಖಾಝಿ ಜೈಲು ಸೇರಿದ್ದು  ಭೂಕಂದಾಯ ನೀಡದ ಆರೋಪದಲ್ಲಿ ಆಗಿತ್ತು.ನನ್ನ ಮಣ್ಣಿನ ತೆರಿಗೆ ಪರಕಿಯರಾದ ನಿಮಗೆ ಯಾಕೆ ನೀಡಬೇಕು ?ಎಂಬ ವಾದವಾಗಿತ್ತು ಅವರದು."
"ಯೋಧರಿಗೊಂದು ಕೊಡುಗೆ(ತುಹ್ಪತುಲ್ ಮುಜಾಹಿದೀನ್)ಎಂಬ ಕೃತಿಯನ್ನು ಬರೆದು ಸಯ್ಯಿದ್ ಅಹ್ಮದ್ ಝೈನುದ್ದೀನ್ ಮಖ್ದೂಂ()ಸ್ವಾತಂತ್ರ್ಯ  ಹೋರಾಟಗಾರರನ್ನು ಹುರಿದುಂಬಿಸಿದ್ದರು.ಸಯ್ಯಿದ್ ಝೈನದ್ದೀನ್ ಅಲಿಯ್ಯಿ ಒಂದನೆಯವರು ಸತ್ಯ ವಿಶ್ವಾಸಿಗಳಿಗೆ  ಪ್ರೇರಣೆ (ತಹ್ರೀಲು ಅಹ್ಲಿಲ್ ಈಮಾನ್)ಎಂಬ ಕೃತಿಯನ್ನು ಬರೆದು ಸಾಹಿತ್ಯ ಹೋರಾಟವನ್ನೇ ನಡೆಸಿದ್ದರು. ಮುಹ್ಯುದ್ದೀನ್ ಮಾಲೆಯ ರಚನೆಕಾರರಾದ ಖಾಝಿ ಮುಹಮ್ಮದ್ ಪತ್ಹುಲ್ ಮುಬೀನ್ ಕೂಡಾ ಹೋರಾಟಕ್ಕೆ ಕಿಚ್ಚು ಹೊತ್ತಿಸುವ ಗ್ರಂಥ ವಾಗಿತ್ತು.ವೀರ ಸೇನಾನಿ ಅಲೀ ಮುಸ್ಲಿಯಾರ್ ಮಲಬಾರ್ ದಂಗೆಯ ಸೇನಾನಿಯಾಗಿದ್ದರೆ, ಸಯ್ಯಿದ್ ಮಂಬುರಂ ತಂಙಲ್ ಸಮರ ಮುಂಚೂಣಿಯಲ್ಲಿದ್ದರು.ಅವರ ಮಗನಾದ ಸಯ್ಯಿದ್ ಪಝಲ್ ಪೂಕೋಯ ತಂಙಲ್ ಸೈಫುಲ್ ಬತಾರ್ (ಪ್ರವಾದಿ ಖಡ್ಗ )ಎಂಬ ಹೆಸರಲ್ಲಿ ಗ್ರಂಥ ಬರೆದು ಪರಕೀಯರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು.ಪಾಣಕ್ಕಾಡ್ ಹುಸೈನ್ ತಂಙಲ್ ಕೂಡಾ ಸಮರ ಮುಖದಲ್ಲಿದ್ದರು.
ಸಮರ ಸೇನಾನಿಗಳಾಗಿ ಹೋರಾಡಿದ ಅಸಂಖ್ಯಾತ ಮುಸ್ಲಿಮರ ಚರಿತ್ರೆಯನ್ನು ಇತಿಹಾಸ ಕಾರರು ಉಲ್ಲೇಖಿಸುತ್ತಾರೆ.ಯಾವುದೇ ಕಾಲದಲ್ಲೂ ಮುಸ್ಲಿಮರು ಬ್ರಿಟಿಷರ ಅಧಿಕಾರದ ಭಾಗವಾಗಲಿಲ್ಲ.ಅವರೊಂದಿಗೆ ಸಹಕಾರ ಒಪ್ಪಿಗೆ ಪತ್ರ ಬರೆಯಲಿಲ್ಲ.
ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಮಾಹಿತಿ ಕೊಡುವ ನಯ ವಂಚಕ ಕೆಲಸವನ್ನೂ ಮಾಡಲಿಲ್ಲ.ಆದರೂ ಮುಸಲ್ಮಾನರನ್ನು ದೇಶಪ್ರೇಮದ ವಿಚಾರದಲ್ಲಿ ಅನುಮಾನದಿಂದ ನೋಡುವವರಿಗೆ ಕಮ್ಮಿ ಇಲ್ಲ.ಇನ್ನು ದೇಶಿಯ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರು ಮಾಡಿದ ಹೋರಾಟ, ನಿರ್ಮಿಸಿದ ಇತಿಹಾಸ ಇಂದಿನ ದೇಶಭಕ್ತರೆನಿಸಿಕೊಂಡವರ ಪೂರ್ವ ಹಿರಿಯರು ಮಾಡಲಿಲ್ಲ.ಅಂತಹಾ ಅಪ್ರತಿಮ ಹಿನ್ನಲೆ ಮುಸ್ಲಿಂ ಮಹಿಳಾಮಣಿಗಳಿಗಿದೆ.ಬುರ್ಖಾದೊಳಗೆ ಬಂಧಿತಳು,ತ್ರಿವಳಿ ತಲಾಖ್ ನೊಳಗೆ ಅತಂತ್ರಳು ,ನಾಲ್ಕು ಗೋಡೆಯೋಳಗೆ ಅಶಕ್ತಳು? ಎಂದೆಲ್ಲಾ ಹೇಳಿಕೆ ಕೊಡುವ ಮಸ್ಲಿಂ ವಿರೋಧಿ ನಂಜನ್ನು ಕಾರುವ ನಕಲಿ ದೇಶ ಭಕ್ತರು ಅರಿಯಬೇಕಾದ ಸಂಗತಿ! ಗಂಡಸರೆನಿಸಿಕೊಂಡವರು ಬ್ರಿಟಿಷರ ಸೆರಗಿನೊಳಗೆ ನುಸುಳಿ ಕೂತಾಗ ರಣ ವೀರೆಯರಾಗಿ ರಣರಂಗದಲ್ಲಿ ಧೀರವಾಗಿ ಹೋರಾಡಿದ ಚರಿತ್ರೆ ಮುಸ್ಲಿಂ ಮಹಿಳೆಯರಿಗಿದೆ.ಸ್ವಾತಂತ್ರ್ಯ ನಂತರ ಎಲ್ಲೋ ಅಡಗಿದ್ದ ಭಕ್ತರು ಮೆಲ್ಲಮೆಲ್ಲನೆ ಜಡೆ ಎತ್ತಿ ಕೊನೆಗೆ ನಿಜವಾದ ಹೋರಾಟಗಾರರನ್ನು ಪಕ್ಕಕ್ಕೆ ಸರಿಸಿ ತಾವೇ ತಮ್ಮ ಪೂರ್ವಿಕರೇ ಹೋರಾಟಗಾರರೆಂದು ಬಿಂಬಿಸುತ್ತಿದ್ದಾರೆ. ಮೂಲಕ ಮುಸ್ಲಿಮರ ಹೋರಾಟದ ಅಧ್ಯಾಯ ವನ್ನು ಮರೆಮಾಚಲಾಗುತ್ತಿದೆ.ಅಲ್ಪಸಂಖ್ಯಾತರ ಮೇಲಾಗುವ ದೌರ್ಜನ್ಯ ವನ್ನುಮುಚ್ಚಿಹಾಕಲು  ಮುಸ್ಲಿಮ್ ರಾಜರುಗಳ ಮೇಲೆ ಹೆಣೆಯಲ್ಪಟ್ಟ ಕಟ್ಟುಕಥೆಗಳಾದ ಮತಾಂತರ,ಮಂದಿರ ದ್ವಂಸ ಎಂಬಿತ್ಯಾದಿ ವಿಚಾರಗಳೊಂದಿಗೆ ಭಯೋತ್ಪಾದನೆಯ ಭೂತವನ್ನು ಮುಸ್ಲಿಮ್ ತಲೆ ಮೇಲೆ ಕೂರಿಸಲಾಗುತ್ತದೆ.
ಬುರ್ಖಾಧಾರಿ ಮಹಿಳೆಯರ ಸ್ವಾತಂತ್ರ್ಯ ಹೋರಾಟದ ವೀರ ಇತಿಹಾಸ ಅದ್ಭುತವಾದದ್ದು.೧೮೪೭ರಲ್ಲಿ  ಬೇಗಂ ಹಝ್ರತ್ ಮಹಲ್ ಬುರ್ಖಾಧಾರಿ ಮಹಿಳೆ ಬ್ರಿಟೀಷರ ವಿರುದ್ಧ ಏಳು ಲಕ್ಷ ಸೈನಿಕರನ್ನು ಕಟ್ಟಿ ಹೋರಾಡಿದ ಮಹಿಳೆ. ಬ್ರಿಟಿಷರಿಗೆ ತಲೆ ನೋವಾಗಿದ್ದ ಮಹಲನ್ನ ಮುಗಿಸಲು ಪ್ರಯತ್ನ ಪಟ್ಟರೂ ಸಾದ್ಯವಾಗಲಿಲ್ಲ.ಅನೇಕ ಸಲ ಹಝ್ರತ್ ಮಹಲನ್ನು ಓಲೈಸಕೊಳ್ಳಲು  ಬ್ರಿಟಿಷರು ಮುಂದಾದರೂ ಸಾಧ್ಯವಾಗಲಿಲ್ಲ.ಕಡೆಗೆ ಅವರು ನೇಪಾಳದಲ್ಲಿ ನೆಲೆಸುತ್ತಾರೆ ಧೀರ ವನಿತೆ.
ಮೊದಲ ಸ್ವಾತಂತ್ರ್ಯ ಸಮರದಲ್ಲಿ ವೀರಾವೇಶದಿಂದ ಹೋರಾಡಿದ ಸಾಹಿರಾ ಬೇಗಂ.ಇವರ ಹೋರಾಟ ಕಂಡು ಬ್ರಿಟಿಷ್ ಸೈನ್ಯ ದಂಗಾಗಿ ಹೋಗಿತ್ತು.ಸೇನಾ ಕಮಾಂಡರ್ ವೈ. ಡಬ್ಲ್ಯು,ಹಡ್ಸನ್ ಹೇಳಿದ್ದು  ಸಾಹಿರಾ ಸಾಮಾನ್ಯಳಲ್ಲ  ಅವಳು ಅಸಾಮಾನ್ಯ ಸಮರ ರತ್ನ  ಎಂದಾಗಿತ್ತು.ಸಾಹಿರಾ ಬೇಗಂ ದೆಹಲಿಯ ಚಾಂದ್ನಿ ಚೌಕಿಯ ವೌಲವಿಯ ಮಗಳಾಗಿದ್ದರು.ಕೊನೆಗೆ ಸಮರ ರತ್ನವನ್ನು ಗಲ್ಲಿಗೇರಿಸಲಾಯಿತು.ಜಾಮಿಯಾ ಮಿಲ್ಲಿಯ ಪ್ರಿನ್ಸಿಪಾಲರಾದ ಮಾಜಿದ್ ಪತ್ನಿ ಖುರ್ಶಿದಾ ಬೇಗಂ  ಹಿಂದ್ ಎನ್ನುವ ಪತ್ರಿಕೆ ಮೂಲಕ ವಿಚಾರ ಹೋರಾಟಕ್ಕೆ ಮುಂದಾದರು.ಅಹ್ಮದಾಬಾದಿನಲ್ಲಿಹಮೀದಿಯಾ ಕಾಲೇಜನ್ನು ಸ್ಥಾಪಿಸಿದ್ದರು.
ಕಾನ್ಪುರದಲ್ಲಿ ಮಹಿಳಾ ಸೇನೆಯನ್ನು ಕಟ್ಟಿದ ದೀರ ವನಿತೆ ಅಝೀಝ ಖಾನಂ. ಗುಪ್ತವಾಗಿ ಬ್ರಿಟಿಷ್ ವಿರುದ್ಧ ಮಹಿಳಾ ಶಕ್ತಿಯನ್ನು ಸಂಘಟಿಸುತ್ತಿದ್ದ ಖಾನಂ ನನ್ನು ಹಿಡಿದು ತಂದು ಬೆಂಕಿಯನ್ನು ಉಗುಳುವ ತೋಪಿನ ಮುಂದೆ ನಿಲ್ಲಿಸಿ ಅಜೀಮುಲ್ಲಾ  ಖಾನ್ ಎಲ್ಲಿ ಎಂದು ಹೇಳು ಎನ್ನುತ್ತಾ ಗದರಿಸಿ ನೀನು ಅವನ ಬಗ್ಗೆ ಹೇಳಿದರೆ ನಿನ್ನನ್ನು ಸುಮ್ಮನೇ ಬಿಡುತ್ತೇವೆ.ಆಗ ಅಝೀಝ ಖಾನಂ ಹೇಳಿದ್ದು
 ಸ್ವಾತಂತ್ರ್ಯ ಸೇನಾನಿಯನ್ನು ನಿಮಗೆ ಬಲಿಕೊಡುವುದಕ್ಕಿಂತ ನಾನೇ ನಿಮ್ಮ ತೋಪಿಗೆ ತಲೆ ಒಡ್ಡುವೆ.
ಕೊನೆಗೆ ರುಂಡವನ್ನು ಅವರ ತೋಪು ಬಲಿ ತೆಗೆದಿತು.
ದೇಶಿಯ ಪ್ರಸ್ಥಾನದ ನೇತಾರ ಬದ್ರುದ್ದೀನ್ ತಯ್ಯಿಬ್ ಜೀ ಪತ್ನಿ ಆಮಿನಾ.ಸಂಬಂಧಿಕರಾದ ರಹನಾ ,ಸುಹೈಲಾ ಗಾಂದೀ ಜೊತೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸಿ ಮದ್ಯಪಾನ ವಿರುದ್ಧ ಹೋರಾಡಿದರು.
ಬದ್ರುದ್ದೀನ್ ತಯ್ಯಿಬ್ ಮಗಳು ಸಕೀನಾ ಲುಖ್ಮಾನಿ ಬಾಂಬೆಯ ಬೆಂಕಿ ಉಗುಳುವ ಭಾಷಣಗಾರರಾಗಿದ್ದರು.ಸಮರ ವೀರ ರಸೂಲ್ ಕುರೇಸಿ ಪತ್ನಿ ಆಮಿನಾ,ಸೈಫುದ್ದೀನ್ ಪತ್ನಿ ಸಹಾದತ್ ಬಾನು ಹೋರಾಟದ ಹಾದಿಯಲ್ಲಿ ಸಬರಮತಿ ಆಶ್ರಮದಲ್ಲೇ ಇದ್ದರು.ಹಝ್ರತ್ ಮೋಹಾನಿ ಪತ್ನಿ ನಿಹ್ಮತುನ್ನಿಸಾ ಬೇಗಂ ,ಬ್ಯಾರಿಸ್ಟರ್ ಆಸಿಫ್ ಅಲಿ ಪತ್ನಿ ಅಕ್ತರ್ ಬೇಗಂ ಕೂಡಾ ಸಮರ ರಂಗದಲ್ಲಿದ್ದರು.ಭಾರತ ಕಂಡ ಅಪ್ರತಿಮ ಹೋರಾಟಗಾರರಾದ ಮುಹಮ್ಮದಲಿ ಶೌಕತ್ ಅಲೀ ತಾಯಿ ಬೀಯುಮ್ಮ ತೋರಿದ ಧೀರತೆ ಅಪಾರ. ಸರಳುಗಳು ಮಧ್ಯೆ ಬಂದಿತ ಮಕ್ಕಳೊಂದಿಗೆ ಹೇಳಿದ್ದು ಯಾವುದೇ ಕಾರಣದಿಂದ ನೀವು ಬ್ರಿಟೀಷರಿಗೆ ಶರಣಾಗಬೇಡಿ ಸಹಕರಿಸಬೇಡಿ.ಒಂದು ವೇಳೆ ಹಾಗೇ ಮಾಡಿದರೆ ನನ್ನ ಎದೆಹಾಲು ನಿಮಗೆ ಹಾರಾಂ  (ನಿಷಿದ್ದ)ಆದೀತು.ಇಸ್ಲಾಮಿನ ಬುರ್ಖಾಧಾರಿ ಮುಸ್ಲಿಮರ ಹೋರಾಟದ ಹತ್ತಿರಕ್ಕೆ ಬರಲು ಇಂದಿನ ಸ್ವಯಂ ಘೋಷಿತ ದೇಶ ಭಕ್ತರಿಗೆ ಅಸಾಧ್ಯ. ಗಾಂಧಿಯವರನ್ನು ಕೊಂದವರು,ರಾಷ್ಟ್ರಧ್ವಜ ಕ್ಕೆ ಅವಮಾನ ಮಾಡಿದವರು, ಹೋರಾಟದ ವಿಷಮ ಘಟ್ಟದಲ್ಲಿ ಪರಕಿಯರ ಜೊತೆ ಇದ್ದವರು ನಿಜವಾದ ದೇಶ ಭಕ್ತರಲ್ಲ .ಅವರು ದೇಶ ಭಕ್ಷಕರು.ಹಚ್ಚಗಿದ್ದಲ್ಲಿ ಮೇಯುವ ಬೆಚ್ಚಗಿದ್ದಲ್ಲಿ ಮಲಗುವ ಇಲ್ಲವಾದರೆ ಬಿಲ ಸೇರುವ ಸಮಯಸಾಧಕರು ಮಾತ್ರ.ಇವರ ಸಿದ್ದಾಂತ ಭಾರತೀಯ ಬಹು ರೂಪತೆಯ ಸಂಸ್ಕೃತಿಯ ವಿರೋಧಿ, ಪ್ರಜಾಪ್ರಭುತ್ವಕ್ಕೆ ಕಂಟಕ, ಸಂವಿಧಾನ ವ್ಯವಸ್ಥೆಗೆ ವಿನಾಶಕಾರಿ.ಇಂತವರಿಗೆ ಮಣೆ ಹಾಕೋದು ಹುಚ್ಚುತನ ಮಾತ್ರವಾಗಬಹುದು.ಇದರಿಂದ ದೊಡ್ಡ ಗಂಡಾಂತರಕ್ಕೆ ಕಾರಣವಾಗಲೂಬಹುದು. ದೇಶದ ಸಮಾನ ಮನಸ್ಕರಾದ ಬಹು ಸಂಖ್ಯಾತ ಪ್ರಗತಿಪರ ಚಿಂತಕರು ದಮನಿತ  ಅಲ್ಪಸಂಖ್ಯಾತರ ಪರ ದ್ವನಿ ಎತ್ತುತ್ತಿದ್ದಾರೆ.ಆದರೆ ಕೆಲ ವಿದ್ವಾಂಸರೆನಿಸಿಕೊಂಡವರ ಅವಿವೇಕದ ವರ್ತನೆಯು ಪ್ರಗತಿಪರರನ್ನು ವಿಮುಖರಾಗುವಂತೆ ಮಾಡಿದರೆ ಅದು ದೊಡ್ಡ ದುರಂತವಾಗಬಹುದು.

ವರದಿ ಅಹ್ಸನ್ ಮಾಸಿಕ


1 comment:

  1. ಏನೋ, ನಿಮ್ಮ ಮುಸ್ಲಿಮ್ ಬುರ್ಖಾದಾರಿಗಳು ನೀವು ಹೇಳಿದೆಲ್ಲಾ ಮಾಡಿರ್ಬಹುದು. ಇದೆಸ್ಟು ಸತ್ಯವೋ ಸುಳ್ಳೋ ನಮಗೊತ್ತಿಲ್ಲಾ. ಆದ್ರೆ ನಿಮ್ಮ ಜಿನ್ನಾ ಕೊನೆಗೆ ಮಾಡಿದ ನೋಡಿ ಆ ಗನ್ನಾಂದ್ದಾರಿ ಕೆಲಸ ನಿಮ್ಮ ಮುಸ್ಲಿಮರ ನಿಜ ಬಣ್ಣ ಬಯಲು ಮಾಡಿ, ನೀವು ಮುಸ್ಲಿಮರು ಯಾವತ್ತಿಗೂ ನಂಬಿಕೆಗೆ ಅರ್ಹರಲ್ಲ ಎಂಬುದನ್ನು ಜಗತ್ತಿನ ಮುಂದೆ ಸಾಬೀತು ಪಡಿಸಿದೆ. ಹವ್ದಲ್ವೇ ಏನಂತೀರಿ?

    ReplyDelete