ಸಯ್ಯಿದ್ ಮದನಿ ಸೋಶಿಯಲ್ ಫ್ರಂಟ್ ಸಭೆಯಲ್ಲಿ ಮೊಳಗಿದ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು ಇವರ ಪ್ರಬುದ್ಧ ಮಾತುಗಳಲ್ಲಿ ಕೇಳಿ ಬಂದ ಮುತ್ತ ರತ್ನಗಳ ಸಂಗ್ರಹ

 
ವರದಿ "ಅಲ್ ಅಹ್ಸನ್" ಮಾಸಿಕ

  • ಧರ್ಮ ಕೇಂದ್ರಗಳು, ಕ್ಷೇತ್ರ ಮಠಗಳು ಮಾನವೀಯತೆಗಾಗಿ ಧ್ವನಿ ಎತ್ತಬೇಕಾಗಿದೆ.ಆ ಕಾರ್ಯ ವನ್ನು ಸಯ್ಯಿದ್ ಮದನಿ ತಂಙಲ್ ರವರ ಹೆಸರಲ್ಲಿ ಆರಂಭವಾಗಿರುವುದು ಶ್ಲಾಘನೀಯ
  • ಜಗತ್ತು ದೇವಾಲಯ,ಸರ್ವರಿಗೂ ಮಂಗಳವೆಂಬ ಶ್ಲೋಕ ದ ದ್ವನಿಯಂತೆ,ಜಗತ್ತಿನ ಒಬ್ಬ ವ್ಯಕ್ತಿಗೆ ನೀಡುವ ಬದುಕು ಇಡೀ ಜಗತ್ತಿಗೆ ನೀಡುವ ಬದುಕು ಎಂಬ ಕುರಾನಿನ ಸಂದೇಶದಂತೆ ಜಾತಿ ಬೇಧ  ಮೀರಿ ಈ ದ್ನನಿ ಮ್ಯಾನ್ಮಾರ್ ಗಾಗಿ ಮೊಳಗಿದೆ.
  • ಮೇಧಾವಿ ಅರವಿಂದರ ,ಮಹಾತ್ಮ ಗಾಂಧಿ ಯ ,ಸ್ವಾಮೀ ವಿವೇಕಾನಂದರ ಭಾರತದ ಧ್ವನಿ ನಮ್ಮ ಪ್ರಧಾನಿ ಮೂಲಕ ಮ್ಯಾನ್ಮಾರ್ ತಲುಪಲಿ ಆ ಮೂಲಕ ದೇಶದ ಘನತೆ ಎತ್ತಿ ಹಿಡಿಯಲಿ.
  •  "ನನ್ನ ಮ್ಯಾನ್ಮಾರಿನ ಆತ್ಮಸಾಕ್ಷಿಯ ನೋವು ಬವಣೆ ಮರೆಯಬೇಡಿ" ಎಂದು ಜೈಲಲ್ಲಿರುವಾಗ ಜಗತ್ತಿಗೆ ಕರೆ ನಿಡಿದ ಸೂಕಿ ಯಾಕೀಗ ಮೂಕಿ?
  • ೧೯೯೧ ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಕೊಟ್ಟಾಗ ನೋಬೆಲ್ ಅದಿಕಾರಿಗಳು ಹೇಳಿದ ಮಾತು ಜಗತ್ತಿನ ಸಂಬಂಧ ಕಡಿದುಕೊಂಡವರಿಗಾಗಿ ಮತ್ತು ಮಾನವೀಯತೆ ಗಾಗಿ ಕೊಡಲಾಗಿದೆ ಎಂದು ಆದರೆ ಅದು ಸೂಕಿಗೆ ಇಲ್ಲವಾಯಿತೆ?.
  •  ಜಗತ್ತಿನ ಕಟ್ಟ ಕಡೆಯ ಕಂಬನಿ ಒರೆಸಲು ಮತ್ತೆ ಮತ್ತೆ ಹುಟ್ಟಿ ಬರುವೆನೆಂಬ ಬುದ್ದ ನ ಹುಟ್ಟು ನರಭಕ್ಷಕ ರಾದ ಬುದ್ದ ಸನ್ಯಾಸಿಗಳಲ್ಲಿ ಅಲ್ಲ.ಅವನು ಇಂತಹಾ ಮಾನವೀಯತೆಗಾಗಿನ ಹೋರಾಟದಲ್ಲಿ ಮಾತ್ರ ಹುಟ್ಟುತ್ತಾನೆ.
  •  ಶಾಂತಿ ಯ ನೋಬೆಲ್ ಪ್ರಶಸ್ತಿ ಮ್ಯಾನ್ಮಾರಿನ ಮಕ್ಕಳ ರಕ್ತದಲ್ಲಿ ಮುಳುಗಿ ಕೆಂಪಾಗಿದೆ.
  • ಮ್ಯಾನ್ಮಾರಿನ ಬಾವಿ ನೀರಿನಲ್ಲಿ ,ಕಡಲಿನ ಮೀನಿನ ಮತ್ತು ಕಾಡಿನ ವನ್ಯ ಜೀವಿಗಳ ಹೊಟ್ಟೆಯಲ್ಲಿ ಹತ್ಯಾಕಾಂಡ ಕ್ಕೆ ಸಿಲುಕಿದ ಮಕ್ಕಳ ರಕ್ತ ಮತ್ತು ಮಾಂಸ ಮಾತ್ರವಿದೆ. ಅದರೂ ಪ್ರಾಣವನ್ನು ಉಳಿಸಿಕೊಂಡು ಬಂದ ನಿರಾಶ್ರಿತರಿಗೆ ಆಶ್ರಯ ಕೊಡಬಾರದೇಕೆ?
  •  ಬರ್ಮಾದ ಎರಡು ಕೋಟಿ ‌ವಲಸಿಗರು ಈ ದೇಶದಲ್ಲಿರುವಾಗ,ಮಾಜಿ ರಾಷ್ಟಪತಿ ಕೆ ಆರ್ ನಾರಾಯಣನ್ ಪತ್ನಿ ಬರ್ಮಾದ ವಲಸಿಗರಲ್ಲಿ ಸೇರಿ ಭಾರತದ ಎರಡನೇಯ ಪ್ರಜೆ ಆಗಬಹುದಾದರೆ ಯಾಕಿಲ್ಲಾ ಮ್ಯಾನ್ಮಾರಿನ ಮಕ್ಕಳಿಗೆ ರಕ್ಷಣೆ ,?
  •  ಭಯೋತ್ಪಾದನೆ ಹುಟ್ಟುವ ಮೊದಲೇ ಅಲ್ಲಿ ನರಹತ್ಯೆ ನಡೆದಾಗ ವಲಸೆ ಹೋಗುತ್ತಿದ್ದರು. ೧೯೪೩ ಮತ್ತು ೧೯೭೮ ಲಕ್ಷ ಲಕ್ಷ ಜನರನ್ನು ಮ್ಯಾನ್ಮಾರಿನ ಸರಕಾರ ಕೊಂದಿದೆ .೧೯೮೪ ರಲ್ಲಿ ಅವರ ಪೌರತ್ವ ರದ್ದುಗೊಳಿಸಿದೆ.ಅದರ ವಿರುದ್ಧ ಹೋರಾಡೋದು ಭಯೋತ್ಪಾದನೆಯೇ?
  • ಚೀನಾ ವಿರುದ್ಧ ಟಿಬೇಟ್, ಅಮೇರಿಕ ವಿರುದ್ಧ ವಿಯೆಟ್ನಾಂ, ಶ್ರೀಲಂಕಾ ವಿರುದ್ಧ ತಮಿಲರು ಹೋರಾಡಿದರೆ ಸ್ವ ರಕ್ಷಣೆಯ ಹೋರಾಟ! ಇಸ್ರೇಲ್ ವಿರುದ್ಧ ಜನ್ಮಭೂಮಿ ಗಾಗಿ ಪ್ಯಾಲಸ್ತೀನ್,ರಷ್ಯಾ ವಿರುದ್ದ ಚೆಚಿನ್ಯಾ,ಅಮೇರಿಕಾ ವಿರುದ್ಧ ಇರಾಕ್, ಮ್ಯಾನ್ಮಾರ್ ಸರಕಾರದ ವಿರುಧ್ಧ ಅರಕಾನರು ಪ್ರತಿರೋಧ ತೋರಿದರೆ ಭಯೋತ್ಪಾದನೆ ಆಗೋದು ಕಾಲದ ವ್ಯಂಗ್ಯ ಅಲ್ಲವೇ?
  • ಇದು ಮುಸಲ್ಮಾನರ ಮಾತ್ರ ಸಮಸ್ಯೆಯಲ್ಲ.ಮೋದಿಯವರೇ ನಮ್ಮ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮ್,ಇರಾನಿ,ಸುಷ್ಮಾ ರನ್ನು ಬಾಂಗ್ಲಾ ದ ಕುಟುಪಲಾಂಗ್ ‌ನಿರಾಶ್ರಿತ ಶಿಬಿರಕ್ಕೆ ಕಳುಹಿಸಿ ಅಲ್ಲಿ ಗಂಡನನ್ನು ಮತ್ತು ಸಂಬಂಧಿಕರನ್ನು ಕಳಕೊಂಡ ಅಕೀರಾ ದರ್ ಎಂಬ ಹಿಂದು ಹೆಣ್ಣುಮಗಳಿದ್ದಾಳೆ .ಅವರು ನಾಲ್ಕು ತಿಂಗಳ ಗರ್ಭಿಣಿ ಹೇಗೆ ಬುಧ್ಧ ಸನ್ಯಾಸಿಗಳಿಂದ ಬಚಬಾಗಿದ್ದು ಎಂದು ಹೇಳಬಹುದು.
  • ನಿರಾಶ್ರಿತ ರ ಜೀವಂತ ಸಾಕ್ಷಿ ದಲೈಲಾಮ ಹೇಳುತ್ತಾರೆ. ಬುದ್ದ ಬಂದರೆ ಮ್ಯಾನ್ಮಾರಿನ ಮಸ್ಲಿಮರ ಸಹಾಯಕ್ಕೆ ನಿಲ್ಲುತ್ತಿದ್ದ.ಹಾಗಾದರೆ ಮೋದೀಜಿ ಆ ಕೆಲಸ ನಿಮಗೆ ಮಾಡಬಹುದಲ್ವಾ?
  • ನೂರ ಇಪ್ಪತೈದು ಜನಕೋಟಿಯ,ಜಗತ್ತಿನ ಬಲಿಷ್ಟ ಡೆಮಾಕ್ರಸಿ ದೇಶದ, ಅತ್ಮಜ್ಞಾನ ವಿರುವ ಭಾರತದ ಪ್ರಾಧಾನಿ ನಿರಾಶ್ರಿತರಿಗಾಗಿ ರಾಜತಾಂತ್ರಿಕ ಸಂಧಾನ ಮಾಡಿದರೆ ಮಾತ್ರ ಶೋಭೆ ತರುವುದು.
  • ಯಾರೂ ಏನನ್ನೂ ಮಾಡದಿದ್ದರೆ ಮುಂದೆ ಪ್ರಕೃತಿ ವಿಕೋಪ ಮೇಲೆದ್ದು ಪ್ರಕೃತಿಯೇ ತ್ಸುನಾಮಿಯಾಗಿ ಸರ್ವ ನಾಶಮಾಡಿ ಪರಿಹಾರ ಮಾಡಬಹುದು, ಕುರಾನ್ ಎಚ್ಚರಿಸುತ್ತದೆ

No comments:

Post a Comment