SKSSFನ ಯಶಸ್ವಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿರವರ ಭಾಷಣದ ಮುಮುಖ್ಯಾಂಶಗಳು



  • ಎಸ್ ಕೆ ಎಸ್ ಎಸ್ ಎಫ್ ಗೆ ಸಮಸ್ತ ಉಲಮಾ ವಿದ್ವಾಂಸರ ಆಶೀರ್ವಾದ ಇರೋದ್ರಿಂದ ಧಾರ್ಮಿಕ ಸ್ವಾತಂತ್ರ್ಯ ಹೋರಾಡದಲ್ಲಿ ಸಫಲರಾಗುತ್ತೇವೆ
  • ಬ್ರಿಟೀಷರು ಭಾರತ ಬಿಡುವಾಗ ಐವತ್ತು ಗ್ರಾಮಗಳಿಗೆ ಕರೆಂಟ್ ಸವಲತ್ತು ಇರದಿದ್ದರೂ ದೇಶ ಚಂದ್ರ ಮಂಗಳದತ್ತ ದೃಷ್ಟಿ ಮಾಡಿದ್ದರೆ ಅದು ಮೂರು ವರ್ಷಗಳ ಸಾಧನೆ ಯಲ್ಲ
  • ಮೋದೀಜಿ ತಾವು ಬುಲೆಟ್ ರೈಲ್ ಬಿಡಿ, ರಾಕೆಟ್ ಹಾರಿಸಿ ಆದರೆ ಧಾರ್ಮಿಕ ಸ್ವಾತಂತ್ರ್ಯ ದ ಹಕ್ಕಿನ ಮೇಲೆ ಬುಲೆಟ್ ಬೇಡ.
  • ದೇಶದಲ್ಲಿ NOT IN MY NAME ಹೆಸರಲ್ಲಿ ಹೋರಾಟ ನಡೆಯಿತು. I AM GOURY ಹೆಸರಲ್ಲಿ ಪ್ರತಿಭಟನೆ ಆಯಿತು. ಆದರೆ ಧಾರ್ಮಿಕ  ಸ್ವಾತಂತ್ರ್ಯ ಕ್ಕೆ ದಕ್ಕೆಯಾದರೆ   WE ARE INDIAN ಘೋಷಣೆ ಯೊಂದಿಗೆ ಬ್ರಹತ್ ಹೋರಾಟ ಮಾಡುವೆವು.
  • 1947ರಲ್ಲಿ ಪ್ಯಾಲಸ್ತೀನ್  ಹೊತ್ತಿ ಉರಿದಾಗ ಜನ್ಮ ಭೂಮಿ ಕಳಕೊಂಡ ಪ್ಯಾಲಸ್ತೀನ್ ರ  ಪರ ದ್ವನಿ ಎತ್ತಿದ ಭಾರತದ ಆತ್ಮ ಮಹಾತ್ಮಾ ಗಾಂಧಿ!.
  • 1959 ರಲ್ಲಿ ಟಿಬೇಟ್ ಮೇಲೆ ಚೀನಾ ಯುದ್ದ ಸಾರಿದಾಗ ಧರ್ಮ ಗುರು ದಲೈ ಲಾಮ ಗೆ ಆಶ್ರಯ ಕೊಟ್ಟ ಭಾರತ ಪ್ರಧಾನಿ ನೆಹರು,!
  • 1972 ಬಾಂಗ್ಲಾ ವಿಮೋಚನೆ ಮಾಡಿದ ಭಾರತ ಪ್ರಧಾನಿ ಇಂದಿರಾ!,
  • 1982 ರಲ್ಲಿ ಶಾಂತಿ ಸೇನೆಯನ್ನು ಶ್ರೀಲಂಕಾ ಗೆ ಕಳುಹಿಸಿದ ಭಾರತದ ಪ್ರಧಾನಿ ರಾಜೀವ್ ಗಾಂಧಿ!,
  • ಚಕ್ಮಾ ,ಹಜೋಂಗಾ ಬುದ್ದ ,ಹಿಂದು ನಿರಾಶ್ರಿತರಿಗೆ ಪೌರತ್ವ ಕೊಟ್ಟ ಭಾರತದ ಫ್ರಧಾನಿ ಮೋದಿ!,ಆದರೆ ಮ್ಯಾನ್ಮಾರ್ ಮುಸ್ಲಿಂ ನಿರಾಶ್ರಿತರನ್ನು ಹೋರಹಾಕುತ್ತಿರುವ ಕೇಂದ್ರ ಸರಕಾರ!
  • ಶಾಂತಿಯ ನೋಬೆಲ್ ಪ್ರಶಸ್ತಿಯನ್ನು ಮ್ಯಾನ್ಮಾರ್ ರಿನಲ್ಲಿ ಹರಿಯುತ್ತಿರುವ ರಕ್ತ ದಲ್ಲಿ ಧಫನ್ ಮಾಡಿದ ಆಂಗ್ ಸೂಕಿ?
  • ಸ್ವಾಮಿ ವಿವೇಕಾನಂದ ರ ಚಿಕಾಗೊ ಭಾಷಣದಲ್ಲಿ ಮ್ಯಾನ್ಮಾರ್ ರಿನ ಹತ್ಯಾಕಾಂಡ ಮತ್ತು ಗುಂಪು ಹತ್ಯೆಯ ಅಸಹಿಷ್ನತೆಯನ್ನು  ಖಂಡಿಸಿದ್ದರೆ ಜಗ ಮಾನ್ಯತೆ ಬರುತ್ತಿತ್ತು
  • ಜಗತ್ತು ದೇವಾಲಯವೆಂದ ದೇಶ ಭಾರತ.ಆದರೆ ಯಾಕೆ ಮ್ಯಾನ್ಮಾರ್ ಗೆ ದಯೆಯ ಬಾಗಿಲು ತೆರೆಯುತ್ತಿಲ್ಲ?
  • ತ್ರಿವಳಿ ಯನ್ನು ಪಾರ್ಲಿಮೆಂಟಿನ ನಲ್ಲಿ ರದ್ದು ಮಾಡಿದರೆ ಅದು ನೋಟು ರದ್ದತಿ ಯಂತೆ ಕಳಪೆ ಕಾರ್ಯ ಮಾತ್ರವಾಗುವುದು
  • ಕಪ್ಪು ಹಣ ಬರಲಿಲ್ಲ ಪಿಂಕ್  ನೋಟು ಬಂತು,ಹಸಿರು ನೋಟು ಬಂತು,ಗ್ರೀನ್ ಬಂತು,ಮುಂದೆ ಬ್ಲಾಕ್ ಎಂಡ್ ವೈಟ್ ಬರಬಹುದು
  • ಭಾಷಣ ವಿರೋಧಾಭಾಸ ದೇವಾಲಯ ದ ಹೆಸರಲ್ಲಿ  ಅಧಿಕಾರ ಪಡೆದವರು ಆದರೆ ದೇವಾಲಯಕ್ಕಿಂತ ಶೌಚಾಲಯ ಮುಖ್ಯ ವಂತೆ.
  • ಗುಂಪು ಹತ್ಯೆ ನಡೆಯುತ್ತಿದ್ದರೂ ತಿನ್ನುವುದು ಮುಖ್ಯವಲ್ಲ ವಂತೆ
  • ಮಹಿಳೆಯರ ಬಗ್ಹೆ ಕಾಳಜಿ ತಂಬಾ ಅಂತೆ  ಆದರೆ ಗೌರಿ ಮನೆ ಬಾಗಿಲಲ್ಲಿ ಹೆಣವಾಗ್ತಾರೆ
  • ಸೆಕ್ಯೂಲರ್ ದೇಶದಲ್ಲಿ ಸಾಂವಿಧಾನಿಕವಾಗಿ ಧರ್ಮ,ಅಭಿವ್ಯಕ್ತಿ ಗೆ ಸ್ವಾತಂತ್ರ್ಯ ವಿರುವಾಗ ತ್ರಿವಳಿ ಹೇಗೆ ಅಪ್ರಸ್ತುತ?
  • ತ್ರಿವಳಿ ಪರಸ್ಪರ ಒಪ್ಪಕೊಂಡವರಿಗೆ ಮಾತ್ರ ಅಲ್ಲದವರು ಸಿವಿಲ್ ಕಾನೂನಿನ ಮೊರೆ ಹೋಗುವಾಗ ಬಹು ಕೋಟಿ ಮುಸ್ಲಿಮರ ಹಕ್ಕನ್ನು ಯಾಕೆ ಕಸಿಯಬೇಕು?
  • ಎರಡು ಕಡೆ ಒಪ್ಪಿಕೊಂಡಾಗ, ಹಾಗೇ ಅನೈತಿಕ ಸಂಬಂಧ  ಸಾಬಿತಾದ ಮೇಲೆ ಇಲ್ಲವೇ ಪತ್ನಿ ಪತಿಯನ್ನು ಮುಗಿಸಲು ಮುಂದಾದಾಗ ಯಾಕೆ ಕಾಯಬೇಕು?
  • ನಕಲಿ ಎನ್ ಕೌಂಟರ್ ನಡೆದಾಗ ಯಾರೂ ಪೋಲೀಸರ ಬಂದೂಕನ್ನು ನಿಶೇಧಿಸಲಿಲ್ಲ!
  • ಅಂಗರಕ್ಷಕ ರೇ ಪ್ರಧಾನಿಯನ್ನು ಕೊಂದಾಗ ಅಂಗರಕ್ಷರನ್ನು ಬೇಡವೆನ್ನಲಿಲ್ಲ!
  • ತುರ್ತು ನಿರ್ಗಮನ ಬಾಗಿಲನ್ನು ಯಾರೂ ಬೇಡ ವೆನ್ನಲಿಲ್ಲ ಹಾಗೇ ತ್ರಿವಳಿ
  • ಸಂತರು, ಮಹರ್ಷಿಗಳು, ಔಲಿಯಾಗಳು ಬೆಳೆಸಿದ ಪರ ಮತ ಸಹಿಷ್ಣುತೆ ಕಾಪಾಡೋಣ ನಾವೆಲ್ಲರೂ ಸಂವಿಧಾನ ವನ್ನು ಕಾಪಾಡೋಣ ಗಟ್ಟಿಯಾಗಿ ಹೇಳೋಣ "WE ARE INDIYAN"


REPORT AL AHSAN MONTHLY

No comments:

Post a Comment